ETV Bharat / sports

ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ಸೋಲು, ಪ್ರಿ ಕ್ವಾರ್ಟರ್‌ಫೈನಲ್‌ ಪ್ರವೇಶ

author img

By

Published : Nov 9, 2021, 8:25 PM IST

ಬಂಗಾಳ ತಂಡ ಕೇವಲ 3 ವಿಕೆಟ್​ ಕಳೆದುಕೊಂಡು 18 ಓವರ್​ಗಳಲ್ಲಿಯೇ ಗುರಿ ಮುಟ್ಟಿತು. ಈ ಮೊತ್ತವನ್ನು ಬಂಗಾಳ ಎರಡು ಓವರ್ ಇರುವಂತೆ ಯಶಸ್ವಿಯಾಗಿ ಚೇಸ್ ಮಾಡಿತು. ಬಂಗಾಳ ತಂಡ ಉತ್ತಮ ರನ್ ರೇಟ್ ಆಧಾರದ ಮೇಲೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ಬಂಗಾಳ ವಿರುದ್ಧ ಕರ್ನಾಟಕಕ್ಕೆ ಸೋಲು
ಬಂಗಾಳ ವಿರುದ್ಧ ಕರ್ನಾಟಕಕ್ಕೆ ಸೋಲು

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಗ್ರೂಪ್ ಹಂತ ಮುಕ್ತಾಯವಾಗಿದ್ದು, ಕರ್ನಾಟಕ ತಂಡ ಫ್ರೀ ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟಿದೆ.

ಸತತ ನಾಲ್ಕು ಗೆಲುವು ಕಂಡಿದ್ದ ಕರ್ನಾಟಕ ತಂಡ ಇಂದು ಬಂಗಾಳ ತಂಡದ ವಿರುದ್ಧ ಸೋಲುವ ಮೂಲಕ ಕ್ವಾರ್ಟರ್ ಫೈನಲ್ ಬದಲು ಪ್ರೀ ಕ್ವಾರ್ಟರ್​ಫೈನಲ್​ ಹಂತಕ್ಕೆ ಎಂಟ್ರಿ ಕೊಟ್ಟಿದೆ.

ಇಂದು ಬಂಗಾಳ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 7 ವಿಕೆಟ್​ಗಳ ಅಂತರದಿಂದ ಸೋಲು ಕಂಡಿದೆ. ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 134 ರನ್​ಗಳಸಲಷ್ಟೇ ಶಕ್ತವಾಯಿತು.

ಕರ್ನಾಟಕ ಪರ ಓಪನರ್​ ಆಗಿ ಕಣಕ್ಕಿಳಿದ ಮಯಾಂಕ್​ ಅಗರ್ವಾಲ್​​ ಹಾಗೂ ದೇವದತ್​ ಪಡಿಕಲ್​​ ತಂಡಕ್ಕೆ ಬದ್ದ ಬುನಾದಿ ಹಾಕಿ ಕೊಡುವಲ್ಲಿ ಎಡವಿದರು. ಪಡಿಕಲ್​ ಡಕ್​ ಔಟ್​ ಆದರೆ ಮಯಾಂಕ್​ ಕೇವಲ 4 ರನ್​ಗಳಿಸಿದರು.

ಇವರ ವಿಕೆಟ್​ ನಂತರ ಒಂದಾದ ನಾಯಕ ಮನೀಶ್​ ಪಾಂಡೆ ಹಾಗೂ ಕರುಣ್​​ ನಾಯರ್​ ಜೋಡಿ 72 ರನ್​ಗಳ ಜೊತೆಯಾಟವಾಡಿತು. ಪಾಂಡೆ 23 ರನ್​ಗಳಿಸಿ ಔಟಾದರೆ, ನಾಯರ್​ 44 ರನ್​ಗಳಿಸಿ ಔಟಾದರು. ಅಂತಿಮವಾಗಿ ಕರ್ನಾಟಕ ತಂಡ 20ಓವರ್​ಗಳಲ್ಲಿ 134 ರನ್​ಗಳಿಸಿತು.

ಈ ಗುರಿ ಬೆನ್ನಟ್ಟಿದ ಬಂಗಾಳ ತಂಡ ಕೇವಲ 3 ವಿಕೆಟ್​ ಕಳೆದುಕೊಂಡು 18 ಓವರ್​ಗಳಲ್ಲಿಯೇ ಗುರಿ ಮುಟ್ಟಿತು. ಈ ಮೊತ್ತವನ್ನು ಬಂಗಾಳ ಎರಡು ಓವರ್ ಇರುವಂತೆ ಯಶಸ್ವಿಯಾಗಿ ಚೇಸ್ ಮಾಡಿತು. ಬಂಗಾಳ ತಂಡ ಉತ್ತಮ ರನ್ ರೇಟ್ ಆಧಾರದ ಮೇಲೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ಮಹಾರಾಷ್ಟ್ರ, ಬಂಗಾಳ, ರಾಜಸ್ಥಾನ್, ಗುಜರಾತ್ ಮತ್ತು ಹೈದರಾಬಾದ್ ತಂಡಗಳು ನೇರ ಕ್ವಾರ್ಟರ್​ಫೈನಲ್ ಪ್ರವೇಶಿಸಿದರೆ, ತಮಿಳುನಾಡು, ಕರ್ನಾಟಕ, ಹಿಮಾಚಲ ಪ್ರದೇಶ, ವಿದರ್ಭ, ಸೌರಾಷ್ಟ್ರ ಮತ್ತು ಮಧ್ಯ ಪ್ರದೇಶ ತಂಡಗಳು ಪ್ರೀ ಕ್ವಾರ್ಟರ್​ಫೈನಲ್ ಹಂತ ತಲುಪಿವೆ. ನವೆಂಬರ್​ 16 ರಂದು ಕರ್ನಾಟಕ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

ನವೆಂಬರ್ 16ರಂದು ಮೂರು ಪ್ರೀಕ್ವಾರ್ಟರ್​ ಫೈನಲ್ ಪಂದ್ಯಗಳು ನಡೆಯಲಿದ್ದು, ನ. 18ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ನ. 20ಕ್ಕೆ ಸೆಮಿಫೈನಲ್ ಹಾಗೂ ನ. 22ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.

ನ. 16ರಂದು ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು:

1) ತಮಿಳುನಾಡು vs ವಿದರ್ಭಾ

2) ಕರ್ನಾಟಕ vs ಸೌರಾಷ್ಟ್ರ

3) ಹಿಮಾಚಲ ಪ್ರದೇಶ vs ಮಧ್ಯ ಪ್ರದೇಶ

ನ. 18ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಗಳು:

1) ಮಹಾರಾಷ್ಟ್ರ vs TBD

2) ಬಂಗಾಳ vs TBD

3) ರಾಜಸ್ಥಾನ್ vs TBD

4) ಗುಜರಾತ್ vs ಹೈದರಾಬಾದ್

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಗ್ರೂಪ್ ಹಂತ ಮುಕ್ತಾಯವಾಗಿದ್ದು, ಕರ್ನಾಟಕ ತಂಡ ಫ್ರೀ ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟಿದೆ.

ಸತತ ನಾಲ್ಕು ಗೆಲುವು ಕಂಡಿದ್ದ ಕರ್ನಾಟಕ ತಂಡ ಇಂದು ಬಂಗಾಳ ತಂಡದ ವಿರುದ್ಧ ಸೋಲುವ ಮೂಲಕ ಕ್ವಾರ್ಟರ್ ಫೈನಲ್ ಬದಲು ಪ್ರೀ ಕ್ವಾರ್ಟರ್​ಫೈನಲ್​ ಹಂತಕ್ಕೆ ಎಂಟ್ರಿ ಕೊಟ್ಟಿದೆ.

ಇಂದು ಬಂಗಾಳ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 7 ವಿಕೆಟ್​ಗಳ ಅಂತರದಿಂದ ಸೋಲು ಕಂಡಿದೆ. ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 134 ರನ್​ಗಳಸಲಷ್ಟೇ ಶಕ್ತವಾಯಿತು.

ಕರ್ನಾಟಕ ಪರ ಓಪನರ್​ ಆಗಿ ಕಣಕ್ಕಿಳಿದ ಮಯಾಂಕ್​ ಅಗರ್ವಾಲ್​​ ಹಾಗೂ ದೇವದತ್​ ಪಡಿಕಲ್​​ ತಂಡಕ್ಕೆ ಬದ್ದ ಬುನಾದಿ ಹಾಕಿ ಕೊಡುವಲ್ಲಿ ಎಡವಿದರು. ಪಡಿಕಲ್​ ಡಕ್​ ಔಟ್​ ಆದರೆ ಮಯಾಂಕ್​ ಕೇವಲ 4 ರನ್​ಗಳಿಸಿದರು.

ಇವರ ವಿಕೆಟ್​ ನಂತರ ಒಂದಾದ ನಾಯಕ ಮನೀಶ್​ ಪಾಂಡೆ ಹಾಗೂ ಕರುಣ್​​ ನಾಯರ್​ ಜೋಡಿ 72 ರನ್​ಗಳ ಜೊತೆಯಾಟವಾಡಿತು. ಪಾಂಡೆ 23 ರನ್​ಗಳಿಸಿ ಔಟಾದರೆ, ನಾಯರ್​ 44 ರನ್​ಗಳಿಸಿ ಔಟಾದರು. ಅಂತಿಮವಾಗಿ ಕರ್ನಾಟಕ ತಂಡ 20ಓವರ್​ಗಳಲ್ಲಿ 134 ರನ್​ಗಳಿಸಿತು.

ಈ ಗುರಿ ಬೆನ್ನಟ್ಟಿದ ಬಂಗಾಳ ತಂಡ ಕೇವಲ 3 ವಿಕೆಟ್​ ಕಳೆದುಕೊಂಡು 18 ಓವರ್​ಗಳಲ್ಲಿಯೇ ಗುರಿ ಮುಟ್ಟಿತು. ಈ ಮೊತ್ತವನ್ನು ಬಂಗಾಳ ಎರಡು ಓವರ್ ಇರುವಂತೆ ಯಶಸ್ವಿಯಾಗಿ ಚೇಸ್ ಮಾಡಿತು. ಬಂಗಾಳ ತಂಡ ಉತ್ತಮ ರನ್ ರೇಟ್ ಆಧಾರದ ಮೇಲೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ಮಹಾರಾಷ್ಟ್ರ, ಬಂಗಾಳ, ರಾಜಸ್ಥಾನ್, ಗುಜರಾತ್ ಮತ್ತು ಹೈದರಾಬಾದ್ ತಂಡಗಳು ನೇರ ಕ್ವಾರ್ಟರ್​ಫೈನಲ್ ಪ್ರವೇಶಿಸಿದರೆ, ತಮಿಳುನಾಡು, ಕರ್ನಾಟಕ, ಹಿಮಾಚಲ ಪ್ರದೇಶ, ವಿದರ್ಭ, ಸೌರಾಷ್ಟ್ರ ಮತ್ತು ಮಧ್ಯ ಪ್ರದೇಶ ತಂಡಗಳು ಪ್ರೀ ಕ್ವಾರ್ಟರ್​ಫೈನಲ್ ಹಂತ ತಲುಪಿವೆ. ನವೆಂಬರ್​ 16 ರಂದು ಕರ್ನಾಟಕ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

ನವೆಂಬರ್ 16ರಂದು ಮೂರು ಪ್ರೀಕ್ವಾರ್ಟರ್​ ಫೈನಲ್ ಪಂದ್ಯಗಳು ನಡೆಯಲಿದ್ದು, ನ. 18ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ನ. 20ಕ್ಕೆ ಸೆಮಿಫೈನಲ್ ಹಾಗೂ ನ. 22ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.

ನ. 16ರಂದು ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು:

1) ತಮಿಳುನಾಡು vs ವಿದರ್ಭಾ

2) ಕರ್ನಾಟಕ vs ಸೌರಾಷ್ಟ್ರ

3) ಹಿಮಾಚಲ ಪ್ರದೇಶ vs ಮಧ್ಯ ಪ್ರದೇಶ

ನ. 18ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಗಳು:

1) ಮಹಾರಾಷ್ಟ್ರ vs TBD

2) ಬಂಗಾಳ vs TBD

3) ರಾಜಸ್ಥಾನ್ vs TBD

4) ಗುಜರಾತ್ vs ಹೈದರಾಬಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.