ETV Bharat / sports

ಟೀಂ ಇಂಡಿಯಾ 5ನೇ ಟೆಸ್ಟ್‌ ಪಂದ್ಯ ಆಡದಿರಲು ಕಾರಣವೇನು? ಗಂಗೂಲಿ ಸ್ಪಷ್ಟನೆ ಹೀಗಿದೆ..

author img

By

Published : Sep 13, 2021, 3:41 PM IST

ಬಿಸಿಸಿಐ ಜವಾಬ್ದಾರಿಯುತ ಕ್ರಿಕೆಟ್ ಮಂಡಳಿ. ನಾವು ಇತರೆ ಕ್ರಿಕೆಟ್ ಬೋರ್ಡ್​ಗಳಿಗೂ ಗೌರವ ನೀಡುತ್ತೇವೆ. ಕ್ರಿಕೆಟರ್ಸ್​ ಆರೋಗ್ಯ ದೃಷ್ಠಿಯಿಂದ ವಿಚಾರ ಮಾಡಿದಾಗ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ.- ಸೌರವ್‌ ಗಂಗೂಲಿ

BCCI president Sourav Ganguly
BCCI president Sourav Ganguly

ಮುಂಬೈ: ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್​ ತಂಡಗಳ ನಡುವಿನ 5ನೇ ಟೆಸ್ಟ್​ ಪಂದ್ಯ ರದ್ದುಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಏನು ಎಂಬುದರ ಬಗ್ಗೆ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಮಾಹಿತಿ ನೀಡಿದ್ದಾರೆ.

Virat and Ganguly
ವಿರಾಟ್​ ಜೊತೆ ಸೌರವ್ ಗಂಗೂಲಿ

ಉಭಯ ತಂಡಗಳ ನಡುವೆ ಫೈನಲ್ ಟೆಸ್ಟ್​ ಪಂದ್ಯ ಆರಂಭಗೊಳ್ಳಲು ಕೇವಲ ಎರಡು ಗಂಟೆ ಬಾಕಿ ಇದ್ದಾಗ ಪಂದ್ಯ ರದ್ಧಾಗಿದೆ ಎಂದು ಘೋಷಿಸಿಲಾಗಿತ್ತು. ಈ ಬಗ್ಗೆ ಈಗಾಗಲೇ ಇಂಗ್ಲೆಂಡ್​ನ ಅನೇಕ ಮಾಜಿ ಕ್ರಿಕೆಟರ್ಸ್​​ ಗಂಭೀರ ಆರೋಪ ಮಾಡಿದ್ದು, ಐಪಿಎಲ್​ಗೋಸ್ಕರ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Team india test players
ಟೀಂ ಇಂಡಿಯಾ ಟೆಸ್ಟ್​ ಪ್ಲೇಯರ್ಸ್​

ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ನಮ್ಮ ಆಟಗಾರರು 5ನೇ ಟೆಸ್ಟ್​​ ಪಂದ್ಯ ಆಡಲು ನಿರಾಕರಿಸಿದ್ದರು. ಅದಕ್ಕೋಸ್ಕರ ನಾವು ಪ್ಲೇಯರ್ಸ್​ಗಳನ್ನು ದೂಷಿಸುವುದು ಸರಿಯಲ್ಲ. ಬಿಸಿಸಿಐ ಜವಾಬ್ದಾರಿಯುತ ಕ್ರಿಕೆಟ್ ಮಂಡಳಿಯಾಗಿದೆ. ನಾವು ಇತರೆ ಕ್ರಿಕೆಟ್ ಬೋರ್ಡ್​ಗಳಿಗೂ ಗೌರವ ನೀಡುತ್ತೇವೆ. ಕ್ರಿಕೆಟರ್ಸ್​ ಆರೋಗ್ಯ ದೃಷ್ಠಿಯಿಂದ ವಿಚಾರ ಮಾಡಿದಾಗ ಅವರು ನಡೆದುಕೊಂಡಿರುವುದು ಸರಿಯಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: ಫೈನಲ್​​​ ಟೆಸ್ಟ್​ ಮುಂದೂಡಿಕೆ/ಅಮಾನತಿಗೆ ಬಿಸಿಸಿಐ ನಕಾರ: ಅಗತ್ಯಬಿದ್ದರೆ ರದ್ದು ನಿರ್ಧಾರ

ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಲಂಡನ್​ ಓಲ್ಡ್​ ಟ್ರಾಫರ್ಡ್​​ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ 5ನೇ ಟೆಸ್ಟ್​ ಪಂದ್ಯ ರದ್ದಾಗಿತ್ತು. ಉಭಯ ತಂಡಗಳ ಪಂದ್ಯ ರದ್ದತಿ ವಿಚಾರವಾಗಿ ಮಾತನಾಡಲು ಗಂಗೂಲಿ ಸೆಪ್ಟೆಂಬರ್​​​ 22ರಂದು ಇಂಗ್ಲೆಂಡ್​ಗೆ ಪ್ರಯಾಣ ಕೈಗೊಳ್ಳಲಿದ್ದು, ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.

ಈಗಾಗಲೇ ಎಲ್ಲ ಪ್ಲೇಯರ್ಸ್​ ದುಬೈಗೆ ಆಗಮಿಸಿದ್ದು, ಸೆಪ್ಟೆಂಬರ್​​ 19ರಿಂದ ಆರಂಭಗೊಳ್ಳಲಿರುವ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.

ಮುಂಬೈ: ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್​ ತಂಡಗಳ ನಡುವಿನ 5ನೇ ಟೆಸ್ಟ್​ ಪಂದ್ಯ ರದ್ದುಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಏನು ಎಂಬುದರ ಬಗ್ಗೆ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಮಾಹಿತಿ ನೀಡಿದ್ದಾರೆ.

Virat and Ganguly
ವಿರಾಟ್​ ಜೊತೆ ಸೌರವ್ ಗಂಗೂಲಿ

ಉಭಯ ತಂಡಗಳ ನಡುವೆ ಫೈನಲ್ ಟೆಸ್ಟ್​ ಪಂದ್ಯ ಆರಂಭಗೊಳ್ಳಲು ಕೇವಲ ಎರಡು ಗಂಟೆ ಬಾಕಿ ಇದ್ದಾಗ ಪಂದ್ಯ ರದ್ಧಾಗಿದೆ ಎಂದು ಘೋಷಿಸಿಲಾಗಿತ್ತು. ಈ ಬಗ್ಗೆ ಈಗಾಗಲೇ ಇಂಗ್ಲೆಂಡ್​ನ ಅನೇಕ ಮಾಜಿ ಕ್ರಿಕೆಟರ್ಸ್​​ ಗಂಭೀರ ಆರೋಪ ಮಾಡಿದ್ದು, ಐಪಿಎಲ್​ಗೋಸ್ಕರ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Team india test players
ಟೀಂ ಇಂಡಿಯಾ ಟೆಸ್ಟ್​ ಪ್ಲೇಯರ್ಸ್​

ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ನಮ್ಮ ಆಟಗಾರರು 5ನೇ ಟೆಸ್ಟ್​​ ಪಂದ್ಯ ಆಡಲು ನಿರಾಕರಿಸಿದ್ದರು. ಅದಕ್ಕೋಸ್ಕರ ನಾವು ಪ್ಲೇಯರ್ಸ್​ಗಳನ್ನು ದೂಷಿಸುವುದು ಸರಿಯಲ್ಲ. ಬಿಸಿಸಿಐ ಜವಾಬ್ದಾರಿಯುತ ಕ್ರಿಕೆಟ್ ಮಂಡಳಿಯಾಗಿದೆ. ನಾವು ಇತರೆ ಕ್ರಿಕೆಟ್ ಬೋರ್ಡ್​ಗಳಿಗೂ ಗೌರವ ನೀಡುತ್ತೇವೆ. ಕ್ರಿಕೆಟರ್ಸ್​ ಆರೋಗ್ಯ ದೃಷ್ಠಿಯಿಂದ ವಿಚಾರ ಮಾಡಿದಾಗ ಅವರು ನಡೆದುಕೊಂಡಿರುವುದು ಸರಿಯಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: ಫೈನಲ್​​​ ಟೆಸ್ಟ್​ ಮುಂದೂಡಿಕೆ/ಅಮಾನತಿಗೆ ಬಿಸಿಸಿಐ ನಕಾರ: ಅಗತ್ಯಬಿದ್ದರೆ ರದ್ದು ನಿರ್ಧಾರ

ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಲಂಡನ್​ ಓಲ್ಡ್​ ಟ್ರಾಫರ್ಡ್​​ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ 5ನೇ ಟೆಸ್ಟ್​ ಪಂದ್ಯ ರದ್ದಾಗಿತ್ತು. ಉಭಯ ತಂಡಗಳ ಪಂದ್ಯ ರದ್ದತಿ ವಿಚಾರವಾಗಿ ಮಾತನಾಡಲು ಗಂಗೂಲಿ ಸೆಪ್ಟೆಂಬರ್​​​ 22ರಂದು ಇಂಗ್ಲೆಂಡ್​ಗೆ ಪ್ರಯಾಣ ಕೈಗೊಳ್ಳಲಿದ್ದು, ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.

ಈಗಾಗಲೇ ಎಲ್ಲ ಪ್ಲೇಯರ್ಸ್​ ದುಬೈಗೆ ಆಗಮಿಸಿದ್ದು, ಸೆಪ್ಟೆಂಬರ್​​ 19ರಿಂದ ಆರಂಭಗೊಳ್ಳಲಿರುವ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.