ETV Bharat / sports

ಚಾನಲ್​ವೊಂದರ ರಹಸ್ಯ ಕಾರ್ಯಾಚರಣೆ: ವಿವಾದದ ಸುಳಿಯಲ್ಲಿ ಚೇತನ್​ ಶರ್ಮಾ

author img

By

Published : Feb 15, 2023, 7:24 AM IST

Updated : Feb 15, 2023, 12:19 PM IST

ಸ್ಟಿಂಗ್​ ಸುಳಿಯಲ್ಲಿ ಸಿಲುಕಿದ ಕ್ರಿಕೆಟ್​ ತಂಡದ ಆಯ್ಕೆಗಾರ - ಟೀಂ ಇಂಡಿಯಾದಲ್ಲಿ ಸಂಚಲನ - ಚೇತನ್​ ಶರ್ಮಾಗೆ ಕುತ್ತು ತರುತ್ತಾ ವಿವಾದ?

chetan-sharma
ಚೇತನ್​ ಶರ್ಮಾ ಸ್ಫೋಟಕ ಮಾಹಿತಿ

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮುಖ್ಯ ಆಯ್ಕೆಗಾರ ಚೇತನ್​ ಶರ್ಮಾ ಖಾಸಗಿ ಸುದ್ದಿವಾಹಿನಿ​ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕ್ರಿಕೆಟಿಗರು ಮತ್ತು ಬಿಸಿಸಿಐ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಇದು ಕ್ರಿಕೆಟ್​ ವಲಯದಲ್ಲಿ ಭಾರಿ ಸಂಚಲನ ಉಂಟು ಮಾಡಿದ್ದು, ಈಚೆಗಷ್ಟೇ ಆಯ್ಕೆ ಸಮಿತಿಗೆ ಮರು ಆಯ್ಕೆಯಾಗಿದ್ದ ಚೇತನ್​ ಶರ್ಮಾ ಭವಿಷ್ಯವೂ ಡೋಲಾಯಮಾನವಾಗಿದೆ.

ಭಾರತ ತಂಡದ ಆಟಗಾರರ ಮಧ್ಯೆ ಮನಸ್ತಾಪ, ಅವರ ದೈಹಿಕ ಸಾಮರ್ಥ್ಯ, ಫಿಟ್​ ಇಲ್ಲದಿದ್ದರೂ ಹೇಗೆ ಆಯ್ಕೆಯಾಗುತ್ತಾರೆ, ತಂಡದಲ್ಲಿನ ಬಣಗಳು ಸೇರಿದಂತೆ ವಿವಿಧ ಮಾಹಿತಿ ಸ್ಟಿಂಗ್​ ಆಪರೇಷನ್​ ಮೂಲಕ ಹೊರಬಿದ್ದಿದೆ. ಆಟಗಾರರು ಫಿಟ್ನೆಸ್​ಗಾಗಿ ಬೇರೆ ಮಾರ್ಗ ಹಿಡಿಯುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕ್ರೀಡಾಪಟುಗಳಿಗೆ ಫಿಟ್​ನೆಸ್​ ಬಹಳ ಮುಖ್ಯ. ಅದನ್ನು ಕಾಪಾಡಿಕೊಳ್ಳಲು ಮಾಡುವ ಕಸರತ್ತು ಒಂದೆರಡಲ್ಲ. ಆದರೆ, ಕ್ರಿಕೆಟ್ ಆಟಗಾರರು ಉದ್ದೀಪನ ಮದ್ದು​ ಹಾಕಿಕೊಳ್ಳುವ ಮೂಲಕ ಫಿಟ್​ನೆಸ್​ ಪಾಸ್​ ಆಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಇದು ಗೊತ್ತಿದ್ದರೂ ಯಾರೂ ಏನೂ ಮಾಡುತ್ತಿಲ್ಲ ಎಂದಿರುವುದು ಸ್ಟಿಂಗ್​ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್​ ಬೂಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದು ಹಲವು ತಿಂಗಳಿಂದ ಕ್ರಿಕೆಟ್​ನಿಂದ ದೂರವಿದ್ದಾರೆ. ಈಗ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಕಿತ್ತಾಟವಿರುವುದಾಗಿ ಶರ್ಮಾ ಹೇಳಿರುವುದು ವಿಡಿಯೋದಲ್ಲಿದೆ.

ರಾಷ್ಟ್ರೀಯ ಆಯ್ಕೆದಾರರು ತಂಡದ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ಒಪ್ಪಂದವಿರುತ್ತದೆ. ಆದರೆ, ಅದನ್ನು ಮೀರಿರುವ ಚೇತನ್​ ಶರ್ಮಾ ಅವರ ಭವಿಷ್ಯ ಏನಾಗಬಹುದು ಎಂಬುದು ಪ್ರಶ್ನೆಯಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮರು ಆಯ್ಕೆಯಾಗಿದ್ದ ಚೇತನ್​ ಶರ್ಮಾ: ಭಾರತ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್​ ಶರ್ಮಾ ಈಚೆಗಷ್ಟೇ ಮರು ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್​ ಬಳಿಕ ಆಯ್ಕೆ ಸಮಿತಿಯನ್ನೇ ವಿಸರ್ಜಿಸಲಾಗಿತ್ತು. ಬಳಿಕ ಅರ್ಜಿ ಆಹ್ವಾನಿಸಿದ್ದ ಬಿಸಿಸಿಐ ಚೇತನ್​ ಶರ್ಮಾರನ್ನು ಮತ್ತೆ ಮುಖ್ಯಸ್ಥರನ್ನಾಗಿ ಮಾಡಿ, ಸಮಿತಿ ರಚಿಸಿತ್ತು.

ಓದಿ: ಹೆಚ್ಚು ಮೊತ್ತಕ್ಕೆ ಖರೀದಿಯಾದ ಸ್ಮೃತಿ ಮಂಧಾನ: ಟ್ವಿಟರ್​ನಲ್ಲಿ ಬಾಬರ್​ ಅಜಮ್​ ಟ್ರೋಲ್​ ಆಗಿದ್ಯಾಕೆ?

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮುಖ್ಯ ಆಯ್ಕೆಗಾರ ಚೇತನ್​ ಶರ್ಮಾ ಖಾಸಗಿ ಸುದ್ದಿವಾಹಿನಿ​ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕ್ರಿಕೆಟಿಗರು ಮತ್ತು ಬಿಸಿಸಿಐ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಇದು ಕ್ರಿಕೆಟ್​ ವಲಯದಲ್ಲಿ ಭಾರಿ ಸಂಚಲನ ಉಂಟು ಮಾಡಿದ್ದು, ಈಚೆಗಷ್ಟೇ ಆಯ್ಕೆ ಸಮಿತಿಗೆ ಮರು ಆಯ್ಕೆಯಾಗಿದ್ದ ಚೇತನ್​ ಶರ್ಮಾ ಭವಿಷ್ಯವೂ ಡೋಲಾಯಮಾನವಾಗಿದೆ.

ಭಾರತ ತಂಡದ ಆಟಗಾರರ ಮಧ್ಯೆ ಮನಸ್ತಾಪ, ಅವರ ದೈಹಿಕ ಸಾಮರ್ಥ್ಯ, ಫಿಟ್​ ಇಲ್ಲದಿದ್ದರೂ ಹೇಗೆ ಆಯ್ಕೆಯಾಗುತ್ತಾರೆ, ತಂಡದಲ್ಲಿನ ಬಣಗಳು ಸೇರಿದಂತೆ ವಿವಿಧ ಮಾಹಿತಿ ಸ್ಟಿಂಗ್​ ಆಪರೇಷನ್​ ಮೂಲಕ ಹೊರಬಿದ್ದಿದೆ. ಆಟಗಾರರು ಫಿಟ್ನೆಸ್​ಗಾಗಿ ಬೇರೆ ಮಾರ್ಗ ಹಿಡಿಯುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕ್ರೀಡಾಪಟುಗಳಿಗೆ ಫಿಟ್​ನೆಸ್​ ಬಹಳ ಮುಖ್ಯ. ಅದನ್ನು ಕಾಪಾಡಿಕೊಳ್ಳಲು ಮಾಡುವ ಕಸರತ್ತು ಒಂದೆರಡಲ್ಲ. ಆದರೆ, ಕ್ರಿಕೆಟ್ ಆಟಗಾರರು ಉದ್ದೀಪನ ಮದ್ದು​ ಹಾಕಿಕೊಳ್ಳುವ ಮೂಲಕ ಫಿಟ್​ನೆಸ್​ ಪಾಸ್​ ಆಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಇದು ಗೊತ್ತಿದ್ದರೂ ಯಾರೂ ಏನೂ ಮಾಡುತ್ತಿಲ್ಲ ಎಂದಿರುವುದು ಸ್ಟಿಂಗ್​ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್​ ಬೂಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದು ಹಲವು ತಿಂಗಳಿಂದ ಕ್ರಿಕೆಟ್​ನಿಂದ ದೂರವಿದ್ದಾರೆ. ಈಗ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಕಿತ್ತಾಟವಿರುವುದಾಗಿ ಶರ್ಮಾ ಹೇಳಿರುವುದು ವಿಡಿಯೋದಲ್ಲಿದೆ.

ರಾಷ್ಟ್ರೀಯ ಆಯ್ಕೆದಾರರು ತಂಡದ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ಒಪ್ಪಂದವಿರುತ್ತದೆ. ಆದರೆ, ಅದನ್ನು ಮೀರಿರುವ ಚೇತನ್​ ಶರ್ಮಾ ಅವರ ಭವಿಷ್ಯ ಏನಾಗಬಹುದು ಎಂಬುದು ಪ್ರಶ್ನೆಯಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮರು ಆಯ್ಕೆಯಾಗಿದ್ದ ಚೇತನ್​ ಶರ್ಮಾ: ಭಾರತ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್​ ಶರ್ಮಾ ಈಚೆಗಷ್ಟೇ ಮರು ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್​ ಬಳಿಕ ಆಯ್ಕೆ ಸಮಿತಿಯನ್ನೇ ವಿಸರ್ಜಿಸಲಾಗಿತ್ತು. ಬಳಿಕ ಅರ್ಜಿ ಆಹ್ವಾನಿಸಿದ್ದ ಬಿಸಿಸಿಐ ಚೇತನ್​ ಶರ್ಮಾರನ್ನು ಮತ್ತೆ ಮುಖ್ಯಸ್ಥರನ್ನಾಗಿ ಮಾಡಿ, ಸಮಿತಿ ರಚಿಸಿತ್ತು.

ಓದಿ: ಹೆಚ್ಚು ಮೊತ್ತಕ್ಕೆ ಖರೀದಿಯಾದ ಸ್ಮೃತಿ ಮಂಧಾನ: ಟ್ವಿಟರ್​ನಲ್ಲಿ ಬಾಬರ್​ ಅಜಮ್​ ಟ್ರೋಲ್​ ಆಗಿದ್ಯಾಕೆ?

Last Updated : Feb 15, 2023, 12:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.