ETV Bharat / sports

ಏಷ್ಯಾಕಪ್‌ನಲ್ಲಿಂದು 2ನೇ ಪಂದ್ಯ: ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್‌

author img

By ETV Bharat Karnataka Team

Published : Aug 31, 2023, 3:24 PM IST

Updated : Aug 31, 2023, 4:12 PM IST

Asia cup Bangladesh vs sri lanka Match: ಏಷ್ಯಾಕಪ್​ ಕ್ರಿಕೆಟ್‌ ಟೂರ್ನಿಯಲ್ಲಿಂದು ಎರಡನೇ ಪಂದ್ಯ ನಡೆಯುತ್ತಿದೆ. ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್​ ನಿರ್ಧಾರ ಕೈಗೊಂಡಿತು.

Asia cup 2023
Asia cup 2023

ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾಕಪ್​​ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಇಂದು ಶ್ರೀಲಂಕಾ ವಿರುದ್ಧ ಟಾಸ್​ ಗೆದ್ದ ಬಾಂಗ್ಲಾದೇಶ ಮೊದಲಿಗೆ ಬ್ಯಾಟಿಂಗ್​ ಆಯ್ದುಕೊಂಡಿದೆ. ಶ್ರೀಲಂಕಾದ ಪಲ್ಲೆಕೆಲೆ ಅಂತರರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಉಭಯ ತಂಡಗಳಿಗೂ ಏಷ್ಯಾಕಪ್‌ ಸರಣಿಯ ಮೊದಲ ಪಂದ್ಯ ಇದಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಸರಣಿ ಸೋಲಿನ ಬಳಿಕ ಬಾಂಗ್ಲಾ ಏಕದಿನ ಏಷ್ಯಾಕಪ್​ಗೆ ಸಿದ್ಧವಾಗುತ್ತಿದೆ. ಗೆಲುವಿನೊಂದಿಗೆ ಅಭಿಯಾನ ಶುರು ಮಾಡಲು ಉಭಯ ತಂಡಗಳೂ ತವಕಿಸುತ್ತಿವೆ. ಪಲ್ಲೆಕೆಲೆ ಬ್ಯಾಟಿಂಗ್‌ಸ್ನೇಹಿ ಪಿಚ್​ ಆಗಿದ್ದು, ಸ್ಪಿನ್​ ಕೂಡಾ ಇಲ್ಲಿ ಉತ್ತಮ ಪಾತ್ರ ವಹಿಸಲಿದೆ ಎಂದು ಶ್ರೀಲಂಕಾದ ಮಾಜಿ ನಾಯಕ ಮರ್ವಾನ್ ಅಟ್ಟಪಟ್ಟು ಹೇಳಿದ್ದಾರೆ. ಬಾಂಗ್ಲಾದ ತನ್​ಜಿದ್​ ಹಸನ್ ಈ ಪಂದ್ಯದ ಮೂಲಕ​ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಟಾಸ್​ ಬಳಿಕ ಮಾತನಾಡಿ ದಸುನ್​ ಶನಕ, "ನಾವು ಮೊದಲಿಗೆ ಬ್ಯಾಟ್​ ಮಾಡಲು ಬಯಸಿದ್ದೆವು. ಪಂದ್ಯಕ್ಕೆ ಮಳೆಯ ಅಡ್ಡಿಪಡಿಸುವ ಸಾಧ್ಯತೆ ಇದೆ. ಹೀಗಾಗಿ, ಮೊದಲು ಬ್ಯಾಟಿಂಗ್​ ಫಲಪ್ರದವಾಗಲಿದೆ. ನಮ್ಮ ತಂಡದಲ್ಲಿ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಇದರ ನಡುವೆಯೂ ತಂಡ ಗೆಲುವಿನ ಸಾಮರ್ಥ್ಯ ಹೊಂದಿದೆ. ನಮ್ಮಲ್ಲಿ ಆರು ಬ್ಯಾಟರ್,​ ಇಬ್ಬರು ಆಲ್​ರೌಂಡರ್​ ಹಾಗು ಮೂವರು ಉತ್ತಮ ಬೌಲರ್​ಗಳಿದ್ದಾರೆ" ಎಂದು ಹೇಳಿದರು.

ಬಾಂಗ್ಲಾ ನಾಯಕ ಶಾಕೀಬ್​ ಮಾತನಾಡಿ, "ನಾವು ಮೊದಲು ಬ್ಯಾಟ್​ ಮಾಡಲು ನಿರ್ಧರಿಸಿದ್ದೇವೆ. ಈ ಪಂದ್ಯದಲ್ಲಿ ಹೆಚ್ಚು ರನ್​ಗಳಿಸಲು ಯೋಜನೆ ರೂಪಿಸಲಾಗಿದೆ. ಶ್ರೀಲಂಕಾ ಕೂಡ ಉತ್ತಮ ತಂಡ ಎಂದು ನಮಗೆ ತಿಳಿದಿದೆ. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್‌​ನಲ್ಲೂ ನಾವು ಅತ್ಯುತ್ತಮ ಪ್ರದರ್ಶನ ನೀಡಬೇಕು" ಎಂದರು.

ಪಿಚಚ್ ರಿಪೋರ್ಟ್​: ಬ್ಯಾಟಿಂಗ್​ ಸ್ನೇಹಿ ಪಿಚ್​ ಆಗಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ ಸ್ಪಿನ್ನರ್​ಗಳಿಗೆ ಹೆಚ್ಚು ಸಹಾಯಕವಾಗಿರಲಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ವೇಗಿಗಳಿಗೆ ಸಾಥ್​ ನೀಡಲಿದೆ. ಈ ಮೈದಾನದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ಜಯಭೇರಿ ಬಾರಿಸಿತ್ತು. ಈ ಪಂದ್ಯದಲ್ಲಿ 313 ರನ್​ಗಳ ಗುರಿಯನ್ನು ಶ್ರೀಲಂಕಾ ಚೇಸ್​ ಮಾಡಿತ್ತು. ಅಫ್ಘಾನಿಸ್ತಾನ ಪರ ಇಬ್ರಾಹಿಮ್​ ಜದ್ರಾನ್​ 164 ರನ್​ಗಳ ಕಲೆ ಹಾಕಿದ್ದರು. ರಶೀದ್​ ಖಾನ್​ 4 ವಿಕೆಟ್‌ ಪಡೆದಿದ್ದರು. ಶ್ರೀಲಂಕಾದ ಕಸುನ್​ ರಜಿತಾ 3 ವಿಕೆಟ್​ ಪಡೆದಿದ್ದರು.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ (ವಿಕೆಟ್​ ಕೀಪರ್​), ದಿಮುತ್ ಕರುಣಾರತ್ನ, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ಪತಿರ್ ರಜಿತ

ಬಾಂಗ್ಲಾದೇಶ: ಮಹಮ್ಮದ್ ನಯೀಮ್, ತಂಜಿದ್ ಹಸನ್, ಶಂಟೋ, ತೌಹಿದ್ ಹೃದಯ್, ಶಕಿಬ್ ಅಲ್ ಹಸನ್ (ನಾ), ಮುಷ್ಪಿಕರ್ ರಹೀಂ,(ವಿ.ಕೀ) ಮೆಹದಿ ಹಸನ್, ಮಿರಾಜ್, ಟಸ್ಕಿನ್ ಅಹಮದ್, ಶೋರಿಫುಲ್ ಇಸ್ಲಾಂ, ಮುಸ್ತಪಿಝುರ್ ರೆಹಮಾನ್

ಇದನ್ನೂ ಓದಿ: ICC Cricket World Cup: ಇಂದಿನಿಂದ ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್​ ಮಾರಾಟ ಶುರು

ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾಕಪ್​​ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಇಂದು ಶ್ರೀಲಂಕಾ ವಿರುದ್ಧ ಟಾಸ್​ ಗೆದ್ದ ಬಾಂಗ್ಲಾದೇಶ ಮೊದಲಿಗೆ ಬ್ಯಾಟಿಂಗ್​ ಆಯ್ದುಕೊಂಡಿದೆ. ಶ್ರೀಲಂಕಾದ ಪಲ್ಲೆಕೆಲೆ ಅಂತರರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಉಭಯ ತಂಡಗಳಿಗೂ ಏಷ್ಯಾಕಪ್‌ ಸರಣಿಯ ಮೊದಲ ಪಂದ್ಯ ಇದಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಸರಣಿ ಸೋಲಿನ ಬಳಿಕ ಬಾಂಗ್ಲಾ ಏಕದಿನ ಏಷ್ಯಾಕಪ್​ಗೆ ಸಿದ್ಧವಾಗುತ್ತಿದೆ. ಗೆಲುವಿನೊಂದಿಗೆ ಅಭಿಯಾನ ಶುರು ಮಾಡಲು ಉಭಯ ತಂಡಗಳೂ ತವಕಿಸುತ್ತಿವೆ. ಪಲ್ಲೆಕೆಲೆ ಬ್ಯಾಟಿಂಗ್‌ಸ್ನೇಹಿ ಪಿಚ್​ ಆಗಿದ್ದು, ಸ್ಪಿನ್​ ಕೂಡಾ ಇಲ್ಲಿ ಉತ್ತಮ ಪಾತ್ರ ವಹಿಸಲಿದೆ ಎಂದು ಶ್ರೀಲಂಕಾದ ಮಾಜಿ ನಾಯಕ ಮರ್ವಾನ್ ಅಟ್ಟಪಟ್ಟು ಹೇಳಿದ್ದಾರೆ. ಬಾಂಗ್ಲಾದ ತನ್​ಜಿದ್​ ಹಸನ್ ಈ ಪಂದ್ಯದ ಮೂಲಕ​ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಟಾಸ್​ ಬಳಿಕ ಮಾತನಾಡಿ ದಸುನ್​ ಶನಕ, "ನಾವು ಮೊದಲಿಗೆ ಬ್ಯಾಟ್​ ಮಾಡಲು ಬಯಸಿದ್ದೆವು. ಪಂದ್ಯಕ್ಕೆ ಮಳೆಯ ಅಡ್ಡಿಪಡಿಸುವ ಸಾಧ್ಯತೆ ಇದೆ. ಹೀಗಾಗಿ, ಮೊದಲು ಬ್ಯಾಟಿಂಗ್​ ಫಲಪ್ರದವಾಗಲಿದೆ. ನಮ್ಮ ತಂಡದಲ್ಲಿ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಇದರ ನಡುವೆಯೂ ತಂಡ ಗೆಲುವಿನ ಸಾಮರ್ಥ್ಯ ಹೊಂದಿದೆ. ನಮ್ಮಲ್ಲಿ ಆರು ಬ್ಯಾಟರ್,​ ಇಬ್ಬರು ಆಲ್​ರೌಂಡರ್​ ಹಾಗು ಮೂವರು ಉತ್ತಮ ಬೌಲರ್​ಗಳಿದ್ದಾರೆ" ಎಂದು ಹೇಳಿದರು.

ಬಾಂಗ್ಲಾ ನಾಯಕ ಶಾಕೀಬ್​ ಮಾತನಾಡಿ, "ನಾವು ಮೊದಲು ಬ್ಯಾಟ್​ ಮಾಡಲು ನಿರ್ಧರಿಸಿದ್ದೇವೆ. ಈ ಪಂದ್ಯದಲ್ಲಿ ಹೆಚ್ಚು ರನ್​ಗಳಿಸಲು ಯೋಜನೆ ರೂಪಿಸಲಾಗಿದೆ. ಶ್ರೀಲಂಕಾ ಕೂಡ ಉತ್ತಮ ತಂಡ ಎಂದು ನಮಗೆ ತಿಳಿದಿದೆ. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್‌​ನಲ್ಲೂ ನಾವು ಅತ್ಯುತ್ತಮ ಪ್ರದರ್ಶನ ನೀಡಬೇಕು" ಎಂದರು.

ಪಿಚಚ್ ರಿಪೋರ್ಟ್​: ಬ್ಯಾಟಿಂಗ್​ ಸ್ನೇಹಿ ಪಿಚ್​ ಆಗಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ ಸ್ಪಿನ್ನರ್​ಗಳಿಗೆ ಹೆಚ್ಚು ಸಹಾಯಕವಾಗಿರಲಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ವೇಗಿಗಳಿಗೆ ಸಾಥ್​ ನೀಡಲಿದೆ. ಈ ಮೈದಾನದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ಜಯಭೇರಿ ಬಾರಿಸಿತ್ತು. ಈ ಪಂದ್ಯದಲ್ಲಿ 313 ರನ್​ಗಳ ಗುರಿಯನ್ನು ಶ್ರೀಲಂಕಾ ಚೇಸ್​ ಮಾಡಿತ್ತು. ಅಫ್ಘಾನಿಸ್ತಾನ ಪರ ಇಬ್ರಾಹಿಮ್​ ಜದ್ರಾನ್​ 164 ರನ್​ಗಳ ಕಲೆ ಹಾಕಿದ್ದರು. ರಶೀದ್​ ಖಾನ್​ 4 ವಿಕೆಟ್‌ ಪಡೆದಿದ್ದರು. ಶ್ರೀಲಂಕಾದ ಕಸುನ್​ ರಜಿತಾ 3 ವಿಕೆಟ್​ ಪಡೆದಿದ್ದರು.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ (ವಿಕೆಟ್​ ಕೀಪರ್​), ದಿಮುತ್ ಕರುಣಾರತ್ನ, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ಪತಿರ್ ರಜಿತ

ಬಾಂಗ್ಲಾದೇಶ: ಮಹಮ್ಮದ್ ನಯೀಮ್, ತಂಜಿದ್ ಹಸನ್, ಶಂಟೋ, ತೌಹಿದ್ ಹೃದಯ್, ಶಕಿಬ್ ಅಲ್ ಹಸನ್ (ನಾ), ಮುಷ್ಪಿಕರ್ ರಹೀಂ,(ವಿ.ಕೀ) ಮೆಹದಿ ಹಸನ್, ಮಿರಾಜ್, ಟಸ್ಕಿನ್ ಅಹಮದ್, ಶೋರಿಫುಲ್ ಇಸ್ಲಾಂ, ಮುಸ್ತಪಿಝುರ್ ರೆಹಮಾನ್

ಇದನ್ನೂ ಓದಿ: ICC Cricket World Cup: ಇಂದಿನಿಂದ ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್​ ಮಾರಾಟ ಶುರು

Last Updated : Aug 31, 2023, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.