ETV Bharat / sports

ಕಮಿನ್ಸ್‌ ಬೌಲಿಂಗ್​ ಮರೆತಿದ್ದಾರೆ: ಆಸೀಸ್‌ ನಾಯಕನಿಗೆ ಬಾರ್ಡರ್ ಚಾಟಿ

author img

By

Published : Feb 21, 2023, 5:42 PM IST

ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಟೆಸ್ಟ್​ ಕ್ರಿಕೆಟ್​ನಲ್ಲಿ ಕಳಪೆ ಪ್ರದರ್ಶನ ತೋರುತ್ತಿದೆ. ಈ ಬಗ್ಗೆ ದಿಗ್ಗಜ ಕ್ರಿಕೆಟಿಗ ಅಲನ್​ ಬಾರ್ಡರ್​ ಪ್ರತಿಕ್ರಿಯಿಸಿದರು.

cummins-had-a-lot-to-worry-forgot-about-bowling-himself-in-2nd-test-border
ಭಾರತದ ಸರಣಿಯು ಕಮಿನ್ಸ್​ಗೆ ನಾಯಕನಾಗಿ ಮೊದಲ ನಿಜವಾದ ಪರೀಕ್ಷೆ: ಬಾರ್ಡರ್

ಸಿಡ್ನಿ (ಆಸ್ಟ್ರೇಲಿಯಾ): ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್​ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಮೊದಲೆರಡು ಪಂದ್ಯ ಸೋತು 2-0 ಅಂತರದಿಂದ ಹಿನ್ನಡೆ ಅನುಭವಿಸಿದೆ. ಇದರ ನಡುವೆ ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್‌ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟ್​ ದಂತಕಥೆ ಅಲನ್​ ಬಾರ್ಡರ್​ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಭಾರತದ ವಿರುದ್ಧದ ಸರಣಿಯು ಕಮಿನ್ಸ್​ಗೆ ನಾಯಕನಾಗಿ ಮೊದಲ ನಿಜವಾದ ಪರೀಕ್ಷೆ ಎಂದು ಹೇಳಿದ್ದಾರೆ.

ನಾಲ್ಕು ಪಂದ್ಯಗಳ ಸರಣಿಯಲ್ಲಿ, ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಪ್ರವಾಸಕ್ಕೂ ಮೊದಲು ಕಮಿನ್ಸ್​ ನಾಯಕನಾಗಿ ಕೇವಲ ಒಂದು ಸೋಲು ಅನುಭವಿಸಿದ್ದರು. ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕಮಿನ್ಸ್‌ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 13 ಓವರ್‌ ಬೌಲ್​ ಮಾಡಿ ಒಂದು ವಿಕೆಟ್​ ಪಡೆದಿದ್ದರು. ಆದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್​ ಮಾಡಿರಲಿಲ್ಲ.

ಇದನ್ನೂ ಓದಿ: ಭಾರತದ ಸ್ಪಿನ್​ ದಾಳಿಗೆ ಆಸ್ಟ್ರೇಲಿಯಾ ತತ್ತರ.. ಬ್ಯಾಟಿಂಗ್​ ಸುಧಾರಣೆಗೆ ನೆರವು ನೀಡಲು ಸಿದ್ಧ: ಮಾಜಿ ಕ್ರಿಕೆಟಿಗ

ಬಾರ್ಡರ್ ವಿಶ್ಲೇಷಣೆ: ಈ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ತನ್ನನ್ನು ತಾನು ಒತ್ತಡಕ್ಕೆ ಸಿಲುಕಿಸಿ ಬೌಲಿಂಗ್ ಮಾಡಿದ್ದಾರೆಂದು ನಾನು ಭಾವಿಸಿದ್ದೇನೆ. ಆದರೆ, ಕೆಲವೊಮ್ಮೆ ದಾರಿ ತಪ್ಪುತ್ತಿದ್ದಾಗ ಅವಕಾಶಗಳೂ ಇದ್ದವು. ವಿಶೇಷವಾಗಿ, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಜೊತೆಯಾಟ ಮೂಡಿ ಬರುತ್ತಿದ್ದಾಗ ಪ್ಯಾಟ್​ ಕಮಿನ್ಸ್ ಎರಡು ಅಥವಾ ಮೂರು ಓವರ್‌ಗಳವರೆಗೆ ಒಂದೆರಡು ಬಾಲ್​ಗಳನ್ನು ವೇಗವಾಗಿ ಮತ್ತು ನಿಧಾನವಾಗಿ ಎಸೆಯುತ್ತಿದ್ದರು ಎಂದು ಹೇಳಿದ್ದಾರೆ.

ಮುಂದುವರೆದು, ಮೊದಲ ಇನ್ನಿಂಗ್ಸ್​ನಲ್ಲಿ 139 ರನ್​ಗಳಿಗೆ 7 ವಿಕೆಟ್​ ಪಡೆದು ಭಾರತ ತಂಡವನ್ನು ಕುಗ್ಗಿಸಲಾಗಿತ್ತು. ನಂತರ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್​ ಜೋಡಿ 114 ರನ್‌ಗಳ ಜೊತೆಯಾಟ ನೀಡಿದ್ದರು. ಈ ಇನ್ನಿಂಗ್ಸ್​ನಲ್ಲಿ ಪ್ರವಾಸಿ ತಂಡದ​ ಮೊತ್ತಕ್ಕಿಂತ ಕೇವಲ ಆತಿಥೇಯ ತಂಡ ಒಂದು ರನ್​ ಹಿನ್ನಡೆ ಅನುಭವಿಸಿತ್ತು. ಆದರೆ, ಅಕ್ಷರ್​ ಮತ್ತು ಅಶ್ವಿನ್​ ಜೋಡಿ ಮೈದಾನದಲ್ಲಿದ್ದಾಗ ಇತರ ಆಟಗಾರರು ತಮ್ಮ ನಾಯಕನ ಬಳಿಗೆ ತೆರಳಿ ನೀವು ಯಾಕೆ ಬೌಲಿಂಗ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡಬಹುದಿತ್ತು ಎಂದು ಬಾರ್ಡರ್​ ತಿಳಿಸಿದರು.

ಇದನ್ನೂ ಓದಿ: ಭಾರತವನ್ನು ಅದರ ನೆಲದಲ್ಲಿ ಸೋಲಿಸುವುದು ಅಸಾಧ್ಯ: ಪಾಕ್​ ಮಾಜಿ ಆಟಗಾರರ ಬಣ್ಣನೆ

ಆದ್ದರಿಂದ ಇದು ನಾಯಕನಾಗಿ ಪ್ಯಾಟ್‌ ಕಮಿನ್ಸ್​ ಅವರಿಗೆ ಮೊದಲ ನಿಜವಾದ ಪರೀಕ್ಷೆ ಎಂದು ನಾನು ಭಾವಿಸಿದ್ದೇನೆ. ಉಳಿದವು ಅವರಿಗೆ ಸುಲಭ ಯಾನವಾಗಿತ್ತು. ನೀವು ಉಪಖಂಡಕ್ಕೆ ತೆರಳಿ, ಇದ್ದಕ್ಕಿದ್ದಂತೆ ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಪರೀಕ್ಷೆಗೆ ಒಳಗಾಗುತ್ತೀರಿ. ಇಂತಹ ಹಲವಾರು ವಿಭಿನ್ನ ವಿಷಯಗಳ ಬಗ್ಗೆ ಕಮಿನ್ಸ್​ ಚಿಂತಿತರಾಗಿದ್ದಾರೆ. ತಮ್ಮ ಬೌಲಿಂಗ್​ ಅನ್ನೂ ಅವರು ಮರೆತಿದ್ದರು. ಪ್ರಮುಖ ವೇಗದ ಬೌಲರ್​ ತಂಡದ ಕ್ಯಾಪ್ಟನ್​ ಆಗಿರುವ ಅಂತಹ ಸಂದರ್ಭಗಳಲ್ಲಿ ಏನಾಗಬಹುದೆಂದು ಗೊತ್ತಿದೆ ಎಂದು ಬಾರ್ಡರ್ ಸಹಾನುಭೂತಿಯನ್ನೂ ವ್ಯಕ್ತಪಡಿಸಿದ್ದಾರೆ.

ಎರಡನೇ ಟೆಸ್ಟ್‌ನ ನಂತರ ಕೌಟುಂಬಿಕ ಕಾರಣದಿಂದಾಗಿ ಕಮಿನ್ಸ್ ಭಾರತದಿಂದ ತವರಿಗೆ ಮರಳಿದ್ದಾರೆ. ಇಂದೋರ್ ಮತ್ತು ಅಹಮದಾಬಾದ್‌ನಲ್ಲಿ ನಡೆಯುವ ಉಳಿದೆರಡು ಪಂದ್ಯಗಳಿಗೆ ಮರಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ಮೊಣಕೈ ಗಾಯ: ಇಂದೋರ್​, ಅಹಮದಾಬಾದ್ ಪಂದ್ಯದಿಂದ ಡೇವಿಡ್​​ ವಾರ್ನರ್​ ಔಟ್​..!

ಸಿಡ್ನಿ (ಆಸ್ಟ್ರೇಲಿಯಾ): ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್​ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಮೊದಲೆರಡು ಪಂದ್ಯ ಸೋತು 2-0 ಅಂತರದಿಂದ ಹಿನ್ನಡೆ ಅನುಭವಿಸಿದೆ. ಇದರ ನಡುವೆ ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್‌ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟ್​ ದಂತಕಥೆ ಅಲನ್​ ಬಾರ್ಡರ್​ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಭಾರತದ ವಿರುದ್ಧದ ಸರಣಿಯು ಕಮಿನ್ಸ್​ಗೆ ನಾಯಕನಾಗಿ ಮೊದಲ ನಿಜವಾದ ಪರೀಕ್ಷೆ ಎಂದು ಹೇಳಿದ್ದಾರೆ.

ನಾಲ್ಕು ಪಂದ್ಯಗಳ ಸರಣಿಯಲ್ಲಿ, ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಪ್ರವಾಸಕ್ಕೂ ಮೊದಲು ಕಮಿನ್ಸ್​ ನಾಯಕನಾಗಿ ಕೇವಲ ಒಂದು ಸೋಲು ಅನುಭವಿಸಿದ್ದರು. ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕಮಿನ್ಸ್‌ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 13 ಓವರ್‌ ಬೌಲ್​ ಮಾಡಿ ಒಂದು ವಿಕೆಟ್​ ಪಡೆದಿದ್ದರು. ಆದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್​ ಮಾಡಿರಲಿಲ್ಲ.

ಇದನ್ನೂ ಓದಿ: ಭಾರತದ ಸ್ಪಿನ್​ ದಾಳಿಗೆ ಆಸ್ಟ್ರೇಲಿಯಾ ತತ್ತರ.. ಬ್ಯಾಟಿಂಗ್​ ಸುಧಾರಣೆಗೆ ನೆರವು ನೀಡಲು ಸಿದ್ಧ: ಮಾಜಿ ಕ್ರಿಕೆಟಿಗ

ಬಾರ್ಡರ್ ವಿಶ್ಲೇಷಣೆ: ಈ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ತನ್ನನ್ನು ತಾನು ಒತ್ತಡಕ್ಕೆ ಸಿಲುಕಿಸಿ ಬೌಲಿಂಗ್ ಮಾಡಿದ್ದಾರೆಂದು ನಾನು ಭಾವಿಸಿದ್ದೇನೆ. ಆದರೆ, ಕೆಲವೊಮ್ಮೆ ದಾರಿ ತಪ್ಪುತ್ತಿದ್ದಾಗ ಅವಕಾಶಗಳೂ ಇದ್ದವು. ವಿಶೇಷವಾಗಿ, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಜೊತೆಯಾಟ ಮೂಡಿ ಬರುತ್ತಿದ್ದಾಗ ಪ್ಯಾಟ್​ ಕಮಿನ್ಸ್ ಎರಡು ಅಥವಾ ಮೂರು ಓವರ್‌ಗಳವರೆಗೆ ಒಂದೆರಡು ಬಾಲ್​ಗಳನ್ನು ವೇಗವಾಗಿ ಮತ್ತು ನಿಧಾನವಾಗಿ ಎಸೆಯುತ್ತಿದ್ದರು ಎಂದು ಹೇಳಿದ್ದಾರೆ.

ಮುಂದುವರೆದು, ಮೊದಲ ಇನ್ನಿಂಗ್ಸ್​ನಲ್ಲಿ 139 ರನ್​ಗಳಿಗೆ 7 ವಿಕೆಟ್​ ಪಡೆದು ಭಾರತ ತಂಡವನ್ನು ಕುಗ್ಗಿಸಲಾಗಿತ್ತು. ನಂತರ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್​ ಜೋಡಿ 114 ರನ್‌ಗಳ ಜೊತೆಯಾಟ ನೀಡಿದ್ದರು. ಈ ಇನ್ನಿಂಗ್ಸ್​ನಲ್ಲಿ ಪ್ರವಾಸಿ ತಂಡದ​ ಮೊತ್ತಕ್ಕಿಂತ ಕೇವಲ ಆತಿಥೇಯ ತಂಡ ಒಂದು ರನ್​ ಹಿನ್ನಡೆ ಅನುಭವಿಸಿತ್ತು. ಆದರೆ, ಅಕ್ಷರ್​ ಮತ್ತು ಅಶ್ವಿನ್​ ಜೋಡಿ ಮೈದಾನದಲ್ಲಿದ್ದಾಗ ಇತರ ಆಟಗಾರರು ತಮ್ಮ ನಾಯಕನ ಬಳಿಗೆ ತೆರಳಿ ನೀವು ಯಾಕೆ ಬೌಲಿಂಗ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡಬಹುದಿತ್ತು ಎಂದು ಬಾರ್ಡರ್​ ತಿಳಿಸಿದರು.

ಇದನ್ನೂ ಓದಿ: ಭಾರತವನ್ನು ಅದರ ನೆಲದಲ್ಲಿ ಸೋಲಿಸುವುದು ಅಸಾಧ್ಯ: ಪಾಕ್​ ಮಾಜಿ ಆಟಗಾರರ ಬಣ್ಣನೆ

ಆದ್ದರಿಂದ ಇದು ನಾಯಕನಾಗಿ ಪ್ಯಾಟ್‌ ಕಮಿನ್ಸ್​ ಅವರಿಗೆ ಮೊದಲ ನಿಜವಾದ ಪರೀಕ್ಷೆ ಎಂದು ನಾನು ಭಾವಿಸಿದ್ದೇನೆ. ಉಳಿದವು ಅವರಿಗೆ ಸುಲಭ ಯಾನವಾಗಿತ್ತು. ನೀವು ಉಪಖಂಡಕ್ಕೆ ತೆರಳಿ, ಇದ್ದಕ್ಕಿದ್ದಂತೆ ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಪರೀಕ್ಷೆಗೆ ಒಳಗಾಗುತ್ತೀರಿ. ಇಂತಹ ಹಲವಾರು ವಿಭಿನ್ನ ವಿಷಯಗಳ ಬಗ್ಗೆ ಕಮಿನ್ಸ್​ ಚಿಂತಿತರಾಗಿದ್ದಾರೆ. ತಮ್ಮ ಬೌಲಿಂಗ್​ ಅನ್ನೂ ಅವರು ಮರೆತಿದ್ದರು. ಪ್ರಮುಖ ವೇಗದ ಬೌಲರ್​ ತಂಡದ ಕ್ಯಾಪ್ಟನ್​ ಆಗಿರುವ ಅಂತಹ ಸಂದರ್ಭಗಳಲ್ಲಿ ಏನಾಗಬಹುದೆಂದು ಗೊತ್ತಿದೆ ಎಂದು ಬಾರ್ಡರ್ ಸಹಾನುಭೂತಿಯನ್ನೂ ವ್ಯಕ್ತಪಡಿಸಿದ್ದಾರೆ.

ಎರಡನೇ ಟೆಸ್ಟ್‌ನ ನಂತರ ಕೌಟುಂಬಿಕ ಕಾರಣದಿಂದಾಗಿ ಕಮಿನ್ಸ್ ಭಾರತದಿಂದ ತವರಿಗೆ ಮರಳಿದ್ದಾರೆ. ಇಂದೋರ್ ಮತ್ತು ಅಹಮದಾಬಾದ್‌ನಲ್ಲಿ ನಡೆಯುವ ಉಳಿದೆರಡು ಪಂದ್ಯಗಳಿಗೆ ಮರಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ಮೊಣಕೈ ಗಾಯ: ಇಂದೋರ್​, ಅಹಮದಾಬಾದ್ ಪಂದ್ಯದಿಂದ ಡೇವಿಡ್​​ ವಾರ್ನರ್​ ಔಟ್​..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.