ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ದಿನಗಣನೆ ಆರಂಭವಾಗುತ್ತಿದ್ದಂತೆ ಅತಿಥಿಗಳ ಆಹ್ವಾನದಲ್ಲಿ ದಸರಾ ಸಮಿತಿ ಬ್ಯುಸಿಯಾಗಿದೆ.
![PV sindghu invited to dasara fest](https://etvbharatimages.akamaized.net/etvbharat/prod-images/4437584_thumb.jpg)
ಈ ಬಾರಿಯ ಯುವದಸರಾ ಹಾಗೂ ದಸರಾ ಕ್ರೀಡಾಕೂಟಗಳ ಉದ್ಘಾಟನೆಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಆಹ್ವಾನಿಸಿದ್ದಾರೆ.
![PV sindghu invited to dasara fest](https://etvbharatimages.akamaized.net/etvbharat/prod-images/4437584_thumb11.jpg)
ಹೈದರಾಬಾದ್ಗೆ ಆಗಮಿಸಿದ್ದ ಸಿಂಧೂ ಅವರನ್ನು ಭೇಟಿ ಮಾಡಿದ ಪ್ರತಾಪ್ ಸಿಂಹ, ದಸರಾಗೆ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಾರಿಯ ದಸರಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಣೆ ಹೊರಡಿಸಿದ್ದರು. ಅದರ ಬೆನ್ನಲೆ ಸಿಂಧೂ ಅವರಿಗೆ ಈ ಆಹ್ವಾನ ನೀಡಲಾಗಿದೆ.