ETV Bharat / sitara

'ಇಂಡಿಯನ್​ ಐಡಲ್' ಗೆದ್ದ ಪವನ್​ದೀಪ್​​ ರಂಜನ್: 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಕನ್ನಡಿಗ

author img

By

Published : Aug 16, 2021, 7:15 AM IST

12ನೇ ಆವೃತ್ತಿಯ ಹಿಂದಿ ರಿಯಾಲಿಟಿ ಶೋ 'ಇಂಡಿಯನ್​ ಐಡಲ್​​' ಫಿನಾಲೆಯಲ್ಲಿ ಪವನ್​ದೀಪ್​ ರಂಜನ್​​ ಜಯ ಸಾಧಿಸಿದರು.

Pawandeep Rajan
Pawandeep Rajan

ಸುಮಧುರ ಕಂಠಸಿರಿಯ ಮೂಲಕ ಇಂಡಿಯನ್​ ಐಡಲ್​​ ಸಂಗೀತ ರಿಯಾಲಿಟಿ ಶೋ 12ನೇ ಆವೃತ್ತಿ ಫೈನಲ್​ಗೆ ಲಗ್ಗೆ ಹಾಕಿದ್ದ ಕನ್ನಡಿಗ ನಿಹಾಲ್​ಗೆ ನಿರಾಸೆಯಾಗಿದೆ. ಸುಮಾರು 12 ಗಂಟೆಗಳ ಕಾಲ ನಡೆದ ಫೈನಲ್​ ಕಾರ್ಯಕ್ರಮದಲ್ಲಿ ಪವನ್​ದೀಪ್​ ರಂಜನ್​​ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ಹಿಂದಿಯ ಖ್ಯಾತ ರಿಯಾಲಿಟಿ ಶೋ "ಇಂಡಿಯನ್​ ಐಡಲ್" ಕಾರ್ಯಕ್ರಮದಲ್ಲಿ ಒಟ್ಟು 40 ಸ್ಪರ್ಧಿಗಳು​ 200ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಆದರೆ ​​ಫೈನಲ್​ಗೆ ಕನ್ನಡಿಗ ನಿಹಾಲ್​ ತಾವ್ರೋ ಸೇರಿದಂತೆ 10 ಯುವ ಗಾಯಕರು​​ ಲಗ್ಗೆ ಹಾಕಿದ್ದರು. ಅದರಲ್ಲಿ ಪವನ್​ದೀಪ್​, ಅರುಣಿತ ಕಂಜಿಲಾಲ್, ಮೊಹ್ಮದ್ ಡ್ಯಾನಿಶ್, ಷಣ್ಮುಖಪ್ರಿಯ, ನಿಹಾಲ್ ತಾವ್ರೋ ಮತ್ತು ಸಾಯ್ಲಿ ಕಾಂಬ್ಳೆ ಪ್ರಮುಖ ಸ್ಪರ್ಧಿಗಳಾಗಿದ್ದರು.

ಆಗಸ್ಟ್​ 15ರ ಮಧ್ಯಾಹ್ನ 12ಗಂಟೆಗೆ ಆರಂಭಗೊಂಡಿದ್ದ ಕಾರ್ಯಕ್ರಮ ಮಧ್ಯರಾತ್ರಿವರೆಗೂ ಮುಂದುವರೆದಿತ್ತು. ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಪವನ್​ ದೀಪ್​ ಅವರಿಗೆ 25 ಲಕ್ಷ ರೂ. ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಕಾರು ಸ್ವಿಫ್ಟ್ ನೀಡಲಾಗಿದೆ.

ರನ್ನರ್​ ಅಪ್​ ಆಗಿ ಅರುಣಿತ್ ಕಂಜಿಲಾಲ್​​ ಹಾಗೂ ಸಾಯ್ಲಿ ಕಾಂಬ್ಳೆ ಆಯ್ಕೆಯಾಗಿದ್ದು ತಲಾ 5 ಲಕ್ಷ ರೂ. ಪಡೆದುಕೊಂಡಿದ್ದಾರೆ. ಉಳಿದಂತೆ ಡ್ಯಾನಿಸ್ ಹಾಗೂ ಕನ್ನಡಿಗ ನಿಹಾಲ್​ ತಾವ್ರೋ 3 ಲಕ್ಷ ರೂ. ಪಡೆದುಕೊಂಡಿದ್ದಾರೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಗಾಯಕ ನಿಹಾಲ್​ ಇಂಡಿಯನ್​ ಐಡಲ್​ ಫಿನಾಲೆ ತಲುಪುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಉತ್ತರಾಖಂಡದ ಪವನ್​ದೀಪ್ ರಂಜನ್ ಆರಂಭದಿಂದಲೂ ತಮ್ಮ ಕಂಠಸಿರಿಯಿಂದಲೇ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕಾರ್ಯಕ್ರಮದಲ್ಲಿ ಉದಿತ್ ನಾರಾಯಣ್​, ಕುಮಾರ್ ಸಾನು, ಅಲ್ಕಾ ಯಾಗ್ನಿಕ್​, ಜಾವೇದ್​ ಅಲಿ, ರ್ಯಾಪರ್​ ಮಿಕಾ ಸಿಂಗ್​ ತೀರ್ಪುಗಾರರಾಗಿದ್ದರು. ಉಳಿದಂತೆ ಬಾಲಿವುಡ್​ನ ಸಿದ್ಧಾರ್ಥ್ ಮಲ್ಹೋತ್ರಾ, ನಟಿ ಸೋನಿಯಾ ಕಪೂರ್ ಸೇರಿದಂತೆ ಅನೇಕರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು.

ಸುಮಧುರ ಕಂಠಸಿರಿಯ ಮೂಲಕ ಇಂಡಿಯನ್​ ಐಡಲ್​​ ಸಂಗೀತ ರಿಯಾಲಿಟಿ ಶೋ 12ನೇ ಆವೃತ್ತಿ ಫೈನಲ್​ಗೆ ಲಗ್ಗೆ ಹಾಕಿದ್ದ ಕನ್ನಡಿಗ ನಿಹಾಲ್​ಗೆ ನಿರಾಸೆಯಾಗಿದೆ. ಸುಮಾರು 12 ಗಂಟೆಗಳ ಕಾಲ ನಡೆದ ಫೈನಲ್​ ಕಾರ್ಯಕ್ರಮದಲ್ಲಿ ಪವನ್​ದೀಪ್​ ರಂಜನ್​​ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ಹಿಂದಿಯ ಖ್ಯಾತ ರಿಯಾಲಿಟಿ ಶೋ "ಇಂಡಿಯನ್​ ಐಡಲ್" ಕಾರ್ಯಕ್ರಮದಲ್ಲಿ ಒಟ್ಟು 40 ಸ್ಪರ್ಧಿಗಳು​ 200ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಆದರೆ ​​ಫೈನಲ್​ಗೆ ಕನ್ನಡಿಗ ನಿಹಾಲ್​ ತಾವ್ರೋ ಸೇರಿದಂತೆ 10 ಯುವ ಗಾಯಕರು​​ ಲಗ್ಗೆ ಹಾಕಿದ್ದರು. ಅದರಲ್ಲಿ ಪವನ್​ದೀಪ್​, ಅರುಣಿತ ಕಂಜಿಲಾಲ್, ಮೊಹ್ಮದ್ ಡ್ಯಾನಿಶ್, ಷಣ್ಮುಖಪ್ರಿಯ, ನಿಹಾಲ್ ತಾವ್ರೋ ಮತ್ತು ಸಾಯ್ಲಿ ಕಾಂಬ್ಳೆ ಪ್ರಮುಖ ಸ್ಪರ್ಧಿಗಳಾಗಿದ್ದರು.

ಆಗಸ್ಟ್​ 15ರ ಮಧ್ಯಾಹ್ನ 12ಗಂಟೆಗೆ ಆರಂಭಗೊಂಡಿದ್ದ ಕಾರ್ಯಕ್ರಮ ಮಧ್ಯರಾತ್ರಿವರೆಗೂ ಮುಂದುವರೆದಿತ್ತು. ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಪವನ್​ ದೀಪ್​ ಅವರಿಗೆ 25 ಲಕ್ಷ ರೂ. ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಕಾರು ಸ್ವಿಫ್ಟ್ ನೀಡಲಾಗಿದೆ.

ರನ್ನರ್​ ಅಪ್​ ಆಗಿ ಅರುಣಿತ್ ಕಂಜಿಲಾಲ್​​ ಹಾಗೂ ಸಾಯ್ಲಿ ಕಾಂಬ್ಳೆ ಆಯ್ಕೆಯಾಗಿದ್ದು ತಲಾ 5 ಲಕ್ಷ ರೂ. ಪಡೆದುಕೊಂಡಿದ್ದಾರೆ. ಉಳಿದಂತೆ ಡ್ಯಾನಿಸ್ ಹಾಗೂ ಕನ್ನಡಿಗ ನಿಹಾಲ್​ ತಾವ್ರೋ 3 ಲಕ್ಷ ರೂ. ಪಡೆದುಕೊಂಡಿದ್ದಾರೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಗಾಯಕ ನಿಹಾಲ್​ ಇಂಡಿಯನ್​ ಐಡಲ್​ ಫಿನಾಲೆ ತಲುಪುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಉತ್ತರಾಖಂಡದ ಪವನ್​ದೀಪ್ ರಂಜನ್ ಆರಂಭದಿಂದಲೂ ತಮ್ಮ ಕಂಠಸಿರಿಯಿಂದಲೇ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕಾರ್ಯಕ್ರಮದಲ್ಲಿ ಉದಿತ್ ನಾರಾಯಣ್​, ಕುಮಾರ್ ಸಾನು, ಅಲ್ಕಾ ಯಾಗ್ನಿಕ್​, ಜಾವೇದ್​ ಅಲಿ, ರ್ಯಾಪರ್​ ಮಿಕಾ ಸಿಂಗ್​ ತೀರ್ಪುಗಾರರಾಗಿದ್ದರು. ಉಳಿದಂತೆ ಬಾಲಿವುಡ್​ನ ಸಿದ್ಧಾರ್ಥ್ ಮಲ್ಹೋತ್ರಾ, ನಟಿ ಸೋನಿಯಾ ಕಪೂರ್ ಸೇರಿದಂತೆ ಅನೇಕರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.