ETV Bharat / sitara

ವೀಕೆಂಡ್​ ಸಾಧಕರ ಸೀಟಿನಲ್ಲಿ 'ಮುತ್ತಿನ ಹಾರ'ದ ನಿರ್ದೇಶಕ

ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ವೀಕೆಂಡ್ ವಿಥ್​ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಂಚಿಕೆಯ ಚಿತ್ರೀಕರಣ ಈಗಾಗಲೇ ಮುಗಿದಿದೆ. ಆದರೆ, ಇದರ ಪ್ರಸಾರ ಯಾವಾಗ ಎಂಬುದು ಸದ್ಯಕ್ಕೆ ರಿವೀಲ್ ಆಗಿಲ್ಲ.

author img

By

Published : Jul 2, 2019, 11:14 PM IST

ವೀಕೆಂಡ್ ವಿಥ್​ ರಮೇಶ್

ಬಾಬು ಅವರ ಸಂಚಿಕೆಗೆ ಪುತ್ರ ಆದಿತ್ಯ, ಸಹೋದರಿ ವಿಜಯಲಕ್ಷ್ಮಿ ಸಿಂಗ್ ಹಾಗೂ ಇವರ ಪತಿ ನಟ ಜೈ ಜಗದೀಶ್, ಈ ದಂಪತಿಯ ಮೂವರು ಪುತ್ರಿಯರು ಹಾಗೂ ಹಿತೈಷಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ಪೋಟೊವನ್ನು ಆದಿತ್ಯ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

director rajendra babu sing
ರಮೇಶ್​ ಜತೆ ರಾಜೇಂದ್ರ ಸಿಂಗ್ ಬಾಬು ಹಾಗೂ ಅವರ ಪುತ್ರ ನಟ ಆದಿತ್ಯ

ರಾಜೇಂದ್ರ ಸಿಂಗ್ ಅವರು 1952ರ ಅಕ್ಟೋಬರ್ 22ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ನಿರ್ಮಾಪಕ ಡಿ.ಶಂಕರಸಿಂಗ್. ಅಪ್ಪ ಸ್ಥಾಪಿಸಿದ 'ಮಹಾತ್ಮ ಪಿಕ್ಚರ್ಸ್' ಸಂಸ್ಥೆಯನ್ನು ಮುಂದುವರೆಸಿಕೊಂಡು ಬಂದ ಬಾಬು ಅವರು, ಕನ್ನಡ ಅಲ್ಲದೇ, ಹಿಂದಿ ಮತ್ತು ತೆಲುಗು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. 'ಮುತ್ತಿನಹಾರ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

director rajendra babu sing
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ನಾಗರ ಹೊಳೆ, ಕಿಲಾಡಿ ಜೋಡಿ, ಬಂಧನ, ಅಂತ, ಭರ್ಜರಿ ಬೇಟೆ, ಮುತ್ತಿನ ಹಾರ, ಮುಂಗಾರಿನ ಮಿಂಚು, ಸಿಂಹದ ಮರಿ ಸೈನ್ಯ, ಹೂವು ಹಣ್ಣು, ಹಿಮಪಾತ, ಮಹಾ ಕ್ಷತ್ರಿಯ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಬಾಬು ಅವರ ಸಂಚಿಕೆಗೆ ಪುತ್ರ ಆದಿತ್ಯ, ಸಹೋದರಿ ವಿಜಯಲಕ್ಷ್ಮಿ ಸಿಂಗ್ ಹಾಗೂ ಇವರ ಪತಿ ನಟ ಜೈ ಜಗದೀಶ್, ಈ ದಂಪತಿಯ ಮೂವರು ಪುತ್ರಿಯರು ಹಾಗೂ ಹಿತೈಷಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ಪೋಟೊವನ್ನು ಆದಿತ್ಯ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

director rajendra babu sing
ರಮೇಶ್​ ಜತೆ ರಾಜೇಂದ್ರ ಸಿಂಗ್ ಬಾಬು ಹಾಗೂ ಅವರ ಪುತ್ರ ನಟ ಆದಿತ್ಯ

ರಾಜೇಂದ್ರ ಸಿಂಗ್ ಅವರು 1952ರ ಅಕ್ಟೋಬರ್ 22ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ನಿರ್ಮಾಪಕ ಡಿ.ಶಂಕರಸಿಂಗ್. ಅಪ್ಪ ಸ್ಥಾಪಿಸಿದ 'ಮಹಾತ್ಮ ಪಿಕ್ಚರ್ಸ್' ಸಂಸ್ಥೆಯನ್ನು ಮುಂದುವರೆಸಿಕೊಂಡು ಬಂದ ಬಾಬು ಅವರು, ಕನ್ನಡ ಅಲ್ಲದೇ, ಹಿಂದಿ ಮತ್ತು ತೆಲುಗು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. 'ಮುತ್ತಿನಹಾರ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

director rajendra babu sing
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ನಾಗರ ಹೊಳೆ, ಕಿಲಾಡಿ ಜೋಡಿ, ಬಂಧನ, ಅಂತ, ಭರ್ಜರಿ ಬೇಟೆ, ಮುತ್ತಿನ ಹಾರ, ಮುಂಗಾರಿನ ಮಿಂಚು, ಸಿಂಹದ ಮರಿ ಸೈನ್ಯ, ಹೂವು ಹಣ್ಣು, ಹಿಮಪಾತ, ಮಹಾ ಕ್ಷತ್ರಿಯ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

Intro:Body:ಈ ವಾರ ಮತ್ತೆ ವಿಕೇಂಡ್ ಬರ್ತಿದೆ. ಹಾಗಿದ್ರೆ ವಿಕೇಂಡ್ ವಿಥ್ ರಮೇಶ್ ಸಾಧಕರ ಸೀಟ್ ನಲ್ಲಿ ಯಾರ್ ಬರ್ತಾರೆ ಸಾಧಕರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡತ್ತೆ..
ಆದರೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸಾಧಕರ ಸೀಟ್ ನಲ್ಲಿದ್ದಾರೆ. ಅವರ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಸ್ವತಃ ಅವರ ಪುತ್ರ ಆದಿತ್ಯ ಸಿಂಗ್ ಈ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಆದರೆ, ಅವರ ಸಂಚಿಕೆಯ ಪ್ರಸಾರ ದಿನಾಂಕವನ್ನು ಜೀ ವಾಹಿನಿ ಇನ್ನೂ ಬಿಡುಗಡೆ ಮಾಡಿಲ್ಲ.
ಬಾಬು ಅವರ ಸಂಚಿಕೆಗೆ ಪುತ್ರ ಆದಿತ್ಯ ಸಹೋದರಿ ವಿಜಯಲಕ್ಷ್ಮಿ ಸಿಂಗ್, ಅವರ ಪತಿ ನಟ ಜೈ ಜಗದೀಶ್ ಹಾಗೂ ಮೂವರು ಪುತ್ರಿಯರು ಹಾಗೂ ಹಿತೈಷಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ಪರಿಚಯ
ರಾಜೇಂದ್ರ ಸಿಂಗ್ ಬಾಬು ಅವರು 1952 ರ ಆಕ್ಟೊಬರ್ 22ರಂದು ಮೈಸೂರಿನಲ್ಲಿ ಜನಿಸಿದರು. ರಾಜೇಂದ್ರ ಸಿಂಗ್ ಬಾಬು ಅವರ ತಂದೆ ನಿರ್ಮಾಪಕ ಡಿ. ಶಂಕರಸಿಂಗ್ ಅವರು ಸ್ಥಾಪಿಸಿದ 'ಮಹಾತ್ಮ ಪಿಕ್ಚರ್ಸ್' ಸಂಸ್ಥೆಯನ್ನು ಮುಂದುವರೆಸಿದ ಅವರು ಕನ್ನಡವೇ ಅಲ್ಲದೇ, ಹಿಂದಿ ಮತ್ತು ತೆಲುಗು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ತಮ್ಮ 'ಮುತ್ತಿನಹಾರ'ದಂತಹ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಹಾಗೂ ಹಲವಾರು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ನಾಗರ ಹೊಳೆ, ಕಿಲಾಡಿ ಜೋಡಿ, ಬಂಧನ, ಅಂತ, ಭರ್ಜರಿ ಭೇಟೆ, ಮುತ್ತಿನ ಹಾರ, ಮುಂಗಾರಿನ ಮಿಂಚು, ಸಿಂಹದ ಮರಿ ಸೈನ್ಯ, ಹೂವು ಹಣ್ಣು, ಹಿಮ ಪಾತ, ಮಹಾ ಕ್ಷತ್ರಿಯ, ಹಿಮಪಾತ ಸೇರಿದಂತೆ ಹಲವುಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ನಾಗರಹೊಳೆ’ಯಲ್ಲಿ ಮಕ್ಕಳೊಡನೆ ಪ್ರಾಣಿ ಪರಿಸರಗಳನ್ನು ಮೂಡಿಸಿದ ಬಗೆ, ‘ಬಂಧನ’ ಚಿತ್ರದಲ್ಲಿ ಅವರು ನಿರೂಪಿಸಿದ ವಿಷ್ಣುವರ್ಧನ – ಸುಹಾಸಿನಿ ಜೋಡಿಯ ಪಾತ್ರಗಳು, ಅಂತ ಚಿತ್ರದಲ್ಲಿ ಅಂಬರೀಶ್ ಅವರನ್ನು ಕನ್ವರ್ ಆಗಿಸಿದ ರೀತಿ ಕನ್ನಡ ಜನತೆ ಮರೆಯುವಂತೆಯೇ ಇಲ್ಲ. ‘ಮುತ್ತಿನಹಾರ’ದಂತಹ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟಿದೆ.
ನಿರ್ದೇಶನಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ ಸುಮಾರು 35 ಚಿತ್ರಗಳು, ಹಿಂದಿಯಲ್ಲಿ 8, ತೆಲುಗಿನಲ್ಲಿ 7 ಚಿತ್ರಗಳನ್ನು ಬಾಬು ಮಾಡಿದ್ದಾರೆ.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.