ETV Bharat / sitara

ಪ್ರೀತಿ, ಭ್ರಮೆ, ಸೇಡುಗಳ ನಡುವೆ 'ಕಪಟನಾಟಕ ಸೂತ್ರಧಾರಿ'

author img

By

Published : Nov 8, 2019, 4:21 PM IST

'ಕಪಟನಾಟಕ ಸೂತ್ರಧಾರಿ'

ಸ್ಯಾಂಡಲ್​​ವುಡ್​​ನಲ್ಲಿ ಸಾಕಷ್ಟು ಹಾರರ್​ ಸಿನಿಮಾಗಳು ತಯಾರಾಗುತ್ತಿವೆ. ಇಂದಿಗೂ ಹಾರರ್ ಸಿನಿಮಾಗಳ ನಿರ್ಮಾಣ ಮುಂದುವರೆದಿದೆ. ಇದೀಗ 'ಕಪಟನಾಟಕ ಸೂತ್ರಧಾರಿ' ಕೂಡಾ ಈ ಲಿಸ್ಟ್​​​ಗೆ ಸೇರಿದೆ. ಈ ಸಿನಿಮಾ ನಿಜಕ್ಕೂ ಒಂದು ಹೊಸ ಅನುಭವ ನೀಡುತ್ತದೆ. ಚಿತ್ರದಲ್ಲಿ ನಾಯಕನ ಮುಖಾಂತರ ಒಂದು ಆತ್ಮ ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆ.

ಅಮಾಯಕ ಆಟೋ ರಿಕ್ಷಾ ಚಾಲಕನ ಜೀವನದಲ್ಲಿ ನಡೆಯುವ ಕೆಲವೊಂದು ಸನ್ನಿವೇಶಗಳನ್ನು ಈ ಚಿತ್ರದಲ್ಲಿ ಹಾರರ್ ಮುಖಾಂತರ ತೋರಿಸಲಾಗಿದೆ. ಚಿತ್ರದ ಕಥಾನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ ಎಂಬುದು ಚಿತ್ರದ ಕಥಾವಸ್ತು. ನಾಯಕ ಈ ಚಿತ್ರದಲ್ಲಿ ಓರ್ವ ಆಟೋಚಾಲಕ. ಈತನ ಆಟೋದಲ್ಲಿ ಪ್ರಯಾಣಿಸುವ ಮೂವರು ವ್ಯಕ್ತಿಗಳು ಕಾಣೆ ಆಗುತ್ತಾರೆ. ಇನ್ನೊಂದು ವಿಚಿತ್ರ ಅಂದ್ರೆ ನಾಯಕಿ ರುಕ್ಕು, ಕೇವಲ ನಾಯಕ ಕೃಷ್ಣನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುವುದು, ಇದೆಲ್ಲಾ ಭ್ರಮೆ ಎನಿಸಿದರೂ ಮುಂದೆ ಚಿತ್ರ ಒಂದು ತಿರುವು ಪಡೆದುಕೊಳ್ಳುತ್ತದೆ. ಮುಂದೆ ಏನು ಜರುಗಲಿದೆ ಎಂದು ಪ್ರೇಕ್ಷಕ ತನಗೆ ತಿಳಿದುಹೋಯಿತು ಎಂದುಕೊಳ್ಳುತ್ತಿರುವಾಗಲೇ ನಿರ್ದೇಶಕ ಕ್ರಿಶ್ ಚಿತ್ರಕ್ಕೆ ಟ್ವಿಸ್ಟ್ ಕೊಡುತ್ತಾರೆ. ಇವೆಲ್ಲವನ್ನೂ ನೀವು ಥಿಯೇಟರ್​​​ನಲ್ಲೇ ಬಂದು ನೋಡಬೇಕು.

ಇದು ಬಾಲು ನಾಗೇಂದ್ರ ವೃತ್ತಿ ಜೀವನದಲ್ಲಿ ವಿಭಿನ್ನ ಪಾತ್ರದ ಸಿನಿಮಾ ಎನ್ನಬಹುದು. ಇನ್ನು ನಾಯಕಿ ಸಂಗೀತ ಭಟ್​​ಗೆ ಚಿತ್ರದಲ್ಲಿ ಹೆಚ್ಚಿಗೆ ಕೆಲಸ ಇಲ್ಲ. ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮುನಾಡು, ಉಗ್ರಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಎರಡು ಹಾಡುಗಳು ಕೇಳಲು ಚೆಂದ. ಪರಮೇಶ್ ಅವರ ಛಾಯಾಗ್ರಹಣ ಕೂಡಾ ಓಕೆ. ಚಿತ್ರದ ದ್ವಿತೀಯಾರ್ಧ ಬಿಗಿಯಾಗಿದೆ. ಒಮ್ಮೆ ಸಿನಿಮಾವನ್ನು ನೋಡಬಹುದು.

ಸ್ಯಾಂಡಲ್​​ವುಡ್​​ನಲ್ಲಿ ಸಾಕಷ್ಟು ಹಾರರ್​ ಸಿನಿಮಾಗಳು ತಯಾರಾಗುತ್ತಿವೆ. ಇಂದಿಗೂ ಹಾರರ್ ಸಿನಿಮಾಗಳ ನಿರ್ಮಾಣ ಮುಂದುವರೆದಿದೆ. ಇದೀಗ 'ಕಪಟನಾಟಕ ಸೂತ್ರಧಾರಿ' ಕೂಡಾ ಈ ಲಿಸ್ಟ್​​​ಗೆ ಸೇರಿದೆ. ಈ ಸಿನಿಮಾ ನಿಜಕ್ಕೂ ಒಂದು ಹೊಸ ಅನುಭವ ನೀಡುತ್ತದೆ. ಚಿತ್ರದಲ್ಲಿ ನಾಯಕನ ಮುಖಾಂತರ ಒಂದು ಆತ್ಮ ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆ.

ಅಮಾಯಕ ಆಟೋ ರಿಕ್ಷಾ ಚಾಲಕನ ಜೀವನದಲ್ಲಿ ನಡೆಯುವ ಕೆಲವೊಂದು ಸನ್ನಿವೇಶಗಳನ್ನು ಈ ಚಿತ್ರದಲ್ಲಿ ಹಾರರ್ ಮುಖಾಂತರ ತೋರಿಸಲಾಗಿದೆ. ಚಿತ್ರದ ಕಥಾನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ ಎಂಬುದು ಚಿತ್ರದ ಕಥಾವಸ್ತು. ನಾಯಕ ಈ ಚಿತ್ರದಲ್ಲಿ ಓರ್ವ ಆಟೋಚಾಲಕ. ಈತನ ಆಟೋದಲ್ಲಿ ಪ್ರಯಾಣಿಸುವ ಮೂವರು ವ್ಯಕ್ತಿಗಳು ಕಾಣೆ ಆಗುತ್ತಾರೆ. ಇನ್ನೊಂದು ವಿಚಿತ್ರ ಅಂದ್ರೆ ನಾಯಕಿ ರುಕ್ಕು, ಕೇವಲ ನಾಯಕ ಕೃಷ್ಣನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುವುದು, ಇದೆಲ್ಲಾ ಭ್ರಮೆ ಎನಿಸಿದರೂ ಮುಂದೆ ಚಿತ್ರ ಒಂದು ತಿರುವು ಪಡೆದುಕೊಳ್ಳುತ್ತದೆ. ಮುಂದೆ ಏನು ಜರುಗಲಿದೆ ಎಂದು ಪ್ರೇಕ್ಷಕ ತನಗೆ ತಿಳಿದುಹೋಯಿತು ಎಂದುಕೊಳ್ಳುತ್ತಿರುವಾಗಲೇ ನಿರ್ದೇಶಕ ಕ್ರಿಶ್ ಚಿತ್ರಕ್ಕೆ ಟ್ವಿಸ್ಟ್ ಕೊಡುತ್ತಾರೆ. ಇವೆಲ್ಲವನ್ನೂ ನೀವು ಥಿಯೇಟರ್​​​ನಲ್ಲೇ ಬಂದು ನೋಡಬೇಕು.

ಇದು ಬಾಲು ನಾಗೇಂದ್ರ ವೃತ್ತಿ ಜೀವನದಲ್ಲಿ ವಿಭಿನ್ನ ಪಾತ್ರದ ಸಿನಿಮಾ ಎನ್ನಬಹುದು. ಇನ್ನು ನಾಯಕಿ ಸಂಗೀತ ಭಟ್​​ಗೆ ಚಿತ್ರದಲ್ಲಿ ಹೆಚ್ಚಿಗೆ ಕೆಲಸ ಇಲ್ಲ. ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮುನಾಡು, ಉಗ್ರಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಎರಡು ಹಾಡುಗಳು ಕೇಳಲು ಚೆಂದ. ಪರಮೇಶ್ ಅವರ ಛಾಯಾಗ್ರಹಣ ಕೂಡಾ ಓಕೆ. ಚಿತ್ರದ ದ್ವಿತೀಯಾರ್ಧ ಬಿಗಿಯಾಗಿದೆ. ಒಮ್ಮೆ ಸಿನಿಮಾವನ್ನು ನೋಡಬಹುದು.

ಕಪಟ ನಾಟಕ ಪಾತ್ರದಾರಿ ಚಿತ್ರ ವಿಮರ್ಶೆ

ಜಗವೇ ಒಂದು ನಾಟಕ ರಂಗ!

ಅವದಿ – 117 ನಿಮಿಷ, ಕ್ಯಾಟಗರಿ – ಹಾರರ್ ಥ್ರಿಲ್ಲರ್, ರೇಟಿಂಗ್ – 3/5

ಚಿತ್ರ – ಕಪಟ ನಾಟಕ ಪಾತ್ರದಾರಿ, ನಿರ್ಮಾಣ – ಗರುಡ ಕ್ರಿಯೇಷನ್, ನಿರ್ದೇಶನ – ಕ್ರಿಶ್, ಸಂಗೀತ – ಅದಿಲ್ ನಡಾಫ್, ಛಾಯಾಗ್ರಹಣ – ಪರಮೇಶ್, ತಾರಾಗಣ – ಬಾಲು ನಾಗೇಂದ್ರ, ಸಂಗೀತ ಭಟ್, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಷ್ ತುಮ್ಮುನಾಡು, ಉಗ್ರಾಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ತಾರಾಗಣದಲಿದ್ದಾರೆ.

ಇದು ಅಮಾಯಕ ಆಟೋ ರಿಕ್ಷಾ ಚಾಲಕನ ಜೀವನದಲ್ಲಿ ನಡೆದು ಹೋಗುವ ಸುಂಟರ ಗಾಳಿ’. ಕಾರಣ ಈ ಚಿತ್ರದಲ್ಲಿ ಹಾರರ್ ಅಂಶವನ್ನು ಗಾಳಿಯ ಮುಖಂತಾರ ತೋರಿಸಲಾಗಿದೆ. ಚಿತ್ರದ ಕಥಾ ನಾಯಕ ತನ್ನ ಪ್ರೀತಿಯನ್ನು ಉಳಿಕೊಳ್ಳುವ ಭ್ರಮೆಯಲ್ಲಿ ಏನೆಲ್ಲಾ ಕಷ್ಟ ಅನುಭವಿಸುತ್ತಾನೆ ಎಂಬುದು ಕಥಾ ತಿರುಳು. ಯಾರೋ ಸೂತ್ರದಾರಿ ಆದರೆ ನಾಯಕ ಪಾತ್ರದಾರಿ.

ಇಲ್ಲಿ ನಾಯಕ ನಾಟಕ ಆಡುತ್ತಾ ಆಡುತ್ತಾ ಪೊಲೀಸ್ ಇಲಾಖೆಗೆ ಬೇಸ್ತು ಬಿಳಿಸುವುದು ಚಿತ್ರದ ಕಥಾ ನಿರೂಪಣೆಯಲ್ಲಿ ಮೊದಲ ನಿರ್ದೇಶನದಲ್ಲಿ ಕ್ರಿಶ್ ಅಳವಡಿಸಿಕೊಳ್ಳಲಿದ್ದಾರೆ. ಕ್ಲೈಮ್ಯಾಕ್ಸ್ ಕಡೆಯ ಶಾಟ್ ಇಂದಲೇ ಇವರ ಚಿತ್ರ ತೆರೆಯ ಮೇಲೆ ಪ್ರಾರಂಭ ಆಗುತ್ತದೆ. ಕಥಾ ನಾಯಕ ಪೊಲೀಸ್ ಸ್ಟೇಷನ್ ಅಲ್ಲಿ ಮೂರು ವ್ಯಕ್ತಿಗಳು ಇವನ ಆಟೋ ಅಲ್ಲಿ ಕುಳಿತು ಕಾಣೆ ಆಗಿರುವುದಕ್ಕೆ ಮುಗ್ದತೆ ಇಂದ ನಿರೂಪಣೆ ಮಾಡುತ್ತಾ ಹೋಗುತ್ತಾನೆ, ದೃಶ್ಯಗಳು ಕಣ್ಣ ಮುಂದೆ ಹಾದು ಹೋಗುತ್ತಾ ಇರುತ್ತದೆ.

ಚಿತ್ರದ ವಿಚಿತ್ರ ಅಂದರೆ ಕಥಾ ನಾಯಕಿ ರುಕ್ಕು ನಾಯಕ ಕೃಷ್ಣನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುವುದು. ಇದು ನಾಯಕನ ಭ್ರಮೆ ಅಂತ ಬಾಸವಾದರೂ, ನಾಯಕಿ ಮನಸಿನಲ್ಲಿ ಇರುವ ಸೇಡು ದ್ವಿತೀಯಾರ್ದದಲ್ಲಿ ಹೆಚ್ಚು ಗಮನ ಸೆಳೆಯುತ್ತಾ ಹೋಗುತ್ತದೆ. ಅದಕ್ಕೆ ಕಾರಣ ನಾಯಕ ಖರೀದಿಸುವ ಒಂದು ಆಟೋ. ಅಪ್ಪನ ದುಡ್ಡಿನಿಂದ ಕೃಷ್ಣ ಒಂದು ಸಮಸ್ಯೆ ಇರುವ ಆಟೋ ಬೇಡವೆಂದರೂ ಖರೀದಿ ಮಾಡುತ್ತಾನೆ. ಅಲ್ಲಿಂದ ಚಿತ್ರಕ್ಕೆ ಒಂದು ಬಿಗಿ ಹಿಡಿತ ಸಹ ಸಿಕ್ಕುವುದು.

ನಾಯಕನ ಆಟೋದಲ್ಲಿ ಕುಳಿತವರೆಲ್ಲರೂ ವಿಚಿತ್ರ ಅನುಭವ ಪಡೆದು ಮಧ್ಯದಲ್ಲೇ ಆಟೋ ಇಂದ ಕೆಳಗೆ ಇಳಿಯುತ್ತಾರೆ. ಅಷ್ಟೇ ಏಕೆ ಚಿತ್ರದ ಕಥಾ ನಾಯಕಿ ಸಹ ಇದೆ ಅನುಭವ. ಈ ಆಟೋ ಅಲ್ಲಿಯೇ ಏನೋ ಸಮಸ್ಯೆ ಇದೆ ಎಂದು ನಾಯಕನಿಗೆ ತಿಳಿಯುವ ಹೊತ್ತಿಗೆ ಅವನಿಗೆ ಮತ್ತಷ್ಟು ಅಚ್ಚರಿ ಕಾದಿರುತ್ತದೆ.

ಇದುವರೆವಿಗೂ ಪ್ರೇಕ್ಷಕನಿಗೆ ಒಂದು ರೀತಿಯಲ್ಲಿ ನಂಬಿಸಿದ್ದ ನಿರ್ದೇಶಕ ಕ್ರಿಶ್ ಈಗ ಅದೆಲ್ಲ ವಿಚಾರ ಬೇರೆಯೇ ಇದೆ ಎಂದು ನಾಯಕನ ಜೀವನದಲ್ಲಿ ಪಾತ್ರದಾರಿ, ಸೂತ್ರದಾರಿ ಜೊತೆಗೆ ನಾಟಕ ಆಡಿಸಿಬಿಡುತ್ತಾರೆ. ಆದ್ರೆ ಅಲ್ಲಿ ಸರಣಿ ಕೊಲೆಗಳು ಸಹ ಪ್ರೇಕ್ಷಕ ಕಣ್ಣು ತುಂಬಿಸಿಕೊಳ್ಳುತ್ತಾನೆ. ಇದಕ್ಕೆ ನಾಯಕ ಹಾಗೂ ಅವನ ಆಟೋ. ಮುಂದೇನು ಎಂಬುದುದನ್ನು ತೆರೆಯ ಮೇಲೆ ವೀಕ್ಷಿಸಬೇಕು.

ಕನ್ನಡದಲ್ಲಿ ಹಲವಾರು ಹಾರರ್ ಚಿತ್ರಗಳು ಬಂದು ಹೋಗಿವೆ. ಅದರ ಲಿಸ್ಟ್ ಅಲ್ಲಿ ಈ ಸಿನಿಮಾ ಸ್ವಲ್ಪ ಹೊಸ ಅನುಭವ ನೀಡುತ್ತದೆ. ಸೇಡು ತೀರಿಸಿಕೊಳ್ಳುವ ದೆವ್ವ ನಾಯಕನ ಮುಖಾಂತರ ಹೇಗೆ, ಯಾತಕ್ಕೆ ಎಂದೆಲ್ಲಾ ಹೇಳಲಾಗಿದೆ.

ಬಾಲು ನಾಗೇಂದ್ರ ಅವರ ವೃತ್ತಿ ಜೀವನದಲ್ಲಿ ವಿಭಿನ್ನ ಪಾತ್ರ. ತನ್ನ ಪ್ರೀತಿಯನ್ನು ಪಡೆದುಕೊಂಡು ಆಮೇಲೆ ತೊಡಕಿಗೆ ಸಿಲುಕುವ ಪಾತ್ರ, ನಾಯಕಿ ಸಂಗೀತ ಭಟ್ (ಮೀ ಟೂ ವಿವಾದದ ನಟಿ) ಅವರಿಗೆ ಇಲ್ಲೇನು ಛಾಲೆಂಜಿಂಗ್ ಪಾತ್ರವೆನಿಲ್ಲಾ. ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಷ್ ತುಮ್ಮುನಾಡು, ಉಗ್ರಾಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ಅಚ್ಚುಕಟ್ಟಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ.

ಎರಡು ಹಾಡುಗಳು ಕೇಳಲು ಚಂದಾ, ಸಂಗೀತ ನಿರ್ದೇಶಕ ಹಿನ್ನಲೆ ಸಂಗೀತ ಸಹ ಮೆಚ್ಚಬಹುದು, ಛಾಯಾಗ್ರಾಹಕ ಪರಮೇಶ್ ಅವರ ಆರಂಭದ ಸನ್ನಿವೇಶಗಳು ಡಲ್ ಅಮೇಲಾಮೇಲೆ ಸಾದರಣವಾಗಿ ಮೂಡಿಬಂದಿದೆ.

ಕಪಟ ನಾಟಕ ಪಾತ್ರದಾರಿ ದ್ವಿತೀಯಾರ್ಧದಲ್ಲಿ ಚಿತ್ರಕಥೆ ಬಿಗಿಯಾಗಿದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.