ಬಿಗ್ಬಾಸ್ ಸೀಸನ್ 8ರ ಮರು ಆರಂಭವಾಗಿದ್ದು, ಸ್ಪರ್ಧಿಗಳ ನಡುವೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಚಕ್ರವರ್ತಿ ಚಂದ್ರಚೂಡ ಅವರ ಮೇಲೆ ಮಂಜುನಾಥ್ ಪಾವಗಡ ಹಾಗೂ ದಿವ್ಯ ಸುರೇಶ್ ಕಿಡಿಕಾರಿದರೆ, ವೈಷ್ಣವಿ ಕೂಡ ಚಕ್ರವರ್ತಿ ಹೇಳಿಕೆಯನ್ನು ಖಂಡಿಸಿದ್ದರು.
ಆದರೆ, ನಾನು ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಚಂದ್ರಚೂಡ ವಾದ ಮಾಡಿದ್ದಾರೆ. ಇದೇ ವೇಳೆ ಚಂದ್ರಚೂಡ ಹೇಳಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ. ಮಾಧ್ಯಮಗಳ ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ಮನಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಮೊದಲಿಗೆ ಮಂಜುನಾಥ್ ಪಾವಗಡ ಹಾಗೂ ದಿವ್ಯ ಸುರೇಶ್ ಅವರ ವಿರುದ್ಧ ಕಿಡಿಕಾರಿದರು. ಬಳಿಕ ವೈಷ್ಣವಿ ಕೂಡ ಚಕ್ರವರ್ತಿ ಹೇಳಿಕೆಯನ್ನು ಖಂಡಿಸಿದ್ದರು. ಈ ಬಗ್ಗೆ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಕೈಗೆತ್ತಿಕೊಂಡರು. ಆಗ ಚಕ್ರವರ್ತಿ ಚಂದ್ರಚೂಡ, 'ಶ್ರೀಮಾನ್ ಮಂಜು ಪಾವಗಡ, ಒಂದು ಶೋಗೋಸ್ಕರ ಒಬ್ಬಳು ಹೆಣ್ಣನ್ನು ಹೆಂಡತಿಯಾಗಿ ಹೇಗೆ ಮಾಡಿಕೊಳ್ಳುತ್ತಾನೆ' ಎಂದಿದ್ದಾರೆ.
ಆಗ ಉತ್ತರ ನೀಡಿದ ಮಂಜು, 'ಅದು ನಾಟಕ ಎಂಬುದು ಇಡೀ ಮನೆಯವರಿಗೆ ಗೊತ್ತಿತ್ತು' ಎಂದಿದ್ದಾರೆ. ಈ ವೇಳೆ 'ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ ಸರ್' ಎಂದು ಚಂದ್ರಚೂಡ ಆಕ್ಷೇಪಿಸಿದರು. ಅದಕ್ಕೆ ಪ್ರತಿಯಾಗಿ 'ಇಲ್ಲಿದ್ದಾಗ ನಕ್ಕು, ಮಜಾ ಮಾಡಿ, ಹೊರಗೆ ಹೋದ ಮೇಲೆ ಇದೆಲ್ಲ ನಿಮಗೆ ನೆನಪಾಯ್ತಾ' ಎಂದು ಮಂಜು ಮರುಪ್ರಶ್ನೆ ಹಾಕಿದ್ದಾರೆ. ಈ ನಡುವೆ ದಿವ್ಯ ಸುರೇಶ್ ಕಣ್ಣೀರು ಹಾಕುತ್ತಾರೆ. ಆನಂತರ ಚಂದ್ರಚೂಡ ಬಾಗಿಲ ಬಳಿ ಬಂದು ತಮ್ಮ ಕೋಪ ಹೊರಹಾಕಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಇಂದಿನ ಎಪಿಸೋಡ್ನಲ್ಲಿ ನೋಡಬೇಕಾಗಿದೆ.
ಇದನ್ನೂ ಓದಿ: bigboss ಸೆಕೆಂಡ್ ಇನ್ನಿಂಗ್ಸ್: ಪ್ರಾಂಕ್ ಆದ ಪ್ರಶಾಂತ್ ಸಂಬರಗಿ