ETV Bharat / sitara

Bigg Boss Season 8: ಚಂದ್ರಚೂಡ​ ಮೇಲೆ ಮಂಜು, ದಿವ್ಯ ಸುರೇಶ್​ ಗರಂ ಆಗಿದ್ದೇಕೆ?

author img

By

Published : Jun 28, 2021, 10:49 AM IST

ಮಾಧ್ಯಮಗಳ ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ​ ಅವರು ಮನಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಮೊದಲಿಗೆ ಮಂಜುನಾಥ್ ಪಾವಗಡ ಹಾಗೂ ದಿವ್ಯ ಸುರೇಶ್ ಅವರ ವಿರುದ್ಧ ಕಿಡಿಕಾರಿದ್ದಾರೆ. ಬಳಿಕ ವೈಷ್ಣವಿ ಕೂಡ ಚಕ್ರವರ್ತಿ ಹೇಳಿಕೆಯನ್ನು ಖಂಡಿಸಿದ್ದಾರೆ.

Bigg Boss Season 8
ಬಿಗ್​ಬಾಸ್​​ ಸೀಸನ್​ 8

ಬಿಗ್​ಬಾಸ್​​ ಸೀಸನ್​ 8ರ ಮರು ಆರಂಭವಾಗಿದ್ದು, ಸ್ಪರ್ಧಿಗಳ ನಡುವೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಚಕ್ರವರ್ತಿ ಚಂದ್ರಚೂಡ​ ಅವರ ಮೇಲೆ ಮಂಜುನಾಥ್ ಪಾವಗಡ ಹಾಗೂ ದಿವ್ಯ ಸುರೇಶ್ ಕಿಡಿಕಾರಿದರೆ, ವೈಷ್ಣವಿ ಕೂಡ ಚಕ್ರವರ್ತಿ ಹೇಳಿಕೆಯನ್ನು ಖಂಡಿಸಿದ್ದರು.

ಆದರೆ, ನಾನು ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಚಂದ್ರಚೂಡ ವಾದ ಮಾಡಿದ್ದಾರೆ. ಇದೇ ವೇಳೆ ಚಂದ್ರಚೂಡ ಹೇಳಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ. ಮಾಧ್ಯಮಗಳ ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ​ ಅವರು ಮನಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಮೊದಲಿಗೆ ಮಂಜುನಾಥ್ ಪಾವಗಡ ಹಾಗೂ ದಿವ್ಯ ಸುರೇಶ್ ಅವರ ವಿರುದ್ಧ ಕಿಡಿಕಾರಿದರು. ಬಳಿಕ ವೈಷ್ಣವಿ ಕೂಡ ಚಕ್ರವರ್ತಿ ಹೇಳಿಕೆಯನ್ನು ಖಂಡಿಸಿದ್ದರು. ಈ ಬಗ್ಗೆ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಕೈಗೆತ್ತಿಕೊಂಡರು. ಆಗ ಚಕ್ರವರ್ತಿ ಚಂದ್ರಚೂಡ​, 'ಶ್ರೀಮಾನ್​ ಮಂಜು ಪಾವಗಡ, ಒಂದು ಶೋಗೋಸ್ಕರ ಒಬ್ಬಳು ಹೆಣ್ಣನ್ನು ಹೆಂಡತಿಯಾಗಿ ಹೇಗೆ ಮಾಡಿಕೊಳ್ಳುತ್ತಾನೆ' ಎಂದಿದ್ದಾರೆ.

ಆಗ ಉತ್ತರ ನೀಡಿದ ಮಂಜು, 'ಅದು ನಾಟಕ ಎಂಬುದು ಇಡೀ ಮನೆಯವರಿಗೆ ಗೊತ್ತಿತ್ತು' ಎಂದಿದ್ದಾರೆ. ಈ ವೇಳೆ 'ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ ಸರ್​' ಎಂದು ಚಂದ್ರಚೂಡ​ ಆಕ್ಷೇಪಿಸಿದರು. ಅದಕ್ಕೆ ಪ್ರತಿಯಾಗಿ 'ಇಲ್ಲಿದ್ದಾಗ ನಕ್ಕು, ಮಜಾ ಮಾಡಿ, ಹೊರಗೆ ಹೋದ ಮೇಲೆ ಇದೆಲ್ಲ ನಿಮಗೆ ನೆನಪಾಯ್ತಾ' ಎಂದು ಮಂಜು ಮರುಪ್ರಶ್ನೆ ಹಾಕಿದ್ದಾರೆ. ಈ ನಡುವೆ ದಿವ್ಯ ಸುರೇಶ್ ಕಣ್ಣೀರು ಹಾಕುತ್ತಾರೆ. ಆನಂತರ ಚಂದ್ರಚೂಡ ಬಾಗಿಲ ಬಳಿ ಬಂದು ತಮ್ಮ ಕೋಪ ಹೊರಹಾಕಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಇಂದಿನ ಎಪಿಸೋಡ್​​​ನಲ್ಲಿ ನೋಡಬೇಕಾಗಿದೆ.

ಇದನ್ನೂ ಓದಿ: bigboss ಸೆಕೆಂಡ್ ಇನ್ನಿಂಗ್ಸ್: ಪ್ರಾಂಕ್ ಆದ ಪ್ರಶಾಂತ್ ಸಂಬರಗಿ

ಬಿಗ್​ಬಾಸ್​​ ಸೀಸನ್​ 8ರ ಮರು ಆರಂಭವಾಗಿದ್ದು, ಸ್ಪರ್ಧಿಗಳ ನಡುವೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಚಕ್ರವರ್ತಿ ಚಂದ್ರಚೂಡ​ ಅವರ ಮೇಲೆ ಮಂಜುನಾಥ್ ಪಾವಗಡ ಹಾಗೂ ದಿವ್ಯ ಸುರೇಶ್ ಕಿಡಿಕಾರಿದರೆ, ವೈಷ್ಣವಿ ಕೂಡ ಚಕ್ರವರ್ತಿ ಹೇಳಿಕೆಯನ್ನು ಖಂಡಿಸಿದ್ದರು.

ಆದರೆ, ನಾನು ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಚಂದ್ರಚೂಡ ವಾದ ಮಾಡಿದ್ದಾರೆ. ಇದೇ ವೇಳೆ ಚಂದ್ರಚೂಡ ಹೇಳಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ. ಮಾಧ್ಯಮಗಳ ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ​ ಅವರು ಮನಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಮೊದಲಿಗೆ ಮಂಜುನಾಥ್ ಪಾವಗಡ ಹಾಗೂ ದಿವ್ಯ ಸುರೇಶ್ ಅವರ ವಿರುದ್ಧ ಕಿಡಿಕಾರಿದರು. ಬಳಿಕ ವೈಷ್ಣವಿ ಕೂಡ ಚಕ್ರವರ್ತಿ ಹೇಳಿಕೆಯನ್ನು ಖಂಡಿಸಿದ್ದರು. ಈ ಬಗ್ಗೆ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಕೈಗೆತ್ತಿಕೊಂಡರು. ಆಗ ಚಕ್ರವರ್ತಿ ಚಂದ್ರಚೂಡ​, 'ಶ್ರೀಮಾನ್​ ಮಂಜು ಪಾವಗಡ, ಒಂದು ಶೋಗೋಸ್ಕರ ಒಬ್ಬಳು ಹೆಣ್ಣನ್ನು ಹೆಂಡತಿಯಾಗಿ ಹೇಗೆ ಮಾಡಿಕೊಳ್ಳುತ್ತಾನೆ' ಎಂದಿದ್ದಾರೆ.

ಆಗ ಉತ್ತರ ನೀಡಿದ ಮಂಜು, 'ಅದು ನಾಟಕ ಎಂಬುದು ಇಡೀ ಮನೆಯವರಿಗೆ ಗೊತ್ತಿತ್ತು' ಎಂದಿದ್ದಾರೆ. ಈ ವೇಳೆ 'ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ ಸರ್​' ಎಂದು ಚಂದ್ರಚೂಡ​ ಆಕ್ಷೇಪಿಸಿದರು. ಅದಕ್ಕೆ ಪ್ರತಿಯಾಗಿ 'ಇಲ್ಲಿದ್ದಾಗ ನಕ್ಕು, ಮಜಾ ಮಾಡಿ, ಹೊರಗೆ ಹೋದ ಮೇಲೆ ಇದೆಲ್ಲ ನಿಮಗೆ ನೆನಪಾಯ್ತಾ' ಎಂದು ಮಂಜು ಮರುಪ್ರಶ್ನೆ ಹಾಕಿದ್ದಾರೆ. ಈ ನಡುವೆ ದಿವ್ಯ ಸುರೇಶ್ ಕಣ್ಣೀರು ಹಾಕುತ್ತಾರೆ. ಆನಂತರ ಚಂದ್ರಚೂಡ ಬಾಗಿಲ ಬಳಿ ಬಂದು ತಮ್ಮ ಕೋಪ ಹೊರಹಾಕಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಇಂದಿನ ಎಪಿಸೋಡ್​​​ನಲ್ಲಿ ನೋಡಬೇಕಾಗಿದೆ.

ಇದನ್ನೂ ಓದಿ: bigboss ಸೆಕೆಂಡ್ ಇನ್ನಿಂಗ್ಸ್: ಪ್ರಾಂಕ್ ಆದ ಪ್ರಶಾಂತ್ ಸಂಬರಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.