ETV Bharat / sitara

'ದೇವಕಿ'ಯಲ್ಲಿ ಛಾಯಾಗ್ರಾಹಕ ವೇಣು ಮ್ಯಾಜಿಕ್

author img

By

Published : Jul 11, 2019, 9:26 AM IST

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹಲವಾರು ಉತ್ತಮ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವ ಹೆಚ್.ಸಿ. ವೇಣು,‘ದೇವಕಿ’ ಸಿನಿಮಾದಲ್ಲಿ ಹೊಸ ಉಪಕರಣದಿಂದ ಮೋಡಿ ಮಾಡಿದ್ದಾರೆ.

ದೇವಕಿ

ಛಾಯಾಗ್ರಾಹಕ ಹೆಚ್.ಸಿ. ವೇಣು, ಪ್ರಿಯಾಂಕಾ ಉಪೇಂದ್ರ ನಟಿಸಿರುವ ದೇವಕಿ ಚಿತ್ರದದಲ್ಲಿ ಮೊದಲ ಬಾರಿ ಹೊಸ ಎಎಸ್​​​ಸಿಐಐ 5000 ಕ್ಯಾಮರಾ ಬಳಸಿ ಚಿತ್ರದ ಗುಣಮಟ್ಟ ಹೆಚ್ಚಿಸಿದ್ದಾರೆ.

ಕೋಲ್ಕತ್ತಾ ನಗರದಲ್ಲಿಯ ರಾತ್ರಿಯ ಸದ್ದು, ರಸ್ತೆ ಬದಿಯ ಲೈಟ್ ಇನ್ ನೈಟ್, ಹಳೆ ಕೋಲ್ಕತ್ತಾ ಬೀದಿಗಳು, ಮನೆಗಳು ಹೀಗೆ ಎಲ್ಲ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಕ್ಯಾಮರಾ ಮೇಲೆ ನಂಬಿಕೆ ಇದ್ದರೆ ಎಂತಹ ಚಮತ್ಕಾರ ಸಹ ಮಾಡಬಹುದು ಎಂಬುದು ವೇಣು ಅವರ ನಂಬಿಕೆ. ಈ ಹೊಸ ಕ್ಯಾಮರಾ ಕೆಲಸ ಅಚ್ಚುಕಟ್ಟು. ಚಿತ್ರಪೂರ್ತಿ ಈ ಕ್ಯಾಮರಾದಲ್ಲಿ ಶೂಟಿಂಗ್ ಮಾಡಲಾಗಿದೆಯಂತೆ. ಎಲ್ಲಿಯೂ ಕೂಡ ಕೃತಕ ಲೈಟ್ ಬಳಸಿಲ್ಲವಂತೆ.

ಉಪೇಂದ್ರ ಅವರ 'ಎ' ಸಿನಿಮಾ ಮೂಲಕ ಛಾಯಾಗ್ರಹಣ ಪ್ರಾರಂಭಿಸಿದ್ದ ವೇಣು ಅವರು ಅನೇಕ ದೊಡ್ಡ ಸಿನಿಮಾಗಳಿಗೆ ಕ್ಯಾಮರಾ ಹಿಡಿದವರು. ಅವರ ಸ್ಪರ್ಶ ಸಿನಿಮಾದ ಉಯ್ಯಾಲೆ ಸಂದರ್ಭ ಅಂದಿನ ಕಾಲಕ್ಕೆ ವಾರೇ ವಾ ಅಂತ ಹೇಳಲಾಗಿತ್ತು. ಕಡಿಮೆ ಉಪಕರಣದಿಂದ ಅಧಿಕ ಫಲಿತಾಂಶ ನೀಡುತ್ತಾ ಬಂದಿದ್ದಾರೆ. ಈಗ ಅವರ ಬಳಿ ಇದ್ದ ರೆಡ್ ಎಪಿಕ್ ಕ್ಯಾಮರಾ ಬದಲಿಸಿ ಈ ಹೊಸ ಉಪಕರಣ ಖರೀದಿಸಿದ್ದಾರೆ. ಇಲ್ಲಿಯವರಗೆ ಈ ಕ್ಯಾಮರಾವನ್ನು ಯಾರೂ ಉಪಯೋಗಿಸಿಲ್ಲವಂತೆ. ಇದುವರೆಗೆ ಎಎಸ್​​ಐಐ 800 ಬಳಸಲಾಗಿದೆ.

ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ಗುಂಪಿಗೆ ಸೇರುವ ವೇಣು ಅವರ ಪಟ್ಟಿಯಲ್ಲಿ ಡಾ.ವಿಷ್ಣುವರ್ಧನ, ಉಪೇಂದ್ರ, ಸುದೀಪ್, ಯಶ್, ದರ್ಶನ್, ರಮೇಶ್ ಅರವಿಂದ್, ಗಣೇಶ್, ಚೇತನ್, ವಿಜಯ ರಾಘವೇಂದ್ರ, ರಮ್ಯಾ, ದಿಗಂತ ಸಿನಿಮಾಗಳು ಸಿಗುತ್ತವೆ.

devaki movie
ಪತ್ನಿ ತಾರಾ ಜತೆ ವೇಣು

ವಿರಳವಾಗಿ ಮಾತಿಗೆ ಸಿಗುವ ಈ ತಾರಾ ಪತಿ ವೇಣು, 'ನಾನು ಬಹಳ ಕಾಸ್ಟ್ ಕೇಳುವ ಛಾಯಾಗ್ರಾಹಕ ಅಲ್ಲ ಎನ್ನುತ್ತಾರೆ. ನಟಿ ತಾರಾ ಬಹಳ ಆನಂದ ಪಡುವುದು ಅವರ ಪತಿ ಪ್ರತಿ ಸಿನಿಮಾ ಛಾಯಾಗ್ರಹಣ ಮಾಡಿದ್ದು ಬಿಡುಗಡೆ ಆದಾಗ.

ವೇಣು ಸದ್ಯಕ್ಕೆ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇವರ ಸಿನಿಮಾಗಳ ಪಟ್ಟಿಯಲ್ಲಿ ಎ, ಪ್ರತ್ಯರ್ಥ, ಹೆಚ್ 2 ಒ, ಪರ್ವ, ಕಲ್ಲರಳಿ ಹೂವಾಗಿ, ಆ ದಿನಗಳು, ಯುಗಾದಿ, ಬಿರುಗಾಳಿ, ಮೊದಲ ಸಲ, ಚಿಂಗಾರಿ, ಕಠಾರಿ ವೀರ ಸುರ ಸುಂದರಾಂಗಿ, ದಿಲ್ ರಂಗಿಲಾ, ಜಗ್ಗು ದಾದಾ, ಮಮ್ಮಿ ಸೇವ್ ಮಿ, ನಾಗರಹಾವು,....ಹೀಗೆ ದೊಡ್ಡ ಸಿನಿಮಾಗಳಿಗೆ ಅವರು ಭೇಷ್ ಅನ್ನಿಸಿಕೊಂಡಿದ್ದಾರೆ.

ಛಾಯಾಗ್ರಾಹಕ ಹೆಚ್.ಸಿ. ವೇಣು, ಪ್ರಿಯಾಂಕಾ ಉಪೇಂದ್ರ ನಟಿಸಿರುವ ದೇವಕಿ ಚಿತ್ರದದಲ್ಲಿ ಮೊದಲ ಬಾರಿ ಹೊಸ ಎಎಸ್​​​ಸಿಐಐ 5000 ಕ್ಯಾಮರಾ ಬಳಸಿ ಚಿತ್ರದ ಗುಣಮಟ್ಟ ಹೆಚ್ಚಿಸಿದ್ದಾರೆ.

ಕೋಲ್ಕತ್ತಾ ನಗರದಲ್ಲಿಯ ರಾತ್ರಿಯ ಸದ್ದು, ರಸ್ತೆ ಬದಿಯ ಲೈಟ್ ಇನ್ ನೈಟ್, ಹಳೆ ಕೋಲ್ಕತ್ತಾ ಬೀದಿಗಳು, ಮನೆಗಳು ಹೀಗೆ ಎಲ್ಲ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಕ್ಯಾಮರಾ ಮೇಲೆ ನಂಬಿಕೆ ಇದ್ದರೆ ಎಂತಹ ಚಮತ್ಕಾರ ಸಹ ಮಾಡಬಹುದು ಎಂಬುದು ವೇಣು ಅವರ ನಂಬಿಕೆ. ಈ ಹೊಸ ಕ್ಯಾಮರಾ ಕೆಲಸ ಅಚ್ಚುಕಟ್ಟು. ಚಿತ್ರಪೂರ್ತಿ ಈ ಕ್ಯಾಮರಾದಲ್ಲಿ ಶೂಟಿಂಗ್ ಮಾಡಲಾಗಿದೆಯಂತೆ. ಎಲ್ಲಿಯೂ ಕೂಡ ಕೃತಕ ಲೈಟ್ ಬಳಸಿಲ್ಲವಂತೆ.

ಉಪೇಂದ್ರ ಅವರ 'ಎ' ಸಿನಿಮಾ ಮೂಲಕ ಛಾಯಾಗ್ರಹಣ ಪ್ರಾರಂಭಿಸಿದ್ದ ವೇಣು ಅವರು ಅನೇಕ ದೊಡ್ಡ ಸಿನಿಮಾಗಳಿಗೆ ಕ್ಯಾಮರಾ ಹಿಡಿದವರು. ಅವರ ಸ್ಪರ್ಶ ಸಿನಿಮಾದ ಉಯ್ಯಾಲೆ ಸಂದರ್ಭ ಅಂದಿನ ಕಾಲಕ್ಕೆ ವಾರೇ ವಾ ಅಂತ ಹೇಳಲಾಗಿತ್ತು. ಕಡಿಮೆ ಉಪಕರಣದಿಂದ ಅಧಿಕ ಫಲಿತಾಂಶ ನೀಡುತ್ತಾ ಬಂದಿದ್ದಾರೆ. ಈಗ ಅವರ ಬಳಿ ಇದ್ದ ರೆಡ್ ಎಪಿಕ್ ಕ್ಯಾಮರಾ ಬದಲಿಸಿ ಈ ಹೊಸ ಉಪಕರಣ ಖರೀದಿಸಿದ್ದಾರೆ. ಇಲ್ಲಿಯವರಗೆ ಈ ಕ್ಯಾಮರಾವನ್ನು ಯಾರೂ ಉಪಯೋಗಿಸಿಲ್ಲವಂತೆ. ಇದುವರೆಗೆ ಎಎಸ್​​ಐಐ 800 ಬಳಸಲಾಗಿದೆ.

ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ಗುಂಪಿಗೆ ಸೇರುವ ವೇಣು ಅವರ ಪಟ್ಟಿಯಲ್ಲಿ ಡಾ.ವಿಷ್ಣುವರ್ಧನ, ಉಪೇಂದ್ರ, ಸುದೀಪ್, ಯಶ್, ದರ್ಶನ್, ರಮೇಶ್ ಅರವಿಂದ್, ಗಣೇಶ್, ಚೇತನ್, ವಿಜಯ ರಾಘವೇಂದ್ರ, ರಮ್ಯಾ, ದಿಗಂತ ಸಿನಿಮಾಗಳು ಸಿಗುತ್ತವೆ.

devaki movie
ಪತ್ನಿ ತಾರಾ ಜತೆ ವೇಣು

ವಿರಳವಾಗಿ ಮಾತಿಗೆ ಸಿಗುವ ಈ ತಾರಾ ಪತಿ ವೇಣು, 'ನಾನು ಬಹಳ ಕಾಸ್ಟ್ ಕೇಳುವ ಛಾಯಾಗ್ರಾಹಕ ಅಲ್ಲ ಎನ್ನುತ್ತಾರೆ. ನಟಿ ತಾರಾ ಬಹಳ ಆನಂದ ಪಡುವುದು ಅವರ ಪತಿ ಪ್ರತಿ ಸಿನಿಮಾ ಛಾಯಾಗ್ರಹಣ ಮಾಡಿದ್ದು ಬಿಡುಗಡೆ ಆದಾಗ.

ವೇಣು ಸದ್ಯಕ್ಕೆ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇವರ ಸಿನಿಮಾಗಳ ಪಟ್ಟಿಯಲ್ಲಿ ಎ, ಪ್ರತ್ಯರ್ಥ, ಹೆಚ್ 2 ಒ, ಪರ್ವ, ಕಲ್ಲರಳಿ ಹೂವಾಗಿ, ಆ ದಿನಗಳು, ಯುಗಾದಿ, ಬಿರುಗಾಳಿ, ಮೊದಲ ಸಲ, ಚಿಂಗಾರಿ, ಕಠಾರಿ ವೀರ ಸುರ ಸುಂದರಾಂಗಿ, ದಿಲ್ ರಂಗಿಲಾ, ಜಗ್ಗು ದಾದಾ, ಮಮ್ಮಿ ಸೇವ್ ಮಿ, ನಾಗರಹಾವು,....ಹೀಗೆ ದೊಡ್ಡ ಸಿನಿಮಾಗಳಿಗೆ ಅವರು ಭೇಷ್ ಅನ್ನಿಸಿಕೊಂಡಿದ್ದಾರೆ.

ವೇಣು ಛಾಯಾಗ್ರಹಣ ಮ್ಯಾಜಿಕ್


ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹಲವಾರು ಉತ್ತಮ ಸಿನಿಮಾಗಳಿಗೆ ಛಾಯಾಗ್ರಹಣ ಇಂದ ಕೈಚಳಕ ತೋರಿದ ಎಚ್ ಸಿ ವೇಣು ದೇವಕಿ ಸಿನಿಮಾದಲ್ಲಿ ಹೊಸ ಉಪಕರಣ ಇಂದ ಮೋಡಿ ಮಾಡಿದ್ದಾರೆ. ಕೊಲ್ಕತ್ತಾ ನಗರ, ರಾತ್ರಿಯ ಸದ್ದು ರಸ್ತೆ ಬದಿಯ ಲೈಟ್ ಇನ್ ನೈಟ್....ಹಳೆ ಕೋಲ್ಕತಾ ಬೀದಿಗಳು, ಮನೆಗಳು ಹೊಸ ಎ ಎಸ್ ಸಿ ಐ ಐ 5000 ಕ್ಯಾಮರಾ ಮೊದಲ ಬಾರಿ ಬಳಕೆ ಮಾಡಿ  ಚಿತ್ರದ ಗುಣಮಟ್ಟ ಹೆಚ್ಚಿಸಿ ದ್ದಾರೆ. ಕ್ಯಾಮರಾ ಮೇಲೆ ನಂಬಿಕೆ ಇದ್ದರೆ ಎಂತಹ ಚಮತ್ಕಾರ ಸಹ ಮಾಡ ಬಹುದು ಎಂಬುದು ವೇಣು ನಂಬಿಕೆ. ಕ್ಯಾಂಡಲ್ ಲೈಟ್ ಅಷ್ಟು ಆ ಚಿತ್ರದಲ್ಲಿ ಬಳಕೆ ಆಗಿರುವುದು. ಈ ಹೊಸ ಕ್ಯಾಮರಾ ಕೆಲಸ ಅಚ್ಚುಕಟ್ಟು. ಒಂದು ಸಿನಿಮಾ ಸಂಪೂರ್ಣವಾಗಿ ಈ ಕ್ಯಾಮರಾ ಇಂದ ಬಳಕೆ ಮಾಡಲಾಗಿದೆ. ಅರ್ಟಿಫಿಷಿಯಲ್ ಲೈಟ್ ಬಳಕೆ ಮಾಡಿಯೇ ಇಲ್ಲ.

1998
ರಿಂದ ವೇಣು ಉಪೇಂದ್ರ ಅವರ ಎ ಸಿನಿಮಾ ಇಂದ ಅನೇಕ ದೊಡ್ಡ ಸಿನಿಮಾಗಳಿಗೆ ಕ್ಯಾಮರಾ ಹಿಡಿದವರು. ಅವರ ಸ್ಪರ್ಶ ಸಿನಿಮಾದ ಉಯ್ಯಾಲೆ ಸಂದರ್ಭ ಅಂದಿನ ಕಾಲಕ್ಕೆ ವಾರೇ ವಾ ಅಂತ ಹೇಳಲಾಗಿದೆ.
ಕಡಿಮೆ ಉಪಕರಣ ಇಂದ ಅಧಿಕ ಫಲಿತಾಂಶ ನೀಡುತ್ತಾ ಬಂದಿದ್ದಾರೆ. ಈಗ ಅವರ ಬಳಿ ಇದ್ದ ರೆಡ್ ಎಪೀಕ್ ಕ್ಯಾಮರಾ ಬದಲಿಸಿ ಈ ಹೊಸ ಉಪಕರಣ ಖರೀದಿ ಮಾಡಿದ್ದಾರೆ. ಇಲ್ಲಿಯ ವರಗೆ ಈ ಕ್ಯಾಮರಾ ಯಾರು ಉಪಯೋಗ ಮಾಡಿಯೇ ಇಲ್ಲ. ಇದುವರೆಗೆ ಎ ಎಸ್ ಐ ಐ 800 ಬಳಸಲಾಗಿದೆ. 

ಮಾತು ಕಡಿಮೆ ಕೆಲಸ ಜಾಸ್ತಿ ಗುಂಪಿಗೆ ಸೇರಿದ ವೇಣು ಅವರ ಪಟ್ಟಿಯಲ್ಲಿ ಡಾ ವಿಷ್ಣುವರ್ಧನ ಉಪೇಂದ್ರ, ಸುದೀಪ್, ಯಶ್, ದರ್ಶನ್, ರಮೇಶ್ ಅರವಿಂದ್, ಗಣೇಶ್, ಚೇತನ್, ವಿಜಯ ರಾಘವೇಂದ್ರ, ರಮ್ಯ, ದಿಗಂತ ಸಿನಿಮಾಗಳು ಸಿಗುತ್ತದೆ. 

ವಿರಳವಾಗಿ ಮಾತಿಗೆ ಸಿಗುವ ಈ ತಾರಾ ಪತಿ ವೇಣು ನಾನು ಬಹಳ ಕಾಸ್ಟ್ ಕೇಳುವ ಛಾಯಾಗ್ರಾಹಕ ಅಲ್ಲ ಎನ್ನುತ್ತಾರೆ. ನಟಿ ತಾರಾ ಬಹಳ ಆನಂದ ಪಡುವುದು ಅವರ ಪತಿ ಪ್ರತಿ ಸಿನಿಮಾ  ಛಾಯಾಗ್ರಹಣ ಮಾಡಿದ್ದು ಬಿಡುಗಡೆ ಆದಾಗ.

 

ಸಧ್ಯಕ್ಕೆ ಎಲ್ಲಿದ್ದೆ ಇಲ್ಲಿ ತನಕ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ವೇಣು ಅವರ ಸಿನಿಮಾಗಳ ಪಟ್ಟಿಯಲ್ಲಿ ಎ, ಪ್ರತ್ಯರ್ಥ, ಎಚ್ 2 ಒ, ಪರ್ವ, ಕಲ್ಲರಳಿ ಹೂವಾಗಿ, ಆ ದಿನಗಳು, ಉಗಾದಿ, ಬಿರುಗಾಳಿ, ಮೊದಲ ಸಲಾ, ಚಿಂಗಾರಿ, ಕಠಾರಿ ವೀರ ಸುರ ಸುಂದರಂಗಿ, ದಿಲ್ ರಂಗಿಲಾ, ಜಗ್ಗು ದಾದಾ, ಮಮ್ಮಿ ಸೇವ್ ಮಿ, ನಾಗರಹಾವು,....ಹೀಗೆ ದೊಡ್ಡ ಸಿನಿಮಾಗಳಿಗೆ ಅವರು ಬೇಷ್ ಅನ್ನಿಸಿಕೊಂಡಿದ್ದಾರೆ.

 

ನಿಷ್ಠೆ, ಶಿಸ್ತು, ಸಂಯಮ, ತಿಲವಳಿಕೆ ಇಂದ ಕೆಲಸ ಮಾಡಿದರೆ ಯಾವ ಗ್ರಹಣವು ಛಾಯಾಗ್ರಹಣಕ್ಕೆ ಹಿಡಿಯಲ್ಲ ಎಂಬುದು ವೇಣು ಅವರ ಬಲವಾದ ನಂಬಿಕೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.