ETV Bharat / sitara

ನೊಂದ 'ವಾಣಿ'... ಫೇಸ್​​ಬುಕ್​​ಲ್ಲಿ ಬೇಸರ ವ್ಯಕ್ತಪಡಿಸಿದ ವಿ.ಹರಿಕೃಷ್ಣ ಪತ್ನಿ

author img

By

Published : Aug 1, 2019, 7:19 PM IST

ಇವರು ಕಂಠ ನೀಡಿರುವ ಹಾಡುಗಳನ್ನು ಕೈಬಿಟ್ಟಿರುವ ಚಿತ್ರತಂಡಗಳು, ಬೇರೆಯವರ ಕಂಠದಲ್ಲಿರುವ ಹಾಡುಗಳನ್ನು ಬಳಸಿಕೊಂಡಿವೆ. ಸಹಜವಾಗಿಯೇ ಇದು ವಿ.ಹರಿಕೃಷ್ಣ ಪತ್ನಿ ವಾಣಿ ಅವರಿಗೆ ಬೇಸರ ತರಿಸಿದೆ.

ವಿ.ಹರಿಕೃಷ್ಣ ಪತ್ನಿ ವಾಣಿ

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಪತ್ನಿ ಗಾಯಕಿ ವಾಣಿ ಹರಿಕೃಷ್ಣ ಬೇಸರಗೊಂಡಿದ್ದಾರೆ. 'ಈ ಬದುಕೇ ಬೇಡ ಅನ್ನಿಸಿಬಿಡುತ್ತದೆ' ಎಂದು ತಮ್ಮ ಫೇಸ್​ಬುಕ್​​​ನಲ್ಲಿ ನೋವಿನ ಪೋಸ್ಟ್ ಮಾಡಿದ್ದಾರೆ. ಅವರು ನೊಂದುಕೊಳ್ಳಲು ಕಾರಣ ಕುರುಕ್ಷೇತ್ರ ಹಾಗೂ ರಾಂಧವ ಸಿನಿಮಾಗಳಂತೆ.

vani upset
ವಿ.ಹರಿಕೃಷ್ಣ ಪತ್ನಿ ವಾಣಿ ಫೇಸ್​​ಬುಕ್​ ಪೋಸ್ಟ್​​​

ಹೌದು, ಡಿಬಾಸ್​ ದರ್ಶನ್ ನಟಿಸಿರುವ ಕುರುಕ್ಷೇತ್ರ ಹಾಗೂ ಬಿಗ್​ಬಾಸ್​ ಭುವನ್ ಗೌಡ ನಟಿಸಿರುವ ರಾಂಧವ ಸಿನಿಮಾಗಳಿಗೆ ವಾಣಿ ಹಾಡಿದ್ದರು. ಆದರೆ, ಇವರು ಕಂಠ ನೀಡಿರುವ ಹಾಡುಗಳನ್ನು ಕೈಬಿಟ್ಟಿರುವ ಚಿತ್ರತಂಡಗಳು, ಬೇರೆಯವರ ಕಂಠದಲ್ಲಿರುವ ಹಾಡುಗಳನ್ನು ಬಳಸಿಕೊಂಡಿದ್ದಾರಂತೆ. ಸಹಜವಾಗಿಯೇ ಇದು ವಾಣಿ ಅವರಿಗೆ ಬೇಸರ ಮೂಡಿಸಿದೆ. ತಮ್ಮ ನೋವನ್ನು ಅವರು ನಿನ್ನೆ ಹೊರಹಾಕಿದ್ದು, 'ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ. ಆದರೆ, ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ. ಈಗ 'ಕುರುಕ್ಷೇತ್ರ' ಹಾಗೂ 'ರಾಂಧವ' ಚಿತ್ರಗಳಲ್ಲಿ ನನ್ನನ್ನು ಹಾಡಿಸಿ, ಧ್ವನಿ ಉಳಿಸಿಲ್ಲ. ಬೇರೆಯವರನ್ನು ಹಾಡಿಸುವುದಾದರೆ ನಮ್ಮಿಂದ ಹಾಡಿಸಲೇಬಾರದು' ಎಂದು ನೋವು ತೋಡಿಕೊಂಡಿದ್ದಾರೆ.

ಕುರುಕ್ಷೇತ್ರ ಚಿತ್ರಕ್ಕೆ ತಮ್ಮ ಪತಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಲ್ಲದೆ ರಾಂಧವ ಚಿತ್ರಕ್ಕೆ ತಮ್ಮ ಮುಂದೆ ಹಾಡಿ ಬೆಳೆದ ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ. ಹೀಗಿರುವಾಗ ಗಾಯಕಿಯರನ್ನು ಬದಲಿಸುವ ವಿಚಾರ ತಮ್ಮ ಗಮನಕ್ಕೆ ತರದೇ ಇರುವುದು ವಾಣಿ ಬೇಸರಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ನಿನ್ನೆ ನಮಗೆ ಕಾಲ್ ಮಾಡಿದ ವಾಣಿ ಬೇಸರ ವ್ಯಕ್ತಪಡಿಸಿದರು ಎಂದು ಶಶಾಂಕ್​​ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಗಾಯಕಿಯನ್ನು ಬದಲಿಸಿದ್ದೇಕೆ?

ಇದೇ ವೇಳೆ ರಾಂಧವ ಸಿನಿಮಾ ಹಾಡಿಗೆ ಗಾಯಕಿ ಬದಲಾವಣೆಗೆ ಕಾರಣ ಕೊಟ್ಟಿರುವ ಶಶಾಂಕ್​, ಈ ಸಿನಿಮಾದ ನಾಯಕಿ 19 ವರ್ಷ ವಯಸ್ಸಿನ ಹುಡುಗಿ. ವಾಣಿ ಅವರ ಧ್ವನಿ ಸ್ವಲ್ಪ ಮೆಚ್ಯೂರಿಟಿಯಾಗಿತ್ತು. ಹಾಗಾಗಿ ಚಿತ್ರದ ನಿರ್ದೇಶಕರು, ನಾಯಕನ ಒತ್ತಾಯದಿಂದ ಬೇರೆ ಸಿಂಗರ್​​ನಿಂದ ಹಾಡಿಸಿದೆ ಎಂದಿದ್ದಾರೆ.

ವಾಣಿ ತುಂಬಾ ಮೃದು ಸ್ವಭಾವದವರು. ಏಕಾಏಕಿ ಅವರು ಹಾಡಿರುವ ಹಾಡನ್ನು ಕೈಬಿಟ್ಟಿರುವುದು ಸಹಜವಾಗಿಯೇ ಅವರಿಗೆ ನೋವು ತರಿಸಿದೆ ಎಂದು ವಾಣಿ ಅವರ ಆಪ್ತರೊಬ್ಬರು ಈಟಿವಿ ಭಾರತದ ಜೊತೆ ಹೇಳಿಕೊಂಡಿದ್ದಾರೆ.

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಪತ್ನಿ ಗಾಯಕಿ ವಾಣಿ ಹರಿಕೃಷ್ಣ ಬೇಸರಗೊಂಡಿದ್ದಾರೆ. 'ಈ ಬದುಕೇ ಬೇಡ ಅನ್ನಿಸಿಬಿಡುತ್ತದೆ' ಎಂದು ತಮ್ಮ ಫೇಸ್​ಬುಕ್​​​ನಲ್ಲಿ ನೋವಿನ ಪೋಸ್ಟ್ ಮಾಡಿದ್ದಾರೆ. ಅವರು ನೊಂದುಕೊಳ್ಳಲು ಕಾರಣ ಕುರುಕ್ಷೇತ್ರ ಹಾಗೂ ರಾಂಧವ ಸಿನಿಮಾಗಳಂತೆ.

vani upset
ವಿ.ಹರಿಕೃಷ್ಣ ಪತ್ನಿ ವಾಣಿ ಫೇಸ್​​ಬುಕ್​ ಪೋಸ್ಟ್​​​

ಹೌದು, ಡಿಬಾಸ್​ ದರ್ಶನ್ ನಟಿಸಿರುವ ಕುರುಕ್ಷೇತ್ರ ಹಾಗೂ ಬಿಗ್​ಬಾಸ್​ ಭುವನ್ ಗೌಡ ನಟಿಸಿರುವ ರಾಂಧವ ಸಿನಿಮಾಗಳಿಗೆ ವಾಣಿ ಹಾಡಿದ್ದರು. ಆದರೆ, ಇವರು ಕಂಠ ನೀಡಿರುವ ಹಾಡುಗಳನ್ನು ಕೈಬಿಟ್ಟಿರುವ ಚಿತ್ರತಂಡಗಳು, ಬೇರೆಯವರ ಕಂಠದಲ್ಲಿರುವ ಹಾಡುಗಳನ್ನು ಬಳಸಿಕೊಂಡಿದ್ದಾರಂತೆ. ಸಹಜವಾಗಿಯೇ ಇದು ವಾಣಿ ಅವರಿಗೆ ಬೇಸರ ಮೂಡಿಸಿದೆ. ತಮ್ಮ ನೋವನ್ನು ಅವರು ನಿನ್ನೆ ಹೊರಹಾಕಿದ್ದು, 'ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ. ಆದರೆ, ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ. ಈಗ 'ಕುರುಕ್ಷೇತ್ರ' ಹಾಗೂ 'ರಾಂಧವ' ಚಿತ್ರಗಳಲ್ಲಿ ನನ್ನನ್ನು ಹಾಡಿಸಿ, ಧ್ವನಿ ಉಳಿಸಿಲ್ಲ. ಬೇರೆಯವರನ್ನು ಹಾಡಿಸುವುದಾದರೆ ನಮ್ಮಿಂದ ಹಾಡಿಸಲೇಬಾರದು' ಎಂದು ನೋವು ತೋಡಿಕೊಂಡಿದ್ದಾರೆ.

ಕುರುಕ್ಷೇತ್ರ ಚಿತ್ರಕ್ಕೆ ತಮ್ಮ ಪತಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಲ್ಲದೆ ರಾಂಧವ ಚಿತ್ರಕ್ಕೆ ತಮ್ಮ ಮುಂದೆ ಹಾಡಿ ಬೆಳೆದ ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ. ಹೀಗಿರುವಾಗ ಗಾಯಕಿಯರನ್ನು ಬದಲಿಸುವ ವಿಚಾರ ತಮ್ಮ ಗಮನಕ್ಕೆ ತರದೇ ಇರುವುದು ವಾಣಿ ಬೇಸರಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ನಿನ್ನೆ ನಮಗೆ ಕಾಲ್ ಮಾಡಿದ ವಾಣಿ ಬೇಸರ ವ್ಯಕ್ತಪಡಿಸಿದರು ಎಂದು ಶಶಾಂಕ್​​ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಗಾಯಕಿಯನ್ನು ಬದಲಿಸಿದ್ದೇಕೆ?

ಇದೇ ವೇಳೆ ರಾಂಧವ ಸಿನಿಮಾ ಹಾಡಿಗೆ ಗಾಯಕಿ ಬದಲಾವಣೆಗೆ ಕಾರಣ ಕೊಟ್ಟಿರುವ ಶಶಾಂಕ್​, ಈ ಸಿನಿಮಾದ ನಾಯಕಿ 19 ವರ್ಷ ವಯಸ್ಸಿನ ಹುಡುಗಿ. ವಾಣಿ ಅವರ ಧ್ವನಿ ಸ್ವಲ್ಪ ಮೆಚ್ಯೂರಿಟಿಯಾಗಿತ್ತು. ಹಾಗಾಗಿ ಚಿತ್ರದ ನಿರ್ದೇಶಕರು, ನಾಯಕನ ಒತ್ತಾಯದಿಂದ ಬೇರೆ ಸಿಂಗರ್​​ನಿಂದ ಹಾಡಿಸಿದೆ ಎಂದಿದ್ದಾರೆ.

ವಾಣಿ ತುಂಬಾ ಮೃದು ಸ್ವಭಾವದವರು. ಏಕಾಏಕಿ ಅವರು ಹಾಡಿರುವ ಹಾಡನ್ನು ಕೈಬಿಟ್ಟಿರುವುದು ಸಹಜವಾಗಿಯೇ ಅವರಿಗೆ ನೋವು ತರಿಸಿದೆ ಎಂದು ವಾಣಿ ಅವರ ಆಪ್ತರೊಬ್ಬರು ಈಟಿವಿ ಭಾರತದ ಜೊತೆ ಹೇಳಿಕೊಂಡಿದ್ದಾರೆ.

Intro:ಎಲ್ಲರಿಗೂ ಶಾಕ್ ಅಗುವಂತೆ ಫೇಸ್ ಬುಕ್ ನಲ್ಲಿ ಬರೆದು ಕೊಂಡ ರಾಜ್ಯ ಪ್ರಶಸ್ತಿ ವಿಜೇತ ಗಾಯಕಿ ವಾಣಿ ಹರಿಕೃಷ್ಣ..!!!!

ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ. ಈಗ " ಕುರುಕ್ಷೇತ್ರ" ಹಾಗೂ " ರಾಂಧವ" ಚಿತ್ರಗಳಲ್ಲಿ ನನ್ನನ್ನು ಹಾಡಿಸಿ, ಧ್ವನಿ ಉಳಿಸಿಲ್ಲ. ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ" ಎಂದು ಗಾಯಕಿ ವಾಣಿ ಹರಿಕೃಷ್ಣ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಇನ್ನೂ ಈ ಪೋಸ್ಟ್ ನೋಡಿದ ಕೆಲವರು ವಾಣಿ ಹರಿಕೃಷ್ಣ ಅವರು ನೊಂದು, ಬೇಸತ್ತು ಬರೆದ ಹಾಗಿದೆ ಈ ಅಕ್ಷರಗಳು. ವಾಣಿ ಹರಿಕೃಷ್ಣ ಯಾವತ್ತುಎಲ್ಲಿಯೂಬೇಸರವನ್ನುಹೊರಹಾಕಿದವರಲ್ಲ. .
ಅಸಮಾಧಾನವನ್ನು ವ್ಯಕ್ತಪಡಿಸಿದವರಲ್ಲಅದರೇ
ದಿಢೀರನೆ ಯಾಕಪ್ಪ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ನೊಂದು ಬೇಸರ ತೋಡಿಕೊಂಡಿದ್ದು ಯಾಕೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಬಿಸಿ ಬಿಸಿಯಾಗಿ ಚರ್ಚೆಯಾಗ್ತಿದೆ.ಕೆಲವರು ವಾಣಿ ಹರಿಕೃಷ್ಣ ಅವರ ತುಂಭಾ ವರ್ಷಗಳ ಸಾಂಸಾರಿಕ ಜೀವನದಲ್ಲಿ ಏನಾದ್ರು ಅಪಸ್ವರ ಎದ್ದಿದ್ಯ ಎಂದು ಮಾತನಾಡಿದ್ರೆ .ಕೆಲವರು ,ಕುರುಕ್ಷೇತ್ರ ಹಾಗೂರಾಂಧವ
ಚಿತ್ರದಲ್ಲಿ ವಾಣಿ ಹರಿಕೃಷ್ಣ ಅವರು‌ ಹಾಡನ್ನುಹಾಡಿದ್ರು .
ಅದ್ರೆ ಎರಡು ಚಿತ್ರಗಳ ಅಡಿಯೋ ಬಿಡುಗಡೆಯಾದ ಮೇಲೆ ಎರಡು ಹಾಡಿನಲ್ಲಿ ವಾಣಿ ಅವರ ಧ್ವನಿ ಕಾಣೆಯಾಗಿದೆ.ಹಾಗಾಗಿ ಬೇಸರದಲ್ಲಿ ಈ ರೀತಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬ ಮಾತುಗಳ ಕೇಳಿಬಂದಿವೆ.ಅದರೆ ವಾಣಿ ಹರಿಕೃಷ್ಣ ಅವರ ಈ ಪೋಸ್ಟ್ ಗೆ ಈಗ ಕ್ಲಾರಿಟಿ ಸಿಕ್ಕಿದ್ದೆ.ಎಸ್ ವಾಣಿ ಹರಿಕೃಷ್ಣ ಅವರ ಆಪ್ತ ಮೂಲಗಳ ಮಾಹಿತಿ ಪ್ರಕಾರ ವಾಣಿ ಹರಿಕೃಷ್ಣ ಅವರ ಸಂಸಾರದಲ್ಲಿ ಏನು ತೊಂದರೆ ಇಲ್ಲಾ ಅವರು ಖುಷಿಯಾಗೇ ಇದ್ದಾರೆ.Body:.ಇನ್ನೂ ಆ ಪೋಸ್ಟ್ ವಿಚಾರಕ್ಕೆ ಬಂದ್ರೆ ಕುರುಕ್ಷೇತ್ರ ಹಾಗೂ ರಾಂಧವ ಚಿತ್ರದಲ್ಲಿ ಹಾಡಿದ ಹಾಡುಗಳನ್ನು ಬೇರೋಬ್ಬ ಗಾಯಕಿಯರಿಂದ ಹಾಡಿಸಿರೋದಕ್ಕೆ ವಾಣಿ ಹರಿಕೃಷ್ಣ ಅವರು ತುಂಭಾ ನೊಂದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.ಇನ್ನೂ ಈ ಹಾಡುಗಳ ವಿಚಾರವಾಗಿ ಯಾಕಪ್ಪ ವಾಣಿ ಅವರು ಇಷ್ಟೊಂದು ನೊಂದು ಕೊಂಡಿದ್ದಾರೆ ಅಂದ್ರೆ.ಕುರುಕ್ಷೇತ್ರ ಚಿತ್ರಕ್ಕೆ ವಾಣಿ ಅವರ ಪತಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.ಅಲ್ಲದೆ ರಾಂಧವ ಚಿತ್ರಕ್ಕೆ ವಾಣಿ ಹರಿಕೃಷ್ಣ ಅವರ ಮುಂದೆ ಹಾಡಿ ಬೆಳೆದ ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ.ಅಲ್ಲದೆ ಶಶಾಂಕ್ ಆಗಲಿ ಹರಿಕೃಷ್ಣ ಅವರರಾಗಲಿ ಗಾಯಕಿಯನ್ನು ಬದಲಿಸುವಾಗ ನನ್ನ ಬಳಿ ಒಂದು ಮಾತು ಕೇಳಿಲ್ಲ ಎಂಬ ವಿಷ್ಯಕ್ಕೆ ವಾಣಿ ಹರಿಕೃಷ್ಣ ತುಂಭಾ ನೊಂದು ಕೊಂಡಿದ್ದಾರೆ.ಅಲ್ಲದೆ ರಾಂಧವ ಚಿತ್ರದ ಹಾಡಿನ ವಿಚಾರವಾಗಿ ಸಹ ನಿನ್ನೆ ವಾಣಿಹರಿಕೃಷ್ಣ. ಶಶಾಂಕ್ ಶೇಷಗಿರಿ ಅವರ ಜೊತೆ ಪೋನ್ ನಲ್ಕೂ ಮಾತನಾಡಿ ಬೆಸರ ವ್ಯಕ್ತಪಡಿಸಿದರಂತೆ.ಇನ್ನೂ ಈ ವಿಷ್ಯವನ್ನು ಸಂಗೀತಾ ನಿರ್ದೇಶಕ ಶಶಾಂಕ್ ಶೇಷಗಿರಿ ಅವರು ಈ ಟಿವಿ ಭಾರತ್ ಗೆ ತಿಳಿಸಿದ್ರು.ಅಲ್ಲದೆ ಹಾಡಿನಲ್ಲಿ ವಾಣಿ ಅವರ ಧ್ವನಿ ಯಾಕಪ್ಪ ಬದಲಿಸಲಾಯಿತು ಎಂಬುದಕ್ಕೂ ಕಾರಣ ಕೊಟ್ರು.ರಾಂಧವ ಚಿತ್ರದ ನಾಯಕಿ ೧೯ ವಯಸ್ಸಿನಿ ಅವಯಸ್ಸಿನ ಹುಡಿಗಿಯಾಗಿರ್ತಾಳೆ‌ .ಅದ್ರೆ .
ವಾಣಿ ಅವರ ಧ್ವನಿಯಲ್ಲಿ ಸ್ವಲ್ಪ ಮೆಚೂರಿಟಿ ಕಾಣಿಸ್ತು ಹಾಗಾಗಿ ಅವರ ಧ್ವನಿಯನ್ನು ನಮ್ಮಚಿತ್ರದನಿರ್ದೇಶಕರು.
ಹಾಗೂ ನಾಯಕರು ಒತ್ತಾಯಕ್ಕೆ ಬೇರೆ ಸಿಂಗರ್ ನಿಂದ ಹಾಡಿಸಿದೆ..ಎಂದು ಶಶಾಂಕ್ ತಿಳಿಸಿದ್ರು.ಇನ್ನೂ ರಾಜ್ಯ ಪ್ರಶಸ್ತಿ ವಿಜೇತ ಗಾಯಕಿ ಹಾಡಿರುವ ಹಾಡನ್ನು ಏಕಾಏಕಿ ಒಂದು ಮಾತು ಕೇಳದೆ ಧ್ವನಿಯನ್ನು ಡ್ರಾಪ್ ಮಾಡಿದರೆ ನೊಂದು ಕೊಳ್ಳುವುದು ಸಾಮಾನ್ಯ.ಅಲ್ಲದೆ ವಾಣಿ ಹರಿಕೃಷ್ಣ ತುಂಭಾ ಮೃದು ಸ್ವಾಭವಾದವರು ಎಂದು ವಾಣಿ ಹರಿಕೃಷ್ಣ ಅವರ ಆಪ್ತರೊಬ್ಬರು ಈ ಟಿವಿ ಭಾರತ್ ಗೆ ತಿಳಿಸಿದ್ರು.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.