ETV Bharat / sitara

ನಮ್ಮೆಲ್ಲರ ಪ್ರಾರ್ಥನೆಯಿಂದ ಖಂಡಿತ ಎಸ್​​​​​ಪಿಬಿ ಗುಣಮುಖರಾಗ್ತಾರೆ: ಉಪೇಂದ್ರ

ಖ್ಯಾತ ಗಾಯಕ ಎಸ್​​​​.ಪಿ. ಬಾಲಸುಬ್ರಮಣ್ಯಂ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ನಟ ಉಪೇಂದ್ರ ಕೂಡಾ ಎಸ್​​​​ಪಿಬಿ ಶೀಘ್ರ ಗುಣಮುಖರಾಗುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಲ್ಲರೂ ಅವರಿಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.

author img

By

Published : Aug 20, 2020, 4:58 PM IST

Upendra
ಎಸ್​​​​​ಪಿಬಿ

ಭಾರತೀಯ ಚಿತ್ರರಂಗ ಕಂಡಂತ ಶ್ರೇಷ್ಠ ಗಾಯಕ ಎಸ್​​​​.ಪಿ. ಬಾಲಸುಬ್ರಮಣ್ಯಂ ಕಳೆದ 15 ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್​​​​ಪಿಬಿ ಶೀಘ್ರ ಗುಣಮುಖರಾಗಿ ವಾಪಸ್ ಬರಲಿ ಎಂದು ದೇಶ ಹಾಗೂ ವಿದೇಶಗಳಲ್ಲಿ ಇರುವ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಉಪೇಂದ್ರ

ಇಂದು ಕೂಡಾ ರಿಯಲ್ ಸ್ಟಾರ್ ಉಪೇಂದ್ರ ಎಸ್​​​​ಪಿಬಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ ಅವರೊಂದಿಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಸೂಪರ್ ಸ್ಟಾರ್ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ಎಸ್​​​​​​​​​​​​​​​​​​​ಪಿಬಿ ಅವರು ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರು. ಅವರು ಕಲಾಸರಸ್ವತಿ ಪುತ್ರ, ಆದಷ್ಟು ಬೇಗ ಚೇತರಿಸಿ ಕೊಳ್ತಾರೆ‌. ನಾನು ಇತ್ತೀಚಿಗಷ್ಟೆ ಎಸ್​​​​​​​​​​​ಪಿಬಿ ಅವರು ಐಸಿಯುನಲ್ಲಿ ಥಮ್ಸ್ ಅಪ್ ಮಾಡಿದ್ದ ಫೋಟೋ ನೋಡಿದೆ. ಅವರಲ್ಲಿದ್ದ ಕಾನ್ಫಿಡೆನ್ಸ್ ನೋಡಿದ್ರೆ ಅವರು ಅದಷ್ಟು ಬೇಗ ಅರೋಗ್ಯವಾಗಿ ವಾಪಸ್​​​​​ ಬರ್ತಾರೆ. ಅಲ್ಲದೆ ಆ ಭಗವಂತ ಅವರಿಂದ ಇನ್ನೂ ಒಂದಷ್ಟು ಹಾಡುಗಳನ್ನು ಹಾಡಿಸಿ ರಂಜಿಸ್ತಾನೆ ಎಂಬ ನಂಬಿಕೆ ಇದೆ.

ಎಸ್​​​​ಪಿಬಿ ಜೊತೆ ನಾನು ಸಾಕಷ್ಟು ಸಮಯ ಕಳೆದಿದ್ದೇನೆ. ಅವರು ಇಲ್ಲಿಯವರೆಗೂ ಎಲ್ಲಾ ಜನರೇಷನ್ ನಟರಿಗೂ ಹಾಡಿದ್ದಾರೆ. ಅವರು ಇಂದಿನ ಗಾಯಕರಿಗೆ ಸ್ಪೂರ್ತಿ. ಎಸ್​​​​​ಪಿಬಿ ಅವರು ನಮ್ಮ ಸಿನಿಮಾಗೆ ಹಾಡಲೇಬೇಕು ಎಂದು ಡಾ. ವಿಷ್ಣುವರ್ಧನ್ ಪಟ್ಟು ಹಿಡಿಯುತ್ತಿದ್ದರು. ಅವರು ಹಾಡಿದರೆ ಮಾತ್ರ ನಮಗೆ ನಟಿಸಲು ಶಕ್ತಿ ಬರುತ್ತದೆ ಎಂದು ಹೇಳುತ್ತಿದ್ದರು. 'ಬಂಧನ' ಚಿತ್ರದಲ್ಲಿ ವಿಷ್ಣು ನಟಿಸಿರುವ ಪ್ರೇಮದ ಕಾದಂಬರಿ ಹಾಡನ್ನು ಎಸ್​​​ಪಿಬಿ ಬಹಳ ಅದ್ಭುತವಾಗಿ ಹಾಡಿದ್ದಾರೆ‌. ಒಬ್ಬ ಸಿಂಗರ್ ಈ ರೀತಿ ಹಾಡುತ್ತಾರೆ ಎಂದರೆ ಅದರನ್ನು ಊಹೆ ಮಾಡಲು ಅಸಾಧ್ಯ.

ಎಸ್​​ಪಿಬಿ ಅವರು ಎಲ್ಲಾ ರೀತಿಯ ಹಾಡುಗಳನ್ನು ಹಾಡಿದ್ದಾರೆ. ಈಗ ನಾವೆಲ್ಲರೂ ಅವರಿಗಾಗಿ ಪ್ರಾರ್ಥನೆ ಮಾಡಬೇಕು. ನಮ್ಮೆಲ್ಲರ ಪ್ರಾರ್ಥನೆ ಅವರು ಗುಣಮುಖರಾಗಿ ವಾಪಸ್​​​​​​​ ಬರುವಂತೆ ಮಾಡುತ್ತದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಭಾರತೀಯ ಚಿತ್ರರಂಗ ಕಂಡಂತ ಶ್ರೇಷ್ಠ ಗಾಯಕ ಎಸ್​​​​.ಪಿ. ಬಾಲಸುಬ್ರಮಣ್ಯಂ ಕಳೆದ 15 ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್​​​​ಪಿಬಿ ಶೀಘ್ರ ಗುಣಮುಖರಾಗಿ ವಾಪಸ್ ಬರಲಿ ಎಂದು ದೇಶ ಹಾಗೂ ವಿದೇಶಗಳಲ್ಲಿ ಇರುವ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಉಪೇಂದ್ರ

ಇಂದು ಕೂಡಾ ರಿಯಲ್ ಸ್ಟಾರ್ ಉಪೇಂದ್ರ ಎಸ್​​​​ಪಿಬಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ ಅವರೊಂದಿಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಸೂಪರ್ ಸ್ಟಾರ್ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ಎಸ್​​​​​​​​​​​​​​​​​​​ಪಿಬಿ ಅವರು ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರು. ಅವರು ಕಲಾಸರಸ್ವತಿ ಪುತ್ರ, ಆದಷ್ಟು ಬೇಗ ಚೇತರಿಸಿ ಕೊಳ್ತಾರೆ‌. ನಾನು ಇತ್ತೀಚಿಗಷ್ಟೆ ಎಸ್​​​​​​​​​​​ಪಿಬಿ ಅವರು ಐಸಿಯುನಲ್ಲಿ ಥಮ್ಸ್ ಅಪ್ ಮಾಡಿದ್ದ ಫೋಟೋ ನೋಡಿದೆ. ಅವರಲ್ಲಿದ್ದ ಕಾನ್ಫಿಡೆನ್ಸ್ ನೋಡಿದ್ರೆ ಅವರು ಅದಷ್ಟು ಬೇಗ ಅರೋಗ್ಯವಾಗಿ ವಾಪಸ್​​​​​ ಬರ್ತಾರೆ. ಅಲ್ಲದೆ ಆ ಭಗವಂತ ಅವರಿಂದ ಇನ್ನೂ ಒಂದಷ್ಟು ಹಾಡುಗಳನ್ನು ಹಾಡಿಸಿ ರಂಜಿಸ್ತಾನೆ ಎಂಬ ನಂಬಿಕೆ ಇದೆ.

ಎಸ್​​​​ಪಿಬಿ ಜೊತೆ ನಾನು ಸಾಕಷ್ಟು ಸಮಯ ಕಳೆದಿದ್ದೇನೆ. ಅವರು ಇಲ್ಲಿಯವರೆಗೂ ಎಲ್ಲಾ ಜನರೇಷನ್ ನಟರಿಗೂ ಹಾಡಿದ್ದಾರೆ. ಅವರು ಇಂದಿನ ಗಾಯಕರಿಗೆ ಸ್ಪೂರ್ತಿ. ಎಸ್​​​​​ಪಿಬಿ ಅವರು ನಮ್ಮ ಸಿನಿಮಾಗೆ ಹಾಡಲೇಬೇಕು ಎಂದು ಡಾ. ವಿಷ್ಣುವರ್ಧನ್ ಪಟ್ಟು ಹಿಡಿಯುತ್ತಿದ್ದರು. ಅವರು ಹಾಡಿದರೆ ಮಾತ್ರ ನಮಗೆ ನಟಿಸಲು ಶಕ್ತಿ ಬರುತ್ತದೆ ಎಂದು ಹೇಳುತ್ತಿದ್ದರು. 'ಬಂಧನ' ಚಿತ್ರದಲ್ಲಿ ವಿಷ್ಣು ನಟಿಸಿರುವ ಪ್ರೇಮದ ಕಾದಂಬರಿ ಹಾಡನ್ನು ಎಸ್​​​ಪಿಬಿ ಬಹಳ ಅದ್ಭುತವಾಗಿ ಹಾಡಿದ್ದಾರೆ‌. ಒಬ್ಬ ಸಿಂಗರ್ ಈ ರೀತಿ ಹಾಡುತ್ತಾರೆ ಎಂದರೆ ಅದರನ್ನು ಊಹೆ ಮಾಡಲು ಅಸಾಧ್ಯ.

ಎಸ್​​ಪಿಬಿ ಅವರು ಎಲ್ಲಾ ರೀತಿಯ ಹಾಡುಗಳನ್ನು ಹಾಡಿದ್ದಾರೆ. ಈಗ ನಾವೆಲ್ಲರೂ ಅವರಿಗಾಗಿ ಪ್ರಾರ್ಥನೆ ಮಾಡಬೇಕು. ನಮ್ಮೆಲ್ಲರ ಪ್ರಾರ್ಥನೆ ಅವರು ಗುಣಮುಖರಾಗಿ ವಾಪಸ್​​​​​​​ ಬರುವಂತೆ ಮಾಡುತ್ತದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.