ETV Bharat / sitara

'ಸೈರಾ' ಪ್ರೀ ರಿಲೀಸ್: 'ಡಾ. ರಾಜ್​ ಕುಮಾರ್ ನನ್ನ ತಂದೆ ಸಮಾನ' ಎಂದ ಮೆಗಾಸ್ಟಾರ್

'ಮೆಗಾಸ್ಟಾರ್' ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಅಕ್ಟೋಬರ್ 2ರಂದು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸೈರಾ ಚಿತ್ರತಂಡ ಭಾನುವಾರ ಸಿಲಿಕಾನ್​ ಸಿಟಿಯಲ್ಲಿ ಫ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿದರು. ಚಿರಂಜೀವಿ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನ ಸೆಳೆದರೇ ಸೆಂಚುರಿ ಸ್ಟಾರ್​ ಶಿವಣ್ಣ, ಚಿಕ್ಕಂದಿನಿಂದ ಚಿರಂಜೀವಿ ಸಿನಿಮಾಗಳನ್ನು ನೋಡುತ್ತಾ ಬೆಳದಿದ್ದೇನೆ ಎಂದರು.

author img

By

Published : Sep 30, 2019, 4:25 AM IST

Saira narasimha reddy movie

ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್‌ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು, ಈ ನಿಮಿತ್ತ ಸೈರಾ ಚಿತ್ರತಂಡ ಭಾನುವಾರ ಬೆಂಗಳೂರಿನಲ್ಲಿ ಪೂರ್ವಭಾವಿ ಪ್ರಚಾರ ಕಾರ್ಯಕ್ರಮ ನಡೆಸಿತು.

ಸಿಲಿಕಾನ್​ ಸಿಟಿಯಲ್ಲಿ ನಡೆದ ಸೈರಾ ಸಿನಿಮಾ ಫ್ರೀ ರಿಲೀಸ್​ ಈವೆಂಟ್​...

ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ, ನಿರ್ಮಾಪಕ ರಾಮ್ ಚರಣ್ ತೇಜ , ನಾಯಕಿ ತಮನ್ನಾ ಭಾಟಿಯ, ನಿರ್ದೇಶಕ ಸುರೇಂದರ್ ರೆಡ್ಡಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಭಾಗಿಯಾಗಿ ಕಾರ್ಯಕ್ರಮದ‌ ಮೆರುಗು ತಂದರು. ಶೂಟಿಂಗ್​​ನಲ್ಲಿ ಬ್ಯುಸಿ ಇದ್ದ ಕಿಚ್ಚ ಸುದೀಪ್​, ಪೋಲೆಂಡ್​ನಿಂದಲೇ ವಿಡಿಯೋ ಕಾಲ್ ಮಾಡಿ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಅವರನ್ನು, 'ನಮ್ಮ ಮನೆಗೆ ಬಂದಿರುವುದಕ್ಕೆ ಸ್ವಾಗತ' ಎಂದು ಆತ್ಮೀಯವಾಗಿ ಸ್ವಾಗತಿಸಿ ಶಿವರಾಜ್​ ಕುಮಾರ್​ ಅವರಿಗೂ ಧನ್ಯವಾದ ಹೇಳಿದರು.

Saira narasimha reddy movie
ಸಿಲಿಕಾನ್​ ಸಿಟಿಯಲ್ಲಿ ನಡೆದ ಸೈರಾ ಸಿನಿಮಾ ಫ್ರೀ ರಿಲೀಸ್​ ಈವೆಂಟ್​...

ಬಳಿಕ ಶಿವಣ್ಣ ಮಾತನಾಡಿ, ಮೆಗಾಸ್ಟಾರ್ ಚಿರಂಜೀವಿ ನಮ್ಮ ಅಣ್ಣನ ಸಮಾನ. ಚಿಕ್ಕಂದಿನಿಂದ ಚಿರಂಜೀವಿ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಗಾಂಧಿ ಜಯಂತಿಯಂದು ಸೈರಾ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ. ನಮ್ಮ ಕುಟುಂಬಕ್ಕೂ, ಚಿರಂಜೀವಿ ಅವರ ಕುಟುಂಬಕ್ಕೂ ಆತ್ಮೀಯವಾದ ಸಂಬಂಧವಿದೆ. ಇದು ನಮ್ಮ ಕುಟುಂಬದ ಕಾರ್ಯಕ್ರಮ‌. ಅಪ್ಪಾಜಿ ಅವರು ಚಿರಂಜೀವಿ ಅವರನ್ನು ತಮ್ಮ ದೊಡ್ಡ ಮಗ ಎಂದು ಹೇಳುತ್ತಿದ್ದರು. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ನೋಡುತ್ತೇನೆ ಎಂದು ಹೇಳಿದರು.

'ನನ್ನ ಪ್ರೀತಿಯ ಕನ್ನಡ ಸಹೋದರ, ಸಹೋದರಿಯರಿಗೆ ನಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಾ. ನಾನು ಚೆನ್ನಾಗಿದ್ದೀನೆ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಚಿರಂಜೀವಿ, ಡಾ.ರಾಜ್ ಕುಮಾರ್ ನನ್ನ ತಂದೆ ಸಮಾನರು. ಶಿವಣ್ಣ ಸಹೋದರ ಸಮಾನರು ಎನ್ನುತ್ತಾ ಅಣ್ಣಾವ್ರ ಕುಟುಂಬಸ್ಥರಿಗೆ ಧನ್ಯವಾದ ಹೇಳಿದರು

Saira narasimha reddy movie
ಸಿಲಿಕಾನ್​ ಸಿಟಿಯಲ್ಲಿ ನಡೆದ ಸೈರಾ ಸಿನಿಮಾ ಬಿಡುಗಡೆಯ ಪೂರ್ವಭಾವಿ ಪ್ರಚಾರ ಕಾರ್ಯಕ್ರಮ

ನನ್ನ ಮಗ ರಾಮ್​ ಚರಣ್​ ನಿರ್ಮಾಪಕತ್ವದಲ್ಲಿ ಮೂಡಿ ಬಂದಿರುವ ದೊಡ್ಡ ಬಜೆಟ್​ ಸಿನಿಮಾ ಇದಾಗಿದೆ. ವೃತ್ತಿ ಬದುಕಿನಲ್ಲಿ ಸ್ವಾತಂತ್ರ್ಯ ಸೇನಾನಿಯ ಪಾತ್ರ ಮಾಡುವ ಆಸೆ ಇತ್ತು. ಭಗತ್ ಸಿಂಗ್ ಪಾತ್ರ ಮಾಡುವ ಆಸೆಯೂ ಮೊಳೆತಿತ್ತು. ನರಸಿಂಹ ರೆಡ್ಡಿಯ ಚರಿತ್ರೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರೂ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟದ ಸೇನಾನಿ. ಅವರ ಪಾತ್ರ ತೆರೆಯ ಮೇಲೆ ಬರುತ್ತಿರುವುದು ಹೆಮ್ಮೆಯ ವಿಚಾರ. ನನ್ನ ಆಸೆಯನ್ನು ಪೂರೈಸುವುದಕ್ಕೆ ಚರಣ್, ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿದ್ದಾರೆ. ತಂದೆ ಮಗನ ಆಸೆ ಪೂರೈಸುವುದಕ್ಕೆ ಶ್ರಮಿಸಿದ್ದಾನೆ. ರಾಮ್ ಚರಣ್ ಅಂತಹ ಮಗನನ್ನ ಪಡೆದಿದ್ದಕ್ಕೆ ನಿಜಕ್ಕೂ ಹೆಮ್ಮೆಯಿದೆ. ಸಿನಿಮಾಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದವರಿಗೂ, ಕೆಸಲ ಮಾಡಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಶಿವಣ್ಣ ಹೇಳಿದಂತೆ ಕನ್ನಡ, ತೆಲುಗು, ತಮಿಳು ಅನ್ನೋ ಭಾಷೆಯ ಭೇದ ಇಲ್ಲದೆ ಸಿನಿಮಾ ನೋಡಬೇಕು. ಇದು ಕೇವಲ ತೆಲುಗು ಸಿನಿಮಾವಲ್ಲ, ಭಾರತೀಯರೆಲ್ಲಾ ಹೆಮ್ಮೆ ಪಡುವಂತಹ ಹೋರಾಟಗಾರನ ಕಥೆ. 'ಸೈರಾವನರಸಿಂಹ ರೆಡ್ಡಿ' ಭಾರತೀಯ ಸಿನಿಮಾ ಧಯವಿಟ್ಟು ಎಲ್ಲರೂ ಸಿನಿಮಾ ನೋಡಿ ಹರಸಿ ಎಂದು ಚಿರಂಜೀವಿ ಮನವಿ ಮಾಡಿದರು.

ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್‌ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು, ಈ ನಿಮಿತ್ತ ಸೈರಾ ಚಿತ್ರತಂಡ ಭಾನುವಾರ ಬೆಂಗಳೂರಿನಲ್ಲಿ ಪೂರ್ವಭಾವಿ ಪ್ರಚಾರ ಕಾರ್ಯಕ್ರಮ ನಡೆಸಿತು.

ಸಿಲಿಕಾನ್​ ಸಿಟಿಯಲ್ಲಿ ನಡೆದ ಸೈರಾ ಸಿನಿಮಾ ಫ್ರೀ ರಿಲೀಸ್​ ಈವೆಂಟ್​...

ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ, ನಿರ್ಮಾಪಕ ರಾಮ್ ಚರಣ್ ತೇಜ , ನಾಯಕಿ ತಮನ್ನಾ ಭಾಟಿಯ, ನಿರ್ದೇಶಕ ಸುರೇಂದರ್ ರೆಡ್ಡಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಭಾಗಿಯಾಗಿ ಕಾರ್ಯಕ್ರಮದ‌ ಮೆರುಗು ತಂದರು. ಶೂಟಿಂಗ್​​ನಲ್ಲಿ ಬ್ಯುಸಿ ಇದ್ದ ಕಿಚ್ಚ ಸುದೀಪ್​, ಪೋಲೆಂಡ್​ನಿಂದಲೇ ವಿಡಿಯೋ ಕಾಲ್ ಮಾಡಿ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಅವರನ್ನು, 'ನಮ್ಮ ಮನೆಗೆ ಬಂದಿರುವುದಕ್ಕೆ ಸ್ವಾಗತ' ಎಂದು ಆತ್ಮೀಯವಾಗಿ ಸ್ವಾಗತಿಸಿ ಶಿವರಾಜ್​ ಕುಮಾರ್​ ಅವರಿಗೂ ಧನ್ಯವಾದ ಹೇಳಿದರು.

Saira narasimha reddy movie
ಸಿಲಿಕಾನ್​ ಸಿಟಿಯಲ್ಲಿ ನಡೆದ ಸೈರಾ ಸಿನಿಮಾ ಫ್ರೀ ರಿಲೀಸ್​ ಈವೆಂಟ್​...

ಬಳಿಕ ಶಿವಣ್ಣ ಮಾತನಾಡಿ, ಮೆಗಾಸ್ಟಾರ್ ಚಿರಂಜೀವಿ ನಮ್ಮ ಅಣ್ಣನ ಸಮಾನ. ಚಿಕ್ಕಂದಿನಿಂದ ಚಿರಂಜೀವಿ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಗಾಂಧಿ ಜಯಂತಿಯಂದು ಸೈರಾ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ. ನಮ್ಮ ಕುಟುಂಬಕ್ಕೂ, ಚಿರಂಜೀವಿ ಅವರ ಕುಟುಂಬಕ್ಕೂ ಆತ್ಮೀಯವಾದ ಸಂಬಂಧವಿದೆ. ಇದು ನಮ್ಮ ಕುಟುಂಬದ ಕಾರ್ಯಕ್ರಮ‌. ಅಪ್ಪಾಜಿ ಅವರು ಚಿರಂಜೀವಿ ಅವರನ್ನು ತಮ್ಮ ದೊಡ್ಡ ಮಗ ಎಂದು ಹೇಳುತ್ತಿದ್ದರು. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ನೋಡುತ್ತೇನೆ ಎಂದು ಹೇಳಿದರು.

'ನನ್ನ ಪ್ರೀತಿಯ ಕನ್ನಡ ಸಹೋದರ, ಸಹೋದರಿಯರಿಗೆ ನಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಾ. ನಾನು ಚೆನ್ನಾಗಿದ್ದೀನೆ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಚಿರಂಜೀವಿ, ಡಾ.ರಾಜ್ ಕುಮಾರ್ ನನ್ನ ತಂದೆ ಸಮಾನರು. ಶಿವಣ್ಣ ಸಹೋದರ ಸಮಾನರು ಎನ್ನುತ್ತಾ ಅಣ್ಣಾವ್ರ ಕುಟುಂಬಸ್ಥರಿಗೆ ಧನ್ಯವಾದ ಹೇಳಿದರು

Saira narasimha reddy movie
ಸಿಲಿಕಾನ್​ ಸಿಟಿಯಲ್ಲಿ ನಡೆದ ಸೈರಾ ಸಿನಿಮಾ ಬಿಡುಗಡೆಯ ಪೂರ್ವಭಾವಿ ಪ್ರಚಾರ ಕಾರ್ಯಕ್ರಮ

ನನ್ನ ಮಗ ರಾಮ್​ ಚರಣ್​ ನಿರ್ಮಾಪಕತ್ವದಲ್ಲಿ ಮೂಡಿ ಬಂದಿರುವ ದೊಡ್ಡ ಬಜೆಟ್​ ಸಿನಿಮಾ ಇದಾಗಿದೆ. ವೃತ್ತಿ ಬದುಕಿನಲ್ಲಿ ಸ್ವಾತಂತ್ರ್ಯ ಸೇನಾನಿಯ ಪಾತ್ರ ಮಾಡುವ ಆಸೆ ಇತ್ತು. ಭಗತ್ ಸಿಂಗ್ ಪಾತ್ರ ಮಾಡುವ ಆಸೆಯೂ ಮೊಳೆತಿತ್ತು. ನರಸಿಂಹ ರೆಡ್ಡಿಯ ಚರಿತ್ರೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರೂ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟದ ಸೇನಾನಿ. ಅವರ ಪಾತ್ರ ತೆರೆಯ ಮೇಲೆ ಬರುತ್ತಿರುವುದು ಹೆಮ್ಮೆಯ ವಿಚಾರ. ನನ್ನ ಆಸೆಯನ್ನು ಪೂರೈಸುವುದಕ್ಕೆ ಚರಣ್, ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿದ್ದಾರೆ. ತಂದೆ ಮಗನ ಆಸೆ ಪೂರೈಸುವುದಕ್ಕೆ ಶ್ರಮಿಸಿದ್ದಾನೆ. ರಾಮ್ ಚರಣ್ ಅಂತಹ ಮಗನನ್ನ ಪಡೆದಿದ್ದಕ್ಕೆ ನಿಜಕ್ಕೂ ಹೆಮ್ಮೆಯಿದೆ. ಸಿನಿಮಾಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದವರಿಗೂ, ಕೆಸಲ ಮಾಡಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಶಿವಣ್ಣ ಹೇಳಿದಂತೆ ಕನ್ನಡ, ತೆಲುಗು, ತಮಿಳು ಅನ್ನೋ ಭಾಷೆಯ ಭೇದ ಇಲ್ಲದೆ ಸಿನಿಮಾ ನೋಡಬೇಕು. ಇದು ಕೇವಲ ತೆಲುಗು ಸಿನಿಮಾವಲ್ಲ, ಭಾರತೀಯರೆಲ್ಲಾ ಹೆಮ್ಮೆ ಪಡುವಂತಹ ಹೋರಾಟಗಾರನ ಕಥೆ. 'ಸೈರಾವನರಸಿಂಹ ರೆಡ್ಡಿ' ಭಾರತೀಯ ಸಿನಿಮಾ ಧಯವಿಟ್ಟು ಎಲ್ಲರೂ ಸಿನಿಮಾ ನೋಡಿ ಹರಸಿ ಎಂದು ಚಿರಂಜೀವಿ ಮನವಿ ಮಾಡಿದರು.

Intro:ರಿಲಿಸ್ ಗೂ ಮುನ್ನ ಬೆಂಗಳೂರಿನಲ್ಲಿ ಅಬ್ಬರಿಸಿದ ಸೈರಾ ನರಸಿಂಹ ರೆಡ್ಡಿ...

ಮೆಗಾಸ್ಟಾರ್ ಚಿರಂಜೀವಿ, ಕಿಚ್ಚಸುದೀಪ್‌ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಸೈರಾ ನರಸಿಂಹ ರೆಡ್ಡಿ, ಅಕ್ಟೋಬರ್ ೨ ಗಾಂಧಿ ಜಯಂತಿ ಪ್ರಯುಕ್ತ ವಿಶ್ವದಾದ್ಯಂತ ಅದ್ದೂರಿಯಾಗಿ‌ ಬಿಡುಗಡೆಯಾಗ್ತಿದ್ದು. ಸೈರಾ ಚಿತ್ರತಂಡ ಇಂದು ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಈವೆಂಟ್ ನಡೆಸಿದ್ರು. ಸೈರಾ ಚಿತ್ರದ ಪ್ರಮೋಶನ್ ಇವೆಂಟ್ ಮೆಗಾಸ್ಟಾರ್ ಚಿರಂಜೀವಿ, ನಿರ್ಮಾಪಕ ರಾಮ್ ಚರಣ್, ತೇಜ ,ನಾಯಕಿ ತಮನ್ನಾ ಭಾಟಿಯ, ಹಾಗೂ ನಿರ್ದೇಶಕ ಸುರೇಂದರ್ ರೆಡ್ಡಿ ಭಾಗವಹಿಸಿದ್ರು
.ಅಲ್ಲದೆ ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹಿರೋ ಶಿವಣ್ಣ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಭಾಗಿಯಾಗಿ ಕಾರ್ಯಕ್ರಮದ‌ ಮೆರುಗು ಮತ್ತಷ್ಟು ಹೆಚ್ಚುವಂತೆ ಮಾಡಿದ್ರು.ಇನ್ನೂ ಶೂಟಿಂಗ್ ನಲ್ಲಿ ಬುಸಿ ಇದ್ದ ಕಾರಣ ಈ ಕಾರ್ಯಕ್ರಮಕ್ಕೆ ಗೈರಾಗಿದ್ದ ಕಿಚ್ಚ ಸುದೀಪ್ ಪೋಲೆಂಡ್ ನಿಂದ ವಿಡಿಯೋ ಕಾಲ್ ಮಾಡಿ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಅವರನ್ನು ನಮ್ಮ ಮನೆಗೆ ಬಂದಿರುವುದಕ್ಕೆ ಸ್ವಾಗತ, ಎಂದು ತುಂಭಾ ಆತ್ಮೀಯವಾಗಿ ಕರ್ನಾಟಕಕ್ಕೆ ಸ್ವಾಗತಿಸಿದರು.ಅಲ್ಲದೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವಣ್ಣನಿಗೂ ಧನ್ಯವಾದ ಹೇಳಿದ್ರು.ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ
ನಮ್ಮ ಅಣ್ಣ ಸಮಾನರಾದ ಮೆಗಾಸ್ಟಾರ್ ಚಿರಂಜೀವಿ ನಟನೆಯ ಸಿನಿಮಾ ಇದೇ ಅಕ್ಟೊ ೨ ರಂದು ರಿಲೀಸ್ ಆಗ್ತಿದೆ. ಚಿಕ್ಕಂದಿನಿಂದ ಚಿರಂಜೀವಿ ಅವರ ಸಿನಿಮಾ ನೋಡುತ್ತಾ ಬೆಳೆದ್ಧೀನಿ .ಗಾಂಧೀ ಜಯಂತಿ ಸಂಭ್ರಮದಲ್ಲಿ ಸೈರಾ ರಿಲೀಸ್ ಆಗ್ತಿರೋದು ವಿಶೇಷ.
ಕನ್ನಡಿಗರು, ಆಂಧ್ರದ ಜನರು ಸಹೋದರರು ಇದ್ದಂತೆ.
ಅಲ್ಲದೆ ನಮ್ಮ ಫ್ಯಾಮಿಲಿಗೂ ಚಿರಂಜೀವಿ ಅವರ
ಫ್ಯಾಮಿಲಿಗೂ ತುಂಭಾ ಆತ್ಮೀತಯವಾದ ಸಂಭದವಿದೆ.
.ಇದು ನಮ್ಮ ಫ್ಯಾಮಿಲಿ ಕಾರ್ಯಕ್ರಮ‌ ಹಾಗಾಗಿ ನಾನು ಇಲ್ಲಿಗೆ ಬಂದೆ ಅಪ್ಪಾಜಿ ಚಿರಂಜೀವಿ ಅವರನ್ನು ದೊಡ್ಡ ಮಗ ಎಂದು ಹೇಳುತಿದ್ರು, Body:ಖಂಡಿತ ನಾನು ಅಕ್ಟೋಬರ್ ೨ ರಂದು ಫಸ್ಟ್ ಡೇ ಫಸ್ಟ್ ಶೋ ನೋಡ್ತೇನೆ ಎಂದು ವೇದಿಕೆಯಲ್ಲಿ ಹೇಳಿದ್ರು. ಅಲ್ಲದೆ ತೆಲುಗು ಬೇರೆಯಲ್ಲ,
ಕನ್ನಡಬೇರೆಯಲ್ಲ‌ಮೊದಲು ನಾವು ಭಾರತೀಯರು, ಆಮೇಲೆ ಮಾತೃ ಭಾಷೆ ಕನ್ನಡ ಎಂದು ಹೇಳಿ ಭಾವೈಕ್ಯತೆ ಪಾಠ ಹೇಳಿದ್ರು..ನಂತರ ಮಾತನಾಡಿದ ಮೆಗಾ ಸ್ಟಾತ ಚಿರಂಜೀವಿ ಕನ್ನಡದಲ್ಲೇ ಮಾತು ಆರಂಭಿಸಿ ನನ್ನ ಪ್ರೀತಿಯ ಕನ್ನಡ ಸೋದರ ಸೋದರಿಯರಿಗೆನಮಸ್ಕಾರ,
ಎಲ್ಲರೂ ಚೆನ್ನಾಗಿದ್ದೀರಾ.ನಾನು ಚೆನ್ನಾಗಿದ್ದೀನಿ ಎಂದು ಕನ್ನಡದಲ್ಲಿ ಮಾತನಾಡಿದ್ರು.ಅಲ್ಲದೆ ಕನ್ನಡ‌ ಕಂಠೀರವ ಡಾ.ರಾಜ್ ಕುಮಾರ್ ನನ್ನ ತಂದೆ ಸಮಾನರು ಶಿವಣ್ಣ ಸಹೋದರ ಸಮಾನರು ಎಂದು ಮೊದಲಿಗೆ ಅಣ್ಣಾವ್ರ ಫ್ಯಾಮಿಲಿಗೆ ಧನ್ಯವಾದ ಹೇಳಿದ್ರು. 41 ವರ್ಷಗಳ‌ ಕರಿಯರ್ ನಲ್ಲಿ ಅವಕಾಶ ಕೊಟ್ಟ ಎಲ್ಲಾ ನಿರ್ಮಾಪಕರಿಗೆ ನಾನು ಆಭಾರಿ.ಆದರೆ ಇಷ್ಟು ದೊಡ್ಡ ಬಜೆಟ್ ನಲ್ಲಿ ಸಿನಿಮಾ ಮಾಡಿದ ನನ್ನ ನಿರ್ಮಾಪಕ ನನ್ನ ಮಗ ರಾಮ್ ಚರಣ್ ನಿರ್ಮಾಪಕರಲ್ಲಿ ನಂಬರ್ ೧. 20 ವರ್ಷಗಳ ಹಿಂದೆ ನನ್ನನ್ನ ಯಾರಾದ್ರೂ ಡ್ರೀಮ್ ಪ್ರಾಜೆಕ್ಟ್ ಯಾವ್ದು ಅಂದಾಗ ಸ್ವತಂತ್ರ ಹೋರಾಟಗಾರನ ಪಾತ್ರ ಅಂತಿದ್ದೆ.
ಭಗತ್ ಸಿಂಗ್ ರೀತಿಯ ಪಾತ್ರ ಮಾಡ್ಬೇಕು ಎಂದು ಕೊಂಡಿದ್ದೆ.‌ಆದ್ರೆ 12 ವರ್ಷಗಳ ಹಿಂದೆ ಸೈರಾ ನರಸಿಂಹ ರೆಡ್ಡಿ ಕಥೆ ಗೊತ್ತಾಯ್ತು.ಆದರೆ ಆ ಸಂದರ್ಭದಲ್ಲಿ ಈ ಸಿನಿಮಾ ಮಾಡೋದು ಬಜೆಟ್ ಜಾಸ್ತಿ ಬೇಕಿತ್ತು.ಆ ನಂತ್ರ ನಾನು ರಾಜಕೀಯಕ್ಕೆ ಹೋದೆ. ಮತ್ತೆ ಖೈದಿ ನಂ 150 ಸಿನಿಮಾ ಮೂಲಕ ಬಂದೆ ಭವ್ಯ ಸ್ವಾಗತ ಸಿಕ್ತು.ಈಗ
250 ಕೋಟಿ ವ್ಯಯಿಸಿ ಈ ಸಿನಿಮಾ ಮಾಡಿದ್ದೇವೆ.
ಪ್ರತಿ ಸನ್ನಿವೇಶ ಅದ್ಭುತವಾಗಿ ಮೂಡಿ ಬಂದಿದೆ.ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.ನನ್ನ
ಆಸೆ ಪೂರೈಸೋಕ್ಕೆ ಚರಣ್ ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿದ್ದಾನೆ.ತಂದೆ ಮಗನ ಆಸೆ ಪೂರೈಸೋಕ್ಕೆ ಶ್ರಮಿಸ್ತಾನೆ, ಆದ್ರೆ ಚರಣ್ ತಂದೆ ಆಸೆ ಪೂರೈಸಿದ್ದಾನೆ.
ರಾಮ್ ಚರಣ್ ಅಂತ ಮಗನನ್ನ ಪಡೆದಿದ್ದಕ್ಕೆ ನಿಜಕ್ಕೂ ಹೆಮ್ಮೆ.ಚಿತ್ರದಲ್ಲಿ ನಟಿಸ್ಬೇಕು ಅಂತ ಹೇಳಿದ ತಕ್ಷಣ ನಟಿಸೋಕ್ಕೆ ಬಿಗ್ ಬಿ ಒಪ್ಪಿಕೊಂಡ್ರು. ನರಸಿಂಹ ರೆಡ್ಡಿ ಬಿಟ್ರೆ ಈ ಚಿತ್ರದಲ್ಲಿ ಅದ್ಭುತ ಪಾತ್ರ ಸುದೀಪ್ ಅವರದ್ದು.
ಅವರ ಜೊತೆ ನಟಿಸಿದ್ದು ನಿಜಕ್ಕೂ ಅದ್ಭುತ ಅನುಭವ
ನನ್ನ ಸಹೋದರ ಸುದೀಪ್ ಅವರಿಗೆ ಧನ್ಯವಾದ.ಪವನ್ ಕಲ್ಯಾಣ್ ಚಿತ್ರಕ್ಕೆ ವಾಯ್ಸ್ ಓವರ್ ಕೊಟ್ಟಿದ್ದಾರೆ.
ಕನ್ನಡದಲ್ಲಿ ಶಿವಣ್ಣ ಅವರಿಂದ ವಾಯ್ಸ್ ಕೊಡಿಸಬೇಕು ಅಂದುಕೊಂಡೆ ಸಾಧ್ಯವಾಗಲಿಲ್ಲ.ಶಿವಣ್ಣ ಹೇಳಿದಂತೆ ಕನ್ನಡ, ತೆಲುಗು, ತಮಿಳು ಅನ್ನೋ ಭಾಷೆಯ ಭೇದ ಇಲ್ಲದೇ ಸಿನಿಮಾ ನೋಡಬೇಕು. ಇದು ಕೇವಲ ತೆಲುಗು ಸಿನಿಮಾವಲ್ಲ ಭಾರತೀಯರೆಲ್ಲಾ ಹೆಮ್ಮೆಪಡುವಂತಹ ಹೋರಾಟಗಾರನ ಕಥೆ ಇದು.ಸೈರಾವನರಸಿಂಹ ರೆಡ್ಡಿ ಇಂಡಿಯನ್ ಸಿನಿಮಾ ಧಯವಿಟ್ಟು ಎಲ್ಲಾ‌ಸಿನಿಮಾ ನೋಡಿ ಹರಸಿ ಎಂದು ಕನ್ನಡಿಗರಿಗೆ ಚಿರಂಜೀವಿ ಮನವಿ ಮಾಡಿದ್ರು.ಅಲ್ಲದೆ ಇದೇ ವೇದಿಕೆಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕನ್ನಡದಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು.

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.