ETV Bharat / sitara

'ರಾಬರ್ಟ್​' ಸಿನಿಮಾ ಬಿಡುಗಡೆಗೆ ಚಿತ್ರತಂಡದಿಂದ ಕಂಡಿಷನ್​​​​...ಏನದು...?

author img

By

Published : Nov 30, 2020, 10:09 AM IST

Updated : Nov 30, 2020, 11:59 AM IST

'ರಾಬರ್ಟ್​' ಸಿನಿಮಾ ಬಿಡುಗಡೆ ದಿನಾಂಕವನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಚಿತ್ರಮಂದಿರದಲ್ಲಿ ಶೇಕಡಾ 100 ರಷ್ಟು ಸೀಟು ಭರ್ತಿಗೆ ಸರ್ಕಾರ ಇನ್ನೂ ಅನುಮತಿ ನೀಡದ ಕಾರಣ ನಷ್ಟವಾಗಬಹುದು ಎಂಬ ಕಾರಣಕ್ಕೆ ಬಿಗ್ ಬಜೆಟ್ ಸಿನಿಮಾಗಳನ್ನು ಇನ್ನೂ ಬಿಡುಗಡೆ ಮಾಡಲಾಗುತ್ತಿಲ್ಲ. ಶೇಕಡಾ 100 ರಷ್ಟು ಸೀಟು ಭರ್ತಿಗೆ ಅವಕಾಶ ದೊರೆತಾಗ ಮಾತ್ರ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹೇಳಿದ್ದಾರೆ.

Roberrt movie
'ರಾಬರ್ಟ್

ಕೊರೊನಾ ಲಾಕ್‍ಡೌನ್ ಮುಗಿದು ಚಿತ್ರ ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆ , ದರ್ಶನ್ ಅಭಿನಯದ 'ರಾಬರ್ಟ್' ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಲಾಕ್‍ಡೌನ್ ಮುಗಿದು, ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಿ ಒಂದೂವರೆ ತಿಂಗಳಾದರೂ ಸಿನಿಮಾ ಬಿಡುಗಡೆಯಾಗಿಲ್ಲ, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯೂ ಕಾಣುತ್ತಿಲ್ಲ.

ಮೊದಲು ಕ್ರಿಸ್​​​​ಮಸ್​​​​​​​​​​ ವೇಳೆಗೆ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಲಾಗಿತ್ತು. ಆ ನಂತರ ಸಂಕ್ರಾಂತಿ, ಇದೀಗ ಯುಗಾದಿ ವೇಳೆಗೆ ಚಿತ್ರ ಬಿಡುಗಡೆಯಾದರೆ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳುವ ಮಾತುಗಳನ್ನು ಕೇಳಿದರೆ, ಬಹುಶಃ ಸಿನಿಮಾ ಯುಗಾದಿ ವೇಳೆಗೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರ ಇನ್ನಷ್ಟು ವಿಳಂಬವಾದರೂ ಅದರಲ್ಲಿ ಆಶ್ಚರ್ಯವಿಲ್ಲ. ಅದಕ್ಕೆ ಕಾರಣ, ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ಚಿತ್ರ ಬಿಡುಗಡೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದೆಯಾದರೂ, ಕೇವಲ ಶೇಕಡಾ 50 ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಈ ನಿಯಮದಿಂದಾಗಿ ಅರ್ಧ ಚಿತ್ರಮಂದಿರಕ್ಕೆ ಚಿತ್ರ ಪ್ರದರ್ಶನ ಮಾಡುವಂತಾಗಿದೆ. ಎಲ್ಲಾ ಆಸನಗಳು ತುಂಬಿದ್ದರೂ ನಿರ್ಮಾಪಕರ ಹಣ ಬರುವುದು ಕಷ್ಟವಿರುವಾಗ, ಅರ್ಧ ಚಿತ್ರಮಂದಿಗಳಿಗೆ ಬಿಡುಗಡೆ ಮಾಡಿದರೆ ಕಷ್ಟ ಎಂಬ ಅಭಿಪ್ರಾಯ ಕೋಟಿ ಕೋಟಿ ಬಂಡವಾಳ ಹೂಡಿ ಚಿತ್ರ ನಿರ್ಮಿಸಿರುವ ನಿರ್ಮಾಪಕರದ್ದು. ಅದೇ ಕಾರಣಕ್ಕೆ ಅವರೆಲ್ಲಾ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಭರ್ತಿಗೆ ಅವಕಾಶ ಕಲ್ಪಿಸುವವರೆಗೂ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಸಹ ಇದೇ ತಂತ್ರವನ್ನು ಅನುಸರಿಸುತ್ತಿದ್ದು, ಶೇಕಡಾ 100ರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ, ನೋಡಿಕೊಂಡು ಸಿನಿಮಾ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರ ಇದಕ್ಕೆ ಯಾವಾಗ ಅನುಮತಿ ನೀಡಲಿದೆ ಕಾದು ನೋಡಬೇಕು.

ಕೊರೊನಾ ಲಾಕ್‍ಡೌನ್ ಮುಗಿದು ಚಿತ್ರ ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆ , ದರ್ಶನ್ ಅಭಿನಯದ 'ರಾಬರ್ಟ್' ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಲಾಕ್‍ಡೌನ್ ಮುಗಿದು, ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಿ ಒಂದೂವರೆ ತಿಂಗಳಾದರೂ ಸಿನಿಮಾ ಬಿಡುಗಡೆಯಾಗಿಲ್ಲ, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯೂ ಕಾಣುತ್ತಿಲ್ಲ.

ಮೊದಲು ಕ್ರಿಸ್​​​​ಮಸ್​​​​​​​​​​ ವೇಳೆಗೆ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಲಾಗಿತ್ತು. ಆ ನಂತರ ಸಂಕ್ರಾಂತಿ, ಇದೀಗ ಯುಗಾದಿ ವೇಳೆಗೆ ಚಿತ್ರ ಬಿಡುಗಡೆಯಾದರೆ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳುವ ಮಾತುಗಳನ್ನು ಕೇಳಿದರೆ, ಬಹುಶಃ ಸಿನಿಮಾ ಯುಗಾದಿ ವೇಳೆಗೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರ ಇನ್ನಷ್ಟು ವಿಳಂಬವಾದರೂ ಅದರಲ್ಲಿ ಆಶ್ಚರ್ಯವಿಲ್ಲ. ಅದಕ್ಕೆ ಕಾರಣ, ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ಚಿತ್ರ ಬಿಡುಗಡೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದೆಯಾದರೂ, ಕೇವಲ ಶೇಕಡಾ 50 ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಈ ನಿಯಮದಿಂದಾಗಿ ಅರ್ಧ ಚಿತ್ರಮಂದಿರಕ್ಕೆ ಚಿತ್ರ ಪ್ರದರ್ಶನ ಮಾಡುವಂತಾಗಿದೆ. ಎಲ್ಲಾ ಆಸನಗಳು ತುಂಬಿದ್ದರೂ ನಿರ್ಮಾಪಕರ ಹಣ ಬರುವುದು ಕಷ್ಟವಿರುವಾಗ, ಅರ್ಧ ಚಿತ್ರಮಂದಿಗಳಿಗೆ ಬಿಡುಗಡೆ ಮಾಡಿದರೆ ಕಷ್ಟ ಎಂಬ ಅಭಿಪ್ರಾಯ ಕೋಟಿ ಕೋಟಿ ಬಂಡವಾಳ ಹೂಡಿ ಚಿತ್ರ ನಿರ್ಮಿಸಿರುವ ನಿರ್ಮಾಪಕರದ್ದು. ಅದೇ ಕಾರಣಕ್ಕೆ ಅವರೆಲ್ಲಾ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಭರ್ತಿಗೆ ಅವಕಾಶ ಕಲ್ಪಿಸುವವರೆಗೂ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಸಹ ಇದೇ ತಂತ್ರವನ್ನು ಅನುಸರಿಸುತ್ತಿದ್ದು, ಶೇಕಡಾ 100ರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ, ನೋಡಿಕೊಂಡು ಸಿನಿಮಾ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರ ಇದಕ್ಕೆ ಯಾವಾಗ ಅನುಮತಿ ನೀಡಲಿದೆ ಕಾದು ನೋಡಬೇಕು.

Last Updated : Nov 30, 2020, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.