ETV Bharat / sitara

'ರಣಂ' ಆಡಿಯೋ ರಿಲೀಸ್​: ಅಡೆತಡೆಗಳ ನಡುವೆ ಶೂಟಿಂಗ್ ಪೂರ್ಣ

author img

By

Published : May 2, 2019, 12:29 PM IST

ಸಾಕಷ್ಟು ಅಡೆತಡೆಗಳ ನಡುವೆಯೂ ಶೂಟಿಂಗ್ ಮುಗಿಸಿರುವ 'ರಣಂ' ಸಿನಿಮಾದ ಆಡಿಯೋ ನಿನ್ನೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚೇತನ್​​ ರೈತಪರ ಯುವ ಹೋರಾಟಗಾರನಾಗಿ, ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿ ಆಗಿ ನಟಿಸಿದ್ದಾರೆ.

'ರಣಂ' ಆಡಿಯೋ ರಿಲೀಸ್

ವಿ. ಸಮುದ್ರಂ ನಿರ್ದೇಶನದಲ್ಲಿ ಆ‌ ದಿನಗಳು ಖ್ಯಾತಿಯ ಚೇತನ್ ಹಾಗೂ ಯುವ ಸಾಮ್ರಾಟ್ ಚಿರಂಜೀವಿ‌ ಸರ್ಜಾ ಅಭಿನಯದ 'ರಣಂ' ಚಿತ್ರದ ಆಡಿಯೋವನ್ನು ಚಿತ್ರತಂಡ ನಿನ್ನೆ ಬಿಡುಗಡೆ ಮಾಡಿದೆ.

'ರಣಂ' ಆಡಿಯೋ ರಿಲೀಸ್ ಕಾರ್ಯಕ್ರಮ

ಆಡಿಯೋ ಬಿಡುಗಡೆಗೂ ಮುನ್ನ ಚಿತ್ರದ ಆ್ಯಕ್ಷನ್ ಸನ್ನಿವೇಶದ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡು ಸಾವನ್ನಪ್ಪಿದವರಿಗೆ ಇಡೀ ಚಿತ್ರತಂಡ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಘಟನೆಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿದರು. ಟಾಲಿವುಡ್​​​​​ ಹಿಟ್ ಸಿನಿಮಾ 'ಮಹಾನಂದಿ' ನಿರ್ದೇಶಿಸಿದ್ದ ವಿ. ಸಮುದ್ರಂ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದು ಸಮುದ್ರಂ ನಿರ್ದೇಶನದ ಮೊದಲ ಕನ್ನಡ ಸಿನಿಮಾವಾಗಿದೆ.

ಚಿತ್ರದಲ್ಲಿ ಚೇತನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದು ರೈತ ಪರ ಯುವ ಹೋರಾಟಗಾರನಾಗಿ ಮಿಂಚಿದ್ದಾರೆ. ಇನ್ನು ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ‌ ಕಿಚ್ಚನ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ವರಲಕ್ಷಿ ಶರತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ತೆಲುಗಿನ‌ ರವಿಶಂಕರ್ ಸಂಗೀತ ನೀಡಿದ್ದಾರೆ. ಕನಕಪುರ ಶ್ರೀನಿವಾಸ್ ಚಿತ್ರದ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅನೇಕ ಅಡೆತಡೆಗಳ ನಡುವೆಯೂ ಶೂಟಿಂಗ್​ ಮುಗಿಸಿರುವ ಸಿನಿಮಾ ಜೂನ್​​​​ನಲ್ಲಿ ಬಿಡುಗಡೆಯಾಗಲಿದೆ.

ವಿ. ಸಮುದ್ರಂ ನಿರ್ದೇಶನದಲ್ಲಿ ಆ‌ ದಿನಗಳು ಖ್ಯಾತಿಯ ಚೇತನ್ ಹಾಗೂ ಯುವ ಸಾಮ್ರಾಟ್ ಚಿರಂಜೀವಿ‌ ಸರ್ಜಾ ಅಭಿನಯದ 'ರಣಂ' ಚಿತ್ರದ ಆಡಿಯೋವನ್ನು ಚಿತ್ರತಂಡ ನಿನ್ನೆ ಬಿಡುಗಡೆ ಮಾಡಿದೆ.

'ರಣಂ' ಆಡಿಯೋ ರಿಲೀಸ್ ಕಾರ್ಯಕ್ರಮ

ಆಡಿಯೋ ಬಿಡುಗಡೆಗೂ ಮುನ್ನ ಚಿತ್ರದ ಆ್ಯಕ್ಷನ್ ಸನ್ನಿವೇಶದ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡು ಸಾವನ್ನಪ್ಪಿದವರಿಗೆ ಇಡೀ ಚಿತ್ರತಂಡ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಘಟನೆಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿದರು. ಟಾಲಿವುಡ್​​​​​ ಹಿಟ್ ಸಿನಿಮಾ 'ಮಹಾನಂದಿ' ನಿರ್ದೇಶಿಸಿದ್ದ ವಿ. ಸಮುದ್ರಂ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದು ಸಮುದ್ರಂ ನಿರ್ದೇಶನದ ಮೊದಲ ಕನ್ನಡ ಸಿನಿಮಾವಾಗಿದೆ.

ಚಿತ್ರದಲ್ಲಿ ಚೇತನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದು ರೈತ ಪರ ಯುವ ಹೋರಾಟಗಾರನಾಗಿ ಮಿಂಚಿದ್ದಾರೆ. ಇನ್ನು ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ‌ ಕಿಚ್ಚನ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ವರಲಕ್ಷಿ ಶರತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ತೆಲುಗಿನ‌ ರವಿಶಂಕರ್ ಸಂಗೀತ ನೀಡಿದ್ದಾರೆ. ಕನಕಪುರ ಶ್ರೀನಿವಾಸ್ ಚಿತ್ರದ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅನೇಕ ಅಡೆತಡೆಗಳ ನಡುವೆಯೂ ಶೂಟಿಂಗ್​ ಮುಗಿಸಿರುವ ಸಿನಿಮಾ ಜೂನ್​​​​ನಲ್ಲಿ ಬಿಡುಗಡೆಯಾಗಲಿದೆ.

Intro:ಆ‌ ದಿನಗಳು ಚೇತನ್ ಹಾಗೂ ಯುವ ಸಾಮ್ರಾಟ್ ಚಿರಂಜೀವಿ‌ಸರ್ಜಾ ಅಭಿನಯದ "ರಣಂ" ಚಿತ್ರದ ಆಡಿಯೋವನ್ನು ಚಿತ್ರ ತಂಡ ಇಂದು ಬಿಡುಗಡೆಮಾಡಿತು.ಇನ್ನೂ ಚಿತ್ರದ ಆಕ್ಷನ್ ಸಿಕ್ವೆನ್ಸ್ ಶೂಟಿಂಗ್ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಾವನಪ್ಪಿದವರಿಗೆ ಈಡೀ ಚಿತ್ರತಂಡ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಘಟನೆಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿದರು.


Body:ಇನ್ನೂ" ರಣ" ಚಿತ್ರವನ್ನು ಟಾಲಿವುಡ್ ನ ಬಿಗ್ ಹಿಟ್ ಸಿನಿಮಾ ಮಹಾನಂದಿ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿ ಸಮುದ್ರಂ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು.ಇದು ಸಮುದ್ರಂ ಅವರ ಕನ್ನಡದ ಮೊದಲ ಚಿತ್ರವಾಗಿದೆ.ಅಲ್ಲದೆ ಈ ಚಿತ್ರದಲ್ಲಿ ಆ ದಿನಗಳು ಚೇತನ್ ತುಂಭಾ ವಿಶೇಷವಾದ ಪಾತ್ರದಲ್ಲಿ ಕಾಣಿಸಿದ್ದು. ರೈತ ಪರ ಯುವ ಹೋರಾಟಗಾರನಾಗಿ ಮಿಂಚಿದ್ದಾರೆ.ಅಲ್ಲದೆ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ.ಅಲ್ಲದೆ ಚಿತ್ರದಲ್ಲಿ ಮಾಣಿಕ್ಯ ಚಿತ್ರದಲ್ಲಿ‌ ಕಿಚ್ಚನ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ವರಲಕ್ಷಿ ಶರತ್ ಕುಮಾರ್ ಈ ಚಿತ್ರದಲ್ಲಿ ಲೀಡ್ ರೋಲ್ ಪ್ಲೇ ಮಾಡಿದ್ದಾರೆ.


Conclusion:ಇನ್ನೂ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ತೆಲುಗಿನ‌ ರವಿಶಂಕರ್ ಟ್ಯೂನ್ ಕಂಪೋಸ್ ಮಾಡಿದ್ದಾರೆ.ಇನ್ನೂ ಈ ಚಿತ್ರವನ್ನು ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ಮಾಪಕರೆನಿಸಿರುವ ಕನಕಪುರ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು .ಹಲವು ಅಡೆತಡೆಗಳ ದಾಟಿ ಶೂಟಿಂಗ್ ಕಂಪ್ಲೀಟ್ ಮಾಡಿದ್ದು .ರಣಂ ಚಿತ್ರ ಸದ್ಯ ರಿಲೀಸ್ ಗೆ ರೆಡಿಯಿದ್ದು ಜೂನ್ ನಲ್ಲಿ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ.


ಸತೀಶ ಎಂಬಿ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.