ETV Bharat / sitara

ಸುರತ್ಕಲ್​ನ ರಣಗಿರಿ ರಹಸ್ಯ ಭೇದಿಸಲು ಬರ್ತಿದ್ದಾರೆ ರಮೇಶ್ ಅರವಿಂದ್!

author img

By

Published : Sep 11, 2019, 11:54 AM IST

Updated : Sep 11, 2019, 2:56 PM IST

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಮೇಶ್ ಅರವಿಂದ್, ಬರ್ತ್ ಡೇಗೆ ಶಿವಾಜಿ ಸುರತ್ಕಲ್ ಚಿತ್ರತಂಡ, ಟೀಸರ್ ರಿಲೀಸ್ ಮಾಡುವ ಮೂಲಕ ಹುಟ್ಟು ಹಬ್ಬದ ಉಡುಗೊರೆ ನೀಡಿದ್ದಾರೆ‌‌. ಶಿವಾಜಿ ಸುರತ್ಕಲ್‌ ರಮೇಶ್‌ ಅರವಿಂದ್‌ ಅಭಿನಯದ 101 ನೇ ಚಿತ್ರ ಎಂಬುದು ವಿಶೇಷ.

ರಮೇಶ್ ಅರವಿಂದ್

ಸ್ಯಾಂಡಲ್​ವುಡ್​ನ ಮೋಸ್ಟ್ ಚಾರ್ಮಿಂಗ್ ಸ್ಟಾರ್ ಅಂದ್ರೆ ರಮೇಶ್‌ ಅರವಿಂದ್‌. ನಟ, ನಿರ್ದೇಶಕ, ನಿರೂಪಕರಾಗಿ ಸೈ ಎನಿಸಿಕೊಂಡಿರುವ ರಮೇಶ್ ಅರವಿಂದ್ ನೋಡ ನೋಡುತ್ತಲೇ ಸೆಂಚುರಿ ಬಾರಿಸಿದ್ದಾಗಿದೆ.

ಸದ್ಯ ಜನ್ಮದಿನದ ಸಂಭ್ರಮದಲ್ಲಿರುವ ರಮೇಶ್​ ಅವರ ಬರ್ತ್ ಡೇಗೆ ಶಿವಾಜಿ ಸುರತ್ಕಲ್ ಚಿತ್ರತಂಡ, ಟೀಸರ್ ರಿಲೀಸ್ ಮೂಲಕ ಉಡುಗೊರೆ ನೀಡಿದೆ. ಶಿವಾಜಿ ಸುರತ್ಕಲ್‌ ರಮೇಶ್‌ ಅರವಿಂದ್‌ ಅಭಿನಯದ 101 ನೇ ಚಿತ್ರ ಎಂಬುದು ವಿಶೇಷ.

ಶಿವಾಜಿ ಸುರತ್ಕಲ್ ಚಿತ್ರತಂಡ

ಇನ್ನು, ಈ ಬಗ್ಗೆ ಚಿತ್ರದ ನಾಯಕ ನಟ ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ನಿರ್ದೇಶಕ ಆಕಾಶ್ ಶ್ರೀವತ್ಸ, ನಿರ್ಮಾಪಕ ಅನೂಪ್ ಗೌಡ ಸೇರಿದಂತೆ ಇಡೀ ಶಿವಾಜಿ ಸುರತ್ಕಲ್ ಚಿತ್ರತಂಡ ಉಪಸ್ಥಿತಿ ಇತ್ತು. ರಮೇಶ್ ಅರವಿಂದ್ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ನಿರ್ದೇಶಕ ಆಕಾಶ್ ಶ್ರೀವತ್ಸ, ಈ ಚಿತ್ರವನ್ನ ನಿರ್ದೇಶನ ಮಾಡಿದ್ರೆ, ಅನೂಪ್ ಗೌಡ ಈ‌ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.

ಸದ್ಯ ರಿವೀಲ್ ಆಗಿರೋ ಟೀಸರ್​ನಲ್ಲಿ ರಮೇಶ್ ಅರವಿಂದ್ ಎರಡು ಶೇಡ್​ನಲ್ಲಿ ‌ಕಾಣಿಸಿಕೊಂಡಿದ್ದು, ಹೊಸ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ರಂಗಿತರಂಗ ಚಿತ್ರದ ನಾಯಕಿ ರಾಧಿಕಾ ನಾರಾಯಣ್ ರಮೇಶ್ ಅವ್ರ ಪತ್ನಿ ಜನನಿ ಪಾತ್ರದಲ್ಲಿ ಕಾಣ್ತಾರೆ. ದೃಶ್ಯಂ ಚಿತ್ರದಲ್ಲಿ ನಟಿಸಿದ್ದ ಆರೋಹಿ ನಾರಾಯಣ್ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಲಿದ್ದಾರೆ.

ದಿ ಕೇಸ್‌ ಆಫ್ ರಣಗಿರಿ ರಹಸ್ಯ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರ, ರಮೇಶ್ ಅರವಿಂದ್ ಸಿನಿಮಾ ಜರ್ನಿಯಲ್ಲಿ ಡಿಫರೆಂಟ್​ ಚಿತ್ರ ಆಗಲಿದೆ. ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಗಿದಿದ್ದು, ಡಬ್ಬಿಂಗ್‌ ಕೆಲಸ ಕೊನೆಯ ಹಂತದಲ್ಲಿದೆ. ಬದ್ಮಾಶ್ ಚಿತ್ರದ ನಂತ್ರ, ಆಕಾಶ್‌ ಶ್ರೀವತ್ಸ ಈ‌ ಚಿತ್ರವನ್ನ ನಿರ್ದೇಶಿಸಿದ್ದಾರೆ. ರೇಖಾ ಕೆ.ಎನ್‌ ಮತ್ತು ಅನೂಪ್‌ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತವಿದೆ. ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ. ಅಭಿಜಿತ್‌, ಆಕಾಶ್‌ ಶ್ರೀವತ್ಸ ಚಿತ್ರಕಥೆ ಬರೆದರೆ, ಜಯಂತ್‌ ಕಾಯ್ಕಿಣಿಯವರ ಸಾಹಿತ್ಯವಿದೆ. ಸದ್ಯಕ್ಕೆ ರಮೇಶ್‌ ಅರವಿಂದ್‌ ಈ‌‌ ಡಿಟೆಕ್ಟಿವ್‌ ‌ಪಾತ್ರ ನೋಡಬೇಕು ಅಂದ್ರೆ ಡಿಸೆಂಬರ್​ವರೆಗೂ ಕಾಯಬೇಕು.

ಸ್ಯಾಂಡಲ್​ವುಡ್​ನ ಮೋಸ್ಟ್ ಚಾರ್ಮಿಂಗ್ ಸ್ಟಾರ್ ಅಂದ್ರೆ ರಮೇಶ್‌ ಅರವಿಂದ್‌. ನಟ, ನಿರ್ದೇಶಕ, ನಿರೂಪಕರಾಗಿ ಸೈ ಎನಿಸಿಕೊಂಡಿರುವ ರಮೇಶ್ ಅರವಿಂದ್ ನೋಡ ನೋಡುತ್ತಲೇ ಸೆಂಚುರಿ ಬಾರಿಸಿದ್ದಾಗಿದೆ.

ಸದ್ಯ ಜನ್ಮದಿನದ ಸಂಭ್ರಮದಲ್ಲಿರುವ ರಮೇಶ್​ ಅವರ ಬರ್ತ್ ಡೇಗೆ ಶಿವಾಜಿ ಸುರತ್ಕಲ್ ಚಿತ್ರತಂಡ, ಟೀಸರ್ ರಿಲೀಸ್ ಮೂಲಕ ಉಡುಗೊರೆ ನೀಡಿದೆ. ಶಿವಾಜಿ ಸುರತ್ಕಲ್‌ ರಮೇಶ್‌ ಅರವಿಂದ್‌ ಅಭಿನಯದ 101 ನೇ ಚಿತ್ರ ಎಂಬುದು ವಿಶೇಷ.

ಶಿವಾಜಿ ಸುರತ್ಕಲ್ ಚಿತ್ರತಂಡ

ಇನ್ನು, ಈ ಬಗ್ಗೆ ಚಿತ್ರದ ನಾಯಕ ನಟ ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ನಿರ್ದೇಶಕ ಆಕಾಶ್ ಶ್ರೀವತ್ಸ, ನಿರ್ಮಾಪಕ ಅನೂಪ್ ಗೌಡ ಸೇರಿದಂತೆ ಇಡೀ ಶಿವಾಜಿ ಸುರತ್ಕಲ್ ಚಿತ್ರತಂಡ ಉಪಸ್ಥಿತಿ ಇತ್ತು. ರಮೇಶ್ ಅರವಿಂದ್ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ನಿರ್ದೇಶಕ ಆಕಾಶ್ ಶ್ರೀವತ್ಸ, ಈ ಚಿತ್ರವನ್ನ ನಿರ್ದೇಶನ ಮಾಡಿದ್ರೆ, ಅನೂಪ್ ಗೌಡ ಈ‌ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.

ಸದ್ಯ ರಿವೀಲ್ ಆಗಿರೋ ಟೀಸರ್​ನಲ್ಲಿ ರಮೇಶ್ ಅರವಿಂದ್ ಎರಡು ಶೇಡ್​ನಲ್ಲಿ ‌ಕಾಣಿಸಿಕೊಂಡಿದ್ದು, ಹೊಸ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ರಂಗಿತರಂಗ ಚಿತ್ರದ ನಾಯಕಿ ರಾಧಿಕಾ ನಾರಾಯಣ್ ರಮೇಶ್ ಅವ್ರ ಪತ್ನಿ ಜನನಿ ಪಾತ್ರದಲ್ಲಿ ಕಾಣ್ತಾರೆ. ದೃಶ್ಯಂ ಚಿತ್ರದಲ್ಲಿ ನಟಿಸಿದ್ದ ಆರೋಹಿ ನಾರಾಯಣ್ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಲಿದ್ದಾರೆ.

ದಿ ಕೇಸ್‌ ಆಫ್ ರಣಗಿರಿ ರಹಸ್ಯ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರ, ರಮೇಶ್ ಅರವಿಂದ್ ಸಿನಿಮಾ ಜರ್ನಿಯಲ್ಲಿ ಡಿಫರೆಂಟ್​ ಚಿತ್ರ ಆಗಲಿದೆ. ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಗಿದಿದ್ದು, ಡಬ್ಬಿಂಗ್‌ ಕೆಲಸ ಕೊನೆಯ ಹಂತದಲ್ಲಿದೆ. ಬದ್ಮಾಶ್ ಚಿತ್ರದ ನಂತ್ರ, ಆಕಾಶ್‌ ಶ್ರೀವತ್ಸ ಈ‌ ಚಿತ್ರವನ್ನ ನಿರ್ದೇಶಿಸಿದ್ದಾರೆ. ರೇಖಾ ಕೆ.ಎನ್‌ ಮತ್ತು ಅನೂಪ್‌ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತವಿದೆ. ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ. ಅಭಿಜಿತ್‌, ಆಕಾಶ್‌ ಶ್ರೀವತ್ಸ ಚಿತ್ರಕಥೆ ಬರೆದರೆ, ಜಯಂತ್‌ ಕಾಯ್ಕಿಣಿಯವರ ಸಾಹಿತ್ಯವಿದೆ. ಸದ್ಯಕ್ಕೆ ರಮೇಶ್‌ ಅರವಿಂದ್‌ ಈ‌‌ ಡಿಟೆಕ್ಟಿವ್‌ ‌ಪಾತ್ರ ನೋಡಬೇಕು ಅಂದ್ರೆ ಡಿಸೆಂಬರ್​ವರೆಗೂ ಕಾಯಬೇಕು.

Intro:ಸುರತ್ಕಲ್ ನ ರಣಗಿರಿ ರಹಸ್ಯ ಭೇದಿಸೋಕ್ಕೆ ಬರ್ತಾ ಇದ್ದಾರೆ ರಮೇಶ್ ಅರವಿಂದ್!!

ಸ್ಯಾಂಡಲ್ ವುಡ್ ನ್ನ, ಮೋಸ್ಟ್ ಚಾರ್ಮಿಂಗ್ ಸ್ಟಾರ್ ಅಂದ್ರೆ
ರಮೇಶ್‌ ಅರವಿಂದ್‌..ನಟರಾಗಿ, ನಿರ್ದೇಶಕರಾಗಿ, ನಿರೂಪಕರಾಗಿ ಸೈ ಎನಿಸಿಕೊಂಡ ರಮೇಶ್ ಅರವಿಂದ್ ನೋಡ ನೋಡುತ್ತಲೇ ಸೆಂಚುರಿ ಬಾರಿಸಿದ್ದಾಗಿದೆ. ಸದ್ಯ ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ರಮೇಶ್ ಅರವಿಂದ್, ಬರ್ತ್ ಡೇ ಗೆ ಶಿವಾಜಿ ಸುರತ್ಕಲ್ ಚಿತ್ರತಂಡ, ಟೀಸರ್ ರಿಲೀಸ್ ಮಾಡುವ ಮೂಲಕ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ‌‌..ಶಿವಾಜಿ ಸುರತ್ಕಲ್‌ ರಮೇಶ್‌ ಅರವಿಂದ್‌ ಅಭಿನಯದ 101 ನೇ ಚಿತ್ರ ಎಂಬುದು ವಿಶೇಷ.ಈ ಬಗ್ಗೆ ಮಾತನಾಡೋದಿಕ್ಕೆ ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ನಿರ್ದೇಶಕ ಆಕಾಶ್ ಶ್ರೀವಾತ್ಸ, ನಿರ್ಮಾಪಕ ಅನೂಪ್ ಗೌಡ ಸೇರಿದಂತೆ ಇಡೀ ಶಿವಾಜಿ ಸುರತ್ಕಲ್ ಚಿತ್ರತಂಡ ಉಪಸ್ಥಿತಿ ಇತ್ತು..ರಮೇಶ್ ಅರವಿಂದ್ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರೋ ನಿರ್ದೇಶಕ ಆಕಾಶ್ ಶ್ರೀವತ್ಸ , ಈ ಚಿತ್ರವನ್ನ ನಿರ್ದೇಶನ ಮಾಡಿದ್ರೆ, ಅನೂಪ್ ಗೌಡ ಈ‌ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.ಸದ್ಯ ರಿವೀಲ್ ಆಗಿ ಟೀಸರ್ ನಲ್ಲಿ ರಮೇಶ್ ಅರವಿಂದ್ ಎರಡು ಶೇಡ್ ನಲ್ಲಿ‌ಕಾಣಿಸಿಕೊಂಡಿದ್ದು, ಹೊಸ ಲುಕ್ ನಲಿ ಕಾಣಿಸುತ್ತಾರೆ..ರಂಗಿತರಂಗ ಚಿತ್ರದ ನಾಯಕಿ ರಾಧಿಕಾ ನಾರಾಯಣ್ ರಮೇಶ್ ಅವ್ರ ಪತ್ನಿ ಜನನಿ ಪಾತ್ರದಲ್ಲಿ ಕಾಣ್ತಾರೆ... ದೃಶ್ಯಂ ಚಿತ್ರದಲ್ಲಿ ಆಕ್ಟ್ ಮಾಡಿದ್ದ ಆರೋಹಿ ನಾರಾಯಣ್ ಈ ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣ್ತಾರೆ..
ದ ಕೇಸ್‌ ಆಫ್ ರಣಗಿರಿ ರಹಸ್ಯ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರ, ರಮೇಶ್ ಅರವಿಂದ್ ಸಿನಿಮಾ ಜರ್ನಿಯಲ್ಲಿ ಡಿಫ್ರೆಂಟ್ ಚಿತ್ರ ಆಗಲಿದೆ.Body:ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಗಿದಿದ್ದು, ಡಬ್ಬಿಂಗ್‌ ಕೆಲಸ ಕೊನೆಯ ಹಂತದಲ್ಲಿದೆ. ಬದ್ಮಾಶ್ ಚಿತ್ರದ ನಂತ್ರ, ಆಕಾಶ್‌ ಶ್ರೀವತ್ಸ ಈ‌ ಚಿತ್ರವನ್ನ ನಿರ್ದೇಶಿಸಿದ್ದಾರೆ. ರೇಖಾ ಕೆ.ಎನ್‌ ಮತ್ತು ಅನೂಪ್‌ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತವಿದೆ.ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ. ಅಭಿಜಿತ್‌, ಆಕಾಶ್‌ ಶ್ರೀವತ್ಸ ಚಿತ್ರಕಥೆ ಬರೆದರೆ, ಜಯಂತ್‌ ಕಾಯ್ಕಿಣಿಯವರ ಸಾಹಿತ್ಯವಿದೆ.ಸದ್ಯಕ್ಕೆ ರಮೇಶ್‌ ಅರವಿಂದ್‌ ಈ‌‌ ಡಿಟೆಕ್ಟಿವ್‌ ‌ಪಾತ್ರ ನೋಡಬೇಕು ಅಂದ್ರೆ ಡಿಸೆಂಬರ್ ವರೆಗೂ ಕಾಯಬೇಕು..Conclusion:ರವಿಕುಮಾರ್ ಎಂಕೆ
Last Updated : Sep 11, 2019, 2:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.