ETV Bharat / sitara

ಎಸ್​​​​​​ಪಿಬಿ ಶೀಘ್ರ ಗುಣಮುಖರಾಗಲೆಂದು ಆ.20 ರಂದು ಜಾಗತಿಕ ಪ್ರಾರ್ಥನೆ ಆಯೋಜನೆ

ಕೊರೊನಾ ಸೋಂಕಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್​​​.ಪಿ. ಬಾಲಸುಬ್ರಮಣ್ಯಂ ಆರೋಗ್ಯ ಸುಧಾರಿಸಲೆಂದು ಆಗಸ್ಟ್ 20 ರಂದು ಜಾಗತಿಕ ಪ್ರಾರ್ಥನೆ ಏರ್ಪಡಿಸಲಾಗಿದೆ.

author img

By

Published : Aug 19, 2020, 12:31 PM IST

Prayer for SPB speed recovery
ಎಸ್​​​.ಪಿ. ಬಾಲಸುಬ್ರಮಣ್ಯಂ

ಖ್ಯಾತ ಗಾಯಕ ಎಸ್​​.ಪಿ. ಬಾಲಸುಬ್ರಮಣ್ಯಂ ಕೊರೊನಾ ಸೋಂಕಿಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದ ವಿಚಾರ. ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾದ ಎಸ್​​​​​​ಪಿಬಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Prayer for SPB speed recovery
ಇಳಯ ರಾಜ

ಎಸ್​​​ಪಿಬಿ ಪುತ್ರ ಎಸ್​​​.ಪಿ. ಚರಣ್ ತಮ್ಮ ತಂದೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ ಎಸ್​​​​ಪಿಬಿ ಶೀಘ್ರ ಗುಣಮುಖರಾಗಿ ವಾಪಸ್ ಬರಲೆಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಎಸ್​​​​​ಪಿಬಿ ಅವರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೀಗ ಸಂಗೀತ ನಿರ್ದೇಶನ ಇಳಯರಾಜ, ಎ.ಆರ್​. ರೆಹಮಾನ್​, ನಿರ್ದೇಶಕ ಭಾರತಿರಾಜ, ವೈರಮುತ್ತು, ನಟರಾದ ರಜನಿಕಾಂತ್, ಕಮಲಹಾಸನ್ ಹಾಗೂ ಇನ್ನಿತರ ಗಣ್ಯರು ಎಸ್​​​ಪಿಬಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

Prayer for SPB speed recovery
ಎ. ಆರ್. ರೆಹಮಾನ್

ಆಗಸ್ಟ್​​ 20 ರಂದು ಸಂಜೆ 6 ರಿಂದ 6:05 ವರೆಗೆ 5 ನಿಮಿಷಗಳ ಕಾಲ ಎಸ್​​ಪಿಬಿ ಅವರಿಗಾಗಿ ಜಾಗತಿಕ ಪ್ರಾರ್ಥನೆಯನ್ನು ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಸಿನಿಮಾ ಗಣ್ಯರು, ಸಂಗೀತ ಪ್ರಿಯರು ಹಾಗೂ ಅಭಿಮಾನಿಗಳು ಎಲ್ಲರೂ ಸೇರಿ ಎಸ್​​​​​ಪಿಬಿ ಅವರು ಶೀಘ್ರ ಗುಣಮುಖರಾಗಿ ವಾಪಸ್ ಬರುವಂತೆ ನೀವು ಇರುವ ಸ್ಥಳದಿಂದಲೇ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

ಖ್ಯಾತ ಗಾಯಕ ಎಸ್​​.ಪಿ. ಬಾಲಸುಬ್ರಮಣ್ಯಂ ಕೊರೊನಾ ಸೋಂಕಿಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದ ವಿಚಾರ. ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾದ ಎಸ್​​​​​​ಪಿಬಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Prayer for SPB speed recovery
ಇಳಯ ರಾಜ

ಎಸ್​​​ಪಿಬಿ ಪುತ್ರ ಎಸ್​​​.ಪಿ. ಚರಣ್ ತಮ್ಮ ತಂದೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ ಎಸ್​​​​ಪಿಬಿ ಶೀಘ್ರ ಗುಣಮುಖರಾಗಿ ವಾಪಸ್ ಬರಲೆಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಎಸ್​​​​​ಪಿಬಿ ಅವರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೀಗ ಸಂಗೀತ ನಿರ್ದೇಶನ ಇಳಯರಾಜ, ಎ.ಆರ್​. ರೆಹಮಾನ್​, ನಿರ್ದೇಶಕ ಭಾರತಿರಾಜ, ವೈರಮುತ್ತು, ನಟರಾದ ರಜನಿಕಾಂತ್, ಕಮಲಹಾಸನ್ ಹಾಗೂ ಇನ್ನಿತರ ಗಣ್ಯರು ಎಸ್​​​ಪಿಬಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

Prayer for SPB speed recovery
ಎ. ಆರ್. ರೆಹಮಾನ್

ಆಗಸ್ಟ್​​ 20 ರಂದು ಸಂಜೆ 6 ರಿಂದ 6:05 ವರೆಗೆ 5 ನಿಮಿಷಗಳ ಕಾಲ ಎಸ್​​ಪಿಬಿ ಅವರಿಗಾಗಿ ಜಾಗತಿಕ ಪ್ರಾರ್ಥನೆಯನ್ನು ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಸಿನಿಮಾ ಗಣ್ಯರು, ಸಂಗೀತ ಪ್ರಿಯರು ಹಾಗೂ ಅಭಿಮಾನಿಗಳು ಎಲ್ಲರೂ ಸೇರಿ ಎಸ್​​​​​ಪಿಬಿ ಅವರು ಶೀಘ್ರ ಗುಣಮುಖರಾಗಿ ವಾಪಸ್ ಬರುವಂತೆ ನೀವು ಇರುವ ಸ್ಥಳದಿಂದಲೇ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.