ETV Bharat / sitara

ಸೈಂಟಿಫಿಕ್​ ಥ್ರಿಲ್ಲರ್​ ಚಿತ್ರ 'ನ್ಯೂರಾನ್​' ನೋಡಿದ್ರಾ? ರಿವ್ಯೂ​ ಹೇಗಿದೆ?

author img

By

Published : Nov 22, 2019, 12:36 PM IST

Updated : Nov 22, 2019, 12:41 PM IST

ನ್ಯೂರಾನ್​ ರಿವಿವ್​

ಚೊಚ್ಚಲ ಪ್ರಯತ್ನದಲ್ಲಿ ನಿರ್ದೇಶಕ ವಿಕಾಸ್ ಪುಷ್ಪಗಿರಿ ತಮ್ಮ ತಾಕತ್ತನ್ನು ಚೆನ್ನಾಗಿಯೇ ಪ್ರದರ್ಶನ ಮಾಡಿದ್ದಾರೆ. ಆದರೆ ಕೆಲವು ಅಸಂಬದ್ಧ ವಿಚಾರಗಳಿಗೆ ಅವರು ಅಷ್ಟು ಗಮನ ನೀಡುವ ಅವಶ್ಯಕತೆ ಇರ್ಲಿಲ್ವೇನೋ? ಚಿತ್ರ ಒಂದು ಸೈಂಟಿಫಿಕ್ ಥ್ರಿಲ್ಲರ್ ಎಂದು ನಿರ್ಧರಿಸಿದ ಮೇಲೆ ಖಳನಾಯಕನ ಕ್ರೂರತೆ, ಅದರ ಸುತ್ತ ಸುತ್ತುವ ಪೊಲೀಸ್ ಅಧಿಕಾರಿಯ ಪಾತ್ರಗಳಲ್ಲಿ ಹೊಂದಾಣಿಕೆ ಕಾಣಿಸುತ್ತಿಲ್ಲ. ನಾಯಕ ತನ್ನ ರಿವೆಂಜ್​ಗಾಗಿ ಖಳನಾಯಕನನ್ನು ಹತ್ಯೆ ಮಾಡುತ್ತಾನೆ. ಆದರೆ ಖಳ ನಟನಿಗೆ ಇನ್ನಿತರ ಬರ್ಬರ ವಿಚಾರಗಳು ಬೇಕಾಗಿರಲಿಲ್ಲ.

ನಿರ್ದೇಶಕ ವಿಕಾಸ್ ಪುಷ್ಪಗಿರಿ ಇಂಟರ್ವಲ್‌ನ ನಂತರ ಚಿತ್ರಕಥೆಯನ್ನು ಬಿಗಿ ಮಾಡಿಕೊಂಡಿದ್ದಾರೆ. ನಾಯಕನ ಅಸಹಜ ಗುಣವನ್ನು ತೋರಿಸುತ್ತಾ, ಕ್ಲೈಮ್ಯಾಕ್ಸನ್ನು ಕೊನೆಯವರೆಗೂ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ‘ನ್ಯೂರಾನ್’?

ಮನುಷ್ಯನ ಮೆದುಳಿನಲ್ಲಿ ನ್ಯೂರಾನ್ ಸೆಲ್ಸ್ ವೀಕ್ ಆದಾಗ ಅದು ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರೇಮ ಕಥೆಯೊಂದಿಗೆ ಚಿತ್ರದಲ್ಲಿ ಬೆಸೆಯಲಾಗಿದೆ.

ಕಥೆಯಲ್ಲಿ ಯುವ ಹಾಗೂ ರಶ್ಮಿಕ ಪ್ರೇಮಿಗಳು. ಆದರೆ ಅವರ ಪ್ರೇಮ, ವಿವಾಹಕ್ಕೆ ತಿರುಗುವುದಕ್ಕೂ ಮುನ್ನ ಅವರಿಬ್ಬರೂ ತಮ್ಮ ವೃತ್ತಿಯಲ್ಲಿ ಕೆಲವು ದಿನಗಳ ಕಾಲ ದೂರ ಇರಬೇಕಾಗುತ್ತೆ. ಯುವ ಲಂಡನ್ ಅಲ್ಲಿ ಅಧ್ಯಯನಕ್ಕೆ ತೆರಳುತ್ತಾನೆ, ರಶ್ಮಿಕ ಮೊಬೈಲ್ ಸಿಗದೇ ಇರುವ ಸ್ಥಳದಲ್ಲಿ ವೃದ್ಧಾಶ್ರಮಕ್ಕೆ ಸೇವೆಗೆ ತೆರಳುತ್ತಾಳೆ.

28 ದಿವಸ ಆದ ಮೇಲೆ ಪ್ರೇಮಿಗಳು ಭೇಟಿ ಮಾಡಬೇಕು ಎಂದು ಮೊದಲೇ ನಿಶ್ಚಯವಾಗುತ್ತೆ. ಆದರೆ ರಶ್ಮಿಕ ಕಾಣೆಯಾಗಿದ್ದಾಳೆ. ಲಂಡನ್‌ನಿಂದ ವಾಪಸ್ಸಾದ ಯುವ ಪ್ರೇಯಸಿಯ ಹುಡುಕಾಟದಲ್ಲಿ ಯುವ ತೊಡಗುತ್ತಾನೆ, ಬಳಿಕ ಹತಾಶನಾಗುತ್ತಾನೆ. ನಶೆಗೂ ಗುರಿಯಾಗುತ್ತಾನೆ. ಈ ಸಂದರ್ಭದಲ್ಲಿ ಆತನ ಬಾಳಿನಲ್ಲಿ ಅಂಜಲಿ ಜೋಸೆಫ್, ಡಾ.ಚಾಂದಿನಿ ಆಗಮನ ಆಗುತ್ತದೆ. ಆದರೆ ಅಸಲಿಗೆ ಅದೆಲ್ಲವೂ ಅವನ ಕಪೋಲಕಲ್ಪಿತ ಸನ್ನಿವೇಶಗಳಷ್ಟೇ. ನಾಯಕ ನಿಜಕ್ಕೂ ತೀವ್ರ ಸ್ಕಿಜೋಫ್ರೇನಿಯಾ ಖಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ವಿವರಿಸಲಾಗುವುದು. ಇದರ ಜೊತೆಗೆ ಅವನ ನಶೆ ಅವನನ್ನು ದಿಕ್ಕು ತಪ್ಪಿಸುತ್ತದೆ ಕೂಡಾ. ಯುವ ಆರೋಗ್ಯ ನೋಡಿಕೊಳ್ಳುವ ಡಾ.ಅಶೋಕ್ ಒಂದು ಹಂತದಲ್ಲಿ ಕೆಲವು ಕಟು ಸತ್ಯಗಳನ್ನು ಬಹಿರಂಗ ಮಾಡುತ್ತಾರೆ.

ಯುವ ಹುಡುಕುತ್ತಿದ್ದ ರಶ್ಮಿಕ ಏನಾದಳು? ಯುವನ ಹುಡುಕಾಟದಲ್ಲಿ ಸಫಲವಾಗ್ತಾನಾ? ಅವನ ಖಾಯಿಲೆಗೆ ಮದ್ದು ಸಿಕ್ಕಿತಾ? ಇದನೆಲ್ಲ ನೀವು ಚಿತ್ರ ಮಂದಿರದಲ್ಲಿ ನೋಡಬೇಕು.

ಯುವ ಮೊದಲ ಪ್ರಯತ್ನದಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾನೆ. ಸಂಭಾಷಣೆ ಶೈಲಿಯಲ್ಲಿ ಸರಿಯಾಗಬೇಕು ಅಷ್ಟೇ. ನೇಹ ಪಾಟೀಲ್, ಸೌಂದರ್ಯ, ವೈಷ್ಣವಿ, ಶಿಲ್ಪಾ ಶೆಟ್ಟಿ ಅಭಿನಯದಲ್ಲಿ ಲವಲವಿಕೆ ಕಾಣುತ್ತದೆ. ಜೈ ಜಗದೀಶ್ ವೈದ್ಯರಾಗಿ, ಅರವಿಂದ್ ರಾವ್ ಪೊಲೀಸ್ ಆಗಿ ಮನಸ್ಸಿನಲ್ಲಿ ಉಳಿಯುತ್ತಾರೆ.

ಚಿತ್ರಕ್ಕೆ ಹಿನ್ನೆಲೆ ಸಂಗೀತ ತಕ್ಕ ಮಟ್ಟಿಗಿದೆ. ಛಾಯಾಗ್ರಹಣ ಭೇಷ್! ಅನ್ನಬಹುದು. ಸಂಕಲನದಲ್ಲಿ ಮತ್ತಷ್ಟು ಕತ್ತರಿ ಅಗತ್ಯ ಇತ್ತು.

ಚೊಚ್ಚಲ ಪ್ರಯತ್ನದಲ್ಲಿ ನಿರ್ದೇಶಕ ವಿಕಾಸ್ ಪುಷ್ಪಗಿರಿ ತಮ್ಮ ತಾಕತ್ತನ್ನು ಚೆನ್ನಾಗಿಯೇ ಪ್ರದರ್ಶನ ಮಾಡಿದ್ದಾರೆ. ಆದರೆ ಕೆಲವು ಅಸಂಬದ್ಧ ವಿಚಾರಗಳಿಗೆ ಅವರು ಅಷ್ಟು ಗಮನ ನೀಡುವ ಅವಶ್ಯಕತೆ ಇರ್ಲಿಲ್ವೇನೋ? ಚಿತ್ರ ಒಂದು ಸೈಂಟಿಫಿಕ್ ಥ್ರಿಲ್ಲರ್ ಎಂದು ನಿರ್ಧರಿಸಿದ ಮೇಲೆ ಖಳನಾಯಕನ ಕ್ರೂರತೆ, ಅದರ ಸುತ್ತ ಸುತ್ತುವ ಪೊಲೀಸ್ ಅಧಿಕಾರಿಯ ಪಾತ್ರಗಳಲ್ಲಿ ಹೊಂದಾಣಿಕೆ ಕಾಣಿಸುತ್ತಿಲ್ಲ. ನಾಯಕ ತನ್ನ ರಿವೆಂಜ್​ಗಾಗಿ ಖಳನಾಯಕನನ್ನು ಹತ್ಯೆ ಮಾಡುತ್ತಾನೆ. ಆದರೆ ಖಳ ನಟನಿಗೆ ಇನ್ನಿತರ ಬರ್ಬರ ವಿಚಾರಗಳು ಬೇಕಾಗಿರಲಿಲ್ಲ.

ನಿರ್ದೇಶಕ ವಿಕಾಸ್ ಪುಷ್ಪಗಿರಿ ಇಂಟರ್ವಲ್‌ನ ನಂತರ ಚಿತ್ರಕಥೆಯನ್ನು ಬಿಗಿ ಮಾಡಿಕೊಂಡಿದ್ದಾರೆ. ನಾಯಕನ ಅಸಹಜ ಗುಣವನ್ನು ತೋರಿಸುತ್ತಾ, ಕ್ಲೈಮ್ಯಾಕ್ಸನ್ನು ಕೊನೆಯವರೆಗೂ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ‘ನ್ಯೂರಾನ್’?

ಮನುಷ್ಯನ ಮೆದುಳಿನಲ್ಲಿ ನ್ಯೂರಾನ್ ಸೆಲ್ಸ್ ವೀಕ್ ಆದಾಗ ಅದು ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರೇಮ ಕಥೆಯೊಂದಿಗೆ ಚಿತ್ರದಲ್ಲಿ ಬೆಸೆಯಲಾಗಿದೆ.

ಕಥೆಯಲ್ಲಿ ಯುವ ಹಾಗೂ ರಶ್ಮಿಕ ಪ್ರೇಮಿಗಳು. ಆದರೆ ಅವರ ಪ್ರೇಮ, ವಿವಾಹಕ್ಕೆ ತಿರುಗುವುದಕ್ಕೂ ಮುನ್ನ ಅವರಿಬ್ಬರೂ ತಮ್ಮ ವೃತ್ತಿಯಲ್ಲಿ ಕೆಲವು ದಿನಗಳ ಕಾಲ ದೂರ ಇರಬೇಕಾಗುತ್ತೆ. ಯುವ ಲಂಡನ್ ಅಲ್ಲಿ ಅಧ್ಯಯನಕ್ಕೆ ತೆರಳುತ್ತಾನೆ, ರಶ್ಮಿಕ ಮೊಬೈಲ್ ಸಿಗದೇ ಇರುವ ಸ್ಥಳದಲ್ಲಿ ವೃದ್ಧಾಶ್ರಮಕ್ಕೆ ಸೇವೆಗೆ ತೆರಳುತ್ತಾಳೆ.

28 ದಿವಸ ಆದ ಮೇಲೆ ಪ್ರೇಮಿಗಳು ಭೇಟಿ ಮಾಡಬೇಕು ಎಂದು ಮೊದಲೇ ನಿಶ್ಚಯವಾಗುತ್ತೆ. ಆದರೆ ರಶ್ಮಿಕ ಕಾಣೆಯಾಗಿದ್ದಾಳೆ. ಲಂಡನ್‌ನಿಂದ ವಾಪಸ್ಸಾದ ಯುವ ಪ್ರೇಯಸಿಯ ಹುಡುಕಾಟದಲ್ಲಿ ಯುವ ತೊಡಗುತ್ತಾನೆ, ಬಳಿಕ ಹತಾಶನಾಗುತ್ತಾನೆ. ನಶೆಗೂ ಗುರಿಯಾಗುತ್ತಾನೆ. ಈ ಸಂದರ್ಭದಲ್ಲಿ ಆತನ ಬಾಳಿನಲ್ಲಿ ಅಂಜಲಿ ಜೋಸೆಫ್, ಡಾ.ಚಾಂದಿನಿ ಆಗಮನ ಆಗುತ್ತದೆ. ಆದರೆ ಅಸಲಿಗೆ ಅದೆಲ್ಲವೂ ಅವನ ಕಪೋಲಕಲ್ಪಿತ ಸನ್ನಿವೇಶಗಳಷ್ಟೇ. ನಾಯಕ ನಿಜಕ್ಕೂ ತೀವ್ರ ಸ್ಕಿಜೋಫ್ರೇನಿಯಾ ಖಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ವಿವರಿಸಲಾಗುವುದು. ಇದರ ಜೊತೆಗೆ ಅವನ ನಶೆ ಅವನನ್ನು ದಿಕ್ಕು ತಪ್ಪಿಸುತ್ತದೆ ಕೂಡಾ. ಯುವ ಆರೋಗ್ಯ ನೋಡಿಕೊಳ್ಳುವ ಡಾ.ಅಶೋಕ್ ಒಂದು ಹಂತದಲ್ಲಿ ಕೆಲವು ಕಟು ಸತ್ಯಗಳನ್ನು ಬಹಿರಂಗ ಮಾಡುತ್ತಾರೆ.

ಯುವ ಹುಡುಕುತ್ತಿದ್ದ ರಶ್ಮಿಕ ಏನಾದಳು? ಯುವನ ಹುಡುಕಾಟದಲ್ಲಿ ಸಫಲವಾಗ್ತಾನಾ? ಅವನ ಖಾಯಿಲೆಗೆ ಮದ್ದು ಸಿಕ್ಕಿತಾ? ಇದನೆಲ್ಲ ನೀವು ಚಿತ್ರ ಮಂದಿರದಲ್ಲಿ ನೋಡಬೇಕು.

ಯುವ ಮೊದಲ ಪ್ರಯತ್ನದಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾನೆ. ಸಂಭಾಷಣೆ ಶೈಲಿಯಲ್ಲಿ ಸರಿಯಾಗಬೇಕು ಅಷ್ಟೇ. ನೇಹ ಪಾಟೀಲ್, ಸೌಂದರ್ಯ, ವೈಷ್ಣವಿ, ಶಿಲ್ಪಾ ಶೆಟ್ಟಿ ಅಭಿನಯದಲ್ಲಿ ಲವಲವಿಕೆ ಕಾಣುತ್ತದೆ. ಜೈ ಜಗದೀಶ್ ವೈದ್ಯರಾಗಿ, ಅರವಿಂದ್ ರಾವ್ ಪೊಲೀಸ್ ಆಗಿ ಮನಸ್ಸಿನಲ್ಲಿ ಉಳಿಯುತ್ತಾರೆ.

ಚಿತ್ರಕ್ಕೆ ಹಿನ್ನೆಲೆ ಸಂಗೀತ ತಕ್ಕ ಮಟ್ಟಿಗಿದೆ. ಛಾಯಾಗ್ರಹಣ ಭೇಷ್! ಅನ್ನಬಹುದು. ಸಂಕಲನದಲ್ಲಿ ಮತ್ತಷ್ಟು ಕತ್ತರಿ ಅಗತ್ಯ ಇತ್ತು.

ನ್ಯೂರಾನ್ ಚಿತ್ರ ವಿಮರ್ಶೆ

ನ್ಯೂರಾನ್ – ಮನಸಿನ ತಲ್ಲಣ

ಅವದಿ – 132 ನಿಮಿಷ (2 ಘಂಟೆ 12 ನಿಮಿಷ), ಕ್ಯಾಟಗರಿ – ಸೈನ್ಸ್ ಥ್ರಿಲ್ಲರ್, ರೇಟಿಂಗ್ – 3/5

ಚಿತ್ರ – ನ್ಯೂರಾನ್, ನಿರ್ಮಾಪಕರು – ವಿನಯ್ ಕುಮಾರ್ ವಿ ಆರ್, ನಿರ್ದೇಶನ – ವಿಕಾಸ್ ಪುಷ್ಪಗಿರಿ, ಸಂಗೀತ – ಗುರುಕಿರಣ್, ಛಾಯಾಗ್ರಹಣ – ಶೋಯಬ್ ಅಹ್ಮದ್, ತಾರಾಗಣ – ಯುವ, ನೇಹ ಪಾಟಿಲ್, ವೈಷ್ಣವಿ, ಶಿಲ್ಪಾ ಶೆಟ್ಟಿ, ವರ್ಷ, ಕಭೀರ್ ಸಿಂಗ್ ದುಹಾನ್, ಅರವಿಂದ್ ರಾವ್, ಜೈ ಜಗದೀಶ್, ರಾಕ್ ಲೈನ್ ಸುಧಾಕರ್, ಕಾರ್ತಿಕ್ ಹಾಗೂ ಇತರರು.

ಮೊದಲ ಪ್ರಯತ್ನದಲ್ಲಿ ನಿರ್ದೇಶಕ ವಿಕಾಸ್ ಪುಷ್ಪಗಿರಿ ತಾಕತ್ತನ್ನು ಚನ್ನಾಗಿಯೇನೋ ಪ್ರದರ್ಶನ ಮಾಡಿದ್ದಾರೆ ಆದರೆ ಕೆಲವು ಅಸಂಬದ್ದ ವಿಚಾರಗಳಿಗೆ ಅವರು ನೀಡಿರುವ ಗಮನ ಬೇಕಿರಲಿಲ್ಲ. ಚಿತ್ರ ಒಂದು ಸೈಂಟಿಫಿಕ್ ಥ್ರಿಲ್ಲರ್ ಎಂದು ನಿರ್ಧರಿಸಿದ ಮೇಲೆ ಖಳನ ಕ್ರೂರತೆ, ಅದರ ಸುತ್ತ ಸುತ್ತುವ ಪೊಲೀಸ್ ಅಷ್ಟಾಗಿ ಹೊಂದಾಣಿಕೆ ಆಗುವುದಿಲ್ಲ. ನಾಯಕ ತನ್ನ ರಿವೇಂಜ್ ಅನ್ನು ಖಳ ನಟನನ್ನು ಹತ್ಯೆ ಮಾಡುವುದು ಒ ಕೆ ಆದರೆ ಖಳನ ಇನ್ನಿತರ ಬರ್ಬರ ವಿಚಾರಗಳು ಬೇಕಾಗಿರಲಿಲ್ಲ.

ವಿಕಾಸ್ ಪುಷ್ಪಗಿರಿ ಇಂಟರ್ವಲ್ ನಂತರದ ಚಿತ್ರಕಥೆಯನ್ನು ಬಿಗಿ ಮಾಡಿಕೊಂಡಿದ್ದಾರೆ. ನಾಯಕನ ಅಸಹಜ ಗುಣವನ್ನು ವ್ಯಕ್ತ ಮಾಡುತ್ತಾ ಗುಟ್ಟನ್ನು ಕೊನೆಯವರೆವಿಗೂ ಕಾಪಾಡುತ್ತಾರೆ.

ಏನಿದು ನ್ಯೂರಾನ್’? ಮನುಷ್ಯನ ಮೆದುಳಿನಲ್ಲಿ ನ್ಯೂರಾನ್ ಸೆಲ್ಸ್ ವೀಕ್ ಆದಾಗ ಅದು ಅವನ ಮೇಲೆ ಹೇಗೆ ಪರಿಣಾಮ ಬಿರುತ್ತದೆ ಎಂಬುದನ್ನ ಪ್ರೇಮ ಕಥೆಯೊಂದಿಗೆ ಬೆಸೆಸಿದ್ದಾರೆ ನಿರ್ದೇಶಕರು.

ಯುವ ಹಾಗೂ ರಶ್ಮಿಕ ಪ್ರೇಮಿಗಳು. ಆದರೆ ಅವರ ಪ್ರೇಮ ವಿವಾಹಕ್ಕೆ ತಿರುಗುವುದಕ್ಕೂ ಮುಂಚೆ ಅವರಿಬ್ಬರು ತಮ್ಮ ವೃತ್ತಿಯಲ್ಲಿ ಕೆಲವು ದಿವಸ ದೂರ ಇರ ಬೇಕಾಗುತ್ತದೆ. ಯುವ ಲಂಡನ್ ಅಲ್ಲಿ ಅಧ್ಯಯನಕ್ಕೆ ತೆರಳುತ್ತಾನೆ, ರಶ್ಮಿಕ ಮೊಬೈಲ್ ಸಿಗದೇ ಇರುವ ಸ್ಥಳದಲ್ಲಿ ವೃದ್ದಾಶ್ರಮಕ್ಕೆ ಸೇವೆಗೆ ತೆರಳುತ್ತಾಳೆ.

28 ದಿವಸ ಆದ ಮೇಲೆ ಪ್ರೇಮಿಗಳು ಬೇಟಿ ಮಾಡಬೇಕು ಎಂದು ನಿಶ್ಚಯ ಆಗಿದೆ. ಆದರೆ ರಶ್ಮಿಕ ಕಾಣೆಯಾಗಿದ್ದಾಳೆ. ಲಂಡನ್ ಇಂದ ವಾಪಸ್ಸಾದ ಯುವ ಪ್ರೇಯಸಿಯ ಹುಡುಕಾಟದಲ್ಲಿ ಯುವ ತೊಡಗುತ್ತಾನೆ, ಹತಾಶನಗುತ್ತಾನೆ, ನಷೆಗೆ ಗುರಿಯಾಗುತ್ತಾನೆ. ಆತನ ಬಾಳಿನಲ್ಲಿ ಅಂಜಲಿ ಜೋಸೆಫ್, ಡಾ ಚಾಂದಿನಿ ಆಗಮನ ಆಗುತ್ತದೆ. ಆದರೆ ಅಸಲಿಗೆ ಅದೆಲ್ಲವೂ ಅವನ ಕಪೋಲ ಕಲ್ಪಿತ ಸನ್ನಿವೇಶಗಳು. ನಾಯಕ ನಿಜಕ್ಕೂ ತೀವ್ರ  ಸ್ಕಿಜೋಫ್ರೆನಿಯ ಇಂದ ಬಳಲುತ್ತಿದ್ದಾನೆ ಎಂದು ವಿವರಿಸಲಾಗುವುದು. ಇದರ ಜೊತೆಗೆ ಅವನ ನಶೆ ಅವನನ್ನು ದಿಕ್ಕು ತಪ್ಪಿಸುತ್ತದೆ ಸಹ. ಯುವ ಆರೋಗ್ಯವನ್ನು ನೋಡಿಕೊಳ್ಳುವ ಡಾ ಅಶೋಕ್ ಒಂದು ಹಂತದಲ್ಲಿ ಕೆಲವು ಕಟು ಸತ್ಯಗಳನ್ನು ಬಹಿರಂಗ ಮಾಡುತ್ತಾರೆ.

ಯುವ ಹುಡುಕುತ್ತಿದ್ದ ರಶ್ಮಿಕ ಎನಾದಳು, ಯುವನ ಹುಡುಕಾಟದಲ್ಲಿ ಸಫಲ ಆಗುತ್ತಾನ...ಅವನ ಖಾಯಿಲೆಗೆ ಮದ್ದು ಸಿಕ್ಕಿತ....ಇದನೆಲ್ಲ ನೀವು ಚಿತ್ರ ಮಂದಿರದಲ್ಲಿ ನೋಡಬೇಕು.

ಯುವ ಮೊದಲ ಪ್ರಯತ್ನದಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾನೆ. ಸಂಭಾಷಣೆ ಶೈಲಿಯಲ್ಲಿ ಸರಿಯಾಗಬೇಕು ಅಷ್ಟೇ. ನೇಹ ಪಾಟೀಲ್ ಸೌಂದರ್ಯ, ವೈಷ್ಣವಿ, ಶಿಲ್ಪಾ ಶೆಟ್ಟಿ ಅಭಿನಯದಲ್ಲಿ ಲವಲವಿಕೆ ಇದೆ. ಜೈ ಜಗದೀಶ್ ವೈಧ್ಯರಾಗಿ, ಅರವಿಂದ್ ರಾವ್ ಪೊಲೀಸ್ ಆಗಿ ಗಮನ ಸೆಳೆಯುತ್ತಾರೆ.

ಚಿತ್ರಕ್ಕೆ ಹಿನ್ನಲೆ ಸಂಗೀತ ತಕ್ಕ ಮಟ್ಟಿಗೆ ಇದೆ, ಛಾಯಾಗ್ರಹಣ ಬೇಷ್ ಅನ್ನಬಹುದು. ಸಂಕಲನದಲ್ಲಿ ಮತ್ತಷ್ಟು ಕತ್ತರಿ ಅಗತ್ಯ ಇತ್ತು. 

Last Updated : Nov 22, 2019, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.