ETV Bharat / sitara

ಬಾಹುಬಲಿ, ವೀರ ಮದಕರಿ ಚಿತ್ರಗಳ ಸಂಗೀತ ನಿರ್ದೇಶಕನ ಪುತ್ರ ಈಗ ಹೀರೋ! - ನಾಯಕನಾಗಿ ಕೀರವಾಣಿ ಪುತ್ರ ಶ್ರೀಸಿಂಹ ಟಾಲಿವುಡ್​​​​ ಎಂಟ್ರಿ

ಟಾಲಿವುಡ್​​ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ 'ಮೈತ್ರಿ ಮೂವಿ ಮೇಕರ್ಸ್​' ತಯಾರಿಸುತ್ತಿರುವ 'ಮತ್ತು ವದಲರಾ' ಎಂಬ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಕೀರವಾಣಿ ಪುತ್ರ ಶ್ರೀ ಸಿಂಹ ಕೊಡೂರಿ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.

ಶ್ರೀ ಸಿಂಹ ಕೊಡೂರಿ
author img

By

Published : Oct 23, 2019, 5:59 PM IST

ಸೆಲಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಬರುವುದು ಸುಲಭ. ಆದರೂ ಈ ಸಿನಿಮಾ ಎಂಬ ಮಾಯಾ ಬಜಾರ್​​​ನಲ್ಲಿ ನೆಲೆ ಕಾಣುವುದು ಬಹಳ ಕಷ್ಟದ ಕೆಲಸ. ಇದುವರೆಗೂ ಎಷ್ಟೋ ಸೆಲಬ್ರಿಟಿಗಳ ಮಕ್ಕಳು ನಾಯಕ-ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

sri simha
ಶ್ರೀ ಸಿಂಹ ಕೊಡೂರಿ

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಕಿರಿಯ ಪುತ್ರ ಶ್ರೀ ಸಿಂಹ ಇದೀಗ ನಾಯಕನಾಗಿ ಟಾಲಿವುಡ್​​​ಗೆ ಕಾಲಿಟ್ಟಿದ್ದಾರೆ. ಟಾಲಿವುಡ್​​ನ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ 'ಮೈತ್ರಿ ಮೂವಿ ಮೇಕರ್ಸ್​' ತಯಾರಿಸುತ್ತಿರುವ 'ಮತ್ತು ವದಲರಾ' ಎಂಬ ಚಿತ್ರದ ಮೂಲಕ ಶ್ರೀ ಸಿಂಹ ಕೊಡೂರಿ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಈ ಚಿತ್ರದ ಫಸ್ಟ್ ​​​​ಲುಕ್​ಅನ್ನು ಜ್ಯೂ. ಎನ್​ಟಿಆರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಶುಭ ಕೋರಿದ್ದಾರೆ. ಚಿತ್ರದ ಫಸ್ಟ್​​ ಲುಕ್ ಕೂಡಾ ಬಹಳ ವಿಭಿನ್ನವಾಗಿದೆ. ಖ್ಯಾತ ಗಾಯಕ ಕೀರವಾಣಿ ಮೊದಲ ಪುತ್ರ ಕಾಲಭೈರವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.

ಕೀರವಾಣಿ ತೆಲುಗು, ತಮಿಳು, ಮಲಯಾಳಂ ಜೊತೆಗೆ ಕನ್ನಡದ ಅಳಿಮಯ್ಯ, ಭೈರವ, ಸ್ವಾತಿ, ಅಪ್ಪಾಜಿ, ಕರ್ನಾಟಕ ಸುಪುತ್ರ, ದೀಪಾವಳಿ, ಸುಂದರಕಾಂಡ, ಜಮೀನ್ದಾರ್ರು, ವೀರ ಮದಕರಿ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ತಮ್ಮ ಪುತ್ರನನ್ನು ನಾಯಕನನ್ನಾಗಿ ಟಾಲಿವುಡ್​​​ಗೆ ಪರಿಚಯಿಸುತ್ತಿದ್ದಾರೆ. ರಿತೇಶ್ ರಾಣಾ 'ಮತ್ತು ವದಲರಾ' ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶ್ರೀ ಸಿಂಹ ಟಾಲಿವುಡ್​​​ನಲ್ಲಿ ಹೇಗೆ ನೆಲೆ ನಿಲ್ಲುತ್ತಾರೆ ಕಾದು ನೋಡಬೇಕು.

keeravani
ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ

ಸೆಲಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಬರುವುದು ಸುಲಭ. ಆದರೂ ಈ ಸಿನಿಮಾ ಎಂಬ ಮಾಯಾ ಬಜಾರ್​​​ನಲ್ಲಿ ನೆಲೆ ಕಾಣುವುದು ಬಹಳ ಕಷ್ಟದ ಕೆಲಸ. ಇದುವರೆಗೂ ಎಷ್ಟೋ ಸೆಲಬ್ರಿಟಿಗಳ ಮಕ್ಕಳು ನಾಯಕ-ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

sri simha
ಶ್ರೀ ಸಿಂಹ ಕೊಡೂರಿ

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಕಿರಿಯ ಪುತ್ರ ಶ್ರೀ ಸಿಂಹ ಇದೀಗ ನಾಯಕನಾಗಿ ಟಾಲಿವುಡ್​​​ಗೆ ಕಾಲಿಟ್ಟಿದ್ದಾರೆ. ಟಾಲಿವುಡ್​​ನ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ 'ಮೈತ್ರಿ ಮೂವಿ ಮೇಕರ್ಸ್​' ತಯಾರಿಸುತ್ತಿರುವ 'ಮತ್ತು ವದಲರಾ' ಎಂಬ ಚಿತ್ರದ ಮೂಲಕ ಶ್ರೀ ಸಿಂಹ ಕೊಡೂರಿ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಈ ಚಿತ್ರದ ಫಸ್ಟ್ ​​​​ಲುಕ್​ಅನ್ನು ಜ್ಯೂ. ಎನ್​ಟಿಆರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಶುಭ ಕೋರಿದ್ದಾರೆ. ಚಿತ್ರದ ಫಸ್ಟ್​​ ಲುಕ್ ಕೂಡಾ ಬಹಳ ವಿಭಿನ್ನವಾಗಿದೆ. ಖ್ಯಾತ ಗಾಯಕ ಕೀರವಾಣಿ ಮೊದಲ ಪುತ್ರ ಕಾಲಭೈರವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.

ಕೀರವಾಣಿ ತೆಲುಗು, ತಮಿಳು, ಮಲಯಾಳಂ ಜೊತೆಗೆ ಕನ್ನಡದ ಅಳಿಮಯ್ಯ, ಭೈರವ, ಸ್ವಾತಿ, ಅಪ್ಪಾಜಿ, ಕರ್ನಾಟಕ ಸುಪುತ್ರ, ದೀಪಾವಳಿ, ಸುಂದರಕಾಂಡ, ಜಮೀನ್ದಾರ್ರು, ವೀರ ಮದಕರಿ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ತಮ್ಮ ಪುತ್ರನನ್ನು ನಾಯಕನನ್ನಾಗಿ ಟಾಲಿವುಡ್​​​ಗೆ ಪರಿಚಯಿಸುತ್ತಿದ್ದಾರೆ. ರಿತೇಶ್ ರಾಣಾ 'ಮತ್ತು ವದಲರಾ' ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶ್ರೀ ಸಿಂಹ ಟಾಲಿವುಡ್​​​ನಲ್ಲಿ ಹೇಗೆ ನೆಲೆ ನಿಲ್ಲುತ್ತಾರೆ ಕಾದು ನೋಡಬೇಕು.

keeravani
ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ
Intro:Body:

keeravani son hero


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.