ETV Bharat / sitara

ಶ್ರೀ ಮುರಳಿ ಹುಟ್ಟುಹಬ್ಬಕ್ಕೆ ರಿವೀಲ್ ಆಯ್ತು 'ಮದಗಜ' ಟೀಸರ್​

ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು ಹುಟ್ಟುಹಬ್ಬದ ವಿಶೇಷವಾಗಿ 'ಮದಗಜ' ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಶ್ರೀಮುರಳಿಗೆ ಗಿಫ್ಟ್ ನೀಡಿದೆ.

author img

By

Published : Dec 17, 2020, 10:14 AM IST

Updated : Dec 17, 2020, 11:32 AM IST

Madagaja teaser revealed
'ಮದಗಜ' ಟೀಸರ್​

ಉಗ್ರಂ, ಮಫ್ತಿ, ರಥಾವತಾರ ಸಿನಿಮಾಗಳ ಮೂಲಕ ಸ್ಯಾಂಡಲ್​​​​​ವುಡ್​​​​​​​ನಲ್ಲಿ ಸ್ಟಾರ್ ಡಮ್ ಹೆಚ್ಚಿಸಿಕೊಂಡ ನಟ ಶ್ರೀಮುರಳಿ. ಈ ಸಿನಿಮಾಗಳ ನಂತರ ರೋರಿಂಗ್ ಸ್ಟಾರ್ ಎನಿಸಿಕೊಂಡ ಶ್ರೀಮುರಳಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.39ನೇ ವಸಂತಕ್ಕೆ ಕಾಲಿಟ್ಟಿರುವ ಶ್ರೀಮುರಳಿ, ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ , ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ.ಬದಲಾಗಿ 'ಮದಗಜ' ಚಿತ್ರತಂಡ ಶ್ರೀಮುರಳಿಗೆ ಭರ್ಜರಿ ಗಿಫ್ಟ್ ವೊಂದು ನೀಡಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಸೋನು ಸೂದ್​​ ಇನ್ಮುಂದೆ ವಿಲನ್​​ ಪಾತ್ರ ಮಾಡಲ್ಲ ಅಂದಿದ್ಯಾಕೆ?

'ಮದಗಜ' ಚಿತ್ರತಂಡ ಮೊದಲ ಟೀಸರ್​​​​ ಬಿಡುಗಡೆ ಮಾಡುವ ಮೂಲಕ ಶ್ರೀಮುರಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ 'ಮದಗಜ' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ''ಈ ಪಾಪದ ಪ್ರಪಂಚದಲ್ಲಿ ನಮ್ಮ ಪ್ರಯಾಣ...ಕೊಚ್ಚೆಯಲ್ಲಿ ಹವಾಯ್ ಚಪ್ಪಲಿ ಹಾಕೊಂಡು ನಡೆದಂಗೆ'' ಎಂದು ಆರಂಭವಾಗುವ ಮದಗಜ ಚಿತ್ರದ ಟೀಸರ್ ನೋಡುತ್ತಿದ್ದರೆ, ಇದು ಮತ್ತೊಂದು 'ಉಗ್ರಂ' ಸಿನಿಮಾ ಆಗುವುದರಲ್ಲಿ ಸಂಶಯವೇ ಇಲ್ಲ ಎನ್ನಿಸುತ್ತದೆ. ಶ್ರೀಮುರಳಿ ತಮ್ಮ ಕೈಯಲ್ಲಿ ಸಿಗಾರ್ ಹಿಡಿದುಕೊಂಡು ಫೈಟ್ ಮಾಡುವಾಗ ಹೇಳುವ ಡೈಲಾಗ್ ಪಂಚಿಂಗ್ ಆಗಿದೆ.'ಅಯೋಗ್ಯ' ಸಿನಿಮಾ ಮೂಲಕ ಭರವಸೆ ನಿರ್ದೇಶಕ ಎನಿಸಿಕೊಂಡಿರುವ ಮಹೇಶ್ ಕುಮಾರ್ ಮದಗಜ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ಮದಗಜನ ರಾಣಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಜಗಪತಿ ಬಾಬು ಪ್ರಮುಖ ವಿಲನ್ ಆಗಿದ್ದು ನಟಿ ದೇವಯಾನಿ ಬಹಳ ವರ್ಷಗಳ ಗ್ಯಾಪ್ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣವಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಮದಗಜ ಸಿನಿಮಾ ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

ಶ್ರೀಮುರಳಿಗೆ ಬರ್ತ್​ಡೇ ಶುಭ ಕೋರಿದ ಪ್ರಶಾಂತ್ ನೀಲ್

ಉಗ್ರಂ, ಮಫ್ತಿ, ರಥಾವತಾರ ಸಿನಿಮಾಗಳ ಮೂಲಕ ಸ್ಯಾಂಡಲ್​​​​​ವುಡ್​​​​​​​ನಲ್ಲಿ ಸ್ಟಾರ್ ಡಮ್ ಹೆಚ್ಚಿಸಿಕೊಂಡ ನಟ ಶ್ರೀಮುರಳಿ. ಈ ಸಿನಿಮಾಗಳ ನಂತರ ರೋರಿಂಗ್ ಸ್ಟಾರ್ ಎನಿಸಿಕೊಂಡ ಶ್ರೀಮುರಳಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.39ನೇ ವಸಂತಕ್ಕೆ ಕಾಲಿಟ್ಟಿರುವ ಶ್ರೀಮುರಳಿ, ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ , ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ.ಬದಲಾಗಿ 'ಮದಗಜ' ಚಿತ್ರತಂಡ ಶ್ರೀಮುರಳಿಗೆ ಭರ್ಜರಿ ಗಿಫ್ಟ್ ವೊಂದು ನೀಡಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಸೋನು ಸೂದ್​​ ಇನ್ಮುಂದೆ ವಿಲನ್​​ ಪಾತ್ರ ಮಾಡಲ್ಲ ಅಂದಿದ್ಯಾಕೆ?

'ಮದಗಜ' ಚಿತ್ರತಂಡ ಮೊದಲ ಟೀಸರ್​​​​ ಬಿಡುಗಡೆ ಮಾಡುವ ಮೂಲಕ ಶ್ರೀಮುರಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ 'ಮದಗಜ' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ''ಈ ಪಾಪದ ಪ್ರಪಂಚದಲ್ಲಿ ನಮ್ಮ ಪ್ರಯಾಣ...ಕೊಚ್ಚೆಯಲ್ಲಿ ಹವಾಯ್ ಚಪ್ಪಲಿ ಹಾಕೊಂಡು ನಡೆದಂಗೆ'' ಎಂದು ಆರಂಭವಾಗುವ ಮದಗಜ ಚಿತ್ರದ ಟೀಸರ್ ನೋಡುತ್ತಿದ್ದರೆ, ಇದು ಮತ್ತೊಂದು 'ಉಗ್ರಂ' ಸಿನಿಮಾ ಆಗುವುದರಲ್ಲಿ ಸಂಶಯವೇ ಇಲ್ಲ ಎನ್ನಿಸುತ್ತದೆ. ಶ್ರೀಮುರಳಿ ತಮ್ಮ ಕೈಯಲ್ಲಿ ಸಿಗಾರ್ ಹಿಡಿದುಕೊಂಡು ಫೈಟ್ ಮಾಡುವಾಗ ಹೇಳುವ ಡೈಲಾಗ್ ಪಂಚಿಂಗ್ ಆಗಿದೆ.'ಅಯೋಗ್ಯ' ಸಿನಿಮಾ ಮೂಲಕ ಭರವಸೆ ನಿರ್ದೇಶಕ ಎನಿಸಿಕೊಂಡಿರುವ ಮಹೇಶ್ ಕುಮಾರ್ ಮದಗಜ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ಮದಗಜನ ರಾಣಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಜಗಪತಿ ಬಾಬು ಪ್ರಮುಖ ವಿಲನ್ ಆಗಿದ್ದು ನಟಿ ದೇವಯಾನಿ ಬಹಳ ವರ್ಷಗಳ ಗ್ಯಾಪ್ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣವಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಮದಗಜ ಸಿನಿಮಾ ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

ಶ್ರೀಮುರಳಿಗೆ ಬರ್ತ್​ಡೇ ಶುಭ ಕೋರಿದ ಪ್ರಶಾಂತ್ ನೀಲ್
Last Updated : Dec 17, 2020, 11:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.