ETV Bharat / sitara

ದುರ್ಯೋಧನ - ಭೀಮನ ಗದಾಯುದ್ಧಕ್ಕೆ ಪ್ರೇಕ್ಷಕರಿಂದ ಫುಲ್​ ಮಾರ್ಕ್ಸ್​​

author img

By

Published : Aug 9, 2019, 4:25 PM IST

ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಕುರುಕ್ಷೇತ್ರ ಸಿನಿಮಾಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಡಿ ಬಾಸ್​ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ದುರ್ಯೋಧನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿರುವ, ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ನಿರೀಕ್ಷೆಗೂ ಮೀರಿ ಮೂಡಿ ಬಂದಿದೆ‌.

ದುರ್ಯೋಧನ ಪಾತ್ರಧಾರಿ ದರ್ಶನ್ ಅವರ 50 ನೇ ಸಿನಿಮಾ ಕುರುಕ್ಷೇತ್ರ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದೆ‌‌‌. ಪೌರಾಣಿಕ ಚಿತ್ರವೊಂದನ್ನು ಅಚ್ಚಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ. ಚಿತ್ರದ ಅದ್ಧೂರಿ ಮೇಕಿಂಗ್, ದರ್ಶನ್ ಅವರ ಅಬ್ಬರ 3Dಯಲ್ಲಿ ನೋಡುವುದೇ ಬಲು ಚಂದ. ಕನ್ನಡ ಭಾಷೆಯ ಸೊಗಡು, ಸಂಭಾಷಣೆ, ಹಾಡುಗಳಿಗೆ ಪ್ರೇಕ್ಷಕರ ಸಿಳ್ಳೆ-ಚಪ್ಪಾಳೆಗಳು ಭರಪೂರವಾಗಿ ಕೇಳಿ ಬರುತ್ತಿವೆ. ದಿವಂಗತ ನಟ ಅಂಬರೀಶ್ ಅವರ ಕೊನೆಯ ಚಿತ್ರ ಕುರುಕ್ಷೇತ್ರ ಅಭಿಮಾನಗಳಿಂದ ಫುಲ್ ಮಾರ್ಕ್ಸ್​ ಪಡೆದಿದೆ.

ಕುರುಕ್ಷೇತ್ರ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಫಿದಾ

ಅಂಬಿ ನಟಿಸಿರುವ ಭೀಷ್ಮ ಹಾಗೂ ರವಿಶಂಕರ ಅವರ ಶಕುನಿ ಪಾತ್ರಗಳು ನೋಡುಗರಿಗೆ ಕಿಕ್ ಕೊಡುತ್ತವೆ. ಅಭಿಮನ್ಯುನಾಗಿ ನಿಖಿಲ್ ಪಾತ್ರದ ಜೊತೆಗೆ ಡೈಲಾಗ್ ಡೆಲಿವರಿ ಹಾಗೂ ಯುದ್ಧ ಸನ್ನಿವೇಶದಲ್ಲಿ ಗಮನ ಸೆಳೆಯುತ್ತಾರೆ‌‌. ಕ್ಲೈಮಾಕ್ಸ್​​ನಲ್ಲಿ ಭೀಮ ಪಾತ್ರಧಾರಿ ಡ್ಯಾನಿಶ್ ಅಖ್ತರ್ ಮತ್ತು ದುರ್ಯೋಧನ ದರ್ಶನ್ ಗದಾಯುದ್ಧ ರೋಮಾಂಚನಕಾರಿಯಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿರುವ, ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ನಿರೀಕ್ಷೆಗೂ ಮೀರಿ ಮೂಡಿ ಬಂದಿದೆ‌.

ದುರ್ಯೋಧನ ಪಾತ್ರಧಾರಿ ದರ್ಶನ್ ಅವರ 50 ನೇ ಸಿನಿಮಾ ಕುರುಕ್ಷೇತ್ರ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದೆ‌‌‌. ಪೌರಾಣಿಕ ಚಿತ್ರವೊಂದನ್ನು ಅಚ್ಚಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ. ಚಿತ್ರದ ಅದ್ಧೂರಿ ಮೇಕಿಂಗ್, ದರ್ಶನ್ ಅವರ ಅಬ್ಬರ 3Dಯಲ್ಲಿ ನೋಡುವುದೇ ಬಲು ಚಂದ. ಕನ್ನಡ ಭಾಷೆಯ ಸೊಗಡು, ಸಂಭಾಷಣೆ, ಹಾಡುಗಳಿಗೆ ಪ್ರೇಕ್ಷಕರ ಸಿಳ್ಳೆ-ಚಪ್ಪಾಳೆಗಳು ಭರಪೂರವಾಗಿ ಕೇಳಿ ಬರುತ್ತಿವೆ. ದಿವಂಗತ ನಟ ಅಂಬರೀಶ್ ಅವರ ಕೊನೆಯ ಚಿತ್ರ ಕುರುಕ್ಷೇತ್ರ ಅಭಿಮಾನಗಳಿಂದ ಫುಲ್ ಮಾರ್ಕ್ಸ್​ ಪಡೆದಿದೆ.

ಕುರುಕ್ಷೇತ್ರ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಫಿದಾ

ಅಂಬಿ ನಟಿಸಿರುವ ಭೀಷ್ಮ ಹಾಗೂ ರವಿಶಂಕರ ಅವರ ಶಕುನಿ ಪಾತ್ರಗಳು ನೋಡುಗರಿಗೆ ಕಿಕ್ ಕೊಡುತ್ತವೆ. ಅಭಿಮನ್ಯುನಾಗಿ ನಿಖಿಲ್ ಪಾತ್ರದ ಜೊತೆಗೆ ಡೈಲಾಗ್ ಡೆಲಿವರಿ ಹಾಗೂ ಯುದ್ಧ ಸನ್ನಿವೇಶದಲ್ಲಿ ಗಮನ ಸೆಳೆಯುತ್ತಾರೆ‌‌. ಕ್ಲೈಮಾಕ್ಸ್​​ನಲ್ಲಿ ಭೀಮ ಪಾತ್ರಧಾರಿ ಡ್ಯಾನಿಶ್ ಅಖ್ತರ್ ಮತ್ತು ದುರ್ಯೋಧನ ದರ್ಶನ್ ಗದಾಯುದ್ಧ ರೋಮಾಂಚನಕಾರಿಯಾಗಿದೆ.

Intro:ಕುರುಕ್ಷೇತ್ರ ಸಿನಿಮಾ‌ ನೋಡಿ ಥ್ರಿಲ್ ಆದ ಪ್ರೇಕ್ಷಕರು! ದುರ್ಯೋಧನ ಮತ್ತು ಭೀಮನ ಗದಾಯುದ್ಧ ಸೂಪರ್!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರೋ ಹಾಗು ದೊಡ್ಡ ತಾರ ಬಳಗವಿರುವ,ಕುರುಕ್ಷೇತ್ರ ಸಿನಿಮಾ ಎಲ್ಲರ ನಿರೀಕ್ಷೆಗಳನ್ನೂ ತಲೆಕೆಳಗೆ ಮಾಡುವಷ್ಟು ಅದ್ದೂರಿಯಾಗಿ ಮೂಡಿ ಬಂದಿದೆ‌..ಕುರುಕ್ಷೇತ್ರ ಸಿನಿಮಾ ಹೇಗಿರುತ್ತೆ ಅಂತಾ, ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ನಿಜಕ್ಕೂ ರಸದೌತಣ ಉಣಬಡಿಸಲಿದೆ‌‌‌..3.15 ಗಂಟೆ ಇರುವ ಕುರುಕ್ಷೇತ್ರ ಸಿನಿಮಾ, ಪ್ರತಿಯೊಂದು ಡಿಪಾರ್ಟ್‌ಮೆಂಟ್ ಸಹ ಅಚ್ಚುಕಟ್ಟಾಗಿ ಕೆಲಸ ಮಾಡಿರುವುದನ್ನು ಸಿನಿಮಾದಲ್ಲಿ ಎದ್ದು ಕಾಣುತ್ತೆ‌‌..ಚಿತ್ರದ ಅದ್ದೂರಿ ಮೇಕಿಂಗ್, 3Dಯಲ್ಲಿ ನೋಡುವ ಎಫೆಕ್ಟ್‌,ಕನ್ನಡ ಭಾಷೆಯ ಸೊಗಡು,ಸಂಭಾಷಣೆ, ಹಾಡುಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ..ಅಂಬರೀಷ್ ಕೊನೆ ಚಿತ್ರವಾದ ಕುರುಕ್ಷೇತ್ರ, ಚಿತ್ರ ಭೀಷ್ಮನಾಗಿ ಗಮನ ಸೆಳೆಯುತ್ತಾರೆ.. ರವಿಶಂಕರ ಶಕುನಿ ಪಾತ್ರ ನೋಡುಗರಿಗೆ ಕಿಕ್ ಕೊಡುತ್ತೆ..ಅಭಿಮನ್ಯುನಾಗಿ ನಿಖಿಲ್ ಬಹಳ ಚೆನ್ನಾಗಿ ಪಾತ್ರದ ಜೊತೆಗೆ ಡೈಲಾಗ್ ಡೆಲಿವರಿ ಹಾಗೂ ಯುದ್ದ ಸನ್ನಿವೇಶದಲ್ಲಿ ಗಮನ ಸೆಳೆಯುತ್ತಾರೆ‌‌..Body:ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರಗಳಿಗೆ ತುಂಬಾ ಸ್ಕೋಪ್ ಇದೆ.ಇನ್ನು ಕ್ಲೈಮಾಕ್ಸ್ ನಲ್ಲಿ ಭೀಮ ಡ್ಯಾನಿಶ್ ಅಖ್ತರ್ ಮತ್ತು ದುರ್ಯೋಧನ ದರ್ಶನ್ ಕಾಳಗ ಮಾತ್ರ ನೋಡುಗರ ರೋಮಾಂಚಕಾರಿಯಾಗಿದೆ..3D ಎಫೆಕ್ಟ್ ಲ್ಲಿ ಕುರು ಸಿನಿಮಾ‌‌ ನೋಡಿ ಬಂದ ಸಿನಿಮಾ ಪ್ರಿಯರು‌ ,ಕುರುಕ್ಷೇತ್ರ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ..

ವಾಕ್ಸ್ ಪಾಪ್ Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.