ETV Bharat / sitara

ಗಣೇಶ್ ಬಾಬುರ ರೊಮ್ಯಾಂಟಿಕ್ ಎಂಟರ್‌ಟೈನರ್‌ನಲ್ಲಿ ಕವಿನ್, ಅಪರ್ಣಾ ದಾಸ್ - ಗಣೇಶ್ ಬಾಬು ಅವರ ರೊಮ್ಯಾಂಟಿಕ್ ಎಂಟರ್‌ಟೈನರ್‌ನಲ್ಲಿ ಕವಿನ್ ನಟನೆ

ಗಣೇಶ್ ಬಾಬು ಅವರ ರೊಮ್ಯಾಂಟಿಕ್ ಎಂಟರ್‌ಟೈನರ್‌ನಲ್ಲಿ ಕವಿನ್, ಅಪರ್ಣಾ ದಾಸ್ ನಾಯಕರಾಗಿ ನಟಿಸುತ್ತಿದ್ದಾರೆ. ಒಲಿಂಪಿಯಾ ಮೂವೀಸ್‌ನ ಎಸ್. ಅಂಬೆತ್ ಕುಮಾರ್ ನಿರ್ಮಿಸಲಿರುವ ಈ ಚಿತ್ರವು ಸಮಕಾಲೀನ ಕಾಲದಲ್ಲಿ ನಡೆಯುವ 'ಭಾವನಾತ್ಮಕ ಪ್ರೇಮಕಥೆ'ಯಾಗಿದೆ.

Kavin, Aparna Das
ಕವಿನ್, ಅಪರ್ಣಾ ದಾಸ್
author img

By

Published : Mar 7, 2022, 9:02 AM IST

ಚೆನ್ನೈ(ತಮಿಳುನಾಡು): ಗಣೇಶ್ ಕೆ. ಬಾಬು ಅವರ ಚೊಚ್ಚಲ ಚಿತ್ರದಲ್ಲಿ ಕವಿನ್ ಮತ್ತು ಅಪರ್ಣಾ ದಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ತಾತ್ಕಾಲಿಕವಾಗಿ ಆ ಚಿತ್ರಕ್ಕೆ "ಪ್ರೊಡಕ್ಷನ್ ನಂಬರ್ 4" ಎಂದು ಹೆಸರಿಡಲಾಗಿದೆ.

ಒಲಿಂಪಿಯಾ ಮೂವೀಸ್‌ನ ಎಸ್. ಅಂಬೆತ್ ಕುಮಾರ್ ನಿರ್ಮಿಸಲಿರುವ ಈ ಚಿತ್ರವು ಸಮಕಾಲೀನ ಕಾಲದಲ್ಲಿ ನಡೆಯುವ 'ಭಾವನಾತ್ಮಕ ಪ್ರೇಮಕಥೆ'ಯಾಗಿದೆ. ಜತೆಗೆ ವಿನೋದ್​​ ಮತ್ತು ಮನರಂಜನೆಯ ಅಂಶಗಳನ್ನು ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿರುವ ಗಣೇಶ್​​ ಬಾಬು, ಕಮಲ್ ಹಾಸನ್ ಅಭಿನಯದ "ಕದರಂ ಕೊಂಡನ್" ಚಿತ್ರಕ್ಕೆ ಹೆಸರುವಾಸಿಯಾದ ನಿರ್ದೇಶಕ ರಾಜೇಶ್ ಎಂ. ಸೆಲ್ವಾ ಅವರ ಮಾಜಿ ಸಹವರ್ತಿ.

ನಿರ್ಮಾಪಕನಾಗಿರುವುದಕ್ಕಿಂತ ಹೆಚ್ಚಾಗಿ, ನಾನು ಯಾವಾಗಲೂ ಕಂಟೆಂಟ್ ಚಾಲಿತ ಕಥೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಚಿತ್ರ ನಿರ್ಮಾಪಕ ಗಣೇಶ್ ಕೆ ಬಾಬು ಸ್ಕ್ರಿಪ್ಟ್ ನ್ನು ನಿರೂಪಿಸಿದಾಗ ನಾನು ತುಂಬಾ ಪ್ರಭಾವಿತನಾಗಿದ್ದೆ. "ಕವಿನ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಅವರ ಉಪಸ್ಥಿತಿ, ಗಣೇಶ್ ಅವರ ಅದ್ಭುತ ಚಿತ್ರಕಥೆ ಸಿನಿಮಾದ ಮೌಲ್ಯವನ್ನು ಹೆಚ್ಚಿಸಲಿದೆ" ಎಂದು ಅಂಬೆತ್ ಕುಮಾರ್ ಹೇಳಿದರು.

ಈಗಷ್ಟೇ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಇಡೀ ಪ್ರಾಜೆಕ್ಟ್ ಚೆನ್ನೈ ಮತ್ತು ಸುತ್ತಮುತ್ತ ಚಿತ್ರೀಕರಣಗೊಳ್ಳಲಿದೆ. ಕವಿನ್ ಮತ್ತು ಅಪರ್ಣಾ ದಾಸ್ ಅವರಲ್ಲದೇ, "ಮೊದಲು ನೀ ಮುದಿವುಂ ನೀ" ಖ್ಯಾತಿಯ ಹರೀಶ್ ಮತ್ತು "ವಾಝ್" ಖ್ಯಾತಿಯ ಪ್ರದೀಪ್ ಆಂಟೋನಿ ತಾರಾಗಣದಲ್ಲಿದ್ದಾರೆ. ಎಜಿಲ್ ಅರಸು ಕೆ. ಛಾಯಾಗ್ರಹಣ ನಿರ್ದೇಶನವಿರುವ ಈ ಚಿತ್ರಕ್ಕೆ ಜೆನ್ ಮಾರ್ಟಿನ್ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ಆರ್ಯನ್ ಸಂತೋಷ್ ನಟನೆಯ 'ಡಿಯರ್‌ ಸತ್ಯ' ರಿಲೀಸ್ ಡೇಟ್‌ ಫಿಕ್ಸ್‌; ಟ್ರೇಲರ್‌ಗೆ ಶ್ರೀಮುರಳಿ ಮೆಚ್ಚುಗೆ

ಚೆನ್ನೈ(ತಮಿಳುನಾಡು): ಗಣೇಶ್ ಕೆ. ಬಾಬು ಅವರ ಚೊಚ್ಚಲ ಚಿತ್ರದಲ್ಲಿ ಕವಿನ್ ಮತ್ತು ಅಪರ್ಣಾ ದಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ತಾತ್ಕಾಲಿಕವಾಗಿ ಆ ಚಿತ್ರಕ್ಕೆ "ಪ್ರೊಡಕ್ಷನ್ ನಂಬರ್ 4" ಎಂದು ಹೆಸರಿಡಲಾಗಿದೆ.

ಒಲಿಂಪಿಯಾ ಮೂವೀಸ್‌ನ ಎಸ್. ಅಂಬೆತ್ ಕುಮಾರ್ ನಿರ್ಮಿಸಲಿರುವ ಈ ಚಿತ್ರವು ಸಮಕಾಲೀನ ಕಾಲದಲ್ಲಿ ನಡೆಯುವ 'ಭಾವನಾತ್ಮಕ ಪ್ರೇಮಕಥೆ'ಯಾಗಿದೆ. ಜತೆಗೆ ವಿನೋದ್​​ ಮತ್ತು ಮನರಂಜನೆಯ ಅಂಶಗಳನ್ನು ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿರುವ ಗಣೇಶ್​​ ಬಾಬು, ಕಮಲ್ ಹಾಸನ್ ಅಭಿನಯದ "ಕದರಂ ಕೊಂಡನ್" ಚಿತ್ರಕ್ಕೆ ಹೆಸರುವಾಸಿಯಾದ ನಿರ್ದೇಶಕ ರಾಜೇಶ್ ಎಂ. ಸೆಲ್ವಾ ಅವರ ಮಾಜಿ ಸಹವರ್ತಿ.

ನಿರ್ಮಾಪಕನಾಗಿರುವುದಕ್ಕಿಂತ ಹೆಚ್ಚಾಗಿ, ನಾನು ಯಾವಾಗಲೂ ಕಂಟೆಂಟ್ ಚಾಲಿತ ಕಥೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಚಿತ್ರ ನಿರ್ಮಾಪಕ ಗಣೇಶ್ ಕೆ ಬಾಬು ಸ್ಕ್ರಿಪ್ಟ್ ನ್ನು ನಿರೂಪಿಸಿದಾಗ ನಾನು ತುಂಬಾ ಪ್ರಭಾವಿತನಾಗಿದ್ದೆ. "ಕವಿನ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಅವರ ಉಪಸ್ಥಿತಿ, ಗಣೇಶ್ ಅವರ ಅದ್ಭುತ ಚಿತ್ರಕಥೆ ಸಿನಿಮಾದ ಮೌಲ್ಯವನ್ನು ಹೆಚ್ಚಿಸಲಿದೆ" ಎಂದು ಅಂಬೆತ್ ಕುಮಾರ್ ಹೇಳಿದರು.

ಈಗಷ್ಟೇ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಇಡೀ ಪ್ರಾಜೆಕ್ಟ್ ಚೆನ್ನೈ ಮತ್ತು ಸುತ್ತಮುತ್ತ ಚಿತ್ರೀಕರಣಗೊಳ್ಳಲಿದೆ. ಕವಿನ್ ಮತ್ತು ಅಪರ್ಣಾ ದಾಸ್ ಅವರಲ್ಲದೇ, "ಮೊದಲು ನೀ ಮುದಿವುಂ ನೀ" ಖ್ಯಾತಿಯ ಹರೀಶ್ ಮತ್ತು "ವಾಝ್" ಖ್ಯಾತಿಯ ಪ್ರದೀಪ್ ಆಂಟೋನಿ ತಾರಾಗಣದಲ್ಲಿದ್ದಾರೆ. ಎಜಿಲ್ ಅರಸು ಕೆ. ಛಾಯಾಗ್ರಹಣ ನಿರ್ದೇಶನವಿರುವ ಈ ಚಿತ್ರಕ್ಕೆ ಜೆನ್ ಮಾರ್ಟಿನ್ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ಆರ್ಯನ್ ಸಂತೋಷ್ ನಟನೆಯ 'ಡಿಯರ್‌ ಸತ್ಯ' ರಿಲೀಸ್ ಡೇಟ್‌ ಫಿಕ್ಸ್‌; ಟ್ರೇಲರ್‌ಗೆ ಶ್ರೀಮುರಳಿ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.