ETV Bharat / sitara

ತಮ್ಮ ಗುರುಗಳ ಮಗನ ಸಿನಿಮಾಕ್ಕೆ ಶುಭ ಹಾರೈಸಿದ ರಿಯಲ್​ ಸ್ಟಾರ್​​ ಉಪೇಂದ್ರ

ಕಾಶಿನಾಥ್ ಪುತ್ರ ಅಭಿಮನ್ಯು 'ಬಾಜಿ' ಚಿತ್ರದ ನಂತರ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ರು. ಈಗ ಮತ್ತೆ ಅವರು ಬಣ್ಣ ಹಚ್ಚಿದ್ದು, ಚಿತ್ರದ ಟೈಟಲ್ ಪೊಸ್ಟರ್ ​​ಅನ್ನು ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿದ್ದಾರೆ.

author img

By

Published : Oct 27, 2019, 4:30 PM IST

ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ ಟೈಟಲ್​​​ ಬಿಡುಗಡೆ

ಸ್ಯಾಂಡಲ್​​ವುಡ್​​ನ‌ ಟ್ರೆಂಡ್ ಸೆಟ್ಟರ್ ನಟ ಹಾಗು ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು 'ಬಾಜಿ' ಚಿತ್ರದ ನಂತರ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು. ಈಗ ಮತ್ತೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಹೊಸ ಚಿತ್ರದ ಟೈಟಲ್ ಪೊಸ್ಟರ್​ ​ಅನ್ನು ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿ ತಮ್ಮ ಗುರುಗಳ ಮಗನ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

ಅಭಿಮನ್ಯು ನಟಿಸ್ತಿರುವ ಈ ಚಿತ್ರಕ್ಕೆ 'ಎಲ್ಲಿಗೆ ಪಯಣ ಯಾವುದೋ ದಾರಿ' ಎಂಬ ಕುತೂಹಲಭರಿತ ಟೈಟಲ್ ಇಡಲಾಗಿದೆ. ಈ ಟೈಟಲ್​​​​ಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗದಲ್ಲಿ ಕಾಶಿನಾಥ್ ಟ್ರೆಂಡ್ ಸೆಟ್ಟರ್ ಆಗಿದ್ರು. ಈಗ ಅವರ ಜಾಗಕ್ಕೆ ಮಗ ಅಭಿಮನ್ಯು ಬಂದಿದ್ದಾನೆ. ಅಭಿಮನ್ಯುವಿಗೆ ಜವಾಬ್ದಾರಿ ಜಾಸ್ತಿ ಇದೆ. ಅಪ್ಪನ ಹೆಸರು ಉಳಿಸುವ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದ್ರು.

ತಮ್ಮ ಗುರುಗಳ ಮಗನ ಸಿನಿಮಾಕ್ಕೆ ಶುಭ ಹಾರೈಸಿದ ರಿಯಲ್​ ಸ್ಟಾರ್​​ ಉಪೇಂದ್ರ

ಇನ್ನೂ ಈ ಚಿತ್ರಕ್ಕೆ, 'ದೇವಕಿ' ಹಾಗೂ 'ಮಮ್ಮಿ' ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ಸೂರ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಚಿಕ್ಕಮಗಳೂರಿನ ಹುಡುಗಿ ಸ್ಪೂರ್ತಿ ಆಯ್ಕೆ ಆಗಿದ್ದಾರೆ. ನವಂಬರ್ ಅಂತ್ಯದಲ್ಲಿ ಶೂಟಿಂಗ್ ಶುರು ಮಾಡಲು ನಿರ್ದೇಶಕ ಕಿರಣ್ ಸೂರ್ಯ ಪ್ಲಾನ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್​​ವುಡ್​​ನ‌ ಟ್ರೆಂಡ್ ಸೆಟ್ಟರ್ ನಟ ಹಾಗು ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು 'ಬಾಜಿ' ಚಿತ್ರದ ನಂತರ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು. ಈಗ ಮತ್ತೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಹೊಸ ಚಿತ್ರದ ಟೈಟಲ್ ಪೊಸ್ಟರ್​ ​ಅನ್ನು ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿ ತಮ್ಮ ಗುರುಗಳ ಮಗನ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

ಅಭಿಮನ್ಯು ನಟಿಸ್ತಿರುವ ಈ ಚಿತ್ರಕ್ಕೆ 'ಎಲ್ಲಿಗೆ ಪಯಣ ಯಾವುದೋ ದಾರಿ' ಎಂಬ ಕುತೂಹಲಭರಿತ ಟೈಟಲ್ ಇಡಲಾಗಿದೆ. ಈ ಟೈಟಲ್​​​​ಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗದಲ್ಲಿ ಕಾಶಿನಾಥ್ ಟ್ರೆಂಡ್ ಸೆಟ್ಟರ್ ಆಗಿದ್ರು. ಈಗ ಅವರ ಜಾಗಕ್ಕೆ ಮಗ ಅಭಿಮನ್ಯು ಬಂದಿದ್ದಾನೆ. ಅಭಿಮನ್ಯುವಿಗೆ ಜವಾಬ್ದಾರಿ ಜಾಸ್ತಿ ಇದೆ. ಅಪ್ಪನ ಹೆಸರು ಉಳಿಸುವ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದ್ರು.

ತಮ್ಮ ಗುರುಗಳ ಮಗನ ಸಿನಿಮಾಕ್ಕೆ ಶುಭ ಹಾರೈಸಿದ ರಿಯಲ್​ ಸ್ಟಾರ್​​ ಉಪೇಂದ್ರ

ಇನ್ನೂ ಈ ಚಿತ್ರಕ್ಕೆ, 'ದೇವಕಿ' ಹಾಗೂ 'ಮಮ್ಮಿ' ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ಸೂರ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಚಿಕ್ಕಮಗಳೂರಿನ ಹುಡುಗಿ ಸ್ಪೂರ್ತಿ ಆಯ್ಕೆ ಆಗಿದ್ದಾರೆ. ನವಂಬರ್ ಅಂತ್ಯದಲ್ಲಿ ಶೂಟಿಂಗ್ ಶುರು ಮಾಡಲು ನಿರ್ದೇಶಕ ಕಿರಣ್ ಸೂರ್ಯ ಪ್ಲಾನ್ ಮಾಡಿಕೊಂಡಿದ್ದಾರೆ.

Intro:ಸ್ಯಾಂಡಲ್ ವುಡ್ ನ‌ ಟ್ರೆಂಡ್ ಸೆಟ್ಟರ್ ನಟ ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು "ಬಾಜಿ" ಚಿತ್ರದ ನಂತರ ಚಿತ್ರರಂಗದಿಂದ ಸ್ವಲ್ಪ ದೂರನೆ ಉಳಿದಿದ್ರು. ಈಗ ಮತ್ತೆ ಅಭಿಮನ್ಯು " ಮತ್ತೊಂದು ಚಿತ್ರದಲ್ಲಿ ನಟಿಸ್ತಿದ್ದು. ಚಿತ್ರದ ಟೈಟಲ್ ಪೊಸ್ಟರ್ ಅನ್ನು ಇಂದು ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿ ತಮ್ಮ ಗುರುಗಳ ಮಗನ ಹೊಸ ಚಿತ್ರಕ್ಕೆ ಶುಭಹಾರೈಸಿದ್ರು.


Body:ಅಭಿಮನ್ಯು ನಟಿಸ್ತಿರುವ ಈ ಚಿತ್ರಕದಕೆ " ಎಲ್ಲಗೆ ಪಯಣ ಯಾವುದೋದಾರಿ" ಎಂಬ ಕುತೂಹಲ ಭರಿತ ಟೈಟಲ್ ಇಟ್ಟಿದ್ದು.ಈ ಟೈಟಲ್ ಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಕಾಶಿನಾಥ್ ಅವರು ಟ್ರೆಂಡ್ ಸೆಟ್ಟರ್ ಆಗಿದ್ರು.ಈಗ ಅವರ ಜಾಗಕ್ಕೆ ಅವರ ಮಗ ಅಭಿಮನ್ಯು ಬಂದಿದ್ದಾನೆ.ಈಗ ಅಭಿಮನ್ಯುವಿಗೆ ಜವಾಬ್ದಾರಿ ಜಾಸ್ತಿ ಇದೆ ಅಪ್ಪನ ಹೆಸರು ಉಳಿಸುವ ಕೆಲಸ ಮಾಡಬೇಕಿದೆ.ಅಲ್ಲದೆ ಚಿತ್ರದ ಟೈಟಲ್ ತುಂಭಾ ವಿಭಿನ್ನವಾಗಿದೆ‌.ಟೈಟಲ್ ರೀತಿಯೆ ಈ ಚಿತ್ರವೂ ಅದ್ಬುತವಾಗಿ ಮೂಡಿ ಬರಲಿ ಎಂದು ಉಪೇಂದ್ರ " ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರತಂಡಕ್ಕೆ ಶುಭಹಾರೈಸಿದ್ರು.
ಇನ್ನೂ ಈ ಚಿತ್ರದಲ್ಲಿ ಕಥೆ ಸಾಮಾನ್ಯವಾಗಿದ್ರು ಕ್ಯಾರೆಕ್ಟರೈಜೇಷನ್ ತುಂಬಾ ಅದ್ಬುತವಾಗಿದೆ, ಅಲ್ಲದೆ ಈ ಟೀಂ ತುಂಭಾ ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದು .ಏನಾದರು ಹೊಸದೊಂದು ಕೊಡಬೇಕೆಂಬ ಹಂಬಲವಿದೆ ಆ ಕಾರಣಕ್ಕೆ ಈ ಚಿತ್ರ ನಾನು ಒಪ್ಪಿ ಕೊಂಡೆ.ಅಲ್ಲದೆ ಇಂದು ನಮ್ಮ ಚಿತ್ರದ ಟೈಟಲ್ ಅನ್ನು ಉಪ್ಪಿ ಸರ್ ಅವರ ಬ್ಯುಸಿ ಶೆಡ್ಯೂಲ್ ನಲ್ಲೂ ಫ್ರೀ ಮಾಡಿಕೊಂಡು ಲಾಂಚ್ ಮಾಡಿಕೊಟ್ಟಿದ್ದಾರೆ.ದಯವಿಟ್ಟು ಕನ್ನಡಿಗರು ನಮ್ಮ ಸಿನಿಮಾವನ್ನು ಪ್ರೀತಿಸಿ ಪ್ರೋತ್ಸಾಹಿಸಿ ಎಂದು ಅಭಿಮನ್ಯು ಮನವಿ ಮಾಡಿದರು.ಇನ್ನೂ ಈ ಚಿತ್ರವನ್ನು ,ದೇವಕಿ ಹಾಗೂ ಮಮ್ಮಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ಸೂರ್ಯ ಆಕ್ಷನ್ ಕಟ್ ಹೇಳ್ತಿದ್ದು, ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ನಾಯಕಿಯಾಗಿ ಚಿಕ್ಕಮಗಳೂರಿನ ಹುಡುಗಿ ಸ್ಪೂರ್ತಿ ನಟಿಸಲಿದ್ದು‌,ನವಂಬರ್ ಅಂತ್ಯದಲ್ಲಿ ಚಿತ್ರದ ಶೂಟಿಂಗ್ ಶುರು ಮಾಡಲು ನಿರ್ದೇಶಕ ಕಿರಣ್ ಸೂರ್ಯ ಪ್ಲಾನ್ ಮಾಡಿ ಕೊಂಡಿದ್ದಾರೆ.

ಸತೀಶ ಎಂಬಿ


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.