ETV Bharat / sitara

5 ವರ್ಷಗಳ ಬಳಿಕ ಆ್ಯಕ್ಷನ್ ಕಟ್ ಹೇಳಲು ಮುಂದಾದ ಕರಣ್ ಜೋಹರ್.. ಕೆಜೋ ಹೊಸ ಚಿತ್ರ ಯಾವುದು ಗೊತ್ತಾ?

'ರಾಕಿ ಔರ್ ರಾಣಿ ಕೇ ಪ್ರೇಮ್ ಕಹಾನಿ' ಈ ಚಿತ್ರದಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಆಜ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಈ ಪೈಕಿ ರಣವೀರ್ ಸಿಂಗ್​ನ ಅಜ್ಜಿಯಾಗಿ ಜಯಾ ಬಚ್ಚನ್ ನಟಿಸಿದರೆ, ಆಲಿಯಾಳ ಅಜ್ಜ-ಅಜ್ಜಿಯಾಗಿ ಧರ್ಮೇಂದ್ರ ಮತ್ತು ಶಬಾನಾ ಆಜ್ಮಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗ್ತಿದೆ..

author img

By

Published : Jul 7, 2021, 11:44 AM IST

Updated : Jul 7, 2021, 4:03 PM IST

Karan Johar back to direction after five years
ಕರಣ್ ಜೋಹರ್

ರಣಬೀರ್ ಕಪೂರ್ ನಟನೆಯ 'ಏ ದಿಲ್ ಹೇ ಮುಷ್ಕಿಲ್' ಚಿತ್ರ ನಿರ್ದೇಶಿಸಿದ್ದೇ ಕೊನೆ, ಆ ನಂತರ ಚಿತ್ರ ನಿರ್ದೇಶನದಿಂದ ದೂರವೇ ಉಳಿದುಬಿಟ್ಟಿದ್ದರು ಕರಣ್ ಜೋಹರ್. ಇದಕ್ಕೆ ಆ ಚಿತ್ರ ಫ್ಲಾಪ್​ ಆಗಿದ್ದು ಒಂದು ಕಾರಣವಾದರೆ, ಧರ್ಮ ಪ್ರೊಡಕ್ಷನ್ಸ್ ಮೂಲಕ ಸತತವಾಗಿ ನಿರ್ಮಾಣದಲ್ಲೇ ತೊಡಗಿಸಿಕೊಂಡಿದ್ದು ಇನ್ನೊಂದು ಕಾರಣ. ಹಾಗಾಗಿ, ಚಿತ್ರ ನಿರ್ದೇಶನಕ್ಕೊಂದು ತಾತ್ಕಾಲಿಕ ವಿರಾಮ ಕೊಟ್ಟಿದ್ದರು ಕರಣ್.

ಇದೀಗ ಲಾಕ್ಡೌನ್​ ಮುಗಿಯುತ್ತಿದ್ದಂತೆಯೇ, ಕರಣ್ ಜೋಹರ್ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ಚಿತ್ರವನ್ನು ನಿರ್ಮಿಸುತ್ತಿರುವುದಷ್ಟೇ ಅಲ್ಲ. ಐದು ವರ್ಷಗಳ ನಂತರ ನಿರ್ದೇಶನವನ್ನೂ ಮಾಡಲು ಮುಂದಾಗಿದ್ದಾರೆ. ತಮ್ಮ ಟ್ರೇಡ್​ಮಾರ್ಕ್ ಆಗಿರುವ ರೊಮ್ಯಾಂಟಿಕ್ ಕಾಮಿಡಿಯೊಂದನ್ನು ಅವರು ಕೈಗೆತ್ತಿಕೊಂಡಿದ್ದು, ಚಿತ್ರಕ್ಕೆ 'ರಾಕಿ ಔರ್ ರಾಣಿ ಕೇ ಪ್ರೇಮ್ ಕಹಾನಿ' ಎಂಬ ಹೆಸರನ್ನು ಇಟ್ಟಿದ್ದಾರೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇಬ್ಬರನ್ನೂ ಜೊತೆಯಾಗಿ ತೆರೆಮೇಲೆ ತರಲಿದ್ದಾರೆ. ರಣವೀರ್ ಮತ್ತು ಆಲಿಯಾ ಜೊತೆಯಾಗಿ ನಟಿಸುತ್ತಿರುವುದು ಹೊಸದೇನಲ್ಲ. ಇದಕ್ಕೂ ಮುನ್ನ ಗಲ್ಲಿಬಾಯ್ ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿದ್ದರು. ಆ ಚಿತ್ರದ ನಂತರ ಮತ್ತೆ ಯಾವ ಚಿತ್ರದಲ್ಲಿ ಈ ಜೋಡಿ ರಿಪೀಟ್ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ರಾಕಿ-ರಾಣಿಯಾಗಿ ಅವರಿಬ್ಬರೂ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.

'ರಾಕಿ ಔರ್ ರಾಣಿ ಕೇ ಪ್ರೇಮ್ ಕಹಾನಿ' ಈ ಚಿತ್ರದಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಆಜ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಈ ಪೈಕಿ ರಣವೀರ್ ಸಿಂಗ್​ನ ಅಜ್ಜಿಯಾಗಿ ಜಯಾ ಬಚ್ಚನ್ ನಟಿಸಿದರೆ, ಆಲಿಯಾಳ ಅಜ್ಜ-ಅಜ್ಜಿಯಾಗಿ ಧರ್ಮೇಂದ್ರ ಮತ್ತು ಶಬಾನಾ ಆಜ್ಮಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇಬ್ಬರೂ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸುವುದರಲ್ಲಿ ಬ್ಯುಸಿಯಾಗಿದ್ದು, ಅದು ಮುಗಿಯುತ್ತಿದ್ದಂತೆಯೇ, ಸೆಪ್ಟೆಂಬರ್​ನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ರಣಬೀರ್ ಕಪೂರ್ ನಟನೆಯ 'ಏ ದಿಲ್ ಹೇ ಮುಷ್ಕಿಲ್' ಚಿತ್ರ ನಿರ್ದೇಶಿಸಿದ್ದೇ ಕೊನೆ, ಆ ನಂತರ ಚಿತ್ರ ನಿರ್ದೇಶನದಿಂದ ದೂರವೇ ಉಳಿದುಬಿಟ್ಟಿದ್ದರು ಕರಣ್ ಜೋಹರ್. ಇದಕ್ಕೆ ಆ ಚಿತ್ರ ಫ್ಲಾಪ್​ ಆಗಿದ್ದು ಒಂದು ಕಾರಣವಾದರೆ, ಧರ್ಮ ಪ್ರೊಡಕ್ಷನ್ಸ್ ಮೂಲಕ ಸತತವಾಗಿ ನಿರ್ಮಾಣದಲ್ಲೇ ತೊಡಗಿಸಿಕೊಂಡಿದ್ದು ಇನ್ನೊಂದು ಕಾರಣ. ಹಾಗಾಗಿ, ಚಿತ್ರ ನಿರ್ದೇಶನಕ್ಕೊಂದು ತಾತ್ಕಾಲಿಕ ವಿರಾಮ ಕೊಟ್ಟಿದ್ದರು ಕರಣ್.

ಇದೀಗ ಲಾಕ್ಡೌನ್​ ಮುಗಿಯುತ್ತಿದ್ದಂತೆಯೇ, ಕರಣ್ ಜೋಹರ್ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ಚಿತ್ರವನ್ನು ನಿರ್ಮಿಸುತ್ತಿರುವುದಷ್ಟೇ ಅಲ್ಲ. ಐದು ವರ್ಷಗಳ ನಂತರ ನಿರ್ದೇಶನವನ್ನೂ ಮಾಡಲು ಮುಂದಾಗಿದ್ದಾರೆ. ತಮ್ಮ ಟ್ರೇಡ್​ಮಾರ್ಕ್ ಆಗಿರುವ ರೊಮ್ಯಾಂಟಿಕ್ ಕಾಮಿಡಿಯೊಂದನ್ನು ಅವರು ಕೈಗೆತ್ತಿಕೊಂಡಿದ್ದು, ಚಿತ್ರಕ್ಕೆ 'ರಾಕಿ ಔರ್ ರಾಣಿ ಕೇ ಪ್ರೇಮ್ ಕಹಾನಿ' ಎಂಬ ಹೆಸರನ್ನು ಇಟ್ಟಿದ್ದಾರೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇಬ್ಬರನ್ನೂ ಜೊತೆಯಾಗಿ ತೆರೆಮೇಲೆ ತರಲಿದ್ದಾರೆ. ರಣವೀರ್ ಮತ್ತು ಆಲಿಯಾ ಜೊತೆಯಾಗಿ ನಟಿಸುತ್ತಿರುವುದು ಹೊಸದೇನಲ್ಲ. ಇದಕ್ಕೂ ಮುನ್ನ ಗಲ್ಲಿಬಾಯ್ ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿದ್ದರು. ಆ ಚಿತ್ರದ ನಂತರ ಮತ್ತೆ ಯಾವ ಚಿತ್ರದಲ್ಲಿ ಈ ಜೋಡಿ ರಿಪೀಟ್ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ರಾಕಿ-ರಾಣಿಯಾಗಿ ಅವರಿಬ್ಬರೂ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.

'ರಾಕಿ ಔರ್ ರಾಣಿ ಕೇ ಪ್ರೇಮ್ ಕಹಾನಿ' ಈ ಚಿತ್ರದಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಆಜ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಈ ಪೈಕಿ ರಣವೀರ್ ಸಿಂಗ್​ನ ಅಜ್ಜಿಯಾಗಿ ಜಯಾ ಬಚ್ಚನ್ ನಟಿಸಿದರೆ, ಆಲಿಯಾಳ ಅಜ್ಜ-ಅಜ್ಜಿಯಾಗಿ ಧರ್ಮೇಂದ್ರ ಮತ್ತು ಶಬಾನಾ ಆಜ್ಮಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇಬ್ಬರೂ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸುವುದರಲ್ಲಿ ಬ್ಯುಸಿಯಾಗಿದ್ದು, ಅದು ಮುಗಿಯುತ್ತಿದ್ದಂತೆಯೇ, ಸೆಪ್ಟೆಂಬರ್​ನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

Last Updated : Jul 7, 2021, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.