ETV Bharat / sitara

ಸೆನ್ಸಾರ್​ ಮಂಡಳಿಗೆ ತಾತ್ಕಾಲಿಕ ಅಧಿಕಾರಿ ನೇಮಕ!  ಕ್ಯೂನಲ್ಲಿರುವ 120 ಕನ್ನಡ ಚಿತ್ರಗಳಿಗೆ ಸಿಗುತ್ತಾ ಮುಕ್ತಿ? - ಸೆನ್ಸಾರ್ ಅಧಿಕಾರಿಯನ್ನ ಕೊಡುವಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಪತ್ರ

ಹೆಚ್ಚುತ್ತಿರುವ ಕನ್ನಡ ಸಿನಿಮಾಗಳ ಸೆನ್ಸಾರ್​ ವಿಳಂಬ ಬಗೆಹರಿಸಲು ಫಿಲ್ಮ್ ಚೇಂಬರ್​​ ಅಧ್ಯಕ್ಷ ಗುಬ್ಬಿ ಜಯರಾಜ್ ಹಾಗೂ ಉಪಾಧ್ಯಕ್ಷ ಉಮೇಶ್ ಬಣಕಾರ್​, ಕರ್ನಾಟಕ ಪ್ರಾದೇಶಿಕ ಸಂಸ್ಥೆಗೆ ಮತ್ತೊಬ್ಬ ಸೆನ್ಸಾರ್ ಅಧಿಕಾರಿಯನ್ನ ಕೊಡುವಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಬ್ಬ ಅಧಿಕಾರಿ ತಾತ್ಕಾಲಿಕವಾಗಿ ನೇಮಕವಾಗಿದ್ದು, ಕ್ಯೂನಲ್ಲಿರುವ ಕನ್ನಡ ಸಿನಿಮಾಗಳಿಗೆ ಮುಕ್ತಿ ಸಿಗುವ ಆಶಾಭಾವ ವ್ಯಕ್ತವಾಗಿದೆ.

ಚಿತ್ರಗಳಿಗೆ ಸಿಗುತ್ತಾ ಮುಕ್ತಿ
author img

By

Published : Nov 21, 2019, 10:18 PM IST

Updated : Nov 21, 2019, 10:35 PM IST

ಹೆಚ್ಚುತ್ತಿರುವ ಕನ್ನಡ ಸಿನಿಮಾಗಳ ಸೆನ್ಸಾರ್​ ವಿಳಂಬ ಬಗೆಹರಿಸಲು ಫಿಲ್ಮ್ ಚೇಂಬರ್​​ ಅಧ್ಯಕ್ಷ ಗುಬ್ಬಿ ಜಯರಾಜ್ ಹಾಗೂ ಉಪಾಧ್ಯಕ್ಷ ಉಮೇಶ್ ಬಣಕಾರ್​, ಕರ್ನಾಟಕ ಪ್ರಾದೇಶಿಕ ಸಂಸ್ಥೆಗೆ ಮತ್ತೊಬ್ಬ ಸೆನ್ಸಾರ್ ಅಧಿಕಾರಿಯನ್ನ ಕೊಡುವಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಈ ಮನವಿ ಮೇರೆಗೆ ಸಚಿವ ಪ್ರಕಾಶ್ ಜಾವಡೇಕರ್ ಕೂಡಲೇ ಮಧು ಆರ್ ಜೆ ಹಳ್ಳಿ ಎಂಬ ಮತ್ತೊಬ್ಬ ಅಧಿಕಾರಿಯನ್ನ ತಾತ್ಕಾಲಿಕವಾಗಿ ನೇಮಕ ಮಾಡಿದ್ದಾರೆ. ಈಗಾಗಲೇ ಸೆನ್ಸಾರ್ ಅಧಿಕಾರಿ ಮಧು ಸಿನಿಮಾಗಳನ್ನ ನೋಡ್ತಾ ಇದ್ದಾರೆ ಎಂದು, ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.

ಮತ್ತೊಬ್ಬ ಸೆನ್ಸಾರ್ ಅಧಿಕಾರಿಯನ್ನ ಕೊಡುವಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಪತ್ರ

ಇಷ್ಟಕ್ಕೂ ಸಮಸ್ಯೆ ಏನು: ಸೆನ್ಸಾರ್ ಮಂಡಳಿ ಅಧಿಕಾರಿ ಶ್ರೀನಿವಾಸ್ ದಿನಕ್ಕೆ ನಾಲ್ಕರಿಂದ ಐದು ಸಿನಿಮಾ ನೋಡೊದು ಕಷ್ಟ ಆಗಿದೆಯಂತೆ. ಹೊಸಬರು ಹಾಗೂ ಸ್ಟಾರ್ ನಟರ ಸಿನಿಮಾಗಳು ಸೇರಿದಂತೆ 120ಕ್ಕೂ ಅಧಿಕ ಚಿತ್ರಗಳು ಸೆನ್ಸಾರ್​​​​ಗಾಗಿ ಕಚೇರಿ ಟೇಬಲ್ ನಲ್ಲಿವೆ. ಇದರಿಂದ ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕನಿಗೆ ನಷ್ಟ ಆಗುತ್ತಿದೆ. ಇದರಿಂದ ಬೇಸತ್ತ ಫಿಲ್ಮ್​ ಚೇಂಬರ್​​ ಮುಖ್ಯಸ್ಥರು, ಸದ್ಯಕ್ಕೆ ತಾತ್ಕಾಲಿಕವಾಗಿ ಹೊಸ ಅಧಿಕಾರಿ ನೇಮಕ ಮಾಡಿದ್ದಾರೆ. ಇದರಿಂದ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಈಗಲಾದ್ರೂ ಸೆನ್ಸಾರ್ ಮಂಡಳಿಯ ಟೇಬಲ್ ನಲ್ಲಿರುವ, 120 ಸಿನಿಮಾಗಳು ಸೆನ್ಸಾರ್ ಆಗುವ ಮೂಲಕ ನಿರ್ಮಾಪಕರ ಸಮಸ್ಯೆಗೆ ಪರಿಹಾರ ಸಿಗಲಿದೆಯಾ ಅನ್ನೋದನ್ನ ಕಾದು ನೋಡಬೇಕು.

ಹೆಚ್ಚುತ್ತಿರುವ ಕನ್ನಡ ಸಿನಿಮಾಗಳ ಸೆನ್ಸಾರ್​ ವಿಳಂಬ ಬಗೆಹರಿಸಲು ಫಿಲ್ಮ್ ಚೇಂಬರ್​​ ಅಧ್ಯಕ್ಷ ಗುಬ್ಬಿ ಜಯರಾಜ್ ಹಾಗೂ ಉಪಾಧ್ಯಕ್ಷ ಉಮೇಶ್ ಬಣಕಾರ್​, ಕರ್ನಾಟಕ ಪ್ರಾದೇಶಿಕ ಸಂಸ್ಥೆಗೆ ಮತ್ತೊಬ್ಬ ಸೆನ್ಸಾರ್ ಅಧಿಕಾರಿಯನ್ನ ಕೊಡುವಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಈ ಮನವಿ ಮೇರೆಗೆ ಸಚಿವ ಪ್ರಕಾಶ್ ಜಾವಡೇಕರ್ ಕೂಡಲೇ ಮಧು ಆರ್ ಜೆ ಹಳ್ಳಿ ಎಂಬ ಮತ್ತೊಬ್ಬ ಅಧಿಕಾರಿಯನ್ನ ತಾತ್ಕಾಲಿಕವಾಗಿ ನೇಮಕ ಮಾಡಿದ್ದಾರೆ. ಈಗಾಗಲೇ ಸೆನ್ಸಾರ್ ಅಧಿಕಾರಿ ಮಧು ಸಿನಿಮಾಗಳನ್ನ ನೋಡ್ತಾ ಇದ್ದಾರೆ ಎಂದು, ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.

ಮತ್ತೊಬ್ಬ ಸೆನ್ಸಾರ್ ಅಧಿಕಾರಿಯನ್ನ ಕೊಡುವಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಪತ್ರ

ಇಷ್ಟಕ್ಕೂ ಸಮಸ್ಯೆ ಏನು: ಸೆನ್ಸಾರ್ ಮಂಡಳಿ ಅಧಿಕಾರಿ ಶ್ರೀನಿವಾಸ್ ದಿನಕ್ಕೆ ನಾಲ್ಕರಿಂದ ಐದು ಸಿನಿಮಾ ನೋಡೊದು ಕಷ್ಟ ಆಗಿದೆಯಂತೆ. ಹೊಸಬರು ಹಾಗೂ ಸ್ಟಾರ್ ನಟರ ಸಿನಿಮಾಗಳು ಸೇರಿದಂತೆ 120ಕ್ಕೂ ಅಧಿಕ ಚಿತ್ರಗಳು ಸೆನ್ಸಾರ್​​​​ಗಾಗಿ ಕಚೇರಿ ಟೇಬಲ್ ನಲ್ಲಿವೆ. ಇದರಿಂದ ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕನಿಗೆ ನಷ್ಟ ಆಗುತ್ತಿದೆ. ಇದರಿಂದ ಬೇಸತ್ತ ಫಿಲ್ಮ್​ ಚೇಂಬರ್​​ ಮುಖ್ಯಸ್ಥರು, ಸದ್ಯಕ್ಕೆ ತಾತ್ಕಾಲಿಕವಾಗಿ ಹೊಸ ಅಧಿಕಾರಿ ನೇಮಕ ಮಾಡಿದ್ದಾರೆ. ಇದರಿಂದ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಈಗಲಾದ್ರೂ ಸೆನ್ಸಾರ್ ಮಂಡಳಿಯ ಟೇಬಲ್ ನಲ್ಲಿರುವ, 120 ಸಿನಿಮಾಗಳು ಸೆನ್ಸಾರ್ ಆಗುವ ಮೂಲಕ ನಿರ್ಮಾಪಕರ ಸಮಸ್ಯೆಗೆ ಪರಿಹಾರ ಸಿಗಲಿದೆಯಾ ಅನ್ನೋದನ್ನ ಕಾದು ನೋಡಬೇಕು.

Intro:Body:ಕನ್ನಡ ಸೆನ್ಸಾರ್ ಮಂಡಳಿಗೆ ಮತ್ತೊಬ್ಬ ಅಧಿಕಾರಿಯ ನೇಮಕ! ಸೆನ್ಸಾರ್ ವೇಟಿಂಗ್‌ ಲೀಸ್ಟ್ ನಲ್ಲಿರುವ ಚಿತ್ರಗಳಿಗೆ ಸಿಗುತ್ತಾ ಮುಕ್ತಿ!!

ಕನ್ನಡ ಸಿನಿಮಾ ರಂಗದಲ್ಲಿ ಕನ್ನಡ ಚಿತ್ರಗಳಿಗೆ ಸಮಸ್ಯೆ ಎದುರಾಗುತ್ತಿದೆ. ವಾರಕ್ಕೇಳು ಸಿನಿಮಾಗಳನ್ನು ರಿಲೀಸ್‌ ಆಗುತ್ತಿರೋದು ಕಾಮನ್ ಆಗಿದೆ..ಇದ್ರ ಜೊತೆಗೆ ಕನ್ನಡ ನಿರ್ಮಾಪಕರಿಗೆ ದೊಡ್ಡ ತಲೆನೋವು ಆಗಿರೋದು ಸೆನ್ಸಾರ್ ಮಂಡಳಿ..ಯಾಕೆಂದರೆ ಸೆನ್ಸಾರ್ ಆಗೋದಿಕ್ಕೆ ಸೆನ್ಸಾರ್ ಟೇಬಲ್ ಮೇಲೆ 120 ಸಿನಿಮಾಗಳು ಕ್ಯೂನಲ್ಲಿವೆ..ಇದು ಸಿನಿಮಾದ ನಿರ್ದೇಶಕ ಹಾಗು ನಿರ್ಮಾಪಕರಿಗೆ ದೊಡ್ಡ ಕಂಟಕವಾಗಿದೆ.. ಹೀಗಿರುವ ಸೆನ್ಸಾರ್ ಮಂಡಳಿ ಅಧಿಕಾರಿ ಶ್ರೀನಿವಾಸ್ ದಿನಕ್ಕೆ ನಾಲ್ಕರಿಂದ ಐದು ಸಿನಿಮಾ ನೋಡೊದು ಕಷ್ಟ ಆಗಿದೆ..ಹಾಗೇ ಸ್ಟಾರ್ ನಟನ ಹಾಗು ಹೊಸಬರ ಸಿನಿಮಾ ಆಗಲಿ ನಂ ಪ್ರಕಾರನೇ ಸಿನಿಮಾ ನೋಡದು ಅನ್ನೋದು ಸೆನ್ಸಾರ್ ಅಧಿಕಾರಿಯ ತಕರಾರು..ಇದ್ರ ಜೊತೆಗೆ ಸಿನಿಮಾಗಳಿಗೆ ಕೊಡುವ ಸರ್ಟಿಫಿಕೇಟ್ ನಲ್ಲಿ, ಆಗಾಗ ನಿರ್ಮಾಪಕರ ಕೋಪಕ್ಕೆ ಸೆನ್ಸಾರ್ ಅಧಿಕಾರಿ ಶ್ರೀನಿವಾಸ್ ಗುರಿಯಾಗಿದ್ದಾರೆ..ಇಷ್ಟಲ್ಲೆ ಸಮಸ್ಯೆ ಮಧ್ಯೆ, ಹೊಸಬರ ಸಿನಿಮಾಯಿಂದ ಹಿಡಿದು ಸ್ಟಾರ್ ನಟರ ಸಿನಿಮಾಗಳು ಸೇರಿದಂತೆ 120ಕ್ಕೂ ಚಿತ್ರಗಳು ಸೆನ್ಸಾರ್ ಕಛೇರಿ ಟೇಬಲ್ ನಲ್ಲಿವೆ..ಹೀಗಿರುವಾಗ ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕನಿಗೆ ನಷ್ಟ ಆಗುತ್ತಿದೆ..ಈ ಸಮಸ್ಯೆಯನ್ನ ನಿರ್ಮಾಪಕರು ಯಾರ ಹತ್ತಿರನು ಹೇಳಿಕೊಳ್ಳದೇ ಮೂಕರಾಗಿದ್ರು..ಈಗ ಈ ಸಮಸ್ಯೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಕ್ತಿ ಕೊಡುವ ಕೆಲಸ ಮಾಡಿದೆ..ಫಿಲ್ಮ್ ಅಧ್ಯಕ್ಷ ಗುಬ್ಬಿ ಜಯರಾಜ್ ಹಾಗು ಉಪಾಧ್ಯಕ್ಷ ಉಮೇಶ್ ಬಣಕಾರು, ಕರ್ನಾಟಕ ಪ್ರಾದೇಶಿಕ ಸಂಸ್ಥೆಗೆ ಮತ್ತೊಬ್ಬ ಸೆನ್ಸಾರ್ ಅಧಿಕಾರಿಯನ್ನ ಕೊಡುವಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಪತ್ರದ ಮೂಲಕ ಮನವಿ ಮಾಡಲಾಗಿತ್ತು..ಈ ಮನವಿ ಮೇರೆಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡಲೇ ಮಧು ಆರ್ ಜೆ ಹಳ್ಳಿ ಎಂಬ ಮತ್ತೊಬ್ಬ ಅಧಿಕಾರಿಯನ್ನ ತಾತ್ಕಾಲಿಕವಾಗಿ ನೇಮಕ ಮಾಡಿದೆ..ಈಗಾಗಲೇ ಸೆನ್ಸಾರ್ ಅಧಿಕಾರಿ ಮಧು ಸಿನಿಮಾಗಳನ್ನ ನೋಡ್ತಾ ಇದ್ದಾರೆ ಅಂತಾ, ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಎಕ್ಸ್ ಕ್ಲ್ಯೂಸಿವ್ ಆಗಿ ಈಟಿವಿ ಭಾರತಗೆ ತಿಳಿಸಿದ್ದಾರೆ.. ಆದ್ರೆ ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಹೇಳುವ ಪ್ರಕಾರ , ಕರ್ನಾಟಕ ಪ್ರಾಥಮಿಕ ಸೆನ್ಸಾರ್ ಮಂಡಳಿಗೆ ಮತ್ತೊಬ್ಬ ಅಧಿಕಾರಿಯ ಅವಶ್ಯಕತೆ ಇರುವ ಕಾರಣ, ಪರ್ಮನೇಟ್ ಅಧಿಕಾರಿಯಾಗಿ ಮಾಡಿ ಅನ್ನೋದು ಫಿಲ್ಮ್ ಚೇಂಬರ್ ಒತ್ತಾಯ.. ಸದ್ಯ ಈಗಲಾದ್ರೂ ಸೆನ್ಸಾರ್ ಮಂಡಳಿಯ ಟೇಬಲ್ ನಲ್ಲಿರುವ, 120 ಸಿನಿಮಾಗಳಿಗೆ ಸೆನ್ಸಾರ್ ಆಗುವ ಮೂಲಕ ನಿರ್ಮಾಪಕರ ಸಮಸ್ಯೆಗೆ ಪರಿಹಾರ ಸಿಗಲಿದಿಯ್ಯಾ ನೋಡಬೇಕು..

ಬೈಟ್ : ಉಮೇಶ್ ಬಣಕಾರ್, ಫಿಲ್ಮ್ ಚೇಂಬರ್ ಉಪಾಧ್ಯಕ್ಷConclusion:
Last Updated : Nov 21, 2019, 10:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.