ETV Bharat / sitara

ರಿಯಲ್​ ಸ್ಟಾರ್​ 'ಉಪ್ಪಿ' ಕೆಲಸಕ್ಕೆ‌ ಕೈ ಜೋಡಿಸಿದ ಚಿತ್ರರಂಗದ ತಾರೆಯರು

ನಿನ್ನೆಯಷ್ಟೇ ನಟ ಉಪೇಂದ್ರ ಅವರು, 'ಕನ್ನಡ ಚಿತ್ರರಂಗದ ಒಕ್ಕೂಟದ ಎಲ್ಲ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್‌ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ಥರನ್ನು ಸಂಪರ್ಕಿಸಿ, ನಿಮ್ಮ ಉಪ್ಪಿ' ಎಂದು ಟ್ವೀಟ್ ಮಾಡಿದ್ದರು. ಇದೀಗ ಉಪೇಂದ್ರ ಮಾಡುತ್ತಿರುವ ಒಳ್ಳೆ ಕೆಲಸಕ್ಕೆ ಚಿತ್ರರಂಗದ ಹಲವಾರು ತಾರೆಯರು ಕೈ ಜೋಡಿಸಿದ್ದಾರೆ.

author img

By

Published : May 11, 2021, 9:04 PM IST

kannada-film-stars-support-real-star-upendras-work
ರಿಯಲ್​ ಸ್ಟಾರ್​ 'ಉಪ್ಪಿ'

ಕೊರೊನಾ 2ನೇ ಅಲೆಯ ಅಬ್ಬರಕ್ಕೆ ಸಿಲುಕಿ ತತ್ತರಿಸಿರುವ ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು ಹಾಗೂ ಪೋಷಕ ಕಲಾವಿದರ ಸಹಾಯಕ್ಕೆ ನಿಂತ ರಿಯಲ್​ ಸ್ಟಾರ್​ ಉಪೇಂದ್ರ ಅವರ ಕೆಲಸಕ್ಕೆ ಇದೀಗ ವ್ಯಾಪಕ ಸಪೋರ್ಟ್​ ಸಿಕ್ಕಿದೆ.

ನಿನ್ನೆಯಷ್ಟೇ ನಟ ಉಪೇಂದ್ರ ಅವರು, 'ಕನ್ನಡ ಚಿತ್ರರಂಗದ ಒಕ್ಕೂಟದ ಎಲ್ಲ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್‌ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ಥರನ್ನು ಸಂಪರ್ಕಿಸಿ, ನಿಮ್ಮ ಉಪ್ಪಿ' ಎಂದು ಟ್ವೀಟ್ ಮಾಡಿದ್ದರು. ಇದೀಗ ಉಪೇಂದ್ರ ಮಾಡುತ್ತಿರುವ ಒಳ್ಳೆ ಕೆಲಸಕ್ಕೆ ಚಿತ್ರರಂಗದ ಹಲವಾರು ತಾರೆಯರು ಕೈ ಜೋಡಿಸಿದ್ದಾರೆ.

  • ಖ್ಯಾತ ನಟ ಸಾದುಕೋಕಿಲ ಅವರು ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್ಗಳನ್ನು ಆರ್ಕೆಸ್ಟ್ರಾ ಕಲಾವಿದರುಗಳಿಗೆ ಹಂಚಲು ಮುಂದೆ ಬಂದಿದ್ದಾರೆ 🙏🙏 ವಿತರಣೆಯ ವಿವರಗಳನ್ನು ಸದ್ಯದಲ್ಲೇ ತಿಳಿಸುತ್ತಾರೆ. pic.twitter.com/q6gJo5bk69

    — Upendra (@nimmaupendra) May 11, 2021 " class="align-text-top noRightClick twitterSection" data=" ">

ಇದೀಗ ಹಿರಿಯ ನಟಿ ಬಿ. ಸರೋಜಮ್ಮ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದು, ಸಹ ಕಲಾವಿದರಿಗೆ ಕಿಟ್ ಕೊಡುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ ಎಂದು ನಟ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಸಂಗೀತ ನಿರ್ದೇಶಕ ಹಾಗೂ ನಟ‌ ಸಾಧುಕೋಕಿಲ ಕೂಡಾ ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್‌ಗಳನ್ನು ಆರ್ಕೆಸ್ಟ್ರಾ ಕಲಾವಿದರಿಗೆ ಹಂಚಲು ಮುಂದೆ ಬಂದಿದ್ದಾರೆ ಅಂತಾ ತಿಳಿಸಿದ್ದಾರೆ.

  • ಸುಪ್ರಸಿಧ್ದ ಅಭಿನೇತ್ರಿ ಬಿ. ಸರೋಜಮ್ಮ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ🙏 ಸಹಕಲಾವಿದರಿಗೆ ಕಿಟ್ ಕೊಡುವ ಜವಾಬ್ದಾರಿ ನಾನು ತೆಗೆದುಕೊಂಡಿರುವುದರಿಂದ ಅಮ್ಮ ಕೊಡುತ್ತಿರುವ ಹಣವನ್ನು ಸಾದು ಕೋಕಿಲರವರ ನೇತ್ರತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ. pic.twitter.com/DaAKPEikD4

    — Upendra (@nimmaupendra) May 11, 2021 " class="align-text-top noRightClick twitterSection" data=" ">

ಹಾಗೆಯೇ ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂಪಾಯಿ ನೀಡಿದ್ದು, ನಟ ಶೋಭರಾಜ್ ಅವರು 10 ಸಾವಿರ ರೂ. ಕೊಟ್ಟಿದ್ದಾರೆ. ವಿತರಣೆಯ ವಿವರಗಳನ್ನು ಸದ್ಯದಲ್ಲೇ ತಿಳಿಸುತ್ತೇನೆ ಎಂದು ನಟ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  • ಖ್ಯಾತ ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂಪಾಯಿ ಕೊಟ್ಟಿದ್ದಾರೆ 🙏 ಕೆ ಎಫ್ ಎಮ್ಎ ಚಲನಚಿತ್ರ ಸಂಗೀತ ಕಲಾವಿದರಿಗೆ ನೀಡಲು ತಿಳಿಸಿದ್ದಾರೆ. pic.twitter.com/YGzjQo62BJ

    — Upendra (@nimmaupendra) May 11, 2021 " class="align-text-top noRightClick twitterSection" data=" ">

ಓದಿ: ನಾಲ್ಕೇ ದಿನದಲ್ಲಿ 5 ಕೋಟಿ ರೂ ದಾಟಿದ ವಿರುಷ್ಕಾ ನಿಧಿ ಸಂಗ್ರಹ ಅಭಿಯಾನ

ಕೊರೊನಾ 2ನೇ ಅಲೆಯ ಅಬ್ಬರಕ್ಕೆ ಸಿಲುಕಿ ತತ್ತರಿಸಿರುವ ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು ಹಾಗೂ ಪೋಷಕ ಕಲಾವಿದರ ಸಹಾಯಕ್ಕೆ ನಿಂತ ರಿಯಲ್​ ಸ್ಟಾರ್​ ಉಪೇಂದ್ರ ಅವರ ಕೆಲಸಕ್ಕೆ ಇದೀಗ ವ್ಯಾಪಕ ಸಪೋರ್ಟ್​ ಸಿಕ್ಕಿದೆ.

ನಿನ್ನೆಯಷ್ಟೇ ನಟ ಉಪೇಂದ್ರ ಅವರು, 'ಕನ್ನಡ ಚಿತ್ರರಂಗದ ಒಕ್ಕೂಟದ ಎಲ್ಲ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್‌ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ಥರನ್ನು ಸಂಪರ್ಕಿಸಿ, ನಿಮ್ಮ ಉಪ್ಪಿ' ಎಂದು ಟ್ವೀಟ್ ಮಾಡಿದ್ದರು. ಇದೀಗ ಉಪೇಂದ್ರ ಮಾಡುತ್ತಿರುವ ಒಳ್ಳೆ ಕೆಲಸಕ್ಕೆ ಚಿತ್ರರಂಗದ ಹಲವಾರು ತಾರೆಯರು ಕೈ ಜೋಡಿಸಿದ್ದಾರೆ.

  • ಖ್ಯಾತ ನಟ ಸಾದುಕೋಕಿಲ ಅವರು ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್ಗಳನ್ನು ಆರ್ಕೆಸ್ಟ್ರಾ ಕಲಾವಿದರುಗಳಿಗೆ ಹಂಚಲು ಮುಂದೆ ಬಂದಿದ್ದಾರೆ 🙏🙏 ವಿತರಣೆಯ ವಿವರಗಳನ್ನು ಸದ್ಯದಲ್ಲೇ ತಿಳಿಸುತ್ತಾರೆ. pic.twitter.com/q6gJo5bk69

    — Upendra (@nimmaupendra) May 11, 2021 " class="align-text-top noRightClick twitterSection" data=" ">

ಇದೀಗ ಹಿರಿಯ ನಟಿ ಬಿ. ಸರೋಜಮ್ಮ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದು, ಸಹ ಕಲಾವಿದರಿಗೆ ಕಿಟ್ ಕೊಡುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ ಎಂದು ನಟ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಸಂಗೀತ ನಿರ್ದೇಶಕ ಹಾಗೂ ನಟ‌ ಸಾಧುಕೋಕಿಲ ಕೂಡಾ ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್‌ಗಳನ್ನು ಆರ್ಕೆಸ್ಟ್ರಾ ಕಲಾವಿದರಿಗೆ ಹಂಚಲು ಮುಂದೆ ಬಂದಿದ್ದಾರೆ ಅಂತಾ ತಿಳಿಸಿದ್ದಾರೆ.

  • ಸುಪ್ರಸಿಧ್ದ ಅಭಿನೇತ್ರಿ ಬಿ. ಸರೋಜಮ್ಮ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ🙏 ಸಹಕಲಾವಿದರಿಗೆ ಕಿಟ್ ಕೊಡುವ ಜವಾಬ್ದಾರಿ ನಾನು ತೆಗೆದುಕೊಂಡಿರುವುದರಿಂದ ಅಮ್ಮ ಕೊಡುತ್ತಿರುವ ಹಣವನ್ನು ಸಾದು ಕೋಕಿಲರವರ ನೇತ್ರತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ. pic.twitter.com/DaAKPEikD4

    — Upendra (@nimmaupendra) May 11, 2021 " class="align-text-top noRightClick twitterSection" data=" ">

ಹಾಗೆಯೇ ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂಪಾಯಿ ನೀಡಿದ್ದು, ನಟ ಶೋಭರಾಜ್ ಅವರು 10 ಸಾವಿರ ರೂ. ಕೊಟ್ಟಿದ್ದಾರೆ. ವಿತರಣೆಯ ವಿವರಗಳನ್ನು ಸದ್ಯದಲ್ಲೇ ತಿಳಿಸುತ್ತೇನೆ ಎಂದು ನಟ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  • ಖ್ಯಾತ ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂಪಾಯಿ ಕೊಟ್ಟಿದ್ದಾರೆ 🙏 ಕೆ ಎಫ್ ಎಮ್ಎ ಚಲನಚಿತ್ರ ಸಂಗೀತ ಕಲಾವಿದರಿಗೆ ನೀಡಲು ತಿಳಿಸಿದ್ದಾರೆ. pic.twitter.com/YGzjQo62BJ

    — Upendra (@nimmaupendra) May 11, 2021 " class="align-text-top noRightClick twitterSection" data=" ">

ಓದಿ: ನಾಲ್ಕೇ ದಿನದಲ್ಲಿ 5 ಕೋಟಿ ರೂ ದಾಟಿದ ವಿರುಷ್ಕಾ ನಿಧಿ ಸಂಗ್ರಹ ಅಭಿಯಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.