ETV Bharat / sitara

ಸೆ. 10ರಂದು ತೆರೆಗೆ ಅಪ್ಪಳಿಸಲಿದೆ 'ತಲೈವಿ'... ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ರಿಲೀಸ್​!

ತಮಿಳುನಾಡು ಜನರ ಆರಾಧ್ಯದೈವ, ಅಚ್ಚುಮೆಚ್ಚಿನ ರಾಜಕಾರಣಿ, ಮಾಜಿ ಸಿಎಂ ದಿ. ಜಯಲಲಿತಾ ಅವರ ಬಯೋಪಿಕ್ ತಲೈವಿ ಚಿತ್ರ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈ ವರ್ಷ ಸೆಪ್ಟೆಂಬರ್​​ 10ರಂದು ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

author img

By

Published : Aug 23, 2021, 6:42 PM IST

Kangana Ranaut
Kangana Ranaut

ಮುಂಬೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಚಿತ್ರ ತಲೈವಿ ಬರುವ ಸೆಪ್ಟೆಂಬರ್​ 10ರಂದು ತೆರೆ ಕಾಣಲಿದ್ದು, ಇದಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Kangana Ranaut
ಜಯಲಲಿತಾ ಪಾತ್ರದಲ್ಲಿ ಕಂಗನಾ

ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದ್ದು, ಜಯಲಲಿತಾ ಆಗಿ ನಟನೆ ಮಾಡಿರುವ ಕಂಗನಾ ಖುದ್ದಾಗಿ ಈ ಮಾಹಿತಿ ಶೇರ್ ಮಾಡಿದ್ದಾರೆ.

ಈಗಾಗಲೇ ಫಸ್ಟ್​ ಲುಕ್ ಹಾಗೂ ಟೀಸರ್​ನೊಂದಿಗೆ ಹೆಚ್ಚು ಗಮನ ಸೆಳೆದಿರುವ ಚಿತ್ರ ಜಯಲಲಿತಾ ಅವರ ಜೀವನದ ಪ್ರಮುಖ ಹಂತಗಳ ಬಗ್ಗೆ ಬೆಳಕು ಚೆಲ್ಲಲಿದೆ. ಈ ಸಿನಿಮಾ ಏಪ್ರಿಲ್​ 23ರಂದು ತೆರೆ ಕಾಣಬೇಕಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿತ್ತು.

Kangana Ranaut
ಕಂಗನಾ ರಣಾವತ್ ನಟನೆಯ ತಲೈವಿ

ವಿನಯ್ ನಿರ್ದೇಶನದ ತಲೈವಿ ಚಿತ್ರಕ್ಕೆ ವಿಷ್ಣುವರ್ಧನ್​​ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣವಿದೆ. ಜಯಲಲಿತಾ ಅವರ ರಾಜಕೀಯ ಗುರು ಎಂ.ಜಿ ರಾಮಚಂದ್ರನ್​ ಅವರ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ.

ಬಾಹುಬಲಿ ಮತ್ತು ಮಣಿಕರ್ಣಿಕಾ ಸಿನಿಮಾಗಳಿಗೆ ಚಿತ್ರಕಥೆ ಬರೆದಿರುವ ಕೆವಿ ವಿಜಯೇಂದ್ರ ಪ್ರಸಾದ್ ಮತ್ತು ದ ಡರ್ಟಿ ಪಿಕ್ಚರ್ ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಸಿನಿಮಾಗೆ ಚಿತ್ರಕಥೆ ಬರೆದಿರುವ ರಜತ್ ಅರೋರಾ ತಲೈವಿ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.

Kangana Ranaut
ಎಂ.ಜಿ ರಾಮಚಂದ್ರನ್​ ಪಾತ್ರದಲ್ಲಿ ಅರವಿಂದ್​ ಸ್ವಾಮಿ

ಇದನ್ನೂ ಓದಿರಿ: ಅಭಿಷೇಕ್​ ಬಚ್ಚನ್​ ಕೈಗೆ ಪೆಟ್ಟು? ದಿಢೀರ್​ ಆಸ್ಪತ್ರೆಗೆ ಭೇಟಿ ನೀಡಿದ ಬಿಗ್​ ಬಿ, ಶ್ವೇತಾ!

ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು ಮುಖ್ಯಮಂತ್ರಿ ಆಗಿ ಐರನ್ ಲೇಡಿ ಎಂದೇ ಹೆಸರು ಪಡೆದಿದ್ದ ದಿವಂಗತ ಜಯಲಲಿತಾ ತಮಿಳುನಾಡಿನಲ್ಲಿ ಅಮ್ಮ ಎಂದೇ ಹೆಸರಾಗಿದ್ದರು. ಇವರು ನಿಧನರಾಗಿ ಐದು ವರ್ಷಗಳು ಕಳೆಯುತ್ತಾ ಬರುತ್ತಿವೆ.

ಮುಂಬೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಚಿತ್ರ ತಲೈವಿ ಬರುವ ಸೆಪ್ಟೆಂಬರ್​ 10ರಂದು ತೆರೆ ಕಾಣಲಿದ್ದು, ಇದಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Kangana Ranaut
ಜಯಲಲಿತಾ ಪಾತ್ರದಲ್ಲಿ ಕಂಗನಾ

ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದ್ದು, ಜಯಲಲಿತಾ ಆಗಿ ನಟನೆ ಮಾಡಿರುವ ಕಂಗನಾ ಖುದ್ದಾಗಿ ಈ ಮಾಹಿತಿ ಶೇರ್ ಮಾಡಿದ್ದಾರೆ.

ಈಗಾಗಲೇ ಫಸ್ಟ್​ ಲುಕ್ ಹಾಗೂ ಟೀಸರ್​ನೊಂದಿಗೆ ಹೆಚ್ಚು ಗಮನ ಸೆಳೆದಿರುವ ಚಿತ್ರ ಜಯಲಲಿತಾ ಅವರ ಜೀವನದ ಪ್ರಮುಖ ಹಂತಗಳ ಬಗ್ಗೆ ಬೆಳಕು ಚೆಲ್ಲಲಿದೆ. ಈ ಸಿನಿಮಾ ಏಪ್ರಿಲ್​ 23ರಂದು ತೆರೆ ಕಾಣಬೇಕಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿತ್ತು.

Kangana Ranaut
ಕಂಗನಾ ರಣಾವತ್ ನಟನೆಯ ತಲೈವಿ

ವಿನಯ್ ನಿರ್ದೇಶನದ ತಲೈವಿ ಚಿತ್ರಕ್ಕೆ ವಿಷ್ಣುವರ್ಧನ್​​ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣವಿದೆ. ಜಯಲಲಿತಾ ಅವರ ರಾಜಕೀಯ ಗುರು ಎಂ.ಜಿ ರಾಮಚಂದ್ರನ್​ ಅವರ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ.

ಬಾಹುಬಲಿ ಮತ್ತು ಮಣಿಕರ್ಣಿಕಾ ಸಿನಿಮಾಗಳಿಗೆ ಚಿತ್ರಕಥೆ ಬರೆದಿರುವ ಕೆವಿ ವಿಜಯೇಂದ್ರ ಪ್ರಸಾದ್ ಮತ್ತು ದ ಡರ್ಟಿ ಪಿಕ್ಚರ್ ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಸಿನಿಮಾಗೆ ಚಿತ್ರಕಥೆ ಬರೆದಿರುವ ರಜತ್ ಅರೋರಾ ತಲೈವಿ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.

Kangana Ranaut
ಎಂ.ಜಿ ರಾಮಚಂದ್ರನ್​ ಪಾತ್ರದಲ್ಲಿ ಅರವಿಂದ್​ ಸ್ವಾಮಿ

ಇದನ್ನೂ ಓದಿರಿ: ಅಭಿಷೇಕ್​ ಬಚ್ಚನ್​ ಕೈಗೆ ಪೆಟ್ಟು? ದಿಢೀರ್​ ಆಸ್ಪತ್ರೆಗೆ ಭೇಟಿ ನೀಡಿದ ಬಿಗ್​ ಬಿ, ಶ್ವೇತಾ!

ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು ಮುಖ್ಯಮಂತ್ರಿ ಆಗಿ ಐರನ್ ಲೇಡಿ ಎಂದೇ ಹೆಸರು ಪಡೆದಿದ್ದ ದಿವಂಗತ ಜಯಲಲಿತಾ ತಮಿಳುನಾಡಿನಲ್ಲಿ ಅಮ್ಮ ಎಂದೇ ಹೆಸರಾಗಿದ್ದರು. ಇವರು ನಿಧನರಾಗಿ ಐದು ವರ್ಷಗಳು ಕಳೆಯುತ್ತಾ ಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.