ETV Bharat / sitara

ಸಿನಿಮಾ ಫ್ಲೆಕ್ಸ್​​​​​​, ಬ್ಯಾನರ್​​​​​ ಬಳಸಲು ಅನುಮತಿ ಕೋರಿ ಬಿಬಿಎಂಪಿಗೆ ಮನವಿ ಸಲ್ಲಿಸಿದ ಗುಬ್ಬಿ ಜೈರಾಜ್​ - undefined

ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್​​​ಗಳನ್ನು ತೆರೆವುಗೊಳಿಸಲು ಹೈಕೋರ್ಟ್ ಆದೇಶ ಮಾಡಿರುವುದರಿಂದ ಚಲನಚಿತ್ರ ನಿರ್ಮಾಪಕರು ತೊಂದರೆ ಅನುಭವಿಸುತ್ತಿದ್ದು ಶೀಘ್ರದಲ್ಲೇ ಬಿಬಿಎಂಪಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರುವಂತೆ ಕೋರಿ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಿದೆ.

ಗುಬ್ಬಿ ಜೈರಾಜ್​
author img

By

Published : Jul 2, 2019, 3:23 PM IST

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಗುಬ್ಬಿ ಜೈರಾಜ್​ 3 ದಿನಗಳ ಹಿಂದಷ್ಟೇ ಅಧಿಕಾರಿ ಸ್ವೀಕರಿಸಿದ್ದಾರೆ. ಇನ್ನು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜೈ ರಾಜ್ ಕಾರ್ಯಪ್ರವೃತ್ತರಾಗಿದ್ದಾರೆ.

ನಗರದಲ್ಲಿ ಸಿನಿಮಾ ಫ್ಲೆಕ್ಸ್​, ಬ್ಯಾನರ್​​​​ಗಳನ್ನು ಬಳಸಲು ಅನುಮತಿ ನೀಡುವಂತೆ ಬಿಬಿಎಂಪಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಿದೆ. ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು, ಹೋರ್ಡಿಂಗ್​ಗಳನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆ ಜಾಹೀರಾತು ಹೋರ್ಡಿಂಗ್​ಗಳನ್ನು ತೆರವುಗೊಳಿಸಿತ್ತು. ಅಲ್ಲದೆ ಪ್ಲಾಸ್ಟಿಕ್ ಬಂಟಿಂಗ್​​​​ಗಳನ್ನೂ ನಿಷೇಧಿಸಿತ್ತು. ಇದರಿಂದ ಸ್ಯಾಂಡಲ್​​ವುಡ್​​​​ಗೆ ದೊಡ್ಡ ಹೊಡೆತ ಉಂಟಾಗಿತ್ತು. ಸಿನಿಮಾಗಳ ಪ್ರಮೋಷನ್​​​​ಗೆ ಜಾಹೀರಾತುಗಳನ್ನೇ ನಂಬಿಕೊಂಡಿದ್ದ ಚಿತ್ರ ನಿರ್ಮಾಪಕರು ಕಂಗಾಲಾಗಿದ್ದರು.

'ಖನನ' ಚಿತ್ರದ 50 ದಿನಗಳ ಸಂಭ್ರಮದಲ್ಲಿ ಗುಬ್ಬಿ ಜೈರಾಜ್​

ಈ ಹಿಂದೆ ಹಲವು ಬಾರಿ ಫಿಲ್ಮ್​ ಚೇಂಬರ್​​​​​​​ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದ್ ಹಾಗೂ ಚಿನ್ನೇಗೌಡರು ಬಿಬಿಎಂಪಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದರು. ಆಗ ಬಿಬಿಎಂಪಿಗೆ ಸರ್ಕಾರ ಹೊಸ ಜಾಹೀರಾತು ನೀತಿ ಜಾರಿಗೆ ತರುವಂತೆ ಆದೇಶಿಸಿತ್ತು. ಆದರೆ ಬಿಬಿಎಂಪಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಚಿತ್ರರಂಗಕ್ಕೆ ನಷ್ಟವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಗುಬ್ಬಿ ಜೈರಾಜ್,​​​​​​​​ ಅಧಿಕಾರ ಸ್ವಿಕರಿಸಿದ ಒಂದೇ ದಿನದಲ್ಲಿ ಈ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸಿದ್ದಾರೆ. ಸಿನಿಮಾ ಫ್ಲೆಕ್ಸ್ ಬಳಕೆ ವಿಚಾರವಾಗಿ ಈಗಾಗಲೇ ಜೈರಾಜ್​​ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರಂತೆ.

'ಖನನ' ಚಿತ್ರದ 50 ದಿನಗಳ ಸಂಭ್ರಮದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೈರಾಜ್​​ ಈ ವಿಷಯವನ್ನು ಪ್ರಸ್ತಾಪಿಸಿದರು. 'ಈಗಾಗಲೇ ನಾವು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೇವೆ. ಸಿನಿಮಾದ ಪೋಸ್ಟರ್​​ಗಳಿಗೆ ಅನುಮತಿ ನೀಡುವಂತೆ ಬಿಬಿಎಂಪಿಗೆ ಕೇಳಿಕೊಂಡಿದ್ದೇವೆ. ಚಿತ್ರಮಂದಿರಗಳ ಕಾಂಪೌಂಡ್​​​​ಗಳ ಮೇಲೂ ಪೋಸ್ಟರ್​​​ಗಳನ್ನು ಅಂಟಿಸಲು ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಸಿನಿಮಾಗಾಗಿ ಕೆಲವು ಜಾಹಿರಾತು ಫಲಕಗಳನ್ನು ನಿಗದಿಪಡಿಸಿ ಸಿನಿಮಾದ ಪ್ರಮೋಷನ್​​​ಗೆ ಸಹಕಾರ ನೀಡುವಂತೆ ನಾವು ಬಿಬಿಎಂಪಿಗೆ ಮನವಿ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತ ಮಾಡಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಜೈರಾಜ್ ತಿಳಿಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಗುಬ್ಬಿ ಜೈರಾಜ್​ 3 ದಿನಗಳ ಹಿಂದಷ್ಟೇ ಅಧಿಕಾರಿ ಸ್ವೀಕರಿಸಿದ್ದಾರೆ. ಇನ್ನು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜೈ ರಾಜ್ ಕಾರ್ಯಪ್ರವೃತ್ತರಾಗಿದ್ದಾರೆ.

ನಗರದಲ್ಲಿ ಸಿನಿಮಾ ಫ್ಲೆಕ್ಸ್​, ಬ್ಯಾನರ್​​​​ಗಳನ್ನು ಬಳಸಲು ಅನುಮತಿ ನೀಡುವಂತೆ ಬಿಬಿಎಂಪಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಿದೆ. ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು, ಹೋರ್ಡಿಂಗ್​ಗಳನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆ ಜಾಹೀರಾತು ಹೋರ್ಡಿಂಗ್​ಗಳನ್ನು ತೆರವುಗೊಳಿಸಿತ್ತು. ಅಲ್ಲದೆ ಪ್ಲಾಸ್ಟಿಕ್ ಬಂಟಿಂಗ್​​​​ಗಳನ್ನೂ ನಿಷೇಧಿಸಿತ್ತು. ಇದರಿಂದ ಸ್ಯಾಂಡಲ್​​ವುಡ್​​​​ಗೆ ದೊಡ್ಡ ಹೊಡೆತ ಉಂಟಾಗಿತ್ತು. ಸಿನಿಮಾಗಳ ಪ್ರಮೋಷನ್​​​​ಗೆ ಜಾಹೀರಾತುಗಳನ್ನೇ ನಂಬಿಕೊಂಡಿದ್ದ ಚಿತ್ರ ನಿರ್ಮಾಪಕರು ಕಂಗಾಲಾಗಿದ್ದರು.

'ಖನನ' ಚಿತ್ರದ 50 ದಿನಗಳ ಸಂಭ್ರಮದಲ್ಲಿ ಗುಬ್ಬಿ ಜೈರಾಜ್​

ಈ ಹಿಂದೆ ಹಲವು ಬಾರಿ ಫಿಲ್ಮ್​ ಚೇಂಬರ್​​​​​​​ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದ್ ಹಾಗೂ ಚಿನ್ನೇಗೌಡರು ಬಿಬಿಎಂಪಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದರು. ಆಗ ಬಿಬಿಎಂಪಿಗೆ ಸರ್ಕಾರ ಹೊಸ ಜಾಹೀರಾತು ನೀತಿ ಜಾರಿಗೆ ತರುವಂತೆ ಆದೇಶಿಸಿತ್ತು. ಆದರೆ ಬಿಬಿಎಂಪಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಚಿತ್ರರಂಗಕ್ಕೆ ನಷ್ಟವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಗುಬ್ಬಿ ಜೈರಾಜ್,​​​​​​​​ ಅಧಿಕಾರ ಸ್ವಿಕರಿಸಿದ ಒಂದೇ ದಿನದಲ್ಲಿ ಈ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸಿದ್ದಾರೆ. ಸಿನಿಮಾ ಫ್ಲೆಕ್ಸ್ ಬಳಕೆ ವಿಚಾರವಾಗಿ ಈಗಾಗಲೇ ಜೈರಾಜ್​​ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರಂತೆ.

'ಖನನ' ಚಿತ್ರದ 50 ದಿನಗಳ ಸಂಭ್ರಮದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೈರಾಜ್​​ ಈ ವಿಷಯವನ್ನು ಪ್ರಸ್ತಾಪಿಸಿದರು. 'ಈಗಾಗಲೇ ನಾವು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೇವೆ. ಸಿನಿಮಾದ ಪೋಸ್ಟರ್​​ಗಳಿಗೆ ಅನುಮತಿ ನೀಡುವಂತೆ ಬಿಬಿಎಂಪಿಗೆ ಕೇಳಿಕೊಂಡಿದ್ದೇವೆ. ಚಿತ್ರಮಂದಿರಗಳ ಕಾಂಪೌಂಡ್​​​​ಗಳ ಮೇಲೂ ಪೋಸ್ಟರ್​​​ಗಳನ್ನು ಅಂಟಿಸಲು ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಸಿನಿಮಾಗಾಗಿ ಕೆಲವು ಜಾಹಿರಾತು ಫಲಕಗಳನ್ನು ನಿಗದಿಪಡಿಸಿ ಸಿನಿಮಾದ ಪ್ರಮೋಷನ್​​​ಗೆ ಸಹಕಾರ ನೀಡುವಂತೆ ನಾವು ಬಿಬಿಎಂಪಿಗೆ ಮನವಿ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತ ಮಾಡಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಜೈರಾಜ್ ತಿಳಿಸಿದರು.

Intro:ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಹೋಲ್ಡರ್ ಗಳನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಜಾಹೀರಾತು ಹೋಲ್ಡರ್ ಗಳನ್ನು ಕಿತ್ತು ಎಸೆದಿತ್ತು. ಅಲ್ಲದೆ ಪ್ಲಾಸ್ಟಿಕ್ ಬಂಟಿಂಗ್ಸ್ ಹೋಲ್ಡರ್ಸ್ ಗಳನ್ನು ನಿಷೇಧಿಸಿತು. ಇನ್ನೂ ಬಿಬಿಎಂಪಿ ಹಾಗೂ ಹೈಕೋರ್ಟ್ನ ಆದೇಶದಿಂದ ಚಿತ್ರರಂಗಕ್ಕೆ ದೊಡ್ಡ ಹೊಡೆತ ವಾಗಿತ್ತು. ಸಿನಿಮಾಗಳ ಪ್ರಮೋಷನ್ ಗಳಿಗಾಗಿ ಜಾಹಿರಾತು ಫಲಕಗಳನ್ನು ಹೆಚ್ಚಾಗಿ ನಂಬಿಕೊಂಡಿದ್ದ ಚಿತ್ರದ ನಿರ್ಮಾಪಕರು ಕಂಗಾಲಾದರು.


Body:ಅಲ್ಲದೆ ಸಿನಿಮಾಗಳ ಫ್ಲೆಕ್ಸ್ ಗಳ ಬಳಸುವುದಕ್ಕೆ ಅನುಮತಿ ನೀಡಿ ಈ ಹಿಂದೆ ಹಲವು ಬಾರಿ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದ್ ಹಾಗೂ ಚಿನ್ನೇಗೌಡರು ಬಿಬಿಎಂಪಿ ಮನವಿ ಸಲ್ಲಿಸಿದರು. ಆದರೆ ಬಿಬಿಎಮ್ ಪಿ ಗೆ ಸರ್ಕಾರ ಹೊಸ ಜಾಹೀರಾತು ನೀತಿ ಜಾರಿಗೆ ತರುವಂತೆ ಆದೇಶಿಸಿತು. ಆದರೆ ಬಿಬಿಎಂಪಿ ಹೊಸ ಬಲವನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸುತಿರುವುದರಿಂ ಚಿತ್ರರಂಗಕ್ಕೆ ಹೆಚ್ಚಾಗಿ ಅನಾನುಕೂಲವಾಗುತ್ತಿದೆ ಎಂಬ ಮಾತು ಕೇಳಿ ಬರ್ತಿದೆ. ಅಲ್ಲದೆ ಚಿತ್ರದ ನಿರ್ಮಾಪಕರು ವಾಣಿಜ್ಯ ಮಂಡಳಿಯ ಮೊರೆ ಹೋಗಿ ಸಿನಿಮಾಗಳ ಪ್ರಮೋಷನ್ ಗಾಗಿ ಜಾಹಿರತು ಫಲಕಗಳು ಹಾಗೂ ಪೋಸ್ಟರ್ ಗಳನ್ನು ಬಳಸುವುದಕ್ಕೆ ಅನುಮತಿ ಕೊಡಿಸುವಂತೆ ವಾಣಿಜ್ಯ ಮಂಡಳಿಯಲ್ಲಿ ದುಂಬಾಲು ಬಿದ್ದಿದ್ದರು .ಇನ್ನೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರು ಅಧಿಕಾರ ಸ್ವಿಕರಿಸಿದ ಒಂದೆ ದಿನದಲ್ಲಿ ಈ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸಿದ್ದಾರೆ. ನೂತನ ಅಧ್ಯಕ್ಷರಾದ ಡಿಅರ್ ಜೈರಾಜ್ ಸಿನಿಮಾಗಳ ಫ್ಲೆಕ್ಸ್ ಬಳಕೆ ವಿಚಾರಚಾಗಿ ಈಗಾಗಲೇ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರಂತೆ. ಅಧಿಕಾರ ಸ್ವೀಕರಿಸಿದ ನಂತರ ಖನನ ಚಿತ್ರದ 50 ದಿನಗಳ ಸಂಭ್ರಮದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಧ್ಯಕ್ಷರು ಈ ವಿಷಯವನ್ನು ಪ್ರಸ್ತಾಪಿಸಿ.


Conclusion:ಈಗಾಗಲೇ ನಾವು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೇವೆ. ಸಿನಿಮಾದ ಪೋಸ್ಟರ್ಗಳಿಗೆ ಅನುಮತಿ ನೀಡುವಂತೆ ಬಿಬಿಎಂಪಿಗೆ ಕೇಳಿಕೊಂಡಿದ್ದೇವೆ. ಇದರಿಂದ ಚಿತ್ರದ ನಿರ್ಮಾಪಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಚಿತ್ರಮಂದಿರಗಳ ಕಾಂಪೌಂಡ್ ಗಳ ಮೇಲೂ ಸಹ ಪೋಸ್ಟರ್ಗಳನ್ನು ಅಂಟಿಸಲು ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಸಿನಿಮಾಗಾಗಿ ಕೆಲವು ಜಾಹಿರಾತು ಫಲಕಗಳನ್ನು ನಿಗದಿಪಡಿಸಿ ಸಿನಿಮಾದ ಪ್ರಮೋಷನ್ ಗೆ ಸಹಕಾರ ನೀಡುವಂತೆ ನಾವು ಬಿಬಿಎಂಪಿ ಮನವಿ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಇದು ಕಾರ್ಯಗತ ಮಾಡುವುದಕ್ಕೆ ಶಕ್ತಿ ಮೇರಿಯ ಪ್ರಯತ್ನ ಪಡುವುದಾಗಿ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾದ ಡಿ ಅರ್ ಜೈರಾಜ್ ತಿಳಿಸಿದರು.


ಸತೀಶ ಎಂಬಿ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.