ETV Bharat / sitara

'ಮಾರುತಿ ನಗರ ಪೊಲೀಸ್ ಸ್ಟೇಷನ್​'ಗೆ ದಯಾಳ್ ಆ್ಯಕ್ಷನ್ ಕಟ್: ಆದರೆ ಇದು ಕನ್ನಡ ಚಿತ್ರವಲ್ಲ - Dayal new movie

'ಒಂಬತ್ತನೇ ದಿಕ್ಕು' ಚಿತ್ರ ಬಿಡುಗಡೆಯ ಬಳಿಕ ಗ್ಯಾಪ್ ತೆಗೆದುಕೊಂಡಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್, ಈಗ ತೆಲುಗು ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ದಯಾಳ್ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

Dayal to direct Maruthi Nagar Police Station
ದಯಾಳ್ ಪದ್ಮನಾಭನ್
author img

By

Published : Jun 30, 2021, 10:03 AM IST

ದಯಾಳ್ ಪದ್ಮನಾಭನ್ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಯೋಗಿ ಅಭಿನಯದ 'ಒಂಬತ್ತನೇ ದಿಕ್ಕು' ನಂತರ ಅವರು ಕನ್ನಡದಲ್ಲಿ ಯಾವೊಂದು ಚಿತ್ರವನ್ನೂ ನಿರ್ದೇಶಿಸಿಲ್ಲ ಎಂದು ಬೇಸರದಲ್ಲಿದ್ದ ಅವರ ಅಭಿಮಾನಿಗಳಿಗೆ ಈ ಸುದ್ದಿಯಿಂದ ಖುಷಿಯಾಗಬಹುದು. ವಿಷಯ ಏನಪ್ಪ ಅಂದ್ರೆ, ಇದು ಕನ್ನಡ ಚಿತ್ರವಲ್ಲ. ಬದಲಿಗೆ ತೆಲುಗು ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ದಯಾಳ್ ತಯಾರಿ ನಡೆಸಿದ್ದಾರೆ.

ಕಳೆದ ವರ್ಷ ದಯಾಳ್, ತಮ್ಮದೇ ಆ ಕರಾಳ ಚಿತ್ರವನ್ನು ತೆಲುಗಿನಲ್ಲಿ 'ಅನಗನಗಾ ಓ ಅತಿಥಿ' ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಅದು ಆಹಾ ಓಟಿಟಿಯಲ್ಲಿ ಬಿಡುಗಡೆಯಾಗಿ, ಒಂದಿಷ್ಟು ಜನಪ್ರಿಯತೆ ಪಡೆದಿತ್ತು. ಅದನ್ನು ನೋಡಿದ ತೆಲುಗು ನಟ-ನಿರ್ಮಾಪಕ ಮೋಹನ್ ಬಾಬು, ಮೆಚ್ಚುಗೆ ವ್ಯಕ್ತಪಡಿಸಿ, ಒಂದೊಳ್ಳೆಯ ಕಥೆ ಇದ್ದರೆ ಹೇಳಿ ಚಿತ್ರ ಮಾಡೋಣ ಎಂದರಂತೆ. ಆಗ ದಯಾಳ್ ಹೇಳಿದ್ದೇ, 'ಮಾರುತಿ ನಗರ್ ಪೊಲೀಸ್ ಸ್ಟೇಷನ್' ಕಥೆಯನ್ನು.

ಇದನ್ನೂ ಓದಿ: ಈ ನಟ ಹೊಸ ಸಿನಿಮಾಗಳ 'ಅಕ್ಷಯ' ಪಾತ್ರೆ: 'ರಾಕ್ಷಸನ್' ರಿಮೇಕ್‌ನಲ್ಲಿ ಮಿಂಚಲು ರೆಡಿ

ಈ ಕಥೆ ಕೇಳಿ ಮೆಚ್ಚಿಕೊಂಡ ಮೋಹನ್ ಬಾಬು, ದಯಾಳ್​​ಗೆ ಚಿತ್ರ ನಿರ್ದೇಶಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಂತೆ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ದಯಾಳ್, ಆಗಸ್ಟ್ ಎರಡನೆಯ ವಾರದಿಂದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಚಿತ್ರವನ್ನು ಒಂದೇ ಹಂತದಲ್ಲಿ ತಿರುಪತಿ ಸುತ್ತಮುತ್ತ ಚಿತ್ರೀಕರಣ ಮಾಡುವುದಕ್ಕೆ ಅವರು ಪ್ಲಾನ್ ಹಾಕಿಕೊಂಡಿದ್ದಾರೆ.

ಅನಗನಗಾ ಓ ಅತಿಥಿ ಚಿತ್ರಕ್ಕೆ ಅವರು ಕನ್ನಡದ ತಂತ್ರಜ್ಞರನ್ನು ಕರೆದುಕೊಂಡು ಹೋಗಿದ್ದರು. ಈ ಬಾರಿ ಸಹ ಅದು ಮುಂದುವರೆಯಲಿದೆ. ಚಿತ್ರದಲ್ಲಿ ಛಾಯಾಗ್ರಾಹಕ ಶೇಖರ್ ಚಂದ್ರು ಮತ್ತು ಕ್ರೇಜಿಮೈಂಡ್ಸ್ ಶ್ರೀ ಕೆಲಸ ಮಾಡಲಿದ್ದಾರೆ. ಮಿಕ್ಕಂತೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ದಯಾಳ್ ನೀಡಲಿದ್ದಾರೆ.

ದಯಾಳ್ ಪದ್ಮನಾಭನ್ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಯೋಗಿ ಅಭಿನಯದ 'ಒಂಬತ್ತನೇ ದಿಕ್ಕು' ನಂತರ ಅವರು ಕನ್ನಡದಲ್ಲಿ ಯಾವೊಂದು ಚಿತ್ರವನ್ನೂ ನಿರ್ದೇಶಿಸಿಲ್ಲ ಎಂದು ಬೇಸರದಲ್ಲಿದ್ದ ಅವರ ಅಭಿಮಾನಿಗಳಿಗೆ ಈ ಸುದ್ದಿಯಿಂದ ಖುಷಿಯಾಗಬಹುದು. ವಿಷಯ ಏನಪ್ಪ ಅಂದ್ರೆ, ಇದು ಕನ್ನಡ ಚಿತ್ರವಲ್ಲ. ಬದಲಿಗೆ ತೆಲುಗು ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ದಯಾಳ್ ತಯಾರಿ ನಡೆಸಿದ್ದಾರೆ.

ಕಳೆದ ವರ್ಷ ದಯಾಳ್, ತಮ್ಮದೇ ಆ ಕರಾಳ ಚಿತ್ರವನ್ನು ತೆಲುಗಿನಲ್ಲಿ 'ಅನಗನಗಾ ಓ ಅತಿಥಿ' ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಅದು ಆಹಾ ಓಟಿಟಿಯಲ್ಲಿ ಬಿಡುಗಡೆಯಾಗಿ, ಒಂದಿಷ್ಟು ಜನಪ್ರಿಯತೆ ಪಡೆದಿತ್ತು. ಅದನ್ನು ನೋಡಿದ ತೆಲುಗು ನಟ-ನಿರ್ಮಾಪಕ ಮೋಹನ್ ಬಾಬು, ಮೆಚ್ಚುಗೆ ವ್ಯಕ್ತಪಡಿಸಿ, ಒಂದೊಳ್ಳೆಯ ಕಥೆ ಇದ್ದರೆ ಹೇಳಿ ಚಿತ್ರ ಮಾಡೋಣ ಎಂದರಂತೆ. ಆಗ ದಯಾಳ್ ಹೇಳಿದ್ದೇ, 'ಮಾರುತಿ ನಗರ್ ಪೊಲೀಸ್ ಸ್ಟೇಷನ್' ಕಥೆಯನ್ನು.

ಇದನ್ನೂ ಓದಿ: ಈ ನಟ ಹೊಸ ಸಿನಿಮಾಗಳ 'ಅಕ್ಷಯ' ಪಾತ್ರೆ: 'ರಾಕ್ಷಸನ್' ರಿಮೇಕ್‌ನಲ್ಲಿ ಮಿಂಚಲು ರೆಡಿ

ಈ ಕಥೆ ಕೇಳಿ ಮೆಚ್ಚಿಕೊಂಡ ಮೋಹನ್ ಬಾಬು, ದಯಾಳ್​​ಗೆ ಚಿತ್ರ ನಿರ್ದೇಶಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಂತೆ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ದಯಾಳ್, ಆಗಸ್ಟ್ ಎರಡನೆಯ ವಾರದಿಂದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಚಿತ್ರವನ್ನು ಒಂದೇ ಹಂತದಲ್ಲಿ ತಿರುಪತಿ ಸುತ್ತಮುತ್ತ ಚಿತ್ರೀಕರಣ ಮಾಡುವುದಕ್ಕೆ ಅವರು ಪ್ಲಾನ್ ಹಾಕಿಕೊಂಡಿದ್ದಾರೆ.

ಅನಗನಗಾ ಓ ಅತಿಥಿ ಚಿತ್ರಕ್ಕೆ ಅವರು ಕನ್ನಡದ ತಂತ್ರಜ್ಞರನ್ನು ಕರೆದುಕೊಂಡು ಹೋಗಿದ್ದರು. ಈ ಬಾರಿ ಸಹ ಅದು ಮುಂದುವರೆಯಲಿದೆ. ಚಿತ್ರದಲ್ಲಿ ಛಾಯಾಗ್ರಾಹಕ ಶೇಖರ್ ಚಂದ್ರು ಮತ್ತು ಕ್ರೇಜಿಮೈಂಡ್ಸ್ ಶ್ರೀ ಕೆಲಸ ಮಾಡಲಿದ್ದಾರೆ. ಮಿಕ್ಕಂತೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ದಯಾಳ್ ನೀಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.