ETV Bharat / sitara

ಥಿಯೇಟರ್​ ಮಾಲೀಕರಿಂದ ಹಗಲು ದರೋಡೆ: ದಚ್ಚು ಅಭಿಮಾನಿಗಳ ಆರೋಪ - undefined

ಇಂದು ಯಜಮಾನ ಸಿನಿಮಾ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಥಿಯೇಟರ್​ ಮಾಲೀಕರು ಅಭಿಮಾನಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಯಜಮಾನ ಸಿನಿಮಾ
author img

By

Published : Mar 1, 2019, 7:11 PM IST

ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬೆಳಗ್ಗೆ 6 ರಿಂದ ಭರ್ಜರಿ ಪ್ರದರ್ಶನ ಕೂಡಾ ಕಾಣುತ್ತಿದೆ. ಆದರೆ ದರ್ಶನ್ ಅಭಿಮಾನಿಗಳ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡಿರುವ ಥಿಯೇಟರ್ ಮಾಲೀಕರು ಪೇಕ್ಷಕರಿಂದ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಆರೋಪಿಸಲಾಗಿದೆ.

ಯಜಮಾನ

ದೊಡ್ಡಬಳ್ಳಾಪುರ ನಗರದ ರಾಜ್​​​​​​​​​​​​​​​​​​​​​​​​​​​​​​​​​​​​​​​​ಕಮಲ್ ಥಿಯೇಟರ್​​​​ನಲ್ಲಿ 'ಯಜಮಾನ' ಸಿನಿಮಾ ಬಿಡುಗಡೆಯಾಗಿದ್ದು, ಬೆಳಗ್ಗೆ 6 ರಿಂದ ಹೌಸ್​​​​​​​​​​ಫುಲ್ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಮುಂದೆ ಪಟಾಕಿ ಹೊಡೆದು ದರ್ಶನ್ ಕಟೌಟ್​ಗಳಿಗೆ ಹಾಲಿನ ಅಭಿಷೇಕ ಮಾಡಿ ದರ್ಶನ್ ಅಭಿಮಾನಿಗಳು ಸಂಭ್ರಮ ಪಟ್ಟರೆ, ಥಿಯೇಟರ್ ಮಾಲೀಕರು ಮಾತ್ರ ಪೇಕ್ಷಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕನ್ನಡ ಸಿನಿಮಾಗಳಿಗೆ ಸರ್ಕಾರದಿಂದ ಶೇ. 100 ರಷ್ಟು ತೆರಿಗೆ ವಿನಾಯಿತಿ ಇದ್ದು, ಬಾಲ್ಕನಿ ಪ್ರದಶನಕ್ಕೆ 80 ರೂಪಾಯಿ ಇದ್ದರೆ, ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆ 60 ರೂಪಾಯಿ ಮಾತ್ರ. ಆದರೆ ರಾಜ್​​​​​​​​​ಕಮಲ್ ಥಿಯೇಟರ್ ಮಾಲೀಕ ಪೇಕ್ಷಕರಿಂದ ಹಗಲು ದರೋಡೆ ಮಾಡುತ್ತಿದ್ದು, 60 ಮತ್ತು 80 ರೂಪಾಯಿ ಟಿಕೆಟ್ ಮೇಲೆ 100 ಮತ್ತು 120 ಬೆಲೆಯನ್ನು ಸೀಲ್ ಹೊಡೆದು ಮಾರುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ.

yajamana movie
ಯಜಮಾನ ಸಿನಿಮಾ

ಈ ಬಗ್ಗೆ ದರ್ಶನ್​​​​ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಇಷ್ಟಾದರೂ ಕೂಡಾ ಥಿಯೇಟರ್ ಮಾಲೀಕರು ಜನರಿಂದ ಸುಲಿಗೆ ಮಾಡುವುದನ್ನು ನಿಲ್ಲಿಸಿಲ್ಲ. ಥಿಯೇಟರ್ ಮುಂದೆಯೇ ರಾಜಾರೋಷವಾಗಿ ಟಿಕೆಟ್ ಬೆಲೆಯ ಬೋರ್ಡ್ ಹಾಕಿದ್ದಾರೆ. ವಾಣಿಜ್ಯ ತೆರಿಗೆ ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.

ಪರಭಾಷೆ ಚಿತ್ರಗಳಿಗೆ ಶೇ. 100 ರಷ್ಟು ತೆರಿಗೆ ಇದ್ದು ದುಪ್ಪಟ್ಟು ಹಣ ಕೊಟ್ಟು ನೋಡುವುದು ಅನಿವಾರ್ಯ. ಆದರೆ ಕನ್ನಡ ಚಿತ್ರರಂಗದ ಬೆಳವಣಿಗೆಗೆಂದು ಶೇ. 100ರಷ್ಟು ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆದರೆ ಥಿಯೇಟರ್ ಮಾಲೀಕರು ಮತ್ತು ಹಂಚಿಕೆದಾರರು ಒಂದಾಗಿ ಜನರಿಂದ ಹಣ ವಸೂಲಿಗೆ ಇಳಿದು ಪೇಕ್ಷಕ ಮತ್ತು ಸರ್ಕಾರಕ್ಕೆ ಮೋಸ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ದರ್ಶನ್ ಅಭಿಮಾನಿಗಳ ಆರೋಪ.

ಇನ್ನು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಥಿಯೇಟರ್ ಮಾಲೀಕರು ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಕೂಡಾ ನೀಡಿಲ್ಲ. ಶೌಚಾಲಯ ಸರಿ ಇಲ್ಲ, ಥಿಯೇಟರ್ ಆವರಣದಲ್ಲಿ ಕಸದ ರಾಶಿ ಹಾಗೇ ಬಿದ್ದಿರುತ್ತದೆ. ಯಜಮಾನ ಸಿನಿಮಾ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ದರ್ಶನ್, ಥಿಯೇಟರ್ ಮಾಲೀಕರ ಹಗಲು ದರೋಡೆಯ ಬಗ್ಗೆ ಮಾತನಾಡಬೇಕು ಎಂಬುದು ದಚ್ಚು ಅಭಿಮಾನಿಗಳ ಒತ್ತಾಯ.

ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬೆಳಗ್ಗೆ 6 ರಿಂದ ಭರ್ಜರಿ ಪ್ರದರ್ಶನ ಕೂಡಾ ಕಾಣುತ್ತಿದೆ. ಆದರೆ ದರ್ಶನ್ ಅಭಿಮಾನಿಗಳ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡಿರುವ ಥಿಯೇಟರ್ ಮಾಲೀಕರು ಪೇಕ್ಷಕರಿಂದ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಆರೋಪಿಸಲಾಗಿದೆ.

ಯಜಮಾನ

ದೊಡ್ಡಬಳ್ಳಾಪುರ ನಗರದ ರಾಜ್​​​​​​​​​​​​​​​​​​​​​​​​​​​​​​​​​​​​​​​​ಕಮಲ್ ಥಿಯೇಟರ್​​​​ನಲ್ಲಿ 'ಯಜಮಾನ' ಸಿನಿಮಾ ಬಿಡುಗಡೆಯಾಗಿದ್ದು, ಬೆಳಗ್ಗೆ 6 ರಿಂದ ಹೌಸ್​​​​​​​​​​ಫುಲ್ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಮುಂದೆ ಪಟಾಕಿ ಹೊಡೆದು ದರ್ಶನ್ ಕಟೌಟ್​ಗಳಿಗೆ ಹಾಲಿನ ಅಭಿಷೇಕ ಮಾಡಿ ದರ್ಶನ್ ಅಭಿಮಾನಿಗಳು ಸಂಭ್ರಮ ಪಟ್ಟರೆ, ಥಿಯೇಟರ್ ಮಾಲೀಕರು ಮಾತ್ರ ಪೇಕ್ಷಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕನ್ನಡ ಸಿನಿಮಾಗಳಿಗೆ ಸರ್ಕಾರದಿಂದ ಶೇ. 100 ರಷ್ಟು ತೆರಿಗೆ ವಿನಾಯಿತಿ ಇದ್ದು, ಬಾಲ್ಕನಿ ಪ್ರದಶನಕ್ಕೆ 80 ರೂಪಾಯಿ ಇದ್ದರೆ, ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆ 60 ರೂಪಾಯಿ ಮಾತ್ರ. ಆದರೆ ರಾಜ್​​​​​​​​​ಕಮಲ್ ಥಿಯೇಟರ್ ಮಾಲೀಕ ಪೇಕ್ಷಕರಿಂದ ಹಗಲು ದರೋಡೆ ಮಾಡುತ್ತಿದ್ದು, 60 ಮತ್ತು 80 ರೂಪಾಯಿ ಟಿಕೆಟ್ ಮೇಲೆ 100 ಮತ್ತು 120 ಬೆಲೆಯನ್ನು ಸೀಲ್ ಹೊಡೆದು ಮಾರುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ.

yajamana movie
ಯಜಮಾನ ಸಿನಿಮಾ

ಈ ಬಗ್ಗೆ ದರ್ಶನ್​​​​ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಇಷ್ಟಾದರೂ ಕೂಡಾ ಥಿಯೇಟರ್ ಮಾಲೀಕರು ಜನರಿಂದ ಸುಲಿಗೆ ಮಾಡುವುದನ್ನು ನಿಲ್ಲಿಸಿಲ್ಲ. ಥಿಯೇಟರ್ ಮುಂದೆಯೇ ರಾಜಾರೋಷವಾಗಿ ಟಿಕೆಟ್ ಬೆಲೆಯ ಬೋರ್ಡ್ ಹಾಕಿದ್ದಾರೆ. ವಾಣಿಜ್ಯ ತೆರಿಗೆ ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.

ಪರಭಾಷೆ ಚಿತ್ರಗಳಿಗೆ ಶೇ. 100 ರಷ್ಟು ತೆರಿಗೆ ಇದ್ದು ದುಪ್ಪಟ್ಟು ಹಣ ಕೊಟ್ಟು ನೋಡುವುದು ಅನಿವಾರ್ಯ. ಆದರೆ ಕನ್ನಡ ಚಿತ್ರರಂಗದ ಬೆಳವಣಿಗೆಗೆಂದು ಶೇ. 100ರಷ್ಟು ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆದರೆ ಥಿಯೇಟರ್ ಮಾಲೀಕರು ಮತ್ತು ಹಂಚಿಕೆದಾರರು ಒಂದಾಗಿ ಜನರಿಂದ ಹಣ ವಸೂಲಿಗೆ ಇಳಿದು ಪೇಕ್ಷಕ ಮತ್ತು ಸರ್ಕಾರಕ್ಕೆ ಮೋಸ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ದರ್ಶನ್ ಅಭಿಮಾನಿಗಳ ಆರೋಪ.

ಇನ್ನು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಥಿಯೇಟರ್ ಮಾಲೀಕರು ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಕೂಡಾ ನೀಡಿಲ್ಲ. ಶೌಚಾಲಯ ಸರಿ ಇಲ್ಲ, ಥಿಯೇಟರ್ ಆವರಣದಲ್ಲಿ ಕಸದ ರಾಶಿ ಹಾಗೇ ಬಿದ್ದಿರುತ್ತದೆ. ಯಜಮಾನ ಸಿನಿಮಾ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ದರ್ಶನ್, ಥಿಯೇಟರ್ ಮಾಲೀಕರ ಹಗಲು ದರೋಡೆಯ ಬಗ್ಗೆ ಮಾತನಾಡಬೇಕು ಎಂಬುದು ದಚ್ಚು ಅಭಿಮಾನಿಗಳ ಒತ್ತಾಯ.

Intro:ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆ ಯಾಗಿದೆ. ಬೆಳಗ್ಗೆ 6 ರಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಅಭಿಮಾನಿಗಳ ಕ್ರೇಜ್ ನನ್ನೇ ಬಂಡವಾಳ ಮಾಡಿಕೊಂಡಿರುವ ಥಿಯೇಟರ್ ಮಾಲೀಕರು ಮಾಲೀಕರು ಪೇಕ್ಷಕರಿಂದ ಹಗಲು ದರೋಡೆಗೆ ಇಳಿದಿದ್ದಾರೆ.


Body:ದೊಡ್ಡಬಳ್ಳಾಪುರ ನಗರದ ರಾಜ್ ಕಮಲ್ ಥಿಯೇಟರ್ ನಲ್ಲಿ ಯಜಮಾನ ಸಿನಿಮಾ ಬಿಡುಗಡೆಯಾಗಿದ್ದು. ಬೆಳಿಗ್ಗೆ 6 ರಿಂದ ಯಜಮಾನ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಮುಂದೆ ಪಟಾಕಿ ಹೊಡೆದು. ದರ್ಶನ್ ಕಟೌಟ್ ಗಳಿಗೆ ಹಾಲಿನ ಅಭಿಶೇಕ ಮಾಡಿ ದರ್ಶನ್ ಅಭಿಮಾನಿಗಳು ಸಂಭ್ರಮ ಪಟ್ಟುರೇ ಥಿಯೇಟರ್ ಮಾಲೀಕರು ಪೇಕ್ಷಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾಗಳಿಗೆ ಸರ್ಕಾರದಿಂದ ಶೇಕಡಾ ನೂರರಷ್ಟು ತೆರಿಗೆ ವಿನಾಯಿತಿ ಇದ್ದು ಬಾಲ್ಕನಿ ಪ್ರದಶನಕ್ಕೆ 80 ರೂಪಾಯಿ ಇದ್ರೆ ಸೆಕೆಂಡ್ ಕ್ಲಾಸ್ ಪ್ರದೇಶದ ಟಿಕೆಟ್ ಬೆಲೆ 60 ರೂಪಾಯಿ ಮಾತ್ರ. ಅದರೆ ರಾಜ್ ಕಮಲ್ ಥಿಯೇಟರ್ ಮಾಲೀಕ ಪೇಕ್ಷಕರಿಂದ ಹಗಲು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. 60 ಮತ್ತು 80 ರೂಪಾಯಿ ಟಿಕೆಟ್ ಮೇಲೆ 100 ಮತ್ತು 120 ಬೆಲೆಯನ್ನು ಟಿಕೆಟ್ ಮೇಲೆ ಸೀಲ್ ಹೊಡೆದು ಟಿಕೆಟ್ ಮಾರುವ ಮೂಲಕ ಹಗಲು ದರೋಡೆ ಇಳಿದಿದ್ದಾರೆ.

ದರ್ಶನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಥಿಯೇಟರ್ ಮಾಲೀಕರ ಹಗಲು ದರೋಡೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದರು ಸಹ ಥಿಯೇಟರ್ ಮಾಲೀಕರು ಜನರಿಂದ ಸೂಲಿಗೆ ಮಾಡೋದು ನಿಲ್ಲಿಸಿಲ್ಲ. ರಾಜರೋಷವಾಗಿ ಥಿಯೇಟರ್ ಮುಂದೆಯೇ ಟಿಕೆಟ್ ಬೆಲೆಯ ಬೋರ್ಡ್ ಹಾಕಿದ್ದಾರೆ. ಕಂಡು ಕಾಣದಂತೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

ಪರಭಾಷೆಯ ಚಿತ್ರಗಳಿಗೆ ಶೇಕಡಾ ನೂರರಷ್ಟು ತೆರಿಗೆ ಇದ್ದು. ದುಪ್ಪಟ್ಟು ಹಣ ಕೊಟ್ಟು ನೋಡುವುದು ಅನಿವಾರ್ಯ. ಅದರೆ ಕನ್ನಡ ಚಿತ್ರರಂಗದ ಉದ್ದಾರಕ್ಕೆ ಶೇಕಡಾ ನೂರರಷ್ಟು ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಅದರಿಲ್ಲಿ ಥಿಯೇಟರ್ ಮಾಲೀಕರು ಮತ್ತು ಹಂಚಿಕೆದಾರರು ಒಂದಾಗಿ ಜನರಿಂದ ಹಣ ವಸೂಲಿಗೆ ಇಳಿದು ಪೇಕ್ಷಕ ಮತ್ತು ಸರ್ಕಾರಕ್ಕು ಮಣ್ಣೇರಚುತ್ತಿದ್ದಾರೆ.


Conclusion:ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಥಿಯೇಟರ್ ಮಾಲೀಕರು ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯ ನೀಡಿಲ್ಲ. ಸ್ವಚ್ಛ ಮಾಡದ ಶೌಚಾಲಯ ಮತ್ತು ಥಿಯೇಟರ್ ನಲ್ಲಿ ಕಸದ ರಾಶಿಯೇ ಬಿದ್ದಿರುತ್ತೆ. ಯಜಮಾನ ಸಿನಿಮಾ ಮೂಲಕ ಅಭಿಮಾನಿಗಳ ರಸದೌತಣ ನೀಡಿರುವ ದರ್ಶನ್ ಥಿಯೇಟರ್ ಮಾಲೀಕರ ಹಗಲು ದರೋಡೆಯ ಗಮನ ಸೆಳೆಯ ಬೇಕಿದೆ. ಹಾಗೆಯೇ ವಾಣಿಜ್ಯ ತೆರಿಗೆ ಅಧಿಕಾರಿಗಳು ನಿದ್ದೆಯಿಂದ ಎದ್ದು ಪೇಕ್ಷಕರ ಜೇಬಿಗೆ ಬಿಳುವ ಕತ್ತರಿ ತಪ್ಪಿಸ ಬೇಕಿದೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.