ETV Bharat / sitara

ಗೆಳೆಯರೊಂದಿಗೆ ಚಾಮರಾಜನಗರಕ್ಕೆ ಬಂದು ಮಲೆ ಮಹದೇಶ್ವರನ ದರ್ಶನ ಪಡೆದ ಶಿವರಾಜ್​​​ಕುಮಾರ್​​​

ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್ ಪ್ರತಿ ವರ್ಷದಂತೆ ಈ ಬಾರಿ ಕೂಡಾ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ಮಾದೇಶ್ವರನ ದರ್ಶನ ಪಡೆದರು. ನಟ ಗುರುದತ್, ನಿರ್ದೇಶಕ ರಘುರಾಮ್ ಕೂಡಾ ಶಿವಣ್ಣನಿಗೆ ಸಾಥ್ ನೀಡಿದ್ದರು.

author img

By

Published : Sep 6, 2019, 3:26 PM IST

ಶಿವರಾಜ್​​​ಕುಮಾರ್​​​

ಚಾಮರಾಜನಗರ: 'ಏಳು ಮಲೆ ಮೇಲೇರಿ ಬಂದಾನಪ್ಪೋ ಮಾದೇವ' ...ಜೋಗಯ್ಯ ಚಿತ್ರದ ಈ ಹಾಡು ಇಂದಿಗೂ ಎಲ್ಲರ ಮೋಸ್ಟ್ ಫೇವರಿಟ್. ಈ ಹಾಡಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್​​​ಕುಮಾರ್ ಮಲೆ ಮಹದೇಶ್ವರನನ್ನು ಹಾಡಿ ಹೊಗಳಿದ್ದಾರೆ.

Shivarajkumar
ಶಿವರಾಜ್​​ಕುಮಾರ್ ಜೊತೆ ಸೆಲ್ಫಿ ತೆಗೆಸಿಕೊಳ್ಳುತ್ತಿರುವ ಜನರು

ಶೂಟಿಂಗ್​​​​ನಲ್ಲಿ ಮಾತ್ರವಲ್ಲದೆ ಪ್ರತಿ ವರ್ಷ ಶಿವರಾಜ್​ಕುಮಾರ್ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಚಾಮರಾಜನಗರದ ಹನೂರು ತಾಲೂಕಿನ ಈ ಪವಿತ್ರ ಕ್ಷೇತ್ರಕ್ಕೆ ಇಂದು ಶಿವಣ್ಣ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಶಿವರಾಜ್​​​ಕುಮಾರ್ ಜೊತೆ ನಟ ಚಿ. ಗುರುದತ್​​​​, ನಿರ್ದೇಶಕ ರಘುರಾಮ್ ಹಾಗೂ ಇನ್ನಿತರರು ಬಂದು ಮಹದೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು ದೇವಸ್ಥಾನಕ್ಕೆ ಶಿವರಾಜ್​ಕುಮಾರ್ ಬಂದದ್ದೇ ತಡ ಸ್ಥಳದಲ್ಲಿದ್ದ ಭಕ್ತಾದಿಗಳು ಅವರ ಸುತ್ತ ನೆರೆದು ಸೆಲ್ಫಿಗಾಗಿ ಮುಗಿಬಿದ್ದರು. ಶಿವಣ್ಣ ಬಂದಿದ್ದಾರೆ ಎಂಬ ಸುದ್ದಿ ಹರಡಿ ಜನರು ದೇವಸ್ಥಾನದತ್ತ ದೌಡಾಯಿಸುವ ದೃಶ್ಯ ಕಂಡುಬಂತು. ಇನ್ನು ಎಲ್ಲರೊಂದಿಗೆ ನಗುತ್ತಾ ಸೆಲ್ಫಿಗೆ ಪೋಸ್ ಕೊಟ್ಟ ಶಿವಣ್ಣ ನಂತರ ದೇವಸ್ಥಾನದಲ್ಲಿ ಕೆಲಹೊತ್ತು ಕುಳಿತು ಪ್ರಾರ್ಥಿಸಿದರು.

ಚಾಮರಾಜನಗರ: 'ಏಳು ಮಲೆ ಮೇಲೇರಿ ಬಂದಾನಪ್ಪೋ ಮಾದೇವ' ...ಜೋಗಯ್ಯ ಚಿತ್ರದ ಈ ಹಾಡು ಇಂದಿಗೂ ಎಲ್ಲರ ಮೋಸ್ಟ್ ಫೇವರಿಟ್. ಈ ಹಾಡಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್​​​ಕುಮಾರ್ ಮಲೆ ಮಹದೇಶ್ವರನನ್ನು ಹಾಡಿ ಹೊಗಳಿದ್ದಾರೆ.

Shivarajkumar
ಶಿವರಾಜ್​​ಕುಮಾರ್ ಜೊತೆ ಸೆಲ್ಫಿ ತೆಗೆಸಿಕೊಳ್ಳುತ್ತಿರುವ ಜನರು

ಶೂಟಿಂಗ್​​​​ನಲ್ಲಿ ಮಾತ್ರವಲ್ಲದೆ ಪ್ರತಿ ವರ್ಷ ಶಿವರಾಜ್​ಕುಮಾರ್ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಚಾಮರಾಜನಗರದ ಹನೂರು ತಾಲೂಕಿನ ಈ ಪವಿತ್ರ ಕ್ಷೇತ್ರಕ್ಕೆ ಇಂದು ಶಿವಣ್ಣ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಶಿವರಾಜ್​​​ಕುಮಾರ್ ಜೊತೆ ನಟ ಚಿ. ಗುರುದತ್​​​​, ನಿರ್ದೇಶಕ ರಘುರಾಮ್ ಹಾಗೂ ಇನ್ನಿತರರು ಬಂದು ಮಹದೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು ದೇವಸ್ಥಾನಕ್ಕೆ ಶಿವರಾಜ್​ಕುಮಾರ್ ಬಂದದ್ದೇ ತಡ ಸ್ಥಳದಲ್ಲಿದ್ದ ಭಕ್ತಾದಿಗಳು ಅವರ ಸುತ್ತ ನೆರೆದು ಸೆಲ್ಫಿಗಾಗಿ ಮುಗಿಬಿದ್ದರು. ಶಿವಣ್ಣ ಬಂದಿದ್ದಾರೆ ಎಂಬ ಸುದ್ದಿ ಹರಡಿ ಜನರು ದೇವಸ್ಥಾನದತ್ತ ದೌಡಾಯಿಸುವ ದೃಶ್ಯ ಕಂಡುಬಂತು. ಇನ್ನು ಎಲ್ಲರೊಂದಿಗೆ ನಗುತ್ತಾ ಸೆಲ್ಫಿಗೆ ಪೋಸ್ ಕೊಟ್ಟ ಶಿವಣ್ಣ ನಂತರ ದೇವಸ್ಥಾನದಲ್ಲಿ ಕೆಲಹೊತ್ತು ಕುಳಿತು ಪ್ರಾರ್ಥಿಸಿದರು.

Intro:ಕುಚುಕುಗಳ ಜೊತೆ ಮಾದಪ್ಪನ ದರ್ಶನ ಪಡೆದ ಶಿವಣ್ಣ

ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಚಿತ್ರನಟ ಶಿವರಾಜಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.


Body:ಮಹದೇಶ್ವರನ ಸನ್ನಿಧಿಗೆ ವರ್ಷಕೊಮ್ಮೆ ಬರುವ ಅಣ್ಣಾವ್ರ ಪುತ್ರ ಈ ಬಾರಿ ಹಿರಿಯನಟ ಚಿ.ಗುರುದತ್ ಮತ್ತಿತ್ತರ ಸಂಗಡಿಗರೊಂದಿಗೆ ಬಂದು ದೇವರ ದರ್ಶನ ಮಾಡಿದ್ದಾರೆ.

Conclusion:ದೇಗುಲಕ್ಕೆ ಶಿವಣ್ಣ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಸಮಾಧಾನದಿಂದಲೇ ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಶಿವಣ್ಣ ದೇಗುಲದಲ್ಲಿ ಕೆಲಹೊತ್ತು ಕುಳಿತು ಪ್ರಾರ್ಥಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.