ETV Bharat / sitara

ನಾಳೆ ತೆರೆಗೆ ಬರುತ್ತಿದ್ದಾರೆ ಶ್ರೀ ಭರತ ಬಾಹುಬಲಿ

author img

By

Published : Jan 16, 2020, 11:15 AM IST

ನಾಳೆ ಶ್ರೀ ಭರತ ಬಾಹುಬಲಿ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾಕ್ಕೆ ಮಂಜು ಮಾಂಡವ್ಯ ನಿರ್ದೇಶನವಿದ್ದು, ಚಿಕ್ಕಣ್ಣ ಅಭಿನಯಿಸಿದ್ದಾರೆ.

bharata bahubali on screen tomorrow
ನಾಳೆ ತೆರೆಗೆ ಬರುತ್ತಿದ್ದಾರೆ ಶ್ರೀ ಭರತ ಬಾಹುಬಲಿ

ನಾಳೆ ಅಂದರೆ ಜನವರಿ 17 ರಂದು ‘ಶ್ರೀ ಭರತ ಬಾಹುಬಲಿ’ ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಈ ಸಿನಿಮಾವನ್ನು ಮಂಜು ಮಾಂಡವ್ಯ ನಿರ್ದೇಶನ ಮಾಡಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ಬಂಡವಾಳ ಹೂಡಿದ್ದಾರೆ. ಅಲ್ಲದೆ, ಸಿನಿಮಾವನ್ನು ಚಿತ್ರ ಮಂದಿದಲ್ಲಿ ನೋಡಿದವರಿಗೆ ಲಕ್ಕಿ ಡಿಪ್ ಮೂಲಕ ಒಂದು ಕೋಟಿ ಬಹುಮಾನ ಸಹ ಘೋಷಣೆ ಮಾಡಲಾಗಿದೆ. ಸಿನಿಮಾ ನೋಡಿದ 14 ದಿನಗಳಲ್ಲಿ ಆಯ್ದ ಕೆಲವು ಮಂದಿಗೆ ಬಹುಮಾನ ಸಿಗಲಿದೆ.

bharata bahubali on screen tomorrow
ಶ್ರೀ ಭರತ ಬಾಹುಬಲಿ ಚಿತ್ರತಂಡ
bharata bahubali on screen tomorrow
ಶ್ರೀ ಭರತ ಬಾಹುಬಲಿ ಚಿತ್ರತಂಡ

ಅಂದ ಹಾಗೆ ಈ ಚಿತ್ರದ ಮೂಲಕ ಹಿರಿಯ ನಟ ಚರಣ್ ರಾಜ್ ಪುತ್ರ ತೇಜ್ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಸಿನಿಮಾದಲ್ಲಿ ಚಿಕ್ಕಣ್ಣ ಹಾಸ್ಯ ಮಜಭೂತಾಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸಲಿದೆ. ಇನ್ನು ಸಿನಿಮಾಕ್ಕೆ ಸಾರಾ ಹರೀಶ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ಮಾಂಡವ್ಯ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿದ್ದಾರೆ.

bharata bahubali on screen tomorrow
ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ

ಸಿನಿಮಾದಲ್ಲಿ ಶ್ರೇಯ ಶೆಟ್ಟಿ, ಶ್ರುತಿ ಪ್ರಕಾಶ್​, ಶ್ರೀನಿವಾಸಮೂರ್ತಿ, ಭವ್ಯ, ಅಚ್ಯುತ್ ಕುಮಾರ್, ಹರೀಶ್ ರೈ, ಜಾನ್ ಕೋಕೇನ್, ಅಯ್ಯಪ್ಪ ಪಿ ಶರ್ಮ, ಕರಿ ಸುಬ್ಬು, ಪುಷ್ಪ ಸ್ವಾಮಿ ಹಾಗೂ ಇತರರು ತಾರಗಣದಲ್ಲಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ರಿಷಿ ಸಹ ಕಾಣಿಸಿಕೊಂಡಿದ್ದಾರೆ.

ನಾಳೆ ಅಂದರೆ ಜನವರಿ 17 ರಂದು ‘ಶ್ರೀ ಭರತ ಬಾಹುಬಲಿ’ ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಈ ಸಿನಿಮಾವನ್ನು ಮಂಜು ಮಾಂಡವ್ಯ ನಿರ್ದೇಶನ ಮಾಡಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ಬಂಡವಾಳ ಹೂಡಿದ್ದಾರೆ. ಅಲ್ಲದೆ, ಸಿನಿಮಾವನ್ನು ಚಿತ್ರ ಮಂದಿದಲ್ಲಿ ನೋಡಿದವರಿಗೆ ಲಕ್ಕಿ ಡಿಪ್ ಮೂಲಕ ಒಂದು ಕೋಟಿ ಬಹುಮಾನ ಸಹ ಘೋಷಣೆ ಮಾಡಲಾಗಿದೆ. ಸಿನಿಮಾ ನೋಡಿದ 14 ದಿನಗಳಲ್ಲಿ ಆಯ್ದ ಕೆಲವು ಮಂದಿಗೆ ಬಹುಮಾನ ಸಿಗಲಿದೆ.

bharata bahubali on screen tomorrow
ಶ್ರೀ ಭರತ ಬಾಹುಬಲಿ ಚಿತ್ರತಂಡ
bharata bahubali on screen tomorrow
ಶ್ರೀ ಭರತ ಬಾಹುಬಲಿ ಚಿತ್ರತಂಡ

ಅಂದ ಹಾಗೆ ಈ ಚಿತ್ರದ ಮೂಲಕ ಹಿರಿಯ ನಟ ಚರಣ್ ರಾಜ್ ಪುತ್ರ ತೇಜ್ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಸಿನಿಮಾದಲ್ಲಿ ಚಿಕ್ಕಣ್ಣ ಹಾಸ್ಯ ಮಜಭೂತಾಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸಲಿದೆ. ಇನ್ನು ಸಿನಿಮಾಕ್ಕೆ ಸಾರಾ ಹರೀಶ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ಮಾಂಡವ್ಯ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿದ್ದಾರೆ.

bharata bahubali on screen tomorrow
ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ

ಸಿನಿಮಾದಲ್ಲಿ ಶ್ರೇಯ ಶೆಟ್ಟಿ, ಶ್ರುತಿ ಪ್ರಕಾಶ್​, ಶ್ರೀನಿವಾಸಮೂರ್ತಿ, ಭವ್ಯ, ಅಚ್ಯುತ್ ಕುಮಾರ್, ಹರೀಶ್ ರೈ, ಜಾನ್ ಕೋಕೇನ್, ಅಯ್ಯಪ್ಪ ಪಿ ಶರ್ಮ, ಕರಿ ಸುಬ್ಬು, ಪುಷ್ಪ ಸ್ವಾಮಿ ಹಾಗೂ ಇತರರು ತಾರಗಣದಲ್ಲಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ರಿಷಿ ಸಹ ಕಾಣಿಸಿಕೊಂಡಿದ್ದಾರೆ.

 

ಶುಕ್ರವಾರ ಎರಡು ಕನ್ನಡ ಸಿನಿಮಗಳು ಬಿಡುಗಡೆ

ಕಳೆದ ವಾರ ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಆಗಿಲ್ಲ, ಈ ವಾರ ಅಂದರೆ ಜನವರಿ 17 ರಂದು ಎರಡು ಕನ್ನಡ ಸಿನಿಮಗಳು ಶ್ರೀ ಭರತ ಬಾಹುಬಲಿ ಹಾಗೂ ಜನ್ ಧನ್’. ಈ ಎರಡು ಸಿನಿಮಗಳು ಹೊಸ ನಿರ್ಮಾಪಕರುಗಳದ್ದು.

ಶ್ರೀ ಭರತ ಬಾಹುಬಲಿ ಚಿತ್ರವನ್ನೂ ರಿಯಲ್ ಎಸ್ಟೇಟ್ ಉಧ್ಯಮಿ ಶಿವಪ್ರಕಾಶ್ ಆರು ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಿ ಸಿನಿಮಾ ನೋಡಿದವರಿಗೆ ಲಕ್ಕಿ ಡಿಪ್ ಮೂಲಕ ಒಂದು ಕೋಟಿ ಬಹುಮಾನ ಸಹ ಘೋಷಣೆ ಮಾಡಿದ್ದಾರೆ. ಎರಡು ವಾರಗಳಲ್ಲಿ ಪ್ರೇಕ್ಷಕರು ಕರ್ನಾಟಕದಾದ್ಯಂತ ಸಿನಿಮಾ ನೋಡಿದವರು ಮಾತ್ರ ಈ ಲಕ್ಕಿ ವಿಜೇತರ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ.

ಅಂದಹಾಗೆ ಈ ಚಿತ್ರದ ಮೂಲಕ ಹಿರಿಯ ನಟ ಚರಣ್ ರಾಜ್ ಅವರ ಪುತ್ರ ತೇಜ್ ರಾಜ್ ಕರ್ನಾಟಕ ಜೈನ ಚರಿತ್ರೆಯಲ್ಲಿ ಸೇರಿರುವ ಬಾಹುಬಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಮಾಸ್ಟೆರ್ ಪೀಸ್ ಸಿನಿಮಾ ಇಂದ ನಿರ್ದೇಶಕ ಆದ ಹೆಸರಾಂತ ಸಂಭಾಷಣೆಗಾರ ಮಂಜು ಮಾಂಡವ್ಯ ಈ ಚಿತ್ರದಲ್ಲಿ ನಾಯಕ ಆಗಿ ಹೊರಹೊಮ್ಮಿದ್ದಾರೆ. ಚಿಕ್ಕಣ್ಣ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಚಿತ್ರದ ಕಥಾ ನಾಯಕಿ ಸಾರಾ ಹರೀಶ್ ವಿದೇಶದಿಂದ ಬಂದು ತನ್ನ ಬೇರುಗಳನ್ನು ಹುಡುಕಲು ಬರುತ್ತಾಳೆ.

ಮಂಜು ಮಾಂಡವ್ಯ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಅಲ್ಲದೆ ಒಂದು ಹಾಡನ್ನು ಸಹ ಹಾಡಿದ್ದಾರೆ, ಮಣಿಕಾಂತ್ ಖದ್ರಿ ಸಂಗೀತ, ಪರ್ವೇಜ್ ಛಾಯಾಗ್ರಹಣ, ಕೆ ಎಂ ಪ್ರಕಾಷ್ ಸಂಕಲನ, ಕಲೈ ಹಾಗೂ ಮುರಳಿ ನೃತ್ಯ, ಮಲ್ಲ ಶಿವಕುಮಾರ್ ಹಾಗೂ ಅರುಣ್ ಕುಮಾರ್ ಕಲಾ ನಿರ್ದೇಶನ, ಮಾಸ್ ಮಾಧ, ಎ ವಿಜಯ್, ವಿನೋದ್ ಸಾಹಸವಿದೆ.

ಶ್ರೇಯ ಶೆಟ್ಟಿ, ಶ್ರುತಿ ಪ್ರಕಾಷ್, ಶ್ರೀನಿವಾಸಮೂರ್ತಿ, ಭವ್ಯ, ಅಚ್ಯುತ್ ಕುಮಾರ್, ಹರೀಶ್ ರೈ, ಜಾನ್ ಕೋಕೇನ್, ಅಯ್ಯಪ್ಪ ಪಿ ಶರ್ಮ, ಕರಿ ಸುಬ್ಬು, ಪುಷ್ಪ ಸ್ವಾಮಿ ಹಾಗೂ ಇತರರು ತಾರಗಣದಲ್ಲಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ರಿಷಿ ಸಹ ಕಾಣಿಸಿಕೊಂಡಿದ್ದಾರೆ.

ಜನ್ ಧನ್ – ಶ್ರೀ ಸಿದ್ದಿ ವಿನಾಯಕ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಟಿ ನಾಗಚಂದ್ರ ಸ್ನೇಹಿತರು ಸೇರಿಕೊಂಡು ನಿರ್ಮಾಣ ಮಾಡಿರುವ ಚಿತ್ರ ಒಂದು ದಿವಸದಲ್ಲಿ ನಡೆಯುವ ಕಥೆ. ಹೆದ್ದಾರಿಯಲ್ಲಿ ಬೆಳಗಿನ ಜಾವ 4 ಘಂಟೆಗೆ ಪ್ರಾರಂಭ ಆದರೆ ಸಂಜೆ ಹೊತ್ತಿಗೆ ಕೊನೆಯಾಗುತ್ತದೆ.

ಸಾಮಾನ್ಯ ಜನರ ಭಾವನೆಗಳನ್ನೂ ಹೇಳುವ ಈ ಸಿನಿಮಾ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಟಿ ನಾಗಚಂದ್ರ ಮಾಡಿದ್ದಾರೆ. ಉಮೇಶ್ ಕಂಪ್ಲಾಪುರ್ ಛಾಯಾಗ್ರಹಣ, ಟಾಪ್ ಸ್ಟಾರ್ ರೇಣು ಸಂಗೀತ, ಗೌತಮ್ ಶ್ರೀವತ್ಸವ್ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸುನಿಲ್ ಶಶಿ, ರಚನ, ಮಾಸ್ಟೆರ್ ಲಕ್ಷ್ಮಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ, ಸುನಿಲ್ ವಿನಾಯಕ, ಸುಮನ್, ತೆಜೇಶ್ವರ್ ಹಾಗೂ ಇತರರು ಅಭಿನಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.