ಹೆಣ್ಣು ಮಕ್ಕಳಿಗೆ ಒಳ್ಳೆಯದನ್ನು ಮಾಡಲಿಕ್ಕೆ ಆಗದಿದ್ರೂ ಪರವಾಗಿಲ್ಲ. ಆದ್ರೆ ಕೆಟ್ಟದ್ದನ್ನು ಮಾತ್ರ ಮಾಡಬೇಡಿ. ಸಪೋರ್ಟ್ ಮಾಡಿ. ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡೋಣವೆಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.
ಬ್ರಹ್ಮಚಾರಿ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ನಟಿ, ಇತ್ತೀಚೆಗಷ್ಟೇ ತೆಲಂಗಾಣದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿಗಳಿಗೆ ಹೈದರಾಬಾದ್ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಪಶು ವೈದ್ಯೆ ಮೇಲಿನ ಅತ್ಯಾಚಾರ ವಿಚಾರ ತುಂಬಾ ನೋವನ್ನುಂಟುಮಾಡಿತ್ತು. ಆ ಘಟನೆ ನಡೆದ ಮಾರನೇ ದಿನ ನನಗೆ ನೈಟ್ ಶೂಟಿಂಗ್ ಇತ್ತು. ಎಂದೂ ನನ್ನ ಜೊತೆ ಶೂಟಿಂಗ್ಗೆ ಬಾರದ ನನ್ನ ತಂದೆ ಅಂದು ಪುಟ್ಟ ನಾನು ಬರ್ತೀನಿ ಎಂದಾಗ ಎಂಥಾ ಪರಿಸ್ಥಿತಿ ಬಂತು ಎಂದು ಯೋಚಿಸಿದೆ ಎಂದು ಅದಿತಿ ತಿಳಿಸಿದ್ರು.
ಜೀವಂತವಾಗಿರುವಾಗಲೇ ಸುಡುತ್ತಾರೆ ಎಂದರೆ ಆ ವ್ಯಕ್ತಿಗಳಿಗೆ ಎಂತಾ ವಿಕೃತ ಮನಸ್ಸಿರಬಹುದು. ಇಂತಹ ಘಟನೆಗಳು ನಡೆದಾಗ ಹೆಣ್ಣು ಮಕ್ಕಳ ಅಪ್ಪ-ಅಮ್ಮಂದಿರಿಗೆ ತುಂಬಾ ಆತಂಕ ಕಾಡುತ್ತೆ. ನಮಗೂ ಭಯ ಆಗುತ್ತೆ ಎಂದು ಅದಿತಿ ಭಾವುಕರಾದ್ರು.
ಇನ್ನು ಆ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿ ಸಾಯಿಸಿದರು ಎಂಬ ಸುದ್ದಿ ಕೇಳುತ್ತಿದ್ದಂತೆ ನನಗೆ ತುಂಬಾ ಖುಷಿಯಾಯಿತು. ಅಂದು ನನಗೆ ಕರೆ ಮಾಡಿದವರಿಗೆಲ್ಲ ಕಂಗ್ರಾಜುಲೇಷನ್ಸ್ ಹೇಳಿದೆ ಎಂದು ನಟಿ ಖುಷಿಯಿಂದಲೇ ಹೇಳಿದ್ರು.