ETV Bharat / sitara

'ಸವರ್ಣದೀರ್ಘಸಂಧಿ’ ಸಿನಿಮಾ ಮೂಲಕ ವಸ್ತ್ರ ವಿನ್ಯಾಸಕಿಯಾಗಿ ಬಡ್ತಿ ಪಡೆದ ಪದ್ಮಜಾ ರಾವ್​​​​​

ಹಿರಿಯ ನಟಿ ಪದ್ಮಜಾ ರಾವ್​ 'ಸವರ್ಣದೀರ್ಘಸಂಧಿ’ ಚಿತ್ರದ ಮೂಲಕ ವಸ್ತ್ರ ವಿನ್ಯಾಸಕಿ ಆಗಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ನಿರ್ಮಾಪಕಿ ಆಗಿ ಕೂಡಾ ಗುರುತಿಸಿಕೊಂಡಿರುವ ಪದ್ಮಜಾ ರಾವ್​ ಮುಂದಿನ ದಿನಗಳಲ್ಲಿ ಚಿತ್ರನಿರ್ದೇಶನ ಮಾಡುವ ಗುರಿಯನ್ನೂ ಹೊಂದಿದ್ದಾರೆ.

ಪದ್ಮಜಾ ರಾವ್​​​​​
author img

By

Published : Jul 31, 2019, 10:14 AM IST

Updated : Jul 31, 2019, 12:54 PM IST

ಸ್ಯಾಂಡಲ್​​ವುಡ್ ನಟರ ಅಮ್ಮ ಎಂದು 'ಮುಂಗಾರು ಮಳೆ' ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಪದ್ಮಜಾ ರಾವ್, ಕಿರುತೆರೆಯಿಂದ ತಮ್ಮ ಸಿನಿಪಯಣ ಆರಂಭಿಸಿದವರು. ದಿವಂಗತ ವೈಶಾಲಿ ಕಾಸರವಳ್ಳಿ ನಿರ್ದೇಶನದ 'ಮೂಡಲ ಮನೆ' ಧಾರಾವಾಹಿಯಿಂದ 'ಶಕ್ಕು' ಎಂದೂ ಕೂಡಾ ಅವರು ಖ್ಯಾತರಾಗಿದ್ದಾರೆ.

padmaja
ನಟಿ ಪದ್ಮಜಾ ರಾವ್​​​​​

ಪದ್ಮಜಾರಾವ್ ಕೇವಲ ನಟಿ ಮಾತ್ರವಲ್ಲ ನಿರ್ಮಾಪಕಿಯಾಗಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇದೀಗ ಅವರು ವಸ್ತ್ರವಿನ್ಯಾಸಕಿ ಆಗಿಯೂ ಹೆಸರು ಮಾಡಲು ಹೊರಟಿದ್ದಾರೆ. ಮುಂದೆ ಸಿನಿಮಾಗಳನ್ನು ನಿರ್ದೇಶನ ಮಾಡಲು ಕೂಡಾ ಪ್ಲಾನ್ ಮಾಡಿಕೊಂಡಿದ್ದಾರೆ ಪದ್ಮಜಾ ರಾವ್. ನಾಲ್ಕು ಕಥೆಗಳನ್ನು ತಯಾರಿಸಿ ನಿರ್ಮಾಪಕರಿಗಾಗಿ ಹುಡುಕಾಡುತ್ತಿದ್ದ ಅವರಿಗೆ ಯೋಗರಾಜಭಟ್ಟರು ಸಾಥ್ ನೀಡಿದ್ದಾರೆ. ಪದ್ಮಜಾ ರಾವ್ ಅವರ ಕಥೆ ಕೇಳಿದ ಭಟ್ಟರು 'ಪದ್ಮಮ್ಮ ಸ್ವಲ್ಪ ದಿನಗಳ ಕಳೆದ ನಂತರ ನಿಮ್ಮ ಸಿನಿಮಾವನ್ನು ನಾನೇ ನಿರ್ಮಿಸುತ್ತೇನೆ ಎಂದು ಕೂಡಾ ಹೇಳಿದ್ದಾರಂತೆ. ಇನ್ನು 'ಸವರ್ಣದೀರ್ಘಸಂಧಿ’ ಸಿನಿಮಾ ಮೂಲಕ ಪದ್ಮಜಾ ರಾವ್ ವಸ್ತ್ರ ವಿನ್ಯಾಸಕಿ ಆಗುವ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

padmaja rao
ಪದ್ಮಜಾ ರಾವ್​​​​​

ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಕಳೆದ 10 ವರ್ಷಗಳಿಂದ ಪದ್ಮಜಾ ಅವರಿಗೆ ಸ್ನೇಹಿತರಾಗಿರುವುದರಿಂದ ಪದ್ಮಜಾ ಅವರು ಈ ಚಿತ್ರದಲ್ಲಿ ತಮ್ಮನ್ನು ಪೂರ್ತಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಪಾತ್ರಗಳಿಗಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತ್ರಗಳನ್ನು ಖರೀದಿ ಮಾಡಿದ್ದಾರೆ. ಚಿತ್ರದ ನಾಯಕಿ ಕೃಷ್ಣ ಅವರಿಗೆ ವಿಶೇಷ ಡ್ರೆಸ್​​​​ಗಳನ್ನು ಡಿಸೈನ್ ಮಾಡಿದ್ದಾರೆ. ವೀರೇಂದ್ರ ಶೆಟ್ಟಿ ಈ ಮುನ್ನ ತುಳುವಿನ 'ಚಾಲಿಪೋಲಿಲು' ಸಿನಿಮಾವನ್ನು ನಿರ್ದೇಶಿಸಿದ್ದು ಆ ಸಿನಿಮಾದಲ್ಲಿ ಪದ್ಮಜಾ ಕೂಡಾ ನಟಿಸಿದ್ದರು. ನಮಗೆ ಈಗ ಅನ್ನ ನೀಡುತ್ತಿರುವುದು 'ಸವಾಲಿಗೆ ಸೈ' ಎಂಬ ಶೋ ನಿರ್ಮಾಣದಿಂದ ಎಂದು ಪದ್ಮಜಾ ಹೇಳಿಕೊಂಡಿದ್ದಾರೆ. ನಿರಂಜನ್ ದೇಶಪಾಂಡೆ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದು ಕಾರ್ಯಕ್ರಮದ ಎರಡನೇ ಕಂತು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಇನ್ನು ಪದ್ಮಜಾಗೆ ಸಂಜೀವ್ ಎಂಬ ಮಗನಿದ್ದು ಕನಕಪುರ ರಸ್ತೆಯಲ್ಲಿ ಮಿನಿ ಮೃಗಾಲಯವೊಂದನ್ನು ಆರಂಭಿಸಿದ್ದಾರೆ ಎಂದು ಮಗನ ಬಗ್ಗೆ ಹೇಳಿಕೊಂಡು ಸಂತೋಷ ವ್ಯಕ್ತಪಡಿಸುತ್ತಾರೆ ಪದ್ಮಜಾ ರಾವ್.

ಸ್ಯಾಂಡಲ್​​ವುಡ್ ನಟರ ಅಮ್ಮ ಎಂದು 'ಮುಂಗಾರು ಮಳೆ' ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಪದ್ಮಜಾ ರಾವ್, ಕಿರುತೆರೆಯಿಂದ ತಮ್ಮ ಸಿನಿಪಯಣ ಆರಂಭಿಸಿದವರು. ದಿವಂಗತ ವೈಶಾಲಿ ಕಾಸರವಳ್ಳಿ ನಿರ್ದೇಶನದ 'ಮೂಡಲ ಮನೆ' ಧಾರಾವಾಹಿಯಿಂದ 'ಶಕ್ಕು' ಎಂದೂ ಕೂಡಾ ಅವರು ಖ್ಯಾತರಾಗಿದ್ದಾರೆ.

padmaja
ನಟಿ ಪದ್ಮಜಾ ರಾವ್​​​​​

ಪದ್ಮಜಾರಾವ್ ಕೇವಲ ನಟಿ ಮಾತ್ರವಲ್ಲ ನಿರ್ಮಾಪಕಿಯಾಗಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇದೀಗ ಅವರು ವಸ್ತ್ರವಿನ್ಯಾಸಕಿ ಆಗಿಯೂ ಹೆಸರು ಮಾಡಲು ಹೊರಟಿದ್ದಾರೆ. ಮುಂದೆ ಸಿನಿಮಾಗಳನ್ನು ನಿರ್ದೇಶನ ಮಾಡಲು ಕೂಡಾ ಪ್ಲಾನ್ ಮಾಡಿಕೊಂಡಿದ್ದಾರೆ ಪದ್ಮಜಾ ರಾವ್. ನಾಲ್ಕು ಕಥೆಗಳನ್ನು ತಯಾರಿಸಿ ನಿರ್ಮಾಪಕರಿಗಾಗಿ ಹುಡುಕಾಡುತ್ತಿದ್ದ ಅವರಿಗೆ ಯೋಗರಾಜಭಟ್ಟರು ಸಾಥ್ ನೀಡಿದ್ದಾರೆ. ಪದ್ಮಜಾ ರಾವ್ ಅವರ ಕಥೆ ಕೇಳಿದ ಭಟ್ಟರು 'ಪದ್ಮಮ್ಮ ಸ್ವಲ್ಪ ದಿನಗಳ ಕಳೆದ ನಂತರ ನಿಮ್ಮ ಸಿನಿಮಾವನ್ನು ನಾನೇ ನಿರ್ಮಿಸುತ್ತೇನೆ ಎಂದು ಕೂಡಾ ಹೇಳಿದ್ದಾರಂತೆ. ಇನ್ನು 'ಸವರ್ಣದೀರ್ಘಸಂಧಿ’ ಸಿನಿಮಾ ಮೂಲಕ ಪದ್ಮಜಾ ರಾವ್ ವಸ್ತ್ರ ವಿನ್ಯಾಸಕಿ ಆಗುವ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

padmaja rao
ಪದ್ಮಜಾ ರಾವ್​​​​​

ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಕಳೆದ 10 ವರ್ಷಗಳಿಂದ ಪದ್ಮಜಾ ಅವರಿಗೆ ಸ್ನೇಹಿತರಾಗಿರುವುದರಿಂದ ಪದ್ಮಜಾ ಅವರು ಈ ಚಿತ್ರದಲ್ಲಿ ತಮ್ಮನ್ನು ಪೂರ್ತಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಪಾತ್ರಗಳಿಗಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತ್ರಗಳನ್ನು ಖರೀದಿ ಮಾಡಿದ್ದಾರೆ. ಚಿತ್ರದ ನಾಯಕಿ ಕೃಷ್ಣ ಅವರಿಗೆ ವಿಶೇಷ ಡ್ರೆಸ್​​​​ಗಳನ್ನು ಡಿಸೈನ್ ಮಾಡಿದ್ದಾರೆ. ವೀರೇಂದ್ರ ಶೆಟ್ಟಿ ಈ ಮುನ್ನ ತುಳುವಿನ 'ಚಾಲಿಪೋಲಿಲು' ಸಿನಿಮಾವನ್ನು ನಿರ್ದೇಶಿಸಿದ್ದು ಆ ಸಿನಿಮಾದಲ್ಲಿ ಪದ್ಮಜಾ ಕೂಡಾ ನಟಿಸಿದ್ದರು. ನಮಗೆ ಈಗ ಅನ್ನ ನೀಡುತ್ತಿರುವುದು 'ಸವಾಲಿಗೆ ಸೈ' ಎಂಬ ಶೋ ನಿರ್ಮಾಣದಿಂದ ಎಂದು ಪದ್ಮಜಾ ಹೇಳಿಕೊಂಡಿದ್ದಾರೆ. ನಿರಂಜನ್ ದೇಶಪಾಂಡೆ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದು ಕಾರ್ಯಕ್ರಮದ ಎರಡನೇ ಕಂತು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಇನ್ನು ಪದ್ಮಜಾಗೆ ಸಂಜೀವ್ ಎಂಬ ಮಗನಿದ್ದು ಕನಕಪುರ ರಸ್ತೆಯಲ್ಲಿ ಮಿನಿ ಮೃಗಾಲಯವೊಂದನ್ನು ಆರಂಭಿಸಿದ್ದಾರೆ ಎಂದು ಮಗನ ಬಗ್ಗೆ ಹೇಳಿಕೊಂಡು ಸಂತೋಷ ವ್ಯಕ್ತಪಡಿಸುತ್ತಾರೆ ಪದ್ಮಜಾ ರಾವ್.

 

ಪದ್ಮಜ ರಾವ್ ಈಗ ವಸ್ತ್ರ ವಿನ್ಯಾಸಕಿ

ಮುಂಗಾರು ಮಳೆ ಸಿನಿಮ ಇಂದ ಕನ್ನಡ ಚಿತ್ರ ರಂಗದಲ್ಲಿ ಎಲ್ಲ ನಾಯಕರ ಅಮ್ಮ ಎಂದೇ ಖ್ಯಾತಿ ಪಡೆದ ಪದ್ಮಜ ರಾವ್, ಕಿರು ತೆರೆಯಲ್ಲಿ ಶಕ್ಕು ಅಂತಲೇ ಮೂಡಲ ಮನೆ (ವೈಶಾಲಿ ಕಾಸರವಳ್ಳಿ ನಿರ್ದೇಶನ) ಇಂದ ಫೇಮಸ್ ಆಗಿ ಆಮೇಲೆ ನಿರ್ಮಾಪಕಿ ಆಗಿ ಸಹ ವೃತ್ತಿ ಹರಡಿಕೊಂಡವರು. ಈಗ ವಸ್ತ್ರ ವಿನ್ಯಾಸಕಿ ಜೊತೆಗೆ ಸಿನಿಮಾ ನಿರ್ವಹಣೆ ಕ್ಷೇತ್ರಕ್ಕೂ ಸಹ ಕಾಲಿಟ್ಟಿದ್ದಾರೆ. ಇವರ ಮುಂದಿರುವ ಏಕಮೇವ ಗುರಿ ಎಂದರೆ ನಿರ್ದೇಶಕಿ ಆಗುವುದು. ಸಧ್ಯಕ್ಕೆ ನಾಲ್ಕು ಕತೆಗಳನ್ನು ಇಟ್ಟುಕೊಂಡು ನಿರ್ಮಾಪಕರ ಹುಡುಕಾಟ ನಡೆಯುತ್ತಿದೆ. ಪದ್ಮಜ ರಾವ್ ಅವರ ಕಥೆ ಕೇಳಿ ಯೋಗರಾಜ ಭಟ್ಟರು ಪದ್ದಮ್ಮ...ಕೆಲವು ವರ್ಷ ಅದ್ಮೇಲೆ ನಾನೇ ನನ್ನ ಬ್ಯಾನ್ನರ್ ಅಲ್ಲಿ ನಿರ್ಮಾಣ ಮಾಡುತ್ತೇನೆ ಆಗ ನೀವೇ ನಿರ್ದೇಶಕಿ ಎಂದಿದ್ದಾರೆ ಸಹ

ಸವರ್ಣಧೀರ್ಘಸಂಧಿ ಸಿನಿಮಾ ಇಂದ ಪದ್ಮಜ ರಾವ್ ತಮ್ಮ ಬಹುದಿನದ ಕನಸು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಇದರೆ ಜೊತೆಗೆ ನಿರ್ಮಾಪಕರುಗಳು ಸ್ನೇಹಿತರಾದ್ದರಿಂದ ಖರ್ಚು ವೆಚ್ಚದ ಲೆಕ್ಕಾಚಾರ ಸಹ ನಿರ್ವಹಣೆ ಮಾಡಿದ್ದಾರೆ ಸಿನಿಮಾ ರಂಗದ ಮಾ’. ನಿರ್ದೇಶಕ ಕಂ ನಟ ವೀರೇಂದ್ರ ಶೆಟ್ಟಿ 10 ವರ್ಷದ ಸ್ನೇಹ ಈ ಚಿತ್ರಕ್ಕೆ ಪದ್ಮಜ ರಾವ್ ಅಷ್ಟೊಂದು ತೊಡಗಿಸಿಕೊಳ್ಳಲು ಕಾರಣ.

ಮೊದಲ ಚಿತ್ರಕ್ಕೆ ಇಡೀ ಚಿತ್ರದ ಪಾತ್ರಗಳಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತ್ರಗಳನ್ನು ಖರೀದಿ ಮಾಡಿದ್ದಾರೆ. ಚಿತ್ರಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ನಾಯಕಿ ಕೃಷ್ಣ (ನಟ ರವಿ ಭಟ್ ಅವರ ಮಗಳು – ವಿನಯಾ ಪ್ರಸಾದ್ ಇವರ ಸೋದರತ್ತೆ) ಪಾತ್ರಕ್ಕೆ ವಿಶೇಷ ರೀತಿ ಡಿಸೈನ್ ಸಹ ಮಾಡಿಸಿದ್ದಾರೆ ಪದ್ಮಜ ರಾವ್. ಸವರ್ಣಧೀರ್ಘಸಂಧಿ ಚಿತ್ರೀಕರಣ ಆದ ನಂತರ ಆಯಾ ವಸ್ತ್ರಗಳನ್ನು ಅವರ ಮನೆಯಲ್ಲಿ ಜೋಪಾನವಾಗಿ ಇಟ್ಟಿದ್ದಾರೆ. ಮುಂದಿನ ಸಿನಿಮಾಗಳಲ್ಲಿ ಅದನ್ನು ಹೇಗೆ ಉಪಯೋಗ ಅಗ್ಬಹುದು ಎಂಬುದು ಅವರ ಲೆಕ್ಕಾಚಾರ.

ಸವರ್ಣಧೀರ್ಘಸಂಧಿ ಸಿನಿಮಾ ತಂಡದೊಂದಿಗೆ ಚಾಲಿ ಪೋಲಿಲು ತುಳು ಸಿನಿಮಾದಲ್ಲಿ ಪದ್ಮಜ ರಾವ್ ಅಭಿನಯ ಮಾಡಿದ್ದರು. ಈ ತಂಡದ ಮೊದಲ ಕನ್ನಡ ಸಿನಿಮಾಕ್ಕೆ ಇವರೇ ಬೆನ್ನಿಗೆ ನಿಂತಿದ್ದಾರೆ.

ಸಧ್ಯಕ್ಕೆ ನನ್ನ ಮನೆಯ ಅಡಿಗೆ ಮನೆ ಓಲೆ ಉರಿಯುತ್ತಿರುವುದು ಸವಾಲಿಗೆ ಸೈ ಎಂಬ ಧಾರಾವಾಹಿ ನಿರ್ಮಾಣ ಇಂದ. ಅದು ಎರಡನೇ ಕಂತು ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ನಿರಂಜನ್ ದೇಶ್ಪಾಂಡೆ ಈ ರಿಯಾಲಿಟಿ ಶೋ ನಿರೂಪಕ ಎನ್ನುವ ಪದ್ಮಜ ರಾವ್ ತಮ್ಮ ಮಗ ಸಂಜೀವ್ ಪ್ರಾಣಿ ಪ್ರಿಯ, ಕನಕಪುರ ರಸ್ತೆಯಲ್ಲಿ ಪ್ರಾಣಿ ಪೆಟ್ ಸ್ಯಾನ್ಚ್ಯುಯರಿ ಎಂಬ ಮಿನಿ ಜೂ ಸಹ ಆರಂಭಿಸಿದ್ದಾನೆ ಎಂದು ಹರ್ಷ ವ್ಯಕ್ತ ಮಾಡುತ್ತಾರೆ. 

Last Updated : Jul 31, 2019, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.