ETV Bharat / sitara

ಬೆಳ್ಳಿ ಪರದೆಗೆ ಮರಳಿದ ಮೇಘನಾ​...ಮದುವೆ ನಂತ್ರ ಫಸ್ಟ್​ ಮೂವಿಗೆ ಸೈನ್​

author img

By

Published : Apr 11, 2019, 12:29 PM IST

'ಎಲ್ಲಿದ್ದೆ ಇಲ್ಲಿ ತನಕ' ಬಳಿಕ ಮತ್ತೊಂದು ಹೊಸ ಚಿತ್ರಕ್ಕೆ ಸೃಜನ್ ಲೋಕೇಶ್ ನಾಯಕನಾಗಿದ್ದಾರೆ. ಈ ಹೊಸ ಚಿತ್ರದಲ್ಲಿ ಮೇಘನಾ ರಾಜ್ ಸೃಜನ್ ಜತೆ ಡ್ಯುಯೆಟ್ ಹಾಡಲಿದ್ದಾರೆ.

ಮೇಘನಾ ರಾಜ್

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್​ ಕಿರುತೆರೆ ಜತೆ ಹಿರಿತೆರೆಯಲ್ಲೂ ಬ್ಯೂಸಿಯಾಗಿದ್ದಾರೆ. ಅವರ ನಟಿಸಿ, ನಿರ್ಮಿಸುತ್ತಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಅದಾಗಲೇ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

Srujan Lokesh
ಸೃಜನ್ ಲೋಕೇಶ್

ಇನ್ನೂ ಹೆಸರಿಡದ ಈ ಚಿತ್ರ ಕೆಲವು ದಿವಸಗಳ ಹಿಂದೆ ಸದ್ದಿಲ್ಲದೇ ಸೆಟ್ಟೇರಿದೆ. ಇದೀಗ ಈ ಚಿತ್ರದ ನಾಯಕಿಯಾಗಿ ಸುಂದರ ಚೆಲುವೆ ಮೇಘನ ರಾಜ್ ಆಯ್ಕೆಯಾಗಿದ್ದಾರೆ. ಮೇಘನ ರಾಜ್ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ನಂತರ ಯಾವುದೇ ಕನ್ನಡ ಸಿನಿಮಾ ಆಯ್ಕೆ ಮಾಡಿಕೊಂಡಿರಲಿಲ್ಲ.ಈಗ ಸೃಜನ್ ಜೊತೆ ಒಂದು ಕಾಮಿಡಿ ಸಿನಿಮಾಕ್ಕೆ ಗ್ರೀನ್ ಸಿಗ್ನಲ್​ ನೀಡಿದ್ದಾರೆ. ಇದು ಮ್ಯಾರೇಜ್​ ನಂತ್ರ ಮೇಘನಾ ಸೈನ್ ಮಾಡಿರುವ ಮೊದಲ ಚಿತ್ರ.

Meghana raj
ಮೇಘನಾ ರಾಜ್

ಈ ಹೊಸ ಚಿತ್ರಕ್ಕೆ 'ವಾಸ್ಕೋಡಿಗಾಮ' ಮತ್ತು 'ಸೈಬರ್ ಯುಗದೋಳ್' ಸಿನಿಮಾಗಳ ನಿರ್ದೇಶಕ ಮಧುಚಂದ್ರ (ನಿರ್ದೇಶಕ ಹಾಗೂ ಸಂಭಾಷಣೆಗಾರ ಮಂಜು ಮಾಂಡವ್ಯ ಸಹೋದರ) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಕಾಮಿಡಿ ಚಿತ್ರ. ಮೇಘನ ರಾಜ್ ಈ ಕಥೆ ಕೇಳಿ ಸಾಕಷ್ಟು ನಕ್ಕಿದ್ದಾರಂತೆ. ಇದು ಹಾಸ್ಯದ ಜೊತೆ ಸಮಾಜಕ್ಕೆ ಒಂದು ಸಂದೇಶ ನೀಡುವ ಚಿತ್ರವಂತೆ. ಚಿತ್ರದಲ್ಲಿ ಮೊಬೈಲ್ ಸಹ ಒಂದು ಪ್ರಮುಖ ಪಾತ್ರ ವಹಿಸುತ್ತಿದೆ.

Madhuchandra
ನಿರ್ದೇಶಕ ಮಧುಚಂದ್ರ

ಮೂರು ಸಿನಿಮಾಗಳಲ್ಲಿ ಬುದ್ಧಿವಂತಿಕೆ ಮೇರೆದ ಮಧುಚಂದ್ರ ಅವರಿಗೆ ಒಂದು ಗಟ್ಟಿ ಯಶಸ್ಸು ಸಿಕ್ಕಲ್ಲ. ಈ ಸಿನಿಮಾ ಮೂಲಕ ಅವರಿಗೆ ಯಶಸ್ಸಿನ ಅದೃಷ್ಟದ ಬಾಗಿಲು ತೆರೆಯುವುದು ಎಂದು ನಂಬಿದ್ದಾರಂತೆ.

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್​ ಕಿರುತೆರೆ ಜತೆ ಹಿರಿತೆರೆಯಲ್ಲೂ ಬ್ಯೂಸಿಯಾಗಿದ್ದಾರೆ. ಅವರ ನಟಿಸಿ, ನಿರ್ಮಿಸುತ್ತಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಅದಾಗಲೇ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

Srujan Lokesh
ಸೃಜನ್ ಲೋಕೇಶ್

ಇನ್ನೂ ಹೆಸರಿಡದ ಈ ಚಿತ್ರ ಕೆಲವು ದಿವಸಗಳ ಹಿಂದೆ ಸದ್ದಿಲ್ಲದೇ ಸೆಟ್ಟೇರಿದೆ. ಇದೀಗ ಈ ಚಿತ್ರದ ನಾಯಕಿಯಾಗಿ ಸುಂದರ ಚೆಲುವೆ ಮೇಘನ ರಾಜ್ ಆಯ್ಕೆಯಾಗಿದ್ದಾರೆ. ಮೇಘನ ರಾಜ್ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ನಂತರ ಯಾವುದೇ ಕನ್ನಡ ಸಿನಿಮಾ ಆಯ್ಕೆ ಮಾಡಿಕೊಂಡಿರಲಿಲ್ಲ.ಈಗ ಸೃಜನ್ ಜೊತೆ ಒಂದು ಕಾಮಿಡಿ ಸಿನಿಮಾಕ್ಕೆ ಗ್ರೀನ್ ಸಿಗ್ನಲ್​ ನೀಡಿದ್ದಾರೆ. ಇದು ಮ್ಯಾರೇಜ್​ ನಂತ್ರ ಮೇಘನಾ ಸೈನ್ ಮಾಡಿರುವ ಮೊದಲ ಚಿತ್ರ.

Meghana raj
ಮೇಘನಾ ರಾಜ್

ಈ ಹೊಸ ಚಿತ್ರಕ್ಕೆ 'ವಾಸ್ಕೋಡಿಗಾಮ' ಮತ್ತು 'ಸೈಬರ್ ಯುಗದೋಳ್' ಸಿನಿಮಾಗಳ ನಿರ್ದೇಶಕ ಮಧುಚಂದ್ರ (ನಿರ್ದೇಶಕ ಹಾಗೂ ಸಂಭಾಷಣೆಗಾರ ಮಂಜು ಮಾಂಡವ್ಯ ಸಹೋದರ) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಕಾಮಿಡಿ ಚಿತ್ರ. ಮೇಘನ ರಾಜ್ ಈ ಕಥೆ ಕೇಳಿ ಸಾಕಷ್ಟು ನಕ್ಕಿದ್ದಾರಂತೆ. ಇದು ಹಾಸ್ಯದ ಜೊತೆ ಸಮಾಜಕ್ಕೆ ಒಂದು ಸಂದೇಶ ನೀಡುವ ಚಿತ್ರವಂತೆ. ಚಿತ್ರದಲ್ಲಿ ಮೊಬೈಲ್ ಸಹ ಒಂದು ಪ್ರಮುಖ ಪಾತ್ರ ವಹಿಸುತ್ತಿದೆ.

Madhuchandra
ನಿರ್ದೇಶಕ ಮಧುಚಂದ್ರ

ಮೂರು ಸಿನಿಮಾಗಳಲ್ಲಿ ಬುದ್ಧಿವಂತಿಕೆ ಮೇರೆದ ಮಧುಚಂದ್ರ ಅವರಿಗೆ ಒಂದು ಗಟ್ಟಿ ಯಶಸ್ಸು ಸಿಕ್ಕಲ್ಲ. ಈ ಸಿನಿಮಾ ಮೂಲಕ ಅವರಿಗೆ ಯಶಸ್ಸಿನ ಅದೃಷ್ಟದ ಬಾಗಿಲು ತೆರೆಯುವುದು ಎಂದು ನಂಬಿದ್ದಾರಂತೆ.


---------- Forwarded message ---------
From: pravi akki <praviakki@gmail.com>
Date: Thu, Apr 11, 2019, 9:43 AM
Subject: Fwd: SRUJAN LOKESH TEAMED WITH MEGHANA RAJ
To: Praveen Akki <praveen.akki@etvbharat.com>



---------- Forwarded message ---------
From: Vasu K.S. Vasu <sasuvas@gmail.com>
Date: Thu, Apr 11, 2019, 8:20 AM
Subject: SRUJAN LOKESH TEAMED WITH MEGHANA RAJ
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>


ಟಾಕಿಂಗ್ ಸ್ಟಾರ್ ಸೃಜನ್ ನಾಯಕಿ ಆಗಿ ಮೇಘನ ರಾಜ್ ಮಧುಚಂದ್ರ ನಿರ್ದೇಶನ

ಸದ್ದಿಲ್ಲದೇ ಕೆಲವು ದಿವಸಗಳ ಹಿಂದೆ ಸೆಟ್ಟೇರಿದ ಸೃಜನ್ ಲೋಕೇಶ್ ಅವರ ಮತ್ತೊಂದು ಚಿತ್ರದ ನಾಯಕಿ ಆಗಿ ಸುಂದರ ಚೆಲುವೆ ಮೇಘನ ರಾಜ್ ಆಯ್ಕೆ ಆಗಿದ್ದಾರೆ. ಮೇಘನ ರಾಜ್ ಇರುವುದೆಲ್ಲವ ಬಿಟ್ಟು ಸಿನಿಮಾ ನಂತರ ಯಾವುದೇ ಕನ್ನಡ ಸಿನಿಮಾ ಆಯ್ಕೆ ಮಾಡಿಕೊಂಡಿರಲಿಲ್ಲ. ಅದು ಕಳೆದ ವರ್ಷ ಬಿಡುಗಡೆ ಆದ ಸಿನಿಮಾ. ಈಗ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಜೊತೆ ಒಂದು ಕಾಮಿಡಿ ಸಿನಿಮಾಕ್ಕೆ ಮೇಘನ ರಾಜ್ ಒಪ್ಪಿಗೆ ನೀಡಿದ್ದಾರೆ. ಹಾಗೆ ನೋಡಿದರೆ ಚಿರಂಜೀವಿ ಸರ್ಜಾ ಜೊತೆ ಮದುವೆ ಆದ ಮೇಲೆ ಮೇಘನ ರಾಜ್ ಯಾವುದೇ ಸಿನಿಮಾ ಒಪ್ಪಿರಲಿಲ್ಲ.

ಸೃಜನ್ ಲೋಕೇಶ್ ಹಾಗೂ ಮೇಘನ ರಾಜ್ ಅಭಿನಯದ ಚಿತ್ರಕ್ಕೆ ರವಿ ಹಿಸ್ಟರೀ, ವಾಸ್ಕೋಡಿಗಾಮ ಮತ್ತು ಸೈಬರ್ ಯುಗದೋಳ್ ನವ ಯುವ ಪ್ರೇಮ ಕಾವ್ಯ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ ಮಧುಚಂದ್ರ (ನಿರ್ದೇಶಕ ಹಾಗೂ ಸಂಭಾಷಣೆಗರ ಮಂಜು ಮಾಂಡವ್ಯ ಸಹೋದರ) ನಿರ್ದೇಶನ ಮಾಡುತ್ತಿದ್ದಾರೆ.

ಸೃಜನ್ ಲೋಕೇಶ್ ಅಂತಹ ಸ್ಟಾರ್ ನಟರನ್ನು ಇಟ್ಟುಕೊಂಡು ಅದರಲ್ಲೇ ಕಾಮಿಡಿ ಇಲ್ಲ ಅಂದರೆ ಹೇಗೆ. ಈಗಿನ ಕಾಲದಲ್ಲಿ ಮೊಬೈಲ್ ಇಂದ ವ್ಯಸನಿಗಲೆ ಆಗಿರುವ ಈ ಸಮಾಜಕ್ಕೆ ಅದರ ಪ್ಲಸ್ ಅಂಡ್ ಮೈನಸ್ ಹಾಸ್ಯ ರೂಪದಲ್ಲಿ ಹೇಳಲಾಗುತ್ತಿದೆ. ಮೇಘನ ರಾಜ್ ಈ ಕಥೆ ಕೇಳಿ ಸಾಕಷ್ಟು ನಕ್ಕಿದ್ದಾರಂತೆ. ಇದು ಹಾಸ್ಯದ ಜೊತೆ ಸಮಾಜಕ್ಕೆ ಒಂದು ಸಂದೇಶ ಸಹ ನಗಿಸುತ್ತಲೇ ಹೇಳುವುದು ನಿರ್ದೇಶಕರ ತೀರ್ಮಾನ. ಚಿತ್ರದಲ್ಲಿ ಮೊಬೈಲ್ ಸಹ ಒಂದು ಪ್ರಮುಖ ಪಾತ್ರ ವಹಿಸುತ್ತಿದೆ.

ಮೂರು ಸಿನಿಮಾಗಳಲ್ಲಿ ಬುದ್ದಿವಂತಿಕೆ ಮೇರದ ನಿರ್ದೇಶಕ ಮಧುಚಂದ್ರ ಅವರಿಗೆ ಒಂದು ಗಟ್ಟಿ ಯಶಸ್ಸು ಸಿಕ್ಕಲ್ಲ. ಈ ಸಿನಿಮಾ ಇಂದ ಅವರು ಯಶಸ್ಸಿನ ಅದೃಷ್ಟದ ಬಾಗಿಲು ತೆರೆಯುವುದು ಎಂದು ನಂಬಿದ್ದಾರೆ.

 ಸೃಜನ್ ಲೋಕೇಶ್ ಸಧ್ಯಕ್ಕೆ ಮಜಾ ಟಾಕೀಸ್ ಹಾಗೂ ಎಲ್ಲಿದ್ದೆ ಇಲ್ಲಿ ತನಕ ಹರಿಪ್ರಿಯಾ ಜೊತೆ ಮುಖ್ಯ ಪಾತ್ರ ಮಾಡುತ್ತಿದ್ದಾರೆ. 

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.