ETV Bharat / sitara

'ಮತದಾರ ಇಲ್ಲಿ ಮೂಕಪ್ರೇಕ್ಷಕ ಮಾತ್ರ'..ರಾಜಕೀಯ ಅರಾಜಕತೆ ಬಗ್ಗೆ ಉಪ್ಪಿ ಆಕ್ರೋಶ

ರಾಜ್ಯ ರಾಜಕೀಯದ ಅರಾಜಕತೆ ಬಗ್ಗೆ ನಟ ಉಪೇಂದ್ರ ಕಿಡಿಕಾರಿದ್ದಾರೆ. ಮತದಾರರಿಗೆ ಕೇವಲ ಒಂದು ದಿನ ಮಾತ್ರ ಬೆಲೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

author img

By

Published : Jul 19, 2019, 5:38 PM IST

ಉಪೇಂದ್ರ


ರಾಜ್ಯದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ನಟ ಹಾಗೂ ರಾಜಕಾರಣಿ ಉಪೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ನಡೆಯುತ್ತಿರುವ ಹೈ ಡ್ರಾಮಾ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಉಪ್ಪಿ, ಮತಾದಾರರ ಬೆಲೆ ಏನು ಎಂಬುದನ್ನು ಪ್ರಜೆಗಳಿಗೆ ತಿಳಿಸಿದ್ದಾರೆ.

'ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ, ಆನಂತರ ನಾವು ಮೂಕ ಪ್ರೇಕ್ಷಕರು' ಎಂದು ಬುದ್ಧಿವಂತ ಟ್ವೀಟ್​ ಮಾಡಿದ್ದಾರೆ. ಇಂತಹ ರಾಜಕೀಯ ಅವ್ಯವಸ್ಥೆ ದೂರು ಮಾಡಲು ಒಂದೇ ಮಾರ್ಗ ಎಂದಿರುವ ಅವರು, ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಬೇಕು, ಇದಕ್ಕಾಗಿ ಬಹುಮತ ಬೇಕು. ಆದ್ದರಿಂದ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ಧಿ ಹಾಗೂ ಕಾರ್ಯಕರ್ತರಾಗಬೇಕು. ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು ಎಂದಿದ್ದಾರೆ.

  • ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ , ಆನಂತರ ನಾವು ಮೂಕ ಪ್ರೇಕ್ಷಕರು !!!! ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ದಿ ಹಾಗೂ ಕಾರ್ಯಕರ್ತರಾಗಬೇಕು !! ( ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು )

    — Upendra (@nimmaupendra) July 18, 2019 " class="align-text-top noRightClick twitterSection" data=" ">

ಇನ್ನು ಕಳೆದ ಒಂದು ವಾರದಿಂದ ಹಲವು ರಾಜಕೀಯ ಬೆಳವಣೆಗೆಗೆ ಕರ್ನಾಟಕ ರಾಜ್ಯ ಸಾಕ್ಷಿಯಾಗುತ್ತಿದೆ. ಆಡಳಿತದಲ್ಲಿರುವ ಮೈತ್ರಿ ಪಕ್ಷದ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್​​​-ಜೆಡಿಎಸ್​ ಪಕ್ಷಗಳ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದೆ. ಅಧಿಕಾರ ಉಳಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಹರಸಾಹಸ ಪಡುತ್ತಿದ್ದಾರೆ, ಬಿಜೆಪಿ ನಾಯಕರು ಸಿಎಂ ಕುಮಾರ ಸ್ವಾಮಿ ವಿಶ್ವಾಸ ಮತ ಮಂಡಿಸಲಿ ಎಂದು ಆಗ್ರಹಿಸುತ್ತಿದ್ದಾರೆ. ಈ ಎಲ್ಲ ರಾಜಕೀಯ ಚಿತ್ರಣಗಳ ಬಗ್ಗೆ ರಾಜ್ಯದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.


ರಾಜ್ಯದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ನಟ ಹಾಗೂ ರಾಜಕಾರಣಿ ಉಪೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ನಡೆಯುತ್ತಿರುವ ಹೈ ಡ್ರಾಮಾ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಉಪ್ಪಿ, ಮತಾದಾರರ ಬೆಲೆ ಏನು ಎಂಬುದನ್ನು ಪ್ರಜೆಗಳಿಗೆ ತಿಳಿಸಿದ್ದಾರೆ.

'ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ, ಆನಂತರ ನಾವು ಮೂಕ ಪ್ರೇಕ್ಷಕರು' ಎಂದು ಬುದ್ಧಿವಂತ ಟ್ವೀಟ್​ ಮಾಡಿದ್ದಾರೆ. ಇಂತಹ ರಾಜಕೀಯ ಅವ್ಯವಸ್ಥೆ ದೂರು ಮಾಡಲು ಒಂದೇ ಮಾರ್ಗ ಎಂದಿರುವ ಅವರು, ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಬೇಕು, ಇದಕ್ಕಾಗಿ ಬಹುಮತ ಬೇಕು. ಆದ್ದರಿಂದ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ಧಿ ಹಾಗೂ ಕಾರ್ಯಕರ್ತರಾಗಬೇಕು. ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು ಎಂದಿದ್ದಾರೆ.

  • ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ , ಆನಂತರ ನಾವು ಮೂಕ ಪ್ರೇಕ್ಷಕರು !!!! ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ದಿ ಹಾಗೂ ಕಾರ್ಯಕರ್ತರಾಗಬೇಕು !! ( ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು )

    — Upendra (@nimmaupendra) July 18, 2019 " class="align-text-top noRightClick twitterSection" data=" ">

ಇನ್ನು ಕಳೆದ ಒಂದು ವಾರದಿಂದ ಹಲವು ರಾಜಕೀಯ ಬೆಳವಣೆಗೆಗೆ ಕರ್ನಾಟಕ ರಾಜ್ಯ ಸಾಕ್ಷಿಯಾಗುತ್ತಿದೆ. ಆಡಳಿತದಲ್ಲಿರುವ ಮೈತ್ರಿ ಪಕ್ಷದ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್​​​-ಜೆಡಿಎಸ್​ ಪಕ್ಷಗಳ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದೆ. ಅಧಿಕಾರ ಉಳಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಹರಸಾಹಸ ಪಡುತ್ತಿದ್ದಾರೆ, ಬಿಜೆಪಿ ನಾಯಕರು ಸಿಎಂ ಕುಮಾರ ಸ್ವಾಮಿ ವಿಶ್ವಾಸ ಮತ ಮಂಡಿಸಲಿ ಎಂದು ಆಗ್ರಹಿಸುತ್ತಿದ್ದಾರೆ. ಈ ಎಲ್ಲ ರಾಜಕೀಯ ಚಿತ್ರಣಗಳ ಬಗ್ಗೆ ರಾಜ್ಯದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Intro:ರಾಜ್ಯದ ರಾಜಕೀಯ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ವ್ಯಂಗ್ಯ!!

ಕಳೆದ ಒಂದು ವಾರದಿಂದ ರಾಜ್ಯದ, ರಾಜಕೀಯದ ದೊಂಬಾರಾಟ ನೋಡಿ‌ ಕೋಟ್ಯಾಂತರ ಜನ, ಚೀ, ಥೂ
ಅಂತಿದ್ದಾರೆ..ಈ ರಾಜಕಾರಣಿಗಳ ಕಿತ್ತಾಟ ನೋಡಿ ಜನರು ಬೇಸತ್ತಿದ್ದಾರೆ..ಈ ರಾಜಕಾರಣಿಗಳ ಹೈ ಡ್ರಾಮಾದ ಬಗ್ಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.‌ದೋಸ್ತಿ ಸರ್ಕಾರ ಉಳಿಯುತ್ತೊ ಉರುಳಿತ್ತೊ ಎನ್ನುವ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ,ಉಪೇಂದ್ರ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತೆ, ಆಮೇಲೆ ನಾವು ಮೂಕ ಪ್ರೇಕ್ಷಕರು ಎಂದು ಟೀಕಿಸಿದ್ದಾರೆ. ರಾಜಕೀಯ ಹೈ ಡ್ರಾಮಕ್ಕೆ ಯಾವತ್ತು ತೆರೆಬೀಳಲಿದೆ ಎಂದು ಇಡೀ ಕರ್ನಾಟಕ ಜನತೆ ಕಾತುರದಿಂದ ಕಾಯುತ್ತಿದೆ. ಸಿ ಎಂ ಕುಮಾರ ಸ್ವಾಮಿ ವಿಶ್ವಾಸಮತ ಸಬೀತು ಮಾಡ್ತಾರಾ, ಅಥವಾ ಸಾಬೀತು ಮಾಡಲಾಗದೆ ಸಿ ಎಂ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.ರಾಜ್ಯ ರಾಜಕೀಯದ ಈಗಿನ ಸ್ಥಿತಿ ನೋಡಿ ಉಪೇಂದ್ರ ಟ್ವೀಟ್ ಮಾಡಿದ್ದಾರೆ. Body:ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ , ಆನಂತರ ನಾವು ಮೂಕ ಪ್ರೇಕ್ಷಕರು. ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ದಿ ಹಾಗೂ ಕಾರ್ಯಕರ್ತರಾಗಬೇಕು. ( ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು)"ರಾಜಕೀಯವನ್ನು ಅಣಕಿಸುವ ಜೊತೆಗೆ ಪ್ರಜಾಕೀಯವನ್ನು ಬೆಂಬಲಿಸಿ ಇಲ್ಲಿ ಪ್ರಜೆಗಳೆ ಪಕ್ಷಕ್ಕೆ ಸ್ಪರ್ಧಿ ಹಾಗೂ ಕಾರ್ಯಕರ್ತರಾಗಿರುತ್ತರೆ ಉಪೇಂದ್ರ ಹೇಳಿದ್ದಾರೆ.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.