ETV Bharat / sitara

'ನಿಖಿಲ್​ಗೆ ಇನ್ನಷ್ಟು ಅವಕಾಶಗಳು ಸಿಗ್ತವೆ, ಅವರಿಗೆ ಒಳ್ಳೆಯದಾಗಲಿ' ಎಂದ ಅಭಿ

ನಿಖಿಲ್ ನಂಗೆ ಈಗಲೂ ಸ್ನೇಹಿತ. ಸುಮ್ಮನೆ ಅಪಾರ್ಥ ಮಾಡಿಕೊಳ್ಳಬಾರದೆಂದು ಫಲಿತಾಂಶ ಬಂದ ನಂತರ ಅವರಿಗೆ ಕರೆ ಮಾಡೋಕೆ ಹೋಗಿಲ್ಲ ಎಂದರು ಅಭಿಷೇಕ್​ ಅಂಬರೀಶ್​.

author img

By

Published : May 24, 2019, 6:06 PM IST

Updated : May 24, 2019, 7:39 PM IST

ಅಭಿಷೇಕ್​ ಅಂಬರೀಶ್

ಬೆಂಗಳೂರು: ನಿಖಿಲ್ ಕುಮಾರಸ್ವಾಮಿಗೆ ಒಳ್ಳೆಯ ಭವಿಷ್ಯವಿದೆ. ಅವರಿಗೆ ಒಳ್ಳೆಯದಾಗಲಿ ಎಂದು ನೂತನ ಎಂಪಿ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಆಶಿಸಿದ್ದಾರೆ.

ಇಂದು ದಿವಂಗತ ನಟ ಅಂಬರೀಶ್ ಅವರ 6ನೇ ತಿಂಗಳ ಪುಣ್ಯ ಸ್ಮರಣೆ ನಿಮಿತ್ತ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ನಂಗೆ ಈಗಲೂ ಸ್ನೇಹಿತ. ಸುಮ್ಮನೆ ಅಪಾರ್ಥ ಮಾಡಿಕೊಳ್ಳಬಾರದೆಂದು ಫಲಿತಾಂಶ ಬಂದ ನಂತರ ಅವರಿಗೆ ಕರೆ ಮಾಡೋಕೆ ಹೋಗಿಲ್ಲ. ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚು ಅವಕಾಶಗಳು ಸಿಗುತ್ತವೆ ಎಂದರು. ಇದೇ ವೇಳೆ ಮಂಡ್ಯ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಗೆಲುವು ಕೊಟ್ಟಿದ್ದಾರೆ. ಇದು ಮಂಡ್ಯ ಜನರು ಕೊಟ್ಟ ಭಿಕ್ಷೆ. ಅವರಿಗೆ ಧನ್ಯವಾದಗಳು ಎಂದರು.

ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಅಭಿ

ಇನ್ನು ತಮ್ಮ ಅಮರ್ ಸಿನಿಮಾ ಬಗ್ಗೆ ಮಾತಾಡಿದ ಅಭಿ, ಸಿನಿಮಾ ಚೆನ್ನಾಗಿದ್ರೆ ಜನ‌ ನೋಡ್ತಾರೆ, ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸ್ತಾರೆ. ಇಲ್ಲದಿದ್ರೆ ಅಲ್ಲೇ ಅದನ್ನು ಬೀಳಿಸ್ತಾರೆ ಎಂದು ಅಪ್ಪನ ಗತ್ತಿನಲ್ಲೇ ಜೂನಿಯರ್ ಜಲೀಲಾ ಮಾತನಾಡಿದ್ರು.

ಬೆಂಗಳೂರು: ನಿಖಿಲ್ ಕುಮಾರಸ್ವಾಮಿಗೆ ಒಳ್ಳೆಯ ಭವಿಷ್ಯವಿದೆ. ಅವರಿಗೆ ಒಳ್ಳೆಯದಾಗಲಿ ಎಂದು ನೂತನ ಎಂಪಿ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಆಶಿಸಿದ್ದಾರೆ.

ಇಂದು ದಿವಂಗತ ನಟ ಅಂಬರೀಶ್ ಅವರ 6ನೇ ತಿಂಗಳ ಪುಣ್ಯ ಸ್ಮರಣೆ ನಿಮಿತ್ತ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ನಂಗೆ ಈಗಲೂ ಸ್ನೇಹಿತ. ಸುಮ್ಮನೆ ಅಪಾರ್ಥ ಮಾಡಿಕೊಳ್ಳಬಾರದೆಂದು ಫಲಿತಾಂಶ ಬಂದ ನಂತರ ಅವರಿಗೆ ಕರೆ ಮಾಡೋಕೆ ಹೋಗಿಲ್ಲ. ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚು ಅವಕಾಶಗಳು ಸಿಗುತ್ತವೆ ಎಂದರು. ಇದೇ ವೇಳೆ ಮಂಡ್ಯ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಗೆಲುವು ಕೊಟ್ಟಿದ್ದಾರೆ. ಇದು ಮಂಡ್ಯ ಜನರು ಕೊಟ್ಟ ಭಿಕ್ಷೆ. ಅವರಿಗೆ ಧನ್ಯವಾದಗಳು ಎಂದರು.

ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಅಭಿ

ಇನ್ನು ತಮ್ಮ ಅಮರ್ ಸಿನಿಮಾ ಬಗ್ಗೆ ಮಾತಾಡಿದ ಅಭಿ, ಸಿನಿಮಾ ಚೆನ್ನಾಗಿದ್ರೆ ಜನ‌ ನೋಡ್ತಾರೆ, ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸ್ತಾರೆ. ಇಲ್ಲದಿದ್ರೆ ಅಲ್ಲೇ ಅದನ್ನು ಬೀಳಿಸ್ತಾರೆ ಎಂದು ಅಪ್ಪನ ಗತ್ತಿನಲ್ಲೇ ಜೂನಿಯರ್ ಜಲೀಲಾ ಮಾತನಾಡಿದ್ರು.

ನಿಖಿಲ್ ಮತ್ತು ನಾನು ಈಗಲೂ ಸ್ನೇಹಿತರು.ನಿಖಿಲ್ ಗೆ ಮುಂದೆ ಭವಿಷ್ಯ‌ಇದೆ .ಅಭಿಷೇಕ್ ಅಂಬರೀಶ್..!!!


ರೆಬೆಲ್ ಸ್ಟಾರ್ ಅಂಬರೀಶ್ ಅವರ ಆರನೇ ತಿಂಗಳ ಪುಣ್ಯ ಸ್ಮರಣೆ ಅಂಗವಾಗಿ ಇಂದು ಸುಮಲತಾ ಅಂಬರೀಶ್‌ಹಾಗೂ ಅಭಿಷೇಕ್ ಅಂಬರೀಶ್ ಸಮಾದಿ ಬಳಿ ಬಂದು ಸಮಾದಿಗೆ ಪೂಜೆ ಸಲ್ಲಿಸಿದರು.ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅಭಿಷೇಕ್ ಅಂಬರೀಶ್ ಮಂಡ್ಯ ಚುನಾವಣೆಯಲ್ಲಿ ನಿರೀಕ್ಷೆಗು ಮೀರಿದ ಗೆಲುವು ಕೊಟ್ಟ ಮಂಡ್ಯದ ಜನರಿಗೆ ಧನ್ಯವಾದ ತಿಳಿಸಿದ್ರು.ಅಲ್ಲದೆ ಅಮ್ಮನ ಗೆಲುವಿನಿಂದ ನಮಗೆ ಜವಬ್ದಾರಿ ಹೆಚ್ಚಾಗಿದೆ.ಇದು ಮಂಡ್ಯದ ಜನರು ಕೊಟ್ಟ ಭಿಕ್ಷೆ ಎಂದು ಹೇಳಿದರು.ಅಲ್ಲದೆ ನಿಖಿಲ್ ಸ್ನೇಹದ ಬಗ್ಗೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆ ನಗುತ್ತಲೆ ಉತ್ತರಿಸಿ ಜೂನಿಯರ್ ಜಲೀಲಾ ನಾನು ನಿಖಿಲ್ ಇಗಲೂ ಸ್ನೇಹಿತರು.ಅದ್ರೆ ಆತ್ಮೀಯಾವಾಗಿ ಇದ್ದೀವಿ ಅಂದ್ರೆ ಜನರು ನಂಬಲ್ಲ ಎರಡು ತಿಂಗಳಿನಿಂದ ನಾನು ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಇದ್ದೆ.ಅದೇ ರೀತಿ ನಿಖಿಲ್ ಸಹ ಬ್ಯುಸಿ ಇದ್ದ .ನಿಖಿಲ್ ಗೆ ನಾನು ಪೋನ್ ಮಾಡಲು ಸಿದ್ದ ಅದ್ರೆ ಅವರು ಬೇರೆ ತರ ತಿಳ್ಕೋಬಹುದು ಅದಕ್ಕಾಗಿ ನಾನು ಕಾಲ್ ಮಾಡಿಲ್ಲ.
ನಿಖಿಲ್ ಗೆ ಮುಂದೆ ಒಳ್ಳೆ ಅವಕಾಶಗಳಿವೆ ಅಲ್ಲದೆ ಒಳ್ಳೆ ಭವಿಷ್ಯವಿದೆ ಒಳ್ಳೆಯದಾಗಲಿ ಎಂದು ಹಳೇಯ ಗೆಳೆಯನಿಗೆ ಶುಭ ಕೋರಿದ್ರು.ಅಲ್ಲದೆ ನಿನ್ನೆ ಮತ ಎಣಿಕೆ ಸಮಯದಲ್ಲಿ ತುಂಭಾ ಟೆನ್ಷನ್ ಆಗಿದೆ.ಮಾಧ್ಯಮಗಳಲ್ಲಿ ಅಮ್ಮ ಮುನ್ನಡೆ ಸಾಧಿಸಿದ್ದಾರೆ ಎಂಬ ಮಾಹಿತಿ ಬಂದ ನಂತರ ರಿಲ್ಯಾಕ್ಸ್ ಆದೆ ಎಂದು ಅಬಿ ಹೇಳಿದರು.ಹಾಗೂ ಸುಮಲತಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಚಿತ್ರವನ್ನು ಚಿತ್ರತಂಡ ತೋರಿಸಿದ್ರೆ ನೋಡುವುದಾಗಿ ಅಭಿ ತಿಳಿಸಿದರು.ಇನ್ನೂ ಅಮರ್ ಚಿತ್ರದ ಬಗ್ಗೆ ಮಾತನಾಡಿದ ಅಭಿ ಸಿನಿಮಾ ಚೆನ್ನಾಗಿದ್ರೆ ಜನ‌ ನೋಡ್ತಾರೆ ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸ್ತಾರೆ.ಇಲ್ಲದಿದ್ರೆ ಜನ ಕಟೌಟ್ ಬಿಳಿಸ್ತಾರೆ ಎಂದು ಅಪ್ಪನ ಗತ್ತಿನಲ್ಲೇ ಜೂನಿಯರ್ ಜಲೀಲಾ ಮಾತನಾಡಿದ್ರು...


ಸತೀಶ ಎಂಬಿ

ವಿಸ್ಯುವಲ್ಸ್ ಕ್ಯಾಮರ ಬ್ಯಾಕ್ ಪ್ಯಾಕ್ ನಲ್ಲಿ ಬಂದಿದೆ...
Last Updated : May 24, 2019, 7:39 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.