ETV Bharat / sitara

ಸೆನ್ಸಾರ್​ ಮಾಡದೇ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಬಿಡುಗಡೆ ಆರೋಪ : ನಿರ್ದೇಶಕ ಹೇಳಿದ್ದೇನು?

author img

By

Published : Mar 20, 2022, 5:32 PM IST

ವಿಶ್ವಾದ್ಯಂತ ಸಿನಿಮಾ ಪ್ರದರ್ಶನ ಕಾಣುತ್ತಿರುವ ಮಧ್ಯೆಯೇ ನ್ಯೂಜಿಲ್ಯಾಂಡ್​ನಲ್ಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಲಾಗಿದೆ. ಚಿತ್ರ ಏಕ ಸಮುದಾಯದ ಪರವಾಗಿ ಮತ್ತು ಇನ್ನೊಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ, ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಒಂದು ಸಮುದಾಯದವರು ಅಲ್ಲಿನ ಕೋರ್ಟ್​ ಮೊರೆ ಹೋಗಿದ್ದಾರೆ..

kashmir
ಸಿನಿಮಾ

ನವದೆಹಲಿ : ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಬ್ರಾಹ್ಮಣ ಪಂಡಿತರ ಹತ್ಯಾಕಾಂಡದ ಕುರಿತು ಚಿತ್ರಿಸಲಾಗಿದೆ. ಈ ಚಿತ್ರ ಸೆನ್ಸಾರ್​ ಮಾಡದೆಯೇ ಬಿಡುಗಡೆ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಇದನ್ನು ಸಿನಿಮಾ ನಿರ್ದೇಶಕ ವಿವೇಕ್​ ಸತ್ಯರಂಜನ್​ ಅಗ್ನಿಹೋತ್ರಿ ತಳ್ಳಿ ಹಾಕಿದ್ದಾರೆ.

ಸಿನಿಮಾ ಸಿದ್ಧವಾದ ಬಳಿಕ ಸೆನ್ಸಾರ್​ ಮಂಡಳಿಯು ಯಾವುದೇ ದೃಶ್ಯಗಳಿಗೆ ತಡೆ ಹಾಕದೇ ಒಪ್ಪಿಕೊಂಡಿದೆ. ನಿರ್ದೇಶಕ ವಿವೇಕ್​ ಅಗ್ನೊಹೋತ್ರಿ ಅವರು ಮಂಡಳಿಯ ಸದಸ್ಯರಾಗಿರುವುದು ಇದಕ್ಕೆ ಕಾರಣ. ಅಲ್ಲದೇ ಕೇಂದ್ರ ಸರ್ಕಾರವೂ ಕೂಡ ಇದಕ್ಕೆ ಬೆಂಬಲ ನೀಡಿದೆ ಎಂಬೆಲ್ಲಾ ಆರೋಪ ಕೇಳಿ ಬಂದಿವೆ.

ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ವಿವೇಕ್​ ಅಗ್ನಿಹೋತ್ರಿ ಅವರು, ಸಿನಿಮಾದ ಕೆಲ ದೃಶ್ಯ ಮತ್ತು ಪದಗಳನ್ನು ತೆಗೆದು ಹಾಕಲು ಸೆನ್ಸಾರ್​ ಮಂಡಳಿ ಸೂಚಿಸಿತ್ತು. ಅದರಂತೆಯೇ ಸಿನಿಮಾವನ್ನು ರೂಪಿಸಲಾಗಿದೆ. ಮೊದಲು ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ. ಅಲ್ಲದೇ, ಸತ್ತವರ ಬಗ್ಗೆ ಕನಿಷ್ಠ ಮರುಕ, ಗೌರವ ಸೂಚಿಸಿ ಎಂದು ಮನವಿ ಮಾಡಿದ್ದಾರೆ.

ಸೆನ್ಸಾರ್​ ಮಂಡಳಿ ಸಿನಿಮಾಕ್ಕೆ 7 ದೃಶ್ಯಗಳಿಗೆ ಕತ್ತರಿ ಹಾಕಿದೆ. ಅಲ್ಲದೇ, 'ಎ' ಪ್ರಮಾಣಪತ್ರ ನೀಡಿದೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

  • IMPORTANT & URGENT:
    Some communal groups are trying to put pressure on New Zealand Censor to ban #TheKashmirFiles. I request all Indians to be united and oppose this undemocratic tactic by radicals with utmost humility and release this film about HUMANITY and HUMAN RIGHTS. #FOE pic.twitter.com/bXX1TxoXYN

    — Vivek Ranjan Agnihotri (@vivekagnihotri) March 18, 2022 " class="align-text-top noRightClick twitterSection" data=" ">

ನ್ಯೂಜಿಲ್ಯಾಂಡ್​ನಲ್ಲಿ ಸಿನಿಮಾಗೆ ತಡೆ : ಇನ್ನು ವಿಶ್ವಾದ್ಯಂತ ಸಿನಿಮಾ ಪ್ರದರ್ಶನ ಕಾಣುತ್ತಿರುವ ಮಧ್ಯೆಯೇ ನ್ಯೂಜಿಲ್ಯಾಂಡ್​ನಲ್ಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಲಾಗಿದೆ. ಚಿತ್ರ ಏಕ ಸಮುದಾಯದ ಪರವಾಗಿ ಮತ್ತು ಇನ್ನೊಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ, ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಒಂದು ಸಮುದಾಯದವರು ಅಲ್ಲಿನ ಕೋರ್ಟ್​ ಮೊರೆ ಹೋಗಿದ್ದಾರೆ.

ಇದನ್ನು ಆಲಿಸಿದ ಕೋರ್ಟ್​ ಸಿನಿಮಾಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಲ್ಲಿನ ಹಿಂದು ನಿವಾಸಿಗಳು ಸಿನಿಮಾವು ಸತ್ಯವನ್ನು ನಿರೂಪಿಸಿದೆ. ಇಂತಹ ಸತ್ಯಯಾಧಾರಿತ ಸಿನಿಮಾಕ್ಕೆ ತಡೆಯೊಡ್ಡಿದ್ದು ಸರಿಯಲ್ಲ ಎಂದು ಹಿಂದುಪರರು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಬೆಂಬಲಿಸಬೇಕು ಎಂದು ಅಭಿಯಾನ ಶುರು ಮಾಡಿದ್ದಾರೆ.

ಓದಿ: ಬಾಕ್ಸ್‌ ಆಫೀಸ್​ ಕೊಳ್ಳೆ ಹೊಡೆದು ಬೆಳ್ಳಿತೆರೆ ಮೇಲೆ ಮಿಂಚಿದ ನೈಜ ಕಥೆಯಾಧಾರಿತ ಸಿನಿಮಾಗಳಿವು..

ನವದೆಹಲಿ : ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಬ್ರಾಹ್ಮಣ ಪಂಡಿತರ ಹತ್ಯಾಕಾಂಡದ ಕುರಿತು ಚಿತ್ರಿಸಲಾಗಿದೆ. ಈ ಚಿತ್ರ ಸೆನ್ಸಾರ್​ ಮಾಡದೆಯೇ ಬಿಡುಗಡೆ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಇದನ್ನು ಸಿನಿಮಾ ನಿರ್ದೇಶಕ ವಿವೇಕ್​ ಸತ್ಯರಂಜನ್​ ಅಗ್ನಿಹೋತ್ರಿ ತಳ್ಳಿ ಹಾಕಿದ್ದಾರೆ.

ಸಿನಿಮಾ ಸಿದ್ಧವಾದ ಬಳಿಕ ಸೆನ್ಸಾರ್​ ಮಂಡಳಿಯು ಯಾವುದೇ ದೃಶ್ಯಗಳಿಗೆ ತಡೆ ಹಾಕದೇ ಒಪ್ಪಿಕೊಂಡಿದೆ. ನಿರ್ದೇಶಕ ವಿವೇಕ್​ ಅಗ್ನೊಹೋತ್ರಿ ಅವರು ಮಂಡಳಿಯ ಸದಸ್ಯರಾಗಿರುವುದು ಇದಕ್ಕೆ ಕಾರಣ. ಅಲ್ಲದೇ ಕೇಂದ್ರ ಸರ್ಕಾರವೂ ಕೂಡ ಇದಕ್ಕೆ ಬೆಂಬಲ ನೀಡಿದೆ ಎಂಬೆಲ್ಲಾ ಆರೋಪ ಕೇಳಿ ಬಂದಿವೆ.

ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ವಿವೇಕ್​ ಅಗ್ನಿಹೋತ್ರಿ ಅವರು, ಸಿನಿಮಾದ ಕೆಲ ದೃಶ್ಯ ಮತ್ತು ಪದಗಳನ್ನು ತೆಗೆದು ಹಾಕಲು ಸೆನ್ಸಾರ್​ ಮಂಡಳಿ ಸೂಚಿಸಿತ್ತು. ಅದರಂತೆಯೇ ಸಿನಿಮಾವನ್ನು ರೂಪಿಸಲಾಗಿದೆ. ಮೊದಲು ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ. ಅಲ್ಲದೇ, ಸತ್ತವರ ಬಗ್ಗೆ ಕನಿಷ್ಠ ಮರುಕ, ಗೌರವ ಸೂಚಿಸಿ ಎಂದು ಮನವಿ ಮಾಡಿದ್ದಾರೆ.

ಸೆನ್ಸಾರ್​ ಮಂಡಳಿ ಸಿನಿಮಾಕ್ಕೆ 7 ದೃಶ್ಯಗಳಿಗೆ ಕತ್ತರಿ ಹಾಕಿದೆ. ಅಲ್ಲದೇ, 'ಎ' ಪ್ರಮಾಣಪತ್ರ ನೀಡಿದೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

  • IMPORTANT & URGENT:
    Some communal groups are trying to put pressure on New Zealand Censor to ban #TheKashmirFiles. I request all Indians to be united and oppose this undemocratic tactic by radicals with utmost humility and release this film about HUMANITY and HUMAN RIGHTS. #FOE pic.twitter.com/bXX1TxoXYN

    — Vivek Ranjan Agnihotri (@vivekagnihotri) March 18, 2022 " class="align-text-top noRightClick twitterSection" data=" ">

ನ್ಯೂಜಿಲ್ಯಾಂಡ್​ನಲ್ಲಿ ಸಿನಿಮಾಗೆ ತಡೆ : ಇನ್ನು ವಿಶ್ವಾದ್ಯಂತ ಸಿನಿಮಾ ಪ್ರದರ್ಶನ ಕಾಣುತ್ತಿರುವ ಮಧ್ಯೆಯೇ ನ್ಯೂಜಿಲ್ಯಾಂಡ್​ನಲ್ಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಲಾಗಿದೆ. ಚಿತ್ರ ಏಕ ಸಮುದಾಯದ ಪರವಾಗಿ ಮತ್ತು ಇನ್ನೊಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ, ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಒಂದು ಸಮುದಾಯದವರು ಅಲ್ಲಿನ ಕೋರ್ಟ್​ ಮೊರೆ ಹೋಗಿದ್ದಾರೆ.

ಇದನ್ನು ಆಲಿಸಿದ ಕೋರ್ಟ್​ ಸಿನಿಮಾಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಲ್ಲಿನ ಹಿಂದು ನಿವಾಸಿಗಳು ಸಿನಿಮಾವು ಸತ್ಯವನ್ನು ನಿರೂಪಿಸಿದೆ. ಇಂತಹ ಸತ್ಯಯಾಧಾರಿತ ಸಿನಿಮಾಕ್ಕೆ ತಡೆಯೊಡ್ಡಿದ್ದು ಸರಿಯಲ್ಲ ಎಂದು ಹಿಂದುಪರರು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಬೆಂಬಲಿಸಬೇಕು ಎಂದು ಅಭಿಯಾನ ಶುರು ಮಾಡಿದ್ದಾರೆ.

ಓದಿ: ಬಾಕ್ಸ್‌ ಆಫೀಸ್​ ಕೊಳ್ಳೆ ಹೊಡೆದು ಬೆಳ್ಳಿತೆರೆ ಮೇಲೆ ಮಿಂಚಿದ ನೈಜ ಕಥೆಯಾಧಾರಿತ ಸಿನಿಮಾಗಳಿವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.