ETV Bharat / jagte-raho

ದೇವರ ದರ್ಶನಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ: ಒಬ್ಬ ಸ್ಥಳದಲ್ಲೇ ಸಾವು, 10 ಜನರಿಗೆ ಗಾಯ - ಬಸವಕಲ್ಯಾಣ ಟೆಂಪೋ ವಾಹನ ಪಲ್ಟಿ

ದೇವರ ದರ್ಶನಕ್ಕೆ ಎಂದು ತೆರಳುತ್ತಿದ್ದ ಟೆಂಪೋ ಪಲ್ಟಿಯಾಗಿ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟು, 10 ಕ್ಕೂ ಅಧಿಕ ಜನರಿಗೆ ಗಾಯವಾದ ಘಟನೆ ಹುಲಸೂರು ತಾಲೂಕಿನ ಹಾಲಳ್ಳಿ ಕ್ರಾಸ್ ಬಳಿ ನಡೆದಿದೆ.

ದೇವರ ದರ್ಶನಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ
ದೇವರ ದರ್ಶನಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ
author img

By

Published : Dec 5, 2019, 1:07 PM IST

ಬಸವಕಲ್ಯಾಣ: ದೇವರ ದರ್ಶನಕ್ಕೆಂದು ತೆರಳುತ್ತಿದ್ದ ಟೆಂಪೋ ವಾಹನ ಪಲ್ಟಿಯಾಗಿ ಒಬ್ಬ ಬಾಲಕ ಸ್ಥಳದಲ್ಲೇ ಮೃತಪಟ್ಟು, 10 ಕ್ಕೂ ಅಧಿಕ ಜನರಿಗೆ ಗಾಯವಾದ ಘಟನೆ ಹುಲಸೂರ ತಾಲೂಕಿನ ಹಾಲಳ್ಳಿ ಕ್ರಾಸ್ ಬಳಿ ನಡೆದಿದೆ.

ದೇವರ ದರ್ಶನಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ

ದೇವಣಿ ತಾಲೂಕಿನ ಕೌಠಾಳ ಗ್ರಾಮದ ಮಹಾದೇವ ನಿಡೆಬಾನೆ (13) ಮೃತ ಬಾಲಕ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ತಾಲೂಕಿನ ಕೌಠಾಳ ಗ್ರಾಮದಿಂದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಘೋರವಾಡಿಯಲ್ಲಿಯ ಪ್ರಸಿದ್ಧ ಇಸ್ಮಾಯಿಲ್ ಖಾದ್ರಿ ದೇವರ ದರ್ಶನಕ್ಕೆಂದು ಟೆಂಪೋ ವಾಹನದಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎನ್ನಲಾಗಿದೆ.

ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಹುಲಸೂರಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗೌತಮ್​ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಸವಕಲ್ಯಾಣ: ದೇವರ ದರ್ಶನಕ್ಕೆಂದು ತೆರಳುತ್ತಿದ್ದ ಟೆಂಪೋ ವಾಹನ ಪಲ್ಟಿಯಾಗಿ ಒಬ್ಬ ಬಾಲಕ ಸ್ಥಳದಲ್ಲೇ ಮೃತಪಟ್ಟು, 10 ಕ್ಕೂ ಅಧಿಕ ಜನರಿಗೆ ಗಾಯವಾದ ಘಟನೆ ಹುಲಸೂರ ತಾಲೂಕಿನ ಹಾಲಳ್ಳಿ ಕ್ರಾಸ್ ಬಳಿ ನಡೆದಿದೆ.

ದೇವರ ದರ್ಶನಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ

ದೇವಣಿ ತಾಲೂಕಿನ ಕೌಠಾಳ ಗ್ರಾಮದ ಮಹಾದೇವ ನಿಡೆಬಾನೆ (13) ಮೃತ ಬಾಲಕ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ತಾಲೂಕಿನ ಕೌಠಾಳ ಗ್ರಾಮದಿಂದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಘೋರವಾಡಿಯಲ್ಲಿಯ ಪ್ರಸಿದ್ಧ ಇಸ್ಮಾಯಿಲ್ ಖಾದ್ರಿ ದೇವರ ದರ್ಶನಕ್ಕೆಂದು ಟೆಂಪೋ ವಾಹನದಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎನ್ನಲಾಗಿದೆ.

ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಹುಲಸೂರಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗೌತಮ್​ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Intro:ಬಸವಕಲ್ಯಾಣ: ದೇವರ ದರ್ಶನಕ್ಕೆಂದು ತೆರಳುತ್ತಿದ್ದ ಟೆಂಪೋ ವಾಹನ ಪಲ್ಟಿಯಾಗಿ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟು, 10ಕ್ಕೂ ಅಧಿಕ ಜನರಿಗೆ ಗಾಯವಾದ ಘಟನೆ ಹುಲಸೂರ ತಾಲೂಕಿನ ಹಾಲಳ್ಳಿ ಕ್ರಾಸ್ ಬಳಿ ನಡೆದಿದೆ.
ದೇವಣಿ ತಾಲೂಕಿನ ಕೌಠಾಳ ಗ್ರಾಮದ ಮಹಾದೇವ ನಿಡೆಬಾನೆ(13) ಮೃತ ಬಾಲಕ.

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ತಾಲ್ಲೂಕಿನ ಕೌಠಾಳ ಗ್ರಾಮದಿಂದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಘೋರವಾಡಿಯಲ್ಲಿಯ ಪ್ರಸಿದ್ದ ಇಸ್ಮಾಯಿಲ್ ಖಾದ್ರಿ ದೇವರ ದರ್ಶನಕ್ಕೆಂದು ಟೆಂಪೋವಾಹನದಲ್ಲಿ ತೆರಳುವಾಗ ಬೆಳ್ಳಂಬೆಗ್ಗೆ ನಿದ್ರಾವಸ್ಥೆಯಲಿದ್ದ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ
ಘಟನೆ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಹುಲಸೂರನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗೌತಮ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.