ETV Bharat / jagte-raho

ಆಗ್ರಾ: ಹೊಲ ಕಾಯಲು ಹೋಗಿದ್ದ ರೈತನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು - ಆಗ್ರಾ ಕ್ರೈಂ ಸುದ್ದಿ

ಹೊಲದಲ್ಲಿ ಮಲಗಿದ್ದ ರೈತನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Uttar Pradesh murder news
ಆಗ್ರಾದಲ್ಲಿ ರೈತನ ಗುಂಡಿಕ್ಕಿ ಹತ್ಯೆ
author img

By

Published : Nov 8, 2020, 3:46 PM IST

ಆಗ್ರಾ (ಉತ್ತರ ಪ್ರದೇಶ): ಬಂದೂಕು ಹಿಡಿದು ಬಂದ ಅಪರಿಚಿತ ವ್ಯಕ್ತಿಗಳು ರೈತನೋರ್ವನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮಹೇಂದ್ರ ಸಿಂಗ್ ಮೃತ ರೈತ. ಮಹೇಂದ್ರ ಸಿಂಗ್ ನಿನ್ನೆ ರಾತ್ರಿ ಹೊಲ ಕಾಯುತ್ತಾ ಅಲ್ಲೇ ಮಲಗಿದ್ದರು. ಇಂದು ಬೆಳಗ್ಗೆ ಚಹಾ ತೆಗೆದುಕೊಂಡು ಮಗ ಅನಿಲ್ ಹೊಲಕ್ಕೆ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯನ್ನು ನೋಡಿದ್ದಾರೆ. ತಕ್ಷಣವೇ ಅನಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸ್​ ಅಧಿಕಾರಿಗಳು ದುಷ್ಕರ್ಮಿಗಳು ಗುಂಡು ಹಾರಿಸಿ ಸಾಯಿಸಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಆಗ್ರಾ (ಉತ್ತರ ಪ್ರದೇಶ): ಬಂದೂಕು ಹಿಡಿದು ಬಂದ ಅಪರಿಚಿತ ವ್ಯಕ್ತಿಗಳು ರೈತನೋರ್ವನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮಹೇಂದ್ರ ಸಿಂಗ್ ಮೃತ ರೈತ. ಮಹೇಂದ್ರ ಸಿಂಗ್ ನಿನ್ನೆ ರಾತ್ರಿ ಹೊಲ ಕಾಯುತ್ತಾ ಅಲ್ಲೇ ಮಲಗಿದ್ದರು. ಇಂದು ಬೆಳಗ್ಗೆ ಚಹಾ ತೆಗೆದುಕೊಂಡು ಮಗ ಅನಿಲ್ ಹೊಲಕ್ಕೆ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯನ್ನು ನೋಡಿದ್ದಾರೆ. ತಕ್ಷಣವೇ ಅನಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸ್​ ಅಧಿಕಾರಿಗಳು ದುಷ್ಕರ್ಮಿಗಳು ಗುಂಡು ಹಾರಿಸಿ ಸಾಯಿಸಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.