ETV Bharat / jagte-raho

ಅಂತಾರಾಜ್ಯ ಅಪಹರಣಕಾರರನ್ನು ಬಂಧಿಸಿದ ಚಿಕ್ಕೋಡಿ ಪೋಲಿಸರು

author img

By

Published : Mar 18, 2020, 6:11 PM IST

ಸಂಬಂಧಿಕರ‌ ಕಾರ್ಯಕ್ರಮಕ್ಕೆ ಹೋಗಿದ್ದಾಗ ನನ್ನ ತಂದೆಯನ್ನು ಹೆದರಿಸಿ ಅವರನ್ನು ಇನ್ನೋವಾ ಕಾರಿನಲ್ಲಿ ಅಪಹರಣ ಮಾಡಿದ್ದಾರೆ ಎಂದು ಮಗ ಸಮೀರ್​ ಶಬ್ಬೀರ ಮಕಾಂದರ ನಿಪ್ಪಾಣಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಮಾ.15ರಂದು ಪ್ರಕರಣ ದಾಖಲಿಸಿದ್ದರು. ದೂರು ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನ ಅರೆಸ್ಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

police-arrested-international-kidnappers
ಬಂಧಿತ ಆರೋಪಿಗಳು

ಚಿಕ್ಕೋಡಿ: ತಮ್ಮ ಸಂಬಂಧಿಕರ‌ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಇನ್ನೋವಾ ಕಾರಿನಲ್ಲಿ ಅಪಹರಿಸಿದ್ದ ಐವರನ್ನು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಮ್ಮ ತಂದೆ ಶಬ್ಬೀರ್​ ಬಾಬಾಲಾಲ ಮಕಾಂದರ (54) ಅವರನ್ನು ಅಪಹರಿಸಿದ್ದಾರೆ ಎಂದು ಮಹಾರಾಷ್ಟ್ರದ ಇಂಚಲಕರಂಜಿಯ ಸಮೀರ ಶಬ್ಬೀರ ಮಕಾಂದರ ಅವರು ಪ್ರಕರಣ ದಾಖಲಿಸಿದ್ದರು.

ಬಂಧಿತ ಆರೋಪಿಗಳು

ಚಿಕ್ಕೋಡಿಯ ಶಿರಗಾಂವ ಗ್ರಾಮದ ರಜತ ಅಲ್ಲಾವುದೀನ್​​ ನದಾಫ್​ (25), ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಮುಜಪ್ಪರ ಅಲ್ತಾಫ ಸಯೈದ್​, ರೋಹನ್​ ಅಶೋಕ‌ ಕವರೆ (25), ತುಕಾರಾಮ ತಾನಾಜಿ ಲಾಂಬೋಲೆ (25), ರಫೀಕ ದಸ್ತಗೀರ ನದಾಫ (29) ಬಂಧಿತರು.

ಶಬ್ಬೀರ ಬಾಬಾಲಾಲ ಮಕಾಂದರನನ್ನು ಅಪರಹರಿಸಲು ಪ್ರಮುಖ ಆರೋಪಿ ಹಿದಾಯತ ಶಿಕಂದರ್​​ ಬಾಗವಾನ ಸುಫಾರಿ ಕೊಟ್ಟಿದ್ದ. ಆತನಿಗಾಗಿ ಈಗ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಚಿಕ್ಕೋಡಿ: ತಮ್ಮ ಸಂಬಂಧಿಕರ‌ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಇನ್ನೋವಾ ಕಾರಿನಲ್ಲಿ ಅಪಹರಿಸಿದ್ದ ಐವರನ್ನು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಮ್ಮ ತಂದೆ ಶಬ್ಬೀರ್​ ಬಾಬಾಲಾಲ ಮಕಾಂದರ (54) ಅವರನ್ನು ಅಪಹರಿಸಿದ್ದಾರೆ ಎಂದು ಮಹಾರಾಷ್ಟ್ರದ ಇಂಚಲಕರಂಜಿಯ ಸಮೀರ ಶಬ್ಬೀರ ಮಕಾಂದರ ಅವರು ಪ್ರಕರಣ ದಾಖಲಿಸಿದ್ದರು.

ಬಂಧಿತ ಆರೋಪಿಗಳು

ಚಿಕ್ಕೋಡಿಯ ಶಿರಗಾಂವ ಗ್ರಾಮದ ರಜತ ಅಲ್ಲಾವುದೀನ್​​ ನದಾಫ್​ (25), ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಮುಜಪ್ಪರ ಅಲ್ತಾಫ ಸಯೈದ್​, ರೋಹನ್​ ಅಶೋಕ‌ ಕವರೆ (25), ತುಕಾರಾಮ ತಾನಾಜಿ ಲಾಂಬೋಲೆ (25), ರಫೀಕ ದಸ್ತಗೀರ ನದಾಫ (29) ಬಂಧಿತರು.

ಶಬ್ಬೀರ ಬಾಬಾಲಾಲ ಮಕಾಂದರನನ್ನು ಅಪರಹರಿಸಲು ಪ್ರಮುಖ ಆರೋಪಿ ಹಿದಾಯತ ಶಿಕಂದರ್​​ ಬಾಗವಾನ ಸುಫಾರಿ ಕೊಟ್ಟಿದ್ದ. ಆತನಿಗಾಗಿ ಈಗ ಪೊಲೀಸರು ಶೋಧ ನಡೆಸುತ್ತಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.