ETV Bharat / international

ಪೇಶಾವರದಲ್ಲಿ 2 ಬುಡಕಟ್ಟುಗಳ ನಡುವೆ ಸಂಘರ್ಷ; 15 ಜನರ ಸಾವು, ಹಲವರಿಗೆ ಗಾಯ

ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ವಾಯವ್ಯ ಪಾಕಿಸ್ತಾನದಲ್ಲಿ 2 ಬುಡಕಟ್ಟು ಜನಾಂಗದವರ ನಡುವೆ ಸಂಘರ್ಷ ನಡೆದು 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

author img

By

Published : May 16, 2023, 7:30 AM IST

Updated : May 16, 2023, 9:27 AM IST

pakisthan
ಪಾಕಿಸ್ತಾನ ಬುಡಕಟ್ಟು ಜಗಳ

ಪೇಶಾವರ(ಪಾಕಿಸ್ತಾನ): ವಾಯುವ್ಯ ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಎರಡು ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಪೇಶಾವರ ಪ್ರಕ್ಷುಬ್ಧ ವಾಯುವ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಸೋಮವಾರ 2 ಬುಡಕಟ್ಟು ಗುಂಪಿನ ನಡುವೆ ಬಂದೂಕಿನ ಮೂಲಕ ರಕ್ತಸಿಕ್ತ ಘರ್ಷಣೆ ನಡೆದು ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಹತ್ ಜಿಲ್ಲೆಯ ಪೇಶಾವರದಿಂದ ನೈಋತ್ಯಕ್ಕೆ 35 ಕಿಮೀ ದೂರದಲ್ಲಿರುವ ದರ್ರಾ ಆಡಮ್ ಖೇಕ್ ಪ್ರದೇಶದಲ್ಲಿ ಬುಲಂದರಿಯ ಗುಡ್ಡಗಾಡು ಸಮುದಾಯದ ಭಾಗವಾಗಿರುವ ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಗಣಿ ಡಿಲಿಮಿಟೇಶನ್ ಕುರಿತು ಗಲಾಟೆ ನಡೆದಿದೆ. ಈ ವಿಷಯವು ಅವರ ಮಧ್ಯೆ ಹೊಡೆದಾಟಕ್ಕೆ ತಿರುಗಿ ಸಾವಿಗೆ ಕಾರಣವಾಗಿದೆ. ಸದ್ಯ ಸಾವನ್ನಪ್ಪಿದವರ ಮೃತದೇಹಗಳನ್ನು ಮತ್ತು ಗಾಯಗೊಂಡವರನ್ನು ಪೇಶಾವರ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: 15 ವರ್ಷದಿಂದ ಸಿಕ್​ ಲೀವ್​, ₹55 ಲಕ್ಷ ಸಂಬಳ: ಆದ್ರೂ ಕಂಪನಿ ವಿರುದ್ಧ ಕೇಸ್​ ಜಡಿದ ಉದ್ಯೋಗಿ!

ಈ ಸಂಘರ್ಷದಲ್ಲಿ ಸಾವನ್ನಪ್ಪಿದವರನ್ನು ಬಿಟ್ಟರೆ ಗಾಯಗೊಂಡವರ ನಿಖರ ಸಂಖ್ಯೆ ತಕ್ಷಣವೇ ತಿಳಿದು ಬಂದಿಲ್ಲ, ಆದರೆ ಗುಂಡಿನ ಚಕಮಕಿಯಲ್ಲಿ ಎರಡೂ ಜನಾಂಗದವರಲ್ಲಿ ಸಾವು ನೋವುಗಳು ಸಂಭವಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳ ಜಂಟಿ ತಂಡಗಳು ಧಾವಿಸಿದ್ದು, ಬುಡಕಟ್ಟು ಜನರ ನಡುವಿನ ಗುಂಡಿನ ದಾಳಿಯನ್ನು ನಿಲ್ಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಹಲವರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಅಲ್ಲಿನ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ದರ್ರಾ ಆದಮ್ ಖೇಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಕಲ್ಲಿದ್ದಲು ಗಣಿಯ ಡಿಲಿಮಿಟೇಶನ್ ಕುರಿತು ಕಳೆದೆರಡು ವರ್ಷಗಳಿಂದ ವಾದ - ಪ್ರತಿವಾದ ಮುಂದುವರಿದಿದ್ದು, ಈ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಹಲವು ರಾಜಿ "ಜಿರ್ಗಾಸ್"ಗಳನ್ನು ನಡೆಸಲಾಗಿದೆ. ಆದರೂ ಇವರ ಸಂಘರ್ಷ ತಣ್ಣಗಾಗಿಲ್ಲ.

ಪಾಕಿಸ್ತಾನಿ ನುಸುಳುಕೋರಳನ್ನುಹತ್ಯೆಗೈದ ಭಾರತೀಯ ಭದ್ರತಾ ಪಡೆ: ಶ್ರೀನಗರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ಅಪರಿಚಿತ ಮಹಿಳೆಯೊಬ್ಬಳು ದಾಟಿದ್ದು ಪಾಕ್ ನುಸುಳುಕೋರಳೆಂದು ಶಂಕಿಸಿ ಆಕೆಯನ್ನು ಭಾರತ ಭದ್ರತಾ ಪಡೆಗಳು ಸೋಮವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಶಂಕಿತ ಮಹಿಳೆ ಬಾರಾಮುಲ್ಲಾ ಜಿಲ್ಲೆಯ ಕಮಲಕೋಟೆ ಪ್ರದೇಶದಲ್ಲಿ ನಿಯಂತ್ರಣ ರೇಖೆ ದಾಟಿ ಗಡಿ ಬೇಲಿಯ ಸಮೀಪ ಬರುತ್ತಿದ್ದಳು. ಸೈನಿಕರು ಎಚ್ಚರಿಕೆ ನೀಡಿದರು ಗಮನ ಹರಿಸದ ಈಕೆಯ ಮೇಲೆ ಭದ್ರತಾ ಪಡೆಗಳು ಬಂದೂಕಾಸ್ತ್ರ ಪ್ರಯೋಗಿಸಿ ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಮೆಕ್ಸಿಕೋ: ಟ್ರಕ್​-ವ್ಯಾನ್​ ಡಿಕ್ಕಿಯಾಗಿ 26 ಜನರ ದಾರುಣ ಸಾವು

ಇದನ್ನೂ ಓದಿ: 'ನೀವು ರಾಜಕೀಯಕ್ಕೆ ಧುಮುಕಿದ್ದೀರಿ, ಏಕೆ ಪಕ್ಷ ಕಟ್ಟಬಾರದು?': ಸೇನೆಯ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಎರಡು ವಾರಗಳ ಜಾಮೀನು ಮಂಜೂರು

ಪೇಶಾವರ(ಪಾಕಿಸ್ತಾನ): ವಾಯುವ್ಯ ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಎರಡು ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಪೇಶಾವರ ಪ್ರಕ್ಷುಬ್ಧ ವಾಯುವ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಸೋಮವಾರ 2 ಬುಡಕಟ್ಟು ಗುಂಪಿನ ನಡುವೆ ಬಂದೂಕಿನ ಮೂಲಕ ರಕ್ತಸಿಕ್ತ ಘರ್ಷಣೆ ನಡೆದು ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಹತ್ ಜಿಲ್ಲೆಯ ಪೇಶಾವರದಿಂದ ನೈಋತ್ಯಕ್ಕೆ 35 ಕಿಮೀ ದೂರದಲ್ಲಿರುವ ದರ್ರಾ ಆಡಮ್ ಖೇಕ್ ಪ್ರದೇಶದಲ್ಲಿ ಬುಲಂದರಿಯ ಗುಡ್ಡಗಾಡು ಸಮುದಾಯದ ಭಾಗವಾಗಿರುವ ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಗಣಿ ಡಿಲಿಮಿಟೇಶನ್ ಕುರಿತು ಗಲಾಟೆ ನಡೆದಿದೆ. ಈ ವಿಷಯವು ಅವರ ಮಧ್ಯೆ ಹೊಡೆದಾಟಕ್ಕೆ ತಿರುಗಿ ಸಾವಿಗೆ ಕಾರಣವಾಗಿದೆ. ಸದ್ಯ ಸಾವನ್ನಪ್ಪಿದವರ ಮೃತದೇಹಗಳನ್ನು ಮತ್ತು ಗಾಯಗೊಂಡವರನ್ನು ಪೇಶಾವರ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: 15 ವರ್ಷದಿಂದ ಸಿಕ್​ ಲೀವ್​, ₹55 ಲಕ್ಷ ಸಂಬಳ: ಆದ್ರೂ ಕಂಪನಿ ವಿರುದ್ಧ ಕೇಸ್​ ಜಡಿದ ಉದ್ಯೋಗಿ!

ಈ ಸಂಘರ್ಷದಲ್ಲಿ ಸಾವನ್ನಪ್ಪಿದವರನ್ನು ಬಿಟ್ಟರೆ ಗಾಯಗೊಂಡವರ ನಿಖರ ಸಂಖ್ಯೆ ತಕ್ಷಣವೇ ತಿಳಿದು ಬಂದಿಲ್ಲ, ಆದರೆ ಗುಂಡಿನ ಚಕಮಕಿಯಲ್ಲಿ ಎರಡೂ ಜನಾಂಗದವರಲ್ಲಿ ಸಾವು ನೋವುಗಳು ಸಂಭವಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳ ಜಂಟಿ ತಂಡಗಳು ಧಾವಿಸಿದ್ದು, ಬುಡಕಟ್ಟು ಜನರ ನಡುವಿನ ಗುಂಡಿನ ದಾಳಿಯನ್ನು ನಿಲ್ಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಹಲವರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಅಲ್ಲಿನ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ದರ್ರಾ ಆದಮ್ ಖೇಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಕಲ್ಲಿದ್ದಲು ಗಣಿಯ ಡಿಲಿಮಿಟೇಶನ್ ಕುರಿತು ಕಳೆದೆರಡು ವರ್ಷಗಳಿಂದ ವಾದ - ಪ್ರತಿವಾದ ಮುಂದುವರಿದಿದ್ದು, ಈ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಹಲವು ರಾಜಿ "ಜಿರ್ಗಾಸ್"ಗಳನ್ನು ನಡೆಸಲಾಗಿದೆ. ಆದರೂ ಇವರ ಸಂಘರ್ಷ ತಣ್ಣಗಾಗಿಲ್ಲ.

ಪಾಕಿಸ್ತಾನಿ ನುಸುಳುಕೋರಳನ್ನುಹತ್ಯೆಗೈದ ಭಾರತೀಯ ಭದ್ರತಾ ಪಡೆ: ಶ್ರೀನಗರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ಅಪರಿಚಿತ ಮಹಿಳೆಯೊಬ್ಬಳು ದಾಟಿದ್ದು ಪಾಕ್ ನುಸುಳುಕೋರಳೆಂದು ಶಂಕಿಸಿ ಆಕೆಯನ್ನು ಭಾರತ ಭದ್ರತಾ ಪಡೆಗಳು ಸೋಮವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಶಂಕಿತ ಮಹಿಳೆ ಬಾರಾಮುಲ್ಲಾ ಜಿಲ್ಲೆಯ ಕಮಲಕೋಟೆ ಪ್ರದೇಶದಲ್ಲಿ ನಿಯಂತ್ರಣ ರೇಖೆ ದಾಟಿ ಗಡಿ ಬೇಲಿಯ ಸಮೀಪ ಬರುತ್ತಿದ್ದಳು. ಸೈನಿಕರು ಎಚ್ಚರಿಕೆ ನೀಡಿದರು ಗಮನ ಹರಿಸದ ಈಕೆಯ ಮೇಲೆ ಭದ್ರತಾ ಪಡೆಗಳು ಬಂದೂಕಾಸ್ತ್ರ ಪ್ರಯೋಗಿಸಿ ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಮೆಕ್ಸಿಕೋ: ಟ್ರಕ್​-ವ್ಯಾನ್​ ಡಿಕ್ಕಿಯಾಗಿ 26 ಜನರ ದಾರುಣ ಸಾವು

ಇದನ್ನೂ ಓದಿ: 'ನೀವು ರಾಜಕೀಯಕ್ಕೆ ಧುಮುಕಿದ್ದೀರಿ, ಏಕೆ ಪಕ್ಷ ಕಟ್ಟಬಾರದು?': ಸೇನೆಯ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಎರಡು ವಾರಗಳ ಜಾಮೀನು ಮಂಜೂರು

Last Updated : May 16, 2023, 9:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.