ETV Bharat / international

ತವರಿಗೆ ವಾಪಸ್​​ ಆದ ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ

author img

By

Published : Sep 3, 2022, 10:05 AM IST

ಶ್ರೀಲಂಕಾ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿದ್ದ ವೇಳೆ ಪಲಾಯನ ಮಾಡಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ವಾಪಸ್​​ ಆಗಿದ್ದಾರೆ.

Etv Bharat
Etv Bharat

ಕೊಲಂಬೊ(ಶ್ರೀಲಂಕಾ): ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜನರು ದಂಗೆ ಎದಿದ್ದರು. ಈ ವೇಳೆ, ದೇಶ ಬಿಟ್ಟು ಪರಾರಿಯಾಗಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ತವರಿಗೆ ವಾಪಸ್​​​​ ಆಗಿದ್ದಾರೆ. ಇಂದು ನಸುಕಿನ ಜಾವ ಥಾಯ್ಲೆಂಡ್​​ನಿಂದ ಸ್ವದೇಶಕ್ಕೆ ಮರಳಿದ್ದಾರೆಂದು ಖಚಿತ ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ತತ್ತರಿಸಿ ಹೋಗಿದ್ದ ಜನರು ಕಳೆದ ಜುಲೈ 9ರಂದು ಕೊಲಂಬೊದಲ್ಲಿರುವ ರಾಜಪಕ್ಸ ಅವರ ಭವನ ಸೇರಿದಂತೆ ಅನೇಕ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ, ಜುಲೈ 13ರಂದು ಗೊಟಬಯ ಶ್ರೀಲಂಕಾದಿಂದ ಪಲಾಯನ ಮಾಡಿದ್ದರು. ಸುಮಾರು ಎರಡು ತಿಂಗಳ ನಂತರ ಥಾಯ್ಲೆಂಡ್​​ನಿಂದ ದೇಶಕ್ಕೆ ವಾಪಸ್​ ಆಗಿದ್ದಾರೆ.

ಭಾರೀ ಭದ್ರತೆಯ ನಡುವೆ ರಾಜಪಕ್ಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಶ್ರೀಲಂಕಾದಲ್ಲಿ ಆಡಳಿತ ನಡೆಸುತ್ತಿರುವ ಎಸ್​​ಎಲ್​​ಪಿಪಿ ಪಕ್ಷದ ಸಚಿವರು, ಸಂಸದರು ಅವರನ್ನು ಬರಮಾಡಿಕೊಂಡರು. ಇದಾದ ಬಳಿಕ ಬೃಹತ್​ ಸುರಕ್ಷತೆಯಲ್ಲಿ ಅವರು ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ಗೊಟಬಯಾ ರಾಜಪಕ್ಸ ರಾಜೀನಾಮೆ.. ಸಿಂಗಾಪುರಕ್ಕೆ ಪರಾರಿ

ಥಾಯ್ಲೆಂಡ್​​ನಲ್ಲಿ ರಕ್ಷಣೆ ಪಡೆದುಕೊಂಡಿದ್ದ ಅವರು, ಉಭಯ ದೇಶಗಳ ನಡುವೆ ನೇರ ವಿಮಾನ ಸಂಪರ್ಕವಿಲ್ಲದ ಕಾರಣ ಸಿಂಗಾಪುರಕ್ಕೆ ತೆರಳಿ, ಅಲ್ಲಿಂದ ತವರಿಗೆ ಬಂದಿದ್ದಾರೆ. ಸದ್ಯ ಕೊಲಂಬೊದ ವಿಜೆರಾಮ ಮಾವಾಥಮ ಸಮೀಪದ ಬಂಗಲೆಯಲ್ಲಿ ವಾಸವಾಗಿದ್ದಾಗಿ ತಿಳಿದು ಬಂದಿದೆ.

ಥಾಯ್ಲೆಂಡ್​​ನಲ್ಲಿ ಉಳಿದುಕೊಳ್ಳಲು 90 ದಿನಗಳ ಪಾಸ್​​ಪೋರ್ಟ್​ ಹೊಂದಿದ್ದರು. ಆದರೆ, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವರಿಗೆ ಅವಕಾಶ ನೀಡಿರಲಿಲ್ಲ. ಅವರು ವಾಸವಾಗಿದ್ದ ಹೋಟೆಲ್​​​ನ ಸುತ್ತಲೂ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದರು. ರಾಜಪಕ್ಸ ಪದಚ್ಯುತಿ ಬಳಿಕ ಹಂಗಾಮಿ ಅಧ್ಯಕ್ಷರಾಗಿ ರಾನಿಲ್​ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ.

ರಾಜಪಕ್ಸ ಸದ್ಯ ಸರ್ಕಾರಿ ಮನೆ ಮತ್ತು ಇತರ ಸವಲತ್ತು ಪಡೆದುಕೊಳ್ಳಲು ಅರ್ಹರಾಗಿದ್ದಾರೆಂದು ತಿಳಿದು ಬಂದಿದೆ. ಶ್ರೀಲಂಕಾ ಇನ್ನಿಲ್ಲದ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಮಾನವೀಯ ದೃಷ್ಟಿಯಿಂದ ಸಹಾಯ ಮಾಡ್ತಿವೆ.

ಕೊಲಂಬೊ(ಶ್ರೀಲಂಕಾ): ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜನರು ದಂಗೆ ಎದಿದ್ದರು. ಈ ವೇಳೆ, ದೇಶ ಬಿಟ್ಟು ಪರಾರಿಯಾಗಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ತವರಿಗೆ ವಾಪಸ್​​​​ ಆಗಿದ್ದಾರೆ. ಇಂದು ನಸುಕಿನ ಜಾವ ಥಾಯ್ಲೆಂಡ್​​ನಿಂದ ಸ್ವದೇಶಕ್ಕೆ ಮರಳಿದ್ದಾರೆಂದು ಖಚಿತ ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ತತ್ತರಿಸಿ ಹೋಗಿದ್ದ ಜನರು ಕಳೆದ ಜುಲೈ 9ರಂದು ಕೊಲಂಬೊದಲ್ಲಿರುವ ರಾಜಪಕ್ಸ ಅವರ ಭವನ ಸೇರಿದಂತೆ ಅನೇಕ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ, ಜುಲೈ 13ರಂದು ಗೊಟಬಯ ಶ್ರೀಲಂಕಾದಿಂದ ಪಲಾಯನ ಮಾಡಿದ್ದರು. ಸುಮಾರು ಎರಡು ತಿಂಗಳ ನಂತರ ಥಾಯ್ಲೆಂಡ್​​ನಿಂದ ದೇಶಕ್ಕೆ ವಾಪಸ್​ ಆಗಿದ್ದಾರೆ.

ಭಾರೀ ಭದ್ರತೆಯ ನಡುವೆ ರಾಜಪಕ್ಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಶ್ರೀಲಂಕಾದಲ್ಲಿ ಆಡಳಿತ ನಡೆಸುತ್ತಿರುವ ಎಸ್​​ಎಲ್​​ಪಿಪಿ ಪಕ್ಷದ ಸಚಿವರು, ಸಂಸದರು ಅವರನ್ನು ಬರಮಾಡಿಕೊಂಡರು. ಇದಾದ ಬಳಿಕ ಬೃಹತ್​ ಸುರಕ್ಷತೆಯಲ್ಲಿ ಅವರು ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ಗೊಟಬಯಾ ರಾಜಪಕ್ಸ ರಾಜೀನಾಮೆ.. ಸಿಂಗಾಪುರಕ್ಕೆ ಪರಾರಿ

ಥಾಯ್ಲೆಂಡ್​​ನಲ್ಲಿ ರಕ್ಷಣೆ ಪಡೆದುಕೊಂಡಿದ್ದ ಅವರು, ಉಭಯ ದೇಶಗಳ ನಡುವೆ ನೇರ ವಿಮಾನ ಸಂಪರ್ಕವಿಲ್ಲದ ಕಾರಣ ಸಿಂಗಾಪುರಕ್ಕೆ ತೆರಳಿ, ಅಲ್ಲಿಂದ ತವರಿಗೆ ಬಂದಿದ್ದಾರೆ. ಸದ್ಯ ಕೊಲಂಬೊದ ವಿಜೆರಾಮ ಮಾವಾಥಮ ಸಮೀಪದ ಬಂಗಲೆಯಲ್ಲಿ ವಾಸವಾಗಿದ್ದಾಗಿ ತಿಳಿದು ಬಂದಿದೆ.

ಥಾಯ್ಲೆಂಡ್​​ನಲ್ಲಿ ಉಳಿದುಕೊಳ್ಳಲು 90 ದಿನಗಳ ಪಾಸ್​​ಪೋರ್ಟ್​ ಹೊಂದಿದ್ದರು. ಆದರೆ, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವರಿಗೆ ಅವಕಾಶ ನೀಡಿರಲಿಲ್ಲ. ಅವರು ವಾಸವಾಗಿದ್ದ ಹೋಟೆಲ್​​​ನ ಸುತ್ತಲೂ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದರು. ರಾಜಪಕ್ಸ ಪದಚ್ಯುತಿ ಬಳಿಕ ಹಂಗಾಮಿ ಅಧ್ಯಕ್ಷರಾಗಿ ರಾನಿಲ್​ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ.

ರಾಜಪಕ್ಸ ಸದ್ಯ ಸರ್ಕಾರಿ ಮನೆ ಮತ್ತು ಇತರ ಸವಲತ್ತು ಪಡೆದುಕೊಳ್ಳಲು ಅರ್ಹರಾಗಿದ್ದಾರೆಂದು ತಿಳಿದು ಬಂದಿದೆ. ಶ್ರೀಲಂಕಾ ಇನ್ನಿಲ್ಲದ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಮಾನವೀಯ ದೃಷ್ಟಿಯಿಂದ ಸಹಾಯ ಮಾಡ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.