ETV Bharat / international

'ಕಾಶ್ಮೀರದಲ್ಲಿ ನಾಗರಿಕರ ಹಕ್ಕು ಕಾಪಾಡಿ': ಪಾಕ್‌ನಲ್ಲಿ ಜರ್ಮನಿಯ ವಿದೇಶಾಂಗ ಸಚಿವೆ

author img

By

Published : Jun 8, 2022, 3:29 PM IST

ಕಾಶ್ಮೀರದಲ್ಲಿನ ನಾಗರಿಕರ ಹಕ್ಕು ಕಾಪಾಡಬೇಕು ಎಂದು ಹೇಳುವ ಮೂಲಕ ಜರ್ಮನಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡಿದೆ.

germany-controversial
ಕಾಶ್ಮೀರ ವಿವಾದ ಕೆಣಕಿದ ಜರ್ಮನಿ

ಇಸ್ಲಾಮಾಬಾದ್: ಜಮ್ಮು-ಕಾಶ್ಮೀರ ಭಾರತದ ಕಿರೀಟಪ್ರಾಯವಾಗಿದ್ದರೂ ವಿವಾದ ಮಾತ್ರ ಬರೆಹರಿದಿಲ್ಲ. ಭಾರತ-ಪಾಕಿಸ್ತಾನ ಮಧ್ಯೆ ಇರುವ ಬಹುಕಾಲದ ಸಮಸ್ಯೆಯನ್ನು ಜರ್ಮನಿ ಇದೀಗ ಕೆಣಕಿದೆ. 'ಕಾಶ್ಮೀರಿಗರ ಮಾನವ ಹಕ್ಕು ಕಾಪಾಡಲು ವಿಶ್ವಸಂಸ್ಥೆ ಮುಂದಾಗಬೇಕು' ಎಂದು ಹೇಳಿಕೆ ನೀಡಿ ಭಾರತದ ಆಂತರಿಕ ವಿಚಾರದಲ್ಲಿ ಅನಪೇಕ್ಷಿತ ಮಧ್ಯಪ್ರವೇಶ ಮಾಡಿದೆ.

ಎರಡು ದಿನಗಳ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಜರ್ಮನಿಯ​ ವಿದೇಶಾಂಗ ಸಚಿವೆ ಅನ್ನಾಲಿನಾ, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಯೊಂದಿಗೆ ನಡೆದ ಮಾತುಕತೆಯಲ್ಲಿ ಕಾಶ್ಮೀರದ ಕುರಿತು ಈ ಪ್ರಸ್ತಾಪ ಮಾಡಿದ್ದಾರೆ.

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ವಿಶ್ವಸಂಸ್ಥೆ ಮುಂದಾಗಬೇಕು. ಉಭಯ ರಾಷ್ಟ್ರಗಳ ಕಡೆಯಿಂದ ರಚನಾತ್ಮಕ ಮಾತುಕತೆ ನಡೆದರೆ ಭಾರತ -ಪಾಕಿಸ್ತಾನ ಸಂಬಂಧ ಸುಧಾರಿಸುತ್ತದೆ. ನಾವು ಈ ವಿಷಯದಲ್ಲಿ ಕಾಶ್ಮೀರದ ಹಿತ ಬಯಸುತ್ತೇವೆ ಎಂದು ಹೇಳಿದ್ದಾರೆ.

ಸಭೆ ಬಳಿಕ ಕೊರೊನಾ ದೃಢ: ಸಭೆಯ ಬಳಿಕ ಜರ್ಮನಿ ವಿದೇಶಾಂಗ ಸಚಿವೆ ಅನ್ನಾಲಿನಾ ಬೈರ್‌ಬಾಚ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ತಕ್ಷಣವೇ ಮುಂದಿನ ಪ್ರವಾಸಗಳನ್ನು ರದ್ದು ಮಾಡಿ ಜರ್ಮನಿಗೆ ವಾಪಸ್​ ಆಗಿದ್ದಾರೆ.

ಇದನ್ನೂ ಓದಿ: 'ಇದು ನಾಚಿಕೆಗೇಡು' ಬೆಂಗಳೂರಿನ ರಸ್ತೆ ದುರವಸ್ಥೆ ಬಗ್ಗೆ ಕಿರಣ್ ಮಂಜುಂದಾರ್ ಷಾ ಕಿಡಿ

ಇಸ್ಲಾಮಾಬಾದ್: ಜಮ್ಮು-ಕಾಶ್ಮೀರ ಭಾರತದ ಕಿರೀಟಪ್ರಾಯವಾಗಿದ್ದರೂ ವಿವಾದ ಮಾತ್ರ ಬರೆಹರಿದಿಲ್ಲ. ಭಾರತ-ಪಾಕಿಸ್ತಾನ ಮಧ್ಯೆ ಇರುವ ಬಹುಕಾಲದ ಸಮಸ್ಯೆಯನ್ನು ಜರ್ಮನಿ ಇದೀಗ ಕೆಣಕಿದೆ. 'ಕಾಶ್ಮೀರಿಗರ ಮಾನವ ಹಕ್ಕು ಕಾಪಾಡಲು ವಿಶ್ವಸಂಸ್ಥೆ ಮುಂದಾಗಬೇಕು' ಎಂದು ಹೇಳಿಕೆ ನೀಡಿ ಭಾರತದ ಆಂತರಿಕ ವಿಚಾರದಲ್ಲಿ ಅನಪೇಕ್ಷಿತ ಮಧ್ಯಪ್ರವೇಶ ಮಾಡಿದೆ.

ಎರಡು ದಿನಗಳ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಜರ್ಮನಿಯ​ ವಿದೇಶಾಂಗ ಸಚಿವೆ ಅನ್ನಾಲಿನಾ, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಯೊಂದಿಗೆ ನಡೆದ ಮಾತುಕತೆಯಲ್ಲಿ ಕಾಶ್ಮೀರದ ಕುರಿತು ಈ ಪ್ರಸ್ತಾಪ ಮಾಡಿದ್ದಾರೆ.

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ವಿಶ್ವಸಂಸ್ಥೆ ಮುಂದಾಗಬೇಕು. ಉಭಯ ರಾಷ್ಟ್ರಗಳ ಕಡೆಯಿಂದ ರಚನಾತ್ಮಕ ಮಾತುಕತೆ ನಡೆದರೆ ಭಾರತ -ಪಾಕಿಸ್ತಾನ ಸಂಬಂಧ ಸುಧಾರಿಸುತ್ತದೆ. ನಾವು ಈ ವಿಷಯದಲ್ಲಿ ಕಾಶ್ಮೀರದ ಹಿತ ಬಯಸುತ್ತೇವೆ ಎಂದು ಹೇಳಿದ್ದಾರೆ.

ಸಭೆ ಬಳಿಕ ಕೊರೊನಾ ದೃಢ: ಸಭೆಯ ಬಳಿಕ ಜರ್ಮನಿ ವಿದೇಶಾಂಗ ಸಚಿವೆ ಅನ್ನಾಲಿನಾ ಬೈರ್‌ಬಾಚ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ತಕ್ಷಣವೇ ಮುಂದಿನ ಪ್ರವಾಸಗಳನ್ನು ರದ್ದು ಮಾಡಿ ಜರ್ಮನಿಗೆ ವಾಪಸ್​ ಆಗಿದ್ದಾರೆ.

ಇದನ್ನೂ ಓದಿ: 'ಇದು ನಾಚಿಕೆಗೇಡು' ಬೆಂಗಳೂರಿನ ರಸ್ತೆ ದುರವಸ್ಥೆ ಬಗ್ಗೆ ಕಿರಣ್ ಮಂಜುಂದಾರ್ ಷಾ ಕಿಡಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.