ETV Bharat / international

ಭಾರತ ದಾಳಿ ಮಾಡಿದ್ರೆ ನಮ್ಮಿಂದಲೂ ಪರಮಾಣು ದಾಳಿ: ಪಾಕ್​ ಸಚಿವನ ಉದ್ಧಟತನದ ಹೇಳಿಕೆ - ಸಚಿವ ಶೇಖ್​ ರಶೀದ್

ಭಾರತದೊಂದಿಗೆ ಪರಮಾಣು ಯುದ್ಧ ನಡೆಸುವ ಬಗ್ಗೆ ಪಾಕಿಸ್ತಾನದ ರೈಲ್ವೆ ಖಾತೆ ಸಚಿವ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ.

Sheikh Rashid Ahmed
Sheikh Rashid Ahmed
author img

By

Published : Aug 20, 2020, 10:41 PM IST

ಇಸ್ಲಾಮಾಬಾದ್​: ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ನಾವು ಪರಮಾಣು ದಾಳಿ ನಡೆಸಲಿದ್ದೇವೆ ಎಂದು ಪಾಕಿಸ್ತಾನದ ರೈಲ್ವೆ ಖಾತೆ ಸಚಿವ ಶೇಖ್​ ರಶೀದ್​ ಅಹ್ಮದ್​​ ವಿವಾದಿತ ಹೇಳಿಕೆ ನೀಡಿದ್ದಾರೆ.

  • Sheikh Rasheed and his discoveries. This time he's found a scientist who made a precision kafir bomb for India. pic.twitter.com/uozTBHPLM2

    — Naila Inayat नायला इनायत (@nailainayat) August 20, 2020 " class="align-text-top noRightClick twitterSection" data=" ">

ಟಿವಿ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿರುವ ಶೇಖ್​ ರಶೀದ್​, ಒಂದು ವೇಳೆ ಭಾರತ ಆಕ್ರಮಣ ಮಾಡಿದರೆ ಅದು ಸಾಂಪ್ರದಾಯಿಕ ಯದ್ಧ ಆಗಿರಲು ಸಾಧ್ಯವಿಲ್ಲ. ಬದಲಿಗೆ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ನಾವು ಉತ್ತರ ನೀಡಲಿದ್ದೇವೆ. ಯುದ್ಧದ ವೇಳೆ ಮುಸ್ಲಿಮ​ರಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂದಿರುವ ಅವರು, ಕೇವಲ ಪ್ರದೇಶ ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದಿದ್ದಾರೆ.

ಭಾರತದೊಂದಿಗೆ ನಡೆಯುವ ಈ ಯುದ್ಧ ರಕ್ತಸಿಕ್ತ ಹಾಗೂ ಕೊನೆಯ ಪರಮಾಣು ಯುದ್ಧವಾಗಲಿದೆ. ನಮ್ಮ ಬಳಿ ಕೂಡ ಅತ್ಯಂತ ನಿಖರ, ಸಮರ್ಥ, ಸಣ್ಣ ಪರಮಾಣು ಶಸ್ತ್ರಾಸ್ತ್ರಗಳಿವೆ. ಭಾರತದ ಅಸ್ಸೋಂವರೆಗೆ ನಾವು ನಿಖರವಾಗಿ ದಾಳಿ ಮಾಡಬಹುದಾಗಿದೆ ಎಂದಿದ್ದಾರೆ.

ಮರುಕಳಿಸುತ್ತಿದೆ ಪಾಕಿ‌ಸ್ತಾನದ ಹಳೆಯ ಚಾಳಿ:

ಈ ಹಿಂದೆ ಕೂಡ ಪಾಕ್​ ಸಚಿವ ಶೇಖ್​ ರಶೀದ್​ ಇದೇ ರೀತಿಯ ವಿವಾದಿತ ಹೇಳಿಕೆ ನೀಡಿದ್ದರು. 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಸಂದರ್ಭ ಇದೇ ರೀತಿಯ ಹೇಳಿಕೆಯನ್ನು ಪ್ರಧಾನಿ ಇಮ್ರಾನ್​ ಖಾನ್​ ಕೂಡ ನೀಡಿದ್ದರು.

ಭ್ರಮಾಲೋಕದಲ್ಲಿ ತೇಲಾಡುತ್ತಿರುವ ಪಾಕ್ ಸಚಿವರುಗಳ ಇಂಥ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ಭಾರತ ಪ್ರತಿಕ್ರಿಯಿಸಿಲ್ಲ.

ಇಸ್ಲಾಮಾಬಾದ್​: ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ನಾವು ಪರಮಾಣು ದಾಳಿ ನಡೆಸಲಿದ್ದೇವೆ ಎಂದು ಪಾಕಿಸ್ತಾನದ ರೈಲ್ವೆ ಖಾತೆ ಸಚಿವ ಶೇಖ್​ ರಶೀದ್​ ಅಹ್ಮದ್​​ ವಿವಾದಿತ ಹೇಳಿಕೆ ನೀಡಿದ್ದಾರೆ.

  • Sheikh Rasheed and his discoveries. This time he's found a scientist who made a precision kafir bomb for India. pic.twitter.com/uozTBHPLM2

    — Naila Inayat नायला इनायत (@nailainayat) August 20, 2020 " class="align-text-top noRightClick twitterSection" data=" ">

ಟಿವಿ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿರುವ ಶೇಖ್​ ರಶೀದ್​, ಒಂದು ವೇಳೆ ಭಾರತ ಆಕ್ರಮಣ ಮಾಡಿದರೆ ಅದು ಸಾಂಪ್ರದಾಯಿಕ ಯದ್ಧ ಆಗಿರಲು ಸಾಧ್ಯವಿಲ್ಲ. ಬದಲಿಗೆ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ನಾವು ಉತ್ತರ ನೀಡಲಿದ್ದೇವೆ. ಯುದ್ಧದ ವೇಳೆ ಮುಸ್ಲಿಮ​ರಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂದಿರುವ ಅವರು, ಕೇವಲ ಪ್ರದೇಶ ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದಿದ್ದಾರೆ.

ಭಾರತದೊಂದಿಗೆ ನಡೆಯುವ ಈ ಯುದ್ಧ ರಕ್ತಸಿಕ್ತ ಹಾಗೂ ಕೊನೆಯ ಪರಮಾಣು ಯುದ್ಧವಾಗಲಿದೆ. ನಮ್ಮ ಬಳಿ ಕೂಡ ಅತ್ಯಂತ ನಿಖರ, ಸಮರ್ಥ, ಸಣ್ಣ ಪರಮಾಣು ಶಸ್ತ್ರಾಸ್ತ್ರಗಳಿವೆ. ಭಾರತದ ಅಸ್ಸೋಂವರೆಗೆ ನಾವು ನಿಖರವಾಗಿ ದಾಳಿ ಮಾಡಬಹುದಾಗಿದೆ ಎಂದಿದ್ದಾರೆ.

ಮರುಕಳಿಸುತ್ತಿದೆ ಪಾಕಿ‌ಸ್ತಾನದ ಹಳೆಯ ಚಾಳಿ:

ಈ ಹಿಂದೆ ಕೂಡ ಪಾಕ್​ ಸಚಿವ ಶೇಖ್​ ರಶೀದ್​ ಇದೇ ರೀತಿಯ ವಿವಾದಿತ ಹೇಳಿಕೆ ನೀಡಿದ್ದರು. 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಸಂದರ್ಭ ಇದೇ ರೀತಿಯ ಹೇಳಿಕೆಯನ್ನು ಪ್ರಧಾನಿ ಇಮ್ರಾನ್​ ಖಾನ್​ ಕೂಡ ನೀಡಿದ್ದರು.

ಭ್ರಮಾಲೋಕದಲ್ಲಿ ತೇಲಾಡುತ್ತಿರುವ ಪಾಕ್ ಸಚಿವರುಗಳ ಇಂಥ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ಭಾರತ ಪ್ರತಿಕ್ರಿಯಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.