ETV Bharat / international

ಕೊರೊನಾಕ್ಕಿಂತ ಮಾರಕವಾದ ವದಂತಿ: ಸುಳ್ಳು ಸುದ್ದಿ ನಂಬಿ 27 ಜನ ಸಾವು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

ಕೊರೊನಾ ವೈರಸ್​ಗಿಂತ ವದಂತಿಗಳು ಎಷ್ಟು ಮಾರಕವಾಗಿವೆ ಎಂಬುದಕ್ಕೆ ತೆಹ್ರಾನ್​ನಲ್ಲಿ ನಡೆದಿರುವ ಈ ದುರಂತವೇ ಸಾಕ್ಷಿಯಾಗಿದೆ. ಕಳ್ಳಭಟ್ಟಿ ಸೇವಿಸಿ 27 ಮಂದಿ ಸಾವನ್ನಪ್ಪಿದ್ದ್ರರೆ, 218 ಜನರ ಸ್ಥಿತಿ ಗಂಬೀರವಾಗಿದೆ. ಇಷ್ಟಕ್ಕೆಲ್ಲ ಕಾರಣವಾಗಿದ್ದು, ಕಳ್ಳಭಟ್ಟಿ ಸೇವಿಸಿದ್ರೆ ಕೊರೊನಾ ಹರಡಲ್ಲ ಅನ್ನೋದು.

author img

By

Published : Mar 10, 2020, 8:03 PM IST

27 died from drinking industrial alcohol, 27 died from drinking industrial alcohol as cure, 27 died from drinking industrial alcohol as cure for coronavirus, ಕೊರೊನಾ ವೈರಸ್​ನ ಸುಳ್ಳು ವದಂತಿ, ಕೊರೊನಾ ವೈರಸ್​ನ ಸುಳ್ಳು ವದಂತಿಗೆ 27 ಜನ ಸಾವು, ಕೊರೊನಾ ವೈರಸ್​ನ ಸುಳ್ಳು ವದಂತಿ ಸುದ್ದಿ,
ಕೊರೊನಾಕ್ಕಿಂತ ಮಾರಕವಾದ ವದಂತಿ

ತೆಹ್ರಾನ್(ಇರಾನ್​)​: ಕೊರೊನಾ ವೈರಸ್​ ಈಗಾಗಲೇ ನಾಲ್ಕು ಸಾವಿರ ಜನರನ್ನು ಬಲಿ ಪಡೆದಿದೆ. ಆದ್ರೆ ಈ ವೈರಸ್​ನಿಂದ ಹಬ್ಬಿದ ವದಂತಿಯಿಂದಲೂ ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಹೌದು, ಕೊರೊನಾ ವೈರಸ್​ಗೆ ಕಳ್ಳಭಟ್ಟಿ ಸಾರಾಯಿ ಸಖತ್​ ಆಗಿ ಕೆಲಸ ಮಾಡುತ್ತೆಂದು ಕೆಲವರು ವದಂತಿ ಹಬ್ಬಿಸಿದ್ದರು. ಇದನ್ನು ನಂಬಿದ ಕೆಲ ಜನ ಕಳ್ಳಭಟ್ಟಿ ಸಾರಾಯಿಯನ್ನು ಕುಡಿದಿದ್ದಾರೆ. ಇದರಿಂದಾಗಿ ಇರಾನ್​ನಲ್ಲಿ 27 ಜನ ಸಾವನ್ನಪ್ಪಿದ್ದಾರೆ. ಕಳ್ಳಭಟ್ಟಿ ಸಾರಾಯಿ ಸೇವಿಸಿ 27 ಜನ ಬಲಿಯಾಗಿದ್ದರೆ, 218 ಜನರು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂಬ ವರದಿ ಹರಿದಾಡುತ್ತಿದೆ.

ಚೀನಾ ಬಳಿಕ ಕೊರೊನಾ ವೈರಸ್​ ತೀವ್ರತೆ ಹೆಚ್ಚಾಗಿರುವುದು ಇರಾನ್​ನಲ್ಲಿ ಮಾತ್ರ. ಆ ದೇಶದಲ್ಲಿ ಇಲ್ಲಿಯವರೆಗೆ ಏಳು ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್​ ತಗುಲಿದೆ. ಸೋಮವಾರ ಒಂದೇ ದಿನಕ್ಕೆ 43 ಜನ ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಸಂತ್ರಸ್ತರ ಸಾವು ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಜನರಲ್ಲಿ ತೀವ್ರ ಭಯ ಹುಟ್ಟಿಕೊಳ್ಳುತ್ತಿದೆ.

ಹೀಗಾಗಿ ಇಲ್ಲಿ ಕಳ್ಳಭಟ್ಟಿ ಸಾರಾಯಿ ಕೊರೊನಾ ವೈರಸ್​ಗೆ ರಾಮಬಾಣದಂತೆ ಕೆಲಸ ಮಾಡುತ್ತೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರಿಂದ ಕೆಲ ಜನರು ‘ನಮಗೆ ಕೊರೊನಾ ವೈರಸ್​ ತಗುಲಿರಬಹುದೆಂದು ಅನುಮಾನಗೊಂಡು ಹಾಗೂ ಕೊರೊನಾ ವೈರಸ್​ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ’ ಕಳ್ಳಭಟ್ಟಿ ಸೇವಿಸಿದ್ದಾರೆ ಎನ್ನಲಾಗ್ತಿದೆ.

ಕಳ್ಳಭಟ್ಟಿ ಸೇವನೆಯಿಂದಾಗಿ ಈ ದುರಂತ ಸಂಭವಿಸಿದ್ದು, 20 ಜನರು ಖುಜೆಸ್ತಾನ್ ಪ್ರಾಂತ್ಯ ಮತ್ತು ಏಳು ಜನ ಅಲ್ಬೋರ್ಜ್ ಪ್ರಾಂತ್ಯಕ್ಕೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಹ್ರಾನ್(ಇರಾನ್​)​: ಕೊರೊನಾ ವೈರಸ್​ ಈಗಾಗಲೇ ನಾಲ್ಕು ಸಾವಿರ ಜನರನ್ನು ಬಲಿ ಪಡೆದಿದೆ. ಆದ್ರೆ ಈ ವೈರಸ್​ನಿಂದ ಹಬ್ಬಿದ ವದಂತಿಯಿಂದಲೂ ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಹೌದು, ಕೊರೊನಾ ವೈರಸ್​ಗೆ ಕಳ್ಳಭಟ್ಟಿ ಸಾರಾಯಿ ಸಖತ್​ ಆಗಿ ಕೆಲಸ ಮಾಡುತ್ತೆಂದು ಕೆಲವರು ವದಂತಿ ಹಬ್ಬಿಸಿದ್ದರು. ಇದನ್ನು ನಂಬಿದ ಕೆಲ ಜನ ಕಳ್ಳಭಟ್ಟಿ ಸಾರಾಯಿಯನ್ನು ಕುಡಿದಿದ್ದಾರೆ. ಇದರಿಂದಾಗಿ ಇರಾನ್​ನಲ್ಲಿ 27 ಜನ ಸಾವನ್ನಪ್ಪಿದ್ದಾರೆ. ಕಳ್ಳಭಟ್ಟಿ ಸಾರಾಯಿ ಸೇವಿಸಿ 27 ಜನ ಬಲಿಯಾಗಿದ್ದರೆ, 218 ಜನರು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂಬ ವರದಿ ಹರಿದಾಡುತ್ತಿದೆ.

ಚೀನಾ ಬಳಿಕ ಕೊರೊನಾ ವೈರಸ್​ ತೀವ್ರತೆ ಹೆಚ್ಚಾಗಿರುವುದು ಇರಾನ್​ನಲ್ಲಿ ಮಾತ್ರ. ಆ ದೇಶದಲ್ಲಿ ಇಲ್ಲಿಯವರೆಗೆ ಏಳು ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್​ ತಗುಲಿದೆ. ಸೋಮವಾರ ಒಂದೇ ದಿನಕ್ಕೆ 43 ಜನ ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಸಂತ್ರಸ್ತರ ಸಾವು ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಜನರಲ್ಲಿ ತೀವ್ರ ಭಯ ಹುಟ್ಟಿಕೊಳ್ಳುತ್ತಿದೆ.

ಹೀಗಾಗಿ ಇಲ್ಲಿ ಕಳ್ಳಭಟ್ಟಿ ಸಾರಾಯಿ ಕೊರೊನಾ ವೈರಸ್​ಗೆ ರಾಮಬಾಣದಂತೆ ಕೆಲಸ ಮಾಡುತ್ತೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರಿಂದ ಕೆಲ ಜನರು ‘ನಮಗೆ ಕೊರೊನಾ ವೈರಸ್​ ತಗುಲಿರಬಹುದೆಂದು ಅನುಮಾನಗೊಂಡು ಹಾಗೂ ಕೊರೊನಾ ವೈರಸ್​ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ’ ಕಳ್ಳಭಟ್ಟಿ ಸೇವಿಸಿದ್ದಾರೆ ಎನ್ನಲಾಗ್ತಿದೆ.

ಕಳ್ಳಭಟ್ಟಿ ಸೇವನೆಯಿಂದಾಗಿ ಈ ದುರಂತ ಸಂಭವಿಸಿದ್ದು, 20 ಜನರು ಖುಜೆಸ್ತಾನ್ ಪ್ರಾಂತ್ಯ ಮತ್ತು ಏಳು ಜನ ಅಲ್ಬೋರ್ಜ್ ಪ್ರಾಂತ್ಯಕ್ಕೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.