ETV Bharat / international

ಗಾಜಾ ಮೇಲಿನ ರಾಕೆಟ್‌ ದಾಳಿಗೆ ಭಾರತ ಖಂಡನೆ: ಶಾಂತಿ ಮಾತುಕತೆಗೆ ಒತ್ತಾಯ

author img

By

Published : May 12, 2021, 7:00 AM IST

ಗಾಜಾದ ಮೇಲಿನ ರಾಕೆಟ್ ದಾಳಿಯನ್ನು ಖಂಡಿಸಿದ ಭಾರತ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ ಸಂಯಮ ಮತ್ತು ನೇರ ಶಾಂತಿ ಮಾತುಕತೆಗಳನ್ನು ತಕ್ಷಣ ಪುನರಾರಂಭಿಸಬೇಕೆಂದು ಕರೆ ನೀಡಿದೆ.

India at UNSC
ಟಿ.ಎಸ್.ತಿರೂಮೂರ್ತಿ

ನ್ಯೂಯಾರ್ಕ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಹಮಾಸ್‌ ಬಂಡುಕೋರರ ನಡುವೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರೂಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಘರ್ಷದಿಂದ ಆಗುವ ಅನಾಹುತವನ್ನು ತಪ್ಪಿಸಲು ಎರಡೂ ಕಡೆಯವರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಹರಾಮ್ ಅಲ್-ಶರೀಫ್, ಟೆಂಪಲ್ ಮೌಂಟ್​ನಲ್ಲಿನ ಘರ್ಷಣೆಗಳು ಮತ್ತು ಶೇಖ್ ಜರ್ರಾ, ಸಿಲ್ವಾನ್ ಪ್ರದೇಶದಲ್ಲಿ ಉಂಟಾದ ಹಿಂಸಾಚಾರದ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ತಿರುಮೂರ್ತಿ ಮಾತನಾಡಿದರು. ಗಾಜಾದ ರಾಕೆಟ್ ದಾಳಿಯನ್ನು ಖಂಡಿಸಿದ ಅವರು ಸಂಯಮ ಮತ್ತು ನೇರ ಶಾಂತಿ ಮಾತುಕತೆಗಳನ್ನು ತಕ್ಷಣ ಪುನರಾರಂಭಿಸಬೇಕೆಂದು ಒತ್ತಾಯಿಸಿದರು.

  • In #UNSC meet on escalation in East #Jerusalem & related events, I said:

    🔹Deeply concerned at clashes & violence in Haram Al Sharif/Temple Mount
    🔹Equally concerned about evictions in Sheikh Jarrah & Silwan neighbourhoods
    🔹Both sides to avoid changing status-quo on ground
    1/2 pic.twitter.com/CcQ3Vj6SNL

    — PR/Amb T S Tirumurti (@ambtstirumurti) May 11, 2021 " class="align-text-top noRightClick twitterSection" data=" ">

In #UNSC meet on escalation in East #Jerusalem & related events, I said:

🔹Deeply concerned at clashes & violence in Haram Al Sharif/Temple Mount
🔹Equally concerned about evictions in Sheikh Jarrah & Silwan neighbourhoods
🔹Both sides to avoid changing status-quo on ground
1/2 pic.twitter.com/CcQ3Vj6SNL

— PR/Amb T S Tirumurti (@ambtstirumurti) May 11, 2021

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ನ ಹಮಾಸ್‌ ಬಂಡುಕೋರರ ನಡುವೆ ಸಂಘರ್ಷದಲ್ಲಿ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ರಾಕೆಟ್​​ ದಾಳಿಯಲ್ಲಿ ಬಲಿಯಾಗಿದ್ದಾರೆ. ಇದರಲ್ಲಿ 10 ಮಕ್ಕಳು ಸೇರಿದ್ದು, 152ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ 630ಕ್ಕೂ ಹೆಚ್ಚು ರಾಕೆಟ್‌ಗಳನ್ನು ಇಸ್ರೇಲ್ ಮೇಲೆ ಹಾರಿಸಲಾಗಿತ್ತು. ಅವುಗಳಲ್ಲಿ 200 ಐರನ್ ಡೋಮ್ ಕ್ಷಿಪಣಿ ರಕ್ಷಣಾ ಬ್ಯಾಟರಿಗಳಿಂದ ತಡೆಹಿಡಿಯಲ್ಪಟ್ಟವು.

ಇದನ್ನು ಓದಿ: ಗಾಜಾ ಘರ್ಷಣೆ: ರಾಕೆಟ್​ ದಾಳಿಗೆ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ಸಾವು!

ಅಂತಾರಾಷ್ಟ್ರೀಯ ಸಮುದಾಯವು ಈ ಸಂಘರ್ಷಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂಯಮವನ್ನು ಕಾಪಾಡುವಂತೆ ಕರೆ ನೀಡಿದೆ.

ನ್ಯೂಯಾರ್ಕ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಹಮಾಸ್‌ ಬಂಡುಕೋರರ ನಡುವೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರೂಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಘರ್ಷದಿಂದ ಆಗುವ ಅನಾಹುತವನ್ನು ತಪ್ಪಿಸಲು ಎರಡೂ ಕಡೆಯವರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಹರಾಮ್ ಅಲ್-ಶರೀಫ್, ಟೆಂಪಲ್ ಮೌಂಟ್​ನಲ್ಲಿನ ಘರ್ಷಣೆಗಳು ಮತ್ತು ಶೇಖ್ ಜರ್ರಾ, ಸಿಲ್ವಾನ್ ಪ್ರದೇಶದಲ್ಲಿ ಉಂಟಾದ ಹಿಂಸಾಚಾರದ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ತಿರುಮೂರ್ತಿ ಮಾತನಾಡಿದರು. ಗಾಜಾದ ರಾಕೆಟ್ ದಾಳಿಯನ್ನು ಖಂಡಿಸಿದ ಅವರು ಸಂಯಮ ಮತ್ತು ನೇರ ಶಾಂತಿ ಮಾತುಕತೆಗಳನ್ನು ತಕ್ಷಣ ಪುನರಾರಂಭಿಸಬೇಕೆಂದು ಒತ್ತಾಯಿಸಿದರು.

  • In #UNSC meet on escalation in East #Jerusalem & related events, I said:

    🔹Deeply concerned at clashes & violence in Haram Al Sharif/Temple Mount
    🔹Equally concerned about evictions in Sheikh Jarrah & Silwan neighbourhoods
    🔹Both sides to avoid changing status-quo on ground
    1/2 pic.twitter.com/CcQ3Vj6SNL

    — PR/Amb T S Tirumurti (@ambtstirumurti) May 11, 2021 " class="align-text-top noRightClick twitterSection" data=" ">

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ನ ಹಮಾಸ್‌ ಬಂಡುಕೋರರ ನಡುವೆ ಸಂಘರ್ಷದಲ್ಲಿ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ರಾಕೆಟ್​​ ದಾಳಿಯಲ್ಲಿ ಬಲಿಯಾಗಿದ್ದಾರೆ. ಇದರಲ್ಲಿ 10 ಮಕ್ಕಳು ಸೇರಿದ್ದು, 152ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ 630ಕ್ಕೂ ಹೆಚ್ಚು ರಾಕೆಟ್‌ಗಳನ್ನು ಇಸ್ರೇಲ್ ಮೇಲೆ ಹಾರಿಸಲಾಗಿತ್ತು. ಅವುಗಳಲ್ಲಿ 200 ಐರನ್ ಡೋಮ್ ಕ್ಷಿಪಣಿ ರಕ್ಷಣಾ ಬ್ಯಾಟರಿಗಳಿಂದ ತಡೆಹಿಡಿಯಲ್ಪಟ್ಟವು.

ಇದನ್ನು ಓದಿ: ಗಾಜಾ ಘರ್ಷಣೆ: ರಾಕೆಟ್​ ದಾಳಿಗೆ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ಸಾವು!

ಅಂತಾರಾಷ್ಟ್ರೀಯ ಸಮುದಾಯವು ಈ ಸಂಘರ್ಷಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂಯಮವನ್ನು ಕಾಪಾಡುವಂತೆ ಕರೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.