ETV Bharat / international

ಡ್ರಗ್​​​​​ಗ್ಯಾಂಗ್​ನಿಂದ ಪೊಲೀಸ್​​ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ: 13 ಪೊಲೀಸರ ಹತ್ಯೆ - ದಾಳಿಯಲ್ಲಿ 13 ಪೊಲೀಸರ ಹತ್ಯೆ

ಕಾರ್ಟೆಲ್ ಬಂದೂಕುಧಾರಿಗಳು 2019ರಲ್ಲಿ 14 ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಮೆಕ್ಸಿಕೊದಲ್ಲಿ ಹೊಂಚು ಹಾಕಿ ಕೊಂದಿರುವ ಘಟನೆ ನಡೆದಿತ್ತು. ಅದಾದ ಬಳಿಕ ಈಗ ಇಂತಹುದೇ ಮತ್ತೊಂದು ಹತ್ಯಾಕಾಂಡ ಮೆಕ್ಸಿಕೋದಲ್ಲಿ ಇಂದು ನಡೆದಿದೆ.

ಡ್ರಗ್​​​​​ಗ್ಯಾಂಗ್​ನಿಂದ ಪೊಲೀಸ್​​ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ
Gunmen Ambush Police Convoy Near Mexico City, Killing 13
author img

By

Published : Mar 19, 2021, 8:56 AM IST

ಮೆಕ್ಸಿಕೋ ಸಿಟಿ: ಡ್ರಗ್ ಗ್ಯಾಂಗ್​​ವೊಂದರ ಬಂದೂಕುಧಾರಿಗಳು ಸೆಂಟ್ರಲ್​ ಮೆಕ್ಸಿಕೊದ ಪೊಲೀಸ್ ಬೆಂಗಾವಲು ಪಡೆ ಮೇಲೆ ಹೊಂಚು ಹಾಕಿ ಗುಂಡಿನ ಮಳೆಗೆರೆದಿದೆ. ಈ ದಾಳಿಯಲ್ಲಿ 8 ಪೊಲೀಸ್ ಅಧಿಕಾರಿಗಳು ಮತ್ತು ಐವರು ಪ್ರಾಸಿಕ್ಯೂಷನ್ ತನಿಖಾಧಿಕಾರಿಗಳು ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.

ಮೆಕ್ಸಿಕೊದಲ್ಲಿ ನಡೆದ ಈ ಹತ್ಯಾಕಾಂಡ 2019 ರ ನಂತರ ನಡೆದ ಅತಿದೊಡ್ಡ ದುಷ್ಕೃತ್ಯ ಇದಾಗಿದೆ. 2019 ಅಕ್ಟೋಬರ್​ನಲ್ಲಿ ಕಾರ್ಟೆಲ್ ಬಂದೂಕುಧಾರಿಗಳು 14 ಪೊಲೀಸ್ ಅಧಿಕಾರಿಗಳನ್ನು ಹೊಂಚು ಹಾಕಿ ಕೊಂದು ಹಾಕಿದ್ದರು. ಮೆಕ್ಸಿಕೊ ನಗರದ ನೈರುತ್ಯ ದಿಕ್ಕಿನಲ್ಲಿರುವ ಗ್ರಾಮೀಣ ಭಾಗದಲ್ಲಿ ಪೊಲೀಸರನ್ನು ಕೊಂದು ಹಾಕಿದ ಡ್ರಗ್ಸ್​ ಗ್ಯಾಂಗ್​ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಓದಿ: ಹೆಚ್ಚಿನ ಕೊರೊನಾ ಕೇಸ್​​: ಅಮೃತಸರದಲ್ಲಿ ನೈಟ್​​ ಕರ್ಫ್ಯೂ ಜಾರಿ... ಕರ್ನಾಟಕದಲ್ಲಿ ಎಂದು?

ಇಂತಹ ಅತಿದೊಡ್ಡ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ದುಷ್ಕರ್ಮಿಗಳ ಬಂಧನಕ್ಕಾಗಿ ಬಲೆ ಬೀಸಿದೆ. ಸೈನಿಕರು, ನೌಕಾಪಡೆ ಮತ್ತು ರಾಷ್ಟ್ರೀಯ ಗಾರ್ಡ್ ಪಡೆಗಳು ದುಷ್ಕರ್ಮಿಗಳ ಹೆಡೆಮುರಿ ಕಟ್ಟಲು ಸನ್ನದ್ಧರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಕ್ಸಿಕೋ ಸಿಟಿ: ಡ್ರಗ್ ಗ್ಯಾಂಗ್​​ವೊಂದರ ಬಂದೂಕುಧಾರಿಗಳು ಸೆಂಟ್ರಲ್​ ಮೆಕ್ಸಿಕೊದ ಪೊಲೀಸ್ ಬೆಂಗಾವಲು ಪಡೆ ಮೇಲೆ ಹೊಂಚು ಹಾಕಿ ಗುಂಡಿನ ಮಳೆಗೆರೆದಿದೆ. ಈ ದಾಳಿಯಲ್ಲಿ 8 ಪೊಲೀಸ್ ಅಧಿಕಾರಿಗಳು ಮತ್ತು ಐವರು ಪ್ರಾಸಿಕ್ಯೂಷನ್ ತನಿಖಾಧಿಕಾರಿಗಳು ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.

ಮೆಕ್ಸಿಕೊದಲ್ಲಿ ನಡೆದ ಈ ಹತ್ಯಾಕಾಂಡ 2019 ರ ನಂತರ ನಡೆದ ಅತಿದೊಡ್ಡ ದುಷ್ಕೃತ್ಯ ಇದಾಗಿದೆ. 2019 ಅಕ್ಟೋಬರ್​ನಲ್ಲಿ ಕಾರ್ಟೆಲ್ ಬಂದೂಕುಧಾರಿಗಳು 14 ಪೊಲೀಸ್ ಅಧಿಕಾರಿಗಳನ್ನು ಹೊಂಚು ಹಾಕಿ ಕೊಂದು ಹಾಕಿದ್ದರು. ಮೆಕ್ಸಿಕೊ ನಗರದ ನೈರುತ್ಯ ದಿಕ್ಕಿನಲ್ಲಿರುವ ಗ್ರಾಮೀಣ ಭಾಗದಲ್ಲಿ ಪೊಲೀಸರನ್ನು ಕೊಂದು ಹಾಕಿದ ಡ್ರಗ್ಸ್​ ಗ್ಯಾಂಗ್​ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಓದಿ: ಹೆಚ್ಚಿನ ಕೊರೊನಾ ಕೇಸ್​​: ಅಮೃತಸರದಲ್ಲಿ ನೈಟ್​​ ಕರ್ಫ್ಯೂ ಜಾರಿ... ಕರ್ನಾಟಕದಲ್ಲಿ ಎಂದು?

ಇಂತಹ ಅತಿದೊಡ್ಡ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ದುಷ್ಕರ್ಮಿಗಳ ಬಂಧನಕ್ಕಾಗಿ ಬಲೆ ಬೀಸಿದೆ. ಸೈನಿಕರು, ನೌಕಾಪಡೆ ಮತ್ತು ರಾಷ್ಟ್ರೀಯ ಗಾರ್ಡ್ ಪಡೆಗಳು ದುಷ್ಕರ್ಮಿಗಳ ಹೆಡೆಮುರಿ ಕಟ್ಟಲು ಸನ್ನದ್ಧರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.