ETV Bharat / international

ದಮ್ಮಯ್ಯ ಅಂತೀನಿ... ಸಾಲದ ಹಣ ಕಟ್ಟಿಸಿಕೊಳ್ಳಿ:  ಬ್ಯಾಂಕ್​ಗಳಿಗೆ ಮದ್ಯದ ದೊರೆಯ ಕೋರಿಕೆ

author img

By

Published : Feb 13, 2020, 11:38 PM IST

Updated : Feb 14, 2020, 7:05 AM IST

ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸತತ ನಾಲ್ಕು ವರ್ಷಗಳಿಂದ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಉದ್ಯಮಿ ವಿಜಯ್​ ಮಲ್ಯ ಆರೋಪಿಸಿದ್ದಾರೆ.

Fugitive liquor baron Vijay Mallya in London
ವಿಚಾರಣೆಗೆ ಹಾಜರಾದ ಮಲ್ಯ

ಲಂಡನ್​: ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸತತ ನಾಲ್ಕು ವರ್ಷಗಳಿಂದ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಉದ್ಯಮಿ ವಿಜಯ್​ ಮಲ್ಯ ಸಿಡಿಮಿಡಿಗೊಂಡಿದ್ದಾರೆ.

ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಆರೋಪ ಎದುರಿಸುತ್ತಿದ್ದಾರೆ. ಭಾರತಕ್ಕೆ ಹಸ್ತಾಂತರಿಸುವ ಕುರಿತು ವೆಸ್ಟ್​ಮಿನ್​​​ಸ್ಟರ್​​ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಮೂರನೇ ದಿನದ ವಿಚಾರಣೆಗೆ ಹಾಜರಾದ ಅವರು, ನನಗೆ ಸಾಲ ನೀಡಿರುವ ಬ್ಯಾಂಕ್​ಗಳಲ್ಲಿ ಒಂದು ಮನವಿ ಮಾಡಿಕೊಳ್ತೇನಿ. ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮೂಲ ಸಾಲದ ಎಲ್ಲ ನೂರರಷ್ಟು ಹಣವನ್ನ ನಾನು ಪಾವತಿಸಲು ಸಿದ್ಧನಿದ್ದೇನೆ. ಆ ಹಣವನ್ನ ವಾಪಸ್​ ತೆಗೆದುಕೊಳ್ಳಿ. ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ನ್ಯಾಯಾಲಯಕ್ಕೆ ಮಲ್ಯ ಹೇಳಿದ್ದಾರೆ.

ಕಿಂಗ್ ಫಿಶರ್ ಏರ್ ಲೈನ್ಸ್​​ನ ಮಾಜಿ ಮಾಲೀಕ ವಿಜಯ್ ಮಲ್ಯ ವಿರುದ್ಧ 2017ರ ಏಪ್ರಿಲ್​ನಲ್ಲಿ ಭಾರತಕ್ಕೆ ಗಡಿಪಾರು ಮಾಡುವ ಕುರಿತು ಬಂಧನ ವಾರಂಟ್ ಜಾರಿಯಾಗಿತ್ತು. ಇದರ ವಿರುದ್ಧವಾಗಿ ಮಲ್ಯ ಕೋರ್ಟ್​ನಲ್ಲಿ ಜಾಮೀನು ಸಹ ಪಡೆದಿದ್ದಾರೆ. ವಿಜಯ್ ಮಲ್ಯ ಕೋರ್ಟ್​​ಗೆ ಹೋಗುವಾಗ ಮಾಧ್ಯಮಗಳಿಂದ ತಪ್ಪಿಸಿಕೊಂಡು ಹೋದರು.

  • Fugitive liquor baron Vijay Mallya in London: CBI & ED have been unreasonable, all they have been doing to me over the past 4 years is totally unreasonable. I request the banks with folded hands to take 100% of your prinicipal back immediately. https://t.co/LoB42DTzVk pic.twitter.com/dMc0yRDtF6

    — ANI (@ANI) February 13, 2020 " class="align-text-top noRightClick twitterSection" data=" ">

ಲಂಡನ್​: ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸತತ ನಾಲ್ಕು ವರ್ಷಗಳಿಂದ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಉದ್ಯಮಿ ವಿಜಯ್​ ಮಲ್ಯ ಸಿಡಿಮಿಡಿಗೊಂಡಿದ್ದಾರೆ.

ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಆರೋಪ ಎದುರಿಸುತ್ತಿದ್ದಾರೆ. ಭಾರತಕ್ಕೆ ಹಸ್ತಾಂತರಿಸುವ ಕುರಿತು ವೆಸ್ಟ್​ಮಿನ್​​​ಸ್ಟರ್​​ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಮೂರನೇ ದಿನದ ವಿಚಾರಣೆಗೆ ಹಾಜರಾದ ಅವರು, ನನಗೆ ಸಾಲ ನೀಡಿರುವ ಬ್ಯಾಂಕ್​ಗಳಲ್ಲಿ ಒಂದು ಮನವಿ ಮಾಡಿಕೊಳ್ತೇನಿ. ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮೂಲ ಸಾಲದ ಎಲ್ಲ ನೂರರಷ್ಟು ಹಣವನ್ನ ನಾನು ಪಾವತಿಸಲು ಸಿದ್ಧನಿದ್ದೇನೆ. ಆ ಹಣವನ್ನ ವಾಪಸ್​ ತೆಗೆದುಕೊಳ್ಳಿ. ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ನ್ಯಾಯಾಲಯಕ್ಕೆ ಮಲ್ಯ ಹೇಳಿದ್ದಾರೆ.

ಕಿಂಗ್ ಫಿಶರ್ ಏರ್ ಲೈನ್ಸ್​​ನ ಮಾಜಿ ಮಾಲೀಕ ವಿಜಯ್ ಮಲ್ಯ ವಿರುದ್ಧ 2017ರ ಏಪ್ರಿಲ್​ನಲ್ಲಿ ಭಾರತಕ್ಕೆ ಗಡಿಪಾರು ಮಾಡುವ ಕುರಿತು ಬಂಧನ ವಾರಂಟ್ ಜಾರಿಯಾಗಿತ್ತು. ಇದರ ವಿರುದ್ಧವಾಗಿ ಮಲ್ಯ ಕೋರ್ಟ್​ನಲ್ಲಿ ಜಾಮೀನು ಸಹ ಪಡೆದಿದ್ದಾರೆ. ವಿಜಯ್ ಮಲ್ಯ ಕೋರ್ಟ್​​ಗೆ ಹೋಗುವಾಗ ಮಾಧ್ಯಮಗಳಿಂದ ತಪ್ಪಿಸಿಕೊಂಡು ಹೋದರು.

  • Fugitive liquor baron Vijay Mallya in London: CBI & ED have been unreasonable, all they have been doing to me over the past 4 years is totally unreasonable. I request the banks with folded hands to take 100% of your prinicipal back immediately. https://t.co/LoB42DTzVk pic.twitter.com/dMc0yRDtF6

    — ANI (@ANI) February 13, 2020 " class="align-text-top noRightClick twitterSection" data=" ">
Last Updated : Feb 14, 2020, 7:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.